Homeಕರ್ನಾಟಕಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

- Advertisement -
- Advertisement -

ಕನ್ನಡದ ಮಹತ್ವದ ಸಾಹಿತಿ ರಾಷ್ಟ್ರಕವಿ ಕುವೆಂಪುರವರನ್ನು ಮತ್ತು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿರುವ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಬಗ್ಗೆ ಅವಹೇಳಕಾರಿಯಾಗಿ ಹೀಯಾಳಿಸಿರುವ ಘಟನೆ ಸೋಮವಾರದಂದು ನಡೆದಿದೆ.

ಸಾಮಾಜಿಕ ಜಾಲತಾಣವಾದ ಕ್ಲಬ್‌ ಹೌಸ್‌ನಲ್ಲಿ ‘ನಾಲೆಡ್ಜ್ ಹೌಸ್ ಕನ್ನಡ’ ಎಂಬ ಗ್ರೂಪಿನಲ್ಲಿ ನಡೆದ ಚರ್ಚೆಯೊಂದರಲ್ಲಿ ದಿವ್ಯ ನಾಯಕ್ ಎಂಬ ಬಿಜೆಪಿ ಬೆಂಬಲಿಗ ಯುವತಿಯೊಬ್ಬರು, “ಕುವೆಂಪು ಅವರಿಗೆ ಗೌರವ ಯಾಕೆ ಕೊಡಬೇಕು? ಯಾರಿಗಾದರೂ ಗೌರವ ಕೊಡುವುದು ಅಥವಾ ಕೊಡದೇ ಇರುವುದು ನನ್ನ ವೈಯಕ್ತಿಕ ಆಯ್ಕೆ. ಕುವೆಂಪು ರಾಮಾಯಣ is something fuck all shit” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

“ಅದನ್ನು ಫಾಲೋ ಮಾಡುವುದಾಗಲಿ, ರೆಫರ್‌ ಮಾಡುವುದಾಗಲಿ ಮಾಡಬೇಡಿ. ಮೂಲ ಕೃತಿಗಳನ್ನು ಓದಿ. ಕುವೆಂಪು ಆಗಲಿ, ಕುವೆಂಪು ಅಪ್ಪ ಆಗಲಿ, ಯಾರೇ ಆಗಲಿ, ಹಿಂದೂಗಳಾಗಿ ಮೂಲ ಕೃತಿಗಳನ್ನು ಓದಿ. ಪುರಸ್ಕಾರ ಬಂದರೆ ಅವರೇನು ದೊಡ್ಡವರಲ್ಲ, ಪುರಸ್ಕಾರ ಎಷ್ಟೋ ಜನರಿಗೆ ಬಂದಿದೆ. ಅವರ (ಬಿಜೆಪಿಯೇತರ) ಸರ್ಕಾರ ಇದ್ದಾಗ ದೇಶ ವಿರೋಧಿಗಳಿಗೆ ಕೂಡಾ ಪುರಸ್ಕಾರ ಬಂದಿದೆ” ಎಂದು ವಿವಾದ ಸೃಷ್ಟಿಸಿದ್ದಾರೆ.

ಅವರ ಹೇಳಿಕೆಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಯುವತಿಯು ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರ ಆಪ್ತೆ ಎಂದು ಆರೋಪಿಸಲಾಗಿದೆ. “ಕ್ಲಬ್-ಹೌಸಿನಲ್ಲಿರುವ ಚಕ್ರತೀರ್ಥನ ಸಂಬಂಧಿಗಳಿಗೇಕೆ ಕುವೆಂಪುರವರ ಮೇಲೆ ದ್ವೇಷ ?” ಎಂದು ಪ್ರಶ್ನಿಸಲಾಗಿದೆ.

 

ರಾಷ್ಟ್ರಕವಿ ಕುವೆಂಪು ಅವರನ್ನು ಬಲಪಂಥಿಯರು ನಿರಂತರವಾಗಿ ಗುರಿಯಾಗಿಸುತ್ತಲೇ ಬರುತ್ತಿದ್ದಾರೆ. ಸ್ವತಃ ರೋಹಿತ್‌ ಚಕ್ರತೀರ್ಥ ಅವರು ಕೂಡಾ ನಾಡಗೀತೆಯನ್ನು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕುವೆಂಪು ಮೇಲಿನ ದಾಳಿಗಳು ಕೂಡಾ ಹೆಚ್ಚಾಗುತ್ತಿದೆ ಎಂದು ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ‘#ಕನ್ನಡದಲ್ಲಿUPSC’ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನ ಬೆಂಬಲಿಸಲು ಕನ್ನಡಿಗರ ಕರೆ

ದಿವ್ಯ ನಾಯಕ್ ಅವರ ಹೇಳಿಕೆಯನ್ನು ಹಲವಾರು ಜನರು ಖಂಡಿಸಿದ್ದು, ಬಲಪಂಥೀಯರಿಗೆ ಕುವೆಂಪು ಮತ್ತು ಅವರು ಬರೆದಿರುವ ಕೃತಿಗಳ ಮೇಲೆ ಅಷ್ಟೊಂದು ದ್ವೇಷ ಯಾಕೆ? ಇದಕ್ಕೆ ಅವರ ಪುರೋಹಿತಶಾಹಿ ಮನಸ್ಥಿತಿ ಕಾರಣವಲ್ಲವೇ ಎಂಬ ವಿಷಯದಲ್ಲಿ ನಾನುಗೌರಿ.ಕಾಂ ಜೊತೆ ಮಾತನಾಡಿದ್ದಾರೆ.

ಜೆಎನ್‌ಯು ಕನ್ನಡ ಅಧ್ಯಯನಪೀಠದ ಮುಖ್ಯಸ್ಥರಾಗಿದ್ದ ಪ್ರೊ. ಪುರುಷೋತ್ತಮ್ ಬಿಳಿಮಲೆಯವರು ಮಾತನಾಡಿ, “ಬಲಪಂಥೀಯರ ಜೊತೆಗೆ ಚರ್ಚೆಯೆ ಸಾಧ್ಯವಿಲ್ಲ. ಎ.ಕೆ ರಾಮಾನುಜ ಅವರು ಸುಮಾರು ಮುನ್ನೂರು ರಾಮಾಯಣಗಳ ಬಗ್ಗೆ ಬರೆದಿದ್ದಾರೆ. ಈ ದೇಶದ ಸಾವಿರಾರು ರಾಮಾಯಣಗಳಲ್ಲಿ ವಾಲ್ಮಿಕಿ ರಾಮಾಯಣ ಕೂಡಾ ಒಂದು. ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಯಾವುದೆ ಸಂಶೋಧಕರು ಒಪ್ಪಿಕೊಂಡಿಲ್ಲ ಹಾಗೂ ಐತಿಹಾಸಿಕವಾಗಿಯು ಅದು ದೃಡಪಟ್ಟಿಲ್ಲ. ಇದು ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬಂತೆ” ಎಂದು ತಿಳಿಸಿದರು.

“ಬಲಪಂಥೀಯರು ಕುವೆಂಪು ಅವರನ್ನು ವಿರೋಧಿಸಲು ಬೇಕಾಗಿ ವಾಲ್ಮಿಕಿ ರಾಮಾಯಣವನ್ನು ತರುತ್ತಾರೆ. ರಾಮಾಯಣದ ಬಹುತ್ವದ ಬಗ್ಗೆ ಕುಮಾರವ್ಯಾಸನೇ ಆ ಕಾಲದಲ್ಲಿ ‘ತಿಣುಕಿದನು ಫಣಿರಾಯ ರಾಮಾಯಣದ ಕತೆಗಳ ಭಾರದಲಿ’ ಎಂದು ಬರೆದಿದ್ದಾನೆ. ಕುವೆಂಪು ಮತ್ತು ಅವರು ಬರೆದ ರಾಮಾಯಣದ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳು ಮತ್ತಾ ಆರೋಪಗಳು ರಾಜಕೀಯ ಪ್ರೇರೇಪಿತವಾಗಿದ್ದು, ಅವುಗಳನ್ನು ರಾಜಕೀಯವಾಗಿಯೇ ಎದುರಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ

ಪ್ರಾಧ್ಯಾಪಕ ಕೀಲಾರ ನಾಗೇಗೌಡ ಅವರು ಮಾತನಾಡಿ, “ಕುವೆಂಪು ಬದುಕಿದ್ದಾಗಲೂ ಅವರ ಮೇಲೆ ದಾಳಿ ನಡೆಸಲಾಗುತ್ತಿತ್ತು, ಈ ದಾಳಿ ಈಗಲೂ ಮುಂದುವರೆದಿದೆ. ಕುವೆಂಪು ಅವರು ವೈದಿಕ ಮೌಲ್ಯವನ್ನು ಮುರಿದು, ಸರ್ವೋದಯ ಕಾಣಬೇಕೆಂಬ ಪೂರ್ಣದೃಷ್ಟಿಯಲ್ಲಿ ರಾಮಾಯಣ ಬರೆದವರು. ಸರ್ವೋದಯ ಮತ್ತು ಪೂರ್ಣದೃಷ್ಟಿ ಇತರ ರಾಮಾಯಣದಲ್ಲಿ ಇರಲಿಲ್ಲ. ಅವರು ರಾಮಾಯಣಕ್ಕೆ ಹೊಸ ಮೌಲ್ಯ ಕಟ್ಟಿದರು. ಇದು ಕೆಲವು ಜನರಿಗೆ ಆಗಿಬರುವುದಿಲ್ಲ. ಆದ್ದರಿಂದ ಅವರಿಗೆ ಕುವೆಂಪು ಮೇಲೆ ದ್ವೇಷವಿದೆ. ಇವರಿಗೆ ವೈದಿಕತೆ ಮತ್ತು ಗಂಡಾಳ್ವಿಕೆ ಉಳಿಯಬೇಕು. ಹಾಗಾಗಿ ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಪ್ರತಿಪಾದಿಸುತ್ತಾರೆ” ಎಂದು ಹೇಳಿದ್ದರು.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರು, “ಕುವೆಂಪು ಅವರು ಮಾನವತಾವಾದವನ್ನು ಪ್ರತಿಪಾದಿಸಿದವರು. ಜಾತಿ ಮತದ ಸಂಕೋಲೆ ಕಳಚಿ ಪ್ರತಿಯೊಬ್ಬರೂ ವಿಶ್ವ ಮಾನವರಾಗಬೇಕು ಎಂದು ಆಶಿಸಿದವರು. ಕ್ಲಬ್‌ಹೌಸ್‌ನಲ್ಲಿ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿದ ದಿವ್ಯಾ ನಾಯಕ್‌ ನಡೆ ಖಂಡನೀಯ” ಎಂದು ಹೇಳಿದರು.

ಕನ್ನಡ ಪರ ಹೋರಾಟಗಾರ, ರಣಧೀರ ಪಡೆಯ ಮುಖಂಡ ಹರೀಶ್ ಬೈರಪ್ಪ ಅವರು ದಿವ್ಯಾ ಅವರ ಹೇಳಿಕೆಯನ್ನು ಖಂಡಿಸಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಕುವೆಂಪು ಅವರ ವಿರುದ್ದ ಹಿಂದಿನಿಂದಲೂ ದಾಳಿಯಾಗುತ್ತಲೆ ಬಂದಿದೆ. ಈ ದಾಳಿ ಹೆಚ್ಚಾದಷ್ಟೂ ಅವರ ವಿಚಾರಧಾರೆಗಳು ಗಟ್ಟಿಯಾಗುತ್ತಲೆ ಬರುತ್ತಿದೆ, ಜೊತೆಗೆ ಪ್ರಸ್ತುತಗೊಳ್ಳುತ್ತಲೆ ಹೋಗುತ್ತಿದೆ. ಕುವೆಂಪು ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ, ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕಿತ್ತು. ಆದರೆ ಈ ಯಾರಿಗೂ ಅವು ಬೇಕಿಲ್ಲ, ಕುವೆಂಪು ಬೈಯ್ಯುವುದಕ್ಕೋಸ್ಕರವೇ ಈ ಇಲಾಖೆ ಪ್ರಾಧಿಕಾರವನ್ನು ನೇಮಕ ಮಾಡಿದಂತಿದೆ” ಎಂದು ಹರೀಶ್ ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು: ಹಿಂದಿ ಬ್ಯಾನರ್‌ಗೆ ಮಸಿ ಬಳಿದ ರೂಪೇಶ್ ರಾಜಣ್ಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ವಿಷಯ ಜ್ಞಾನ, ಬೌದ್ಧಿಕ ಸೂಕ್ಷ್ಮತೆ ಮತ್ತು ಗ್ರಹಿಕೆಯ ವಿಸ್ತಾರಗಳಿದ್ದವರು, ಪ್ರಸ್ತುತವೆನಿಸುತ್ತಿದ್ದ ಪ್ರತಿಯೊಂದು ವಿಷಯವನ್ನೂ ತರ್ಕಬದ್ಧವಾಗಿ, ಸರಳವಾಗಿ ಮತ್ತು ನಿಷ್ಠುರವಾಗಿ ವಿಮರ್ಶಿಸುತ್ತಿದ್ದವರು, ಕನ್ನಡದಲ್ಲಿ ಕುವೆಂಪು ಮಾತ್ರ! ಕುವೆಂಪು ಅವರನ್ನು ನಾನು ನೋಡಿಲ್ಲ; ಆದರೆ, ಅವರ ಪ್ರತಿಯೊಂದು ಕೃತಿಯಲ್ಲೂ ಅವರ ವ್ಯಕ್ತಿತ್ವ ಪ್ರಕಟಗೊಳ್ಳುತ್ತದೆ. ಅವರ ದಿವ್ಯ ಚೇತನ ಪ್ರಭಾವಿತಗೊಂಡ ಬಗೆಯನ್ನು ಕುಪ್ಪಳ್ಳಿಯಲ್ಲಿ ನೋಡಬಹುದು.

    ಅವರನ್ನು ಮತ್ತು, ಅವರ ಕೃತಿಗಳ ಆಳ ಮತ್ತು ವಿಸ್ತಾರವನ್ನು, ಪೂರ್ಣವಾಗಿ ಅರಿಯುವಷ್ಟು ನಮ್ಮಲ್ಲಿ ಹೆಚ್ಚಿನವರು ಬೆಳೆದಿಲ್ಲ ಎಂಬುದು ನನ್ನ ನಮ್ರ ತಿಳಿವಳಿಕೆ.

    ಸಾರ್ವಜನಿಕ ವೇದಿಕೆಗಳಲ್ಲಿ ಹೆಸರು ಮಾಡಲು, ಈ ಮಟ್ಟದ ಕೀಳು ಮಟ್ಟದ ಟೀಕೆ ಮಾಡಿದ ಈ ದೀವ್ಯಾ ನಾಯಕ್ ಗೆ ಮನೋವೈದ್ಯಕೀಯ ಚಿಕಿತ್ಸೆ ಅವಶ್ಯಕ ಎನ್ನಿಸುತ್ತದೆ.

  2. ಕುರುಡನೊಬ್ಬ ಆನೆಯನ್ನು ಮುಟ್ಟಿ ವರ್ಣಿಸಿದಂತಿದೆ. ಕುವೆಂಪು ಅವರ ವಿಚಾರಗಳು ಅನೇಕರನ್ನು ಜಾಗೃತ ಗೊಳಿಸಿದ ಸತ್ಯ ಎಲ್ಲೆಡೆ ಕಾಣುತ್ತಿದ್ದೇವೆ. ಶೂದ್ರ ಯುವಕರಿಗೆ ಧರ್ಮದ ಅಫೀಮು ಬಣ್ಣದ ಮಾತುಗಳಲ್ಲಿ ಬಿತ್ತಿ ಬೆಳೆ ತೆಗೆಯುವ ಮಂದಿಯ ಹುನ್ನಾರ ಬಯಲಾಗಿದೆ.
    ಗುಡಿ ಚರ್ಚು, ಮಸೀದಿಗಳು ಮೌಢ್ಯ ಬಿತ್ತುವ ಕೇಂದ್ರ ಗಳೆಂದು ಹೇಳಿದ ಮಾತು ಮಹಾ ಪೋಷಕರಾದ ಇವರಿಗೆ ಅರಗಿಸಿ ಕೊಳ್ಳಲು ಆಗಲಿಲ್ಲ ಎನ್ನುವುದು ಸತ್ಯ.

  3. ಕುವೆಂಪು ಮತ್ತು ಅವರ ಕೃತಿಗಳ ಬಗ್ಗೆ ಅವಹೇಳನವಾಗಿ ಮಾತನಾಡಿರುವುದು ಕಂಡನಾರ್ಹ.

  4. ಕುವೆಂಪು ರವರ ಪುಸ್ತಕಗಳ ಬಗ್ಗೆ ಅವಹೇಳನ ಮಾಡಿರುವ ದಿವ್ಯ ನಾಯಕ್ ರವರ ನಡವಳಿಕೆಯನ್ನು ಖಂಡಿಸುತ್ತೇನೆ

  5. ಮಹಾಚೇತನ ಕುವೆಂಪು ಅವರ ಬಗ್ಗೆ ಟೀಕಿಸಿರುವ ಮಹಾತಾಯಿ ನಿಮಗೆ ದೊಡ್ಡ ನಮಸ್ಕಾರ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...