Homeಮುಖಪುಟಹಲವು ರಾಮಾಯಣಗಳಲ್ಲಿ, ಯಾವುದು ಮೂಲ ರಾಮಾಯಣ?

ಹಲವು ರಾಮಾಯಣಗಳಲ್ಲಿ, ಯಾವುದು ಮೂಲ ರಾಮಾಯಣ?

- Advertisement -
- Advertisement -

ಕನ್ನಡದ ಪ್ರಸಿದ್ಧ ಕವಿಯಾದ ಕುಮಾರವ್ಯಾಸನು ‘ತಿಣುಕಿದನು ಫಣಿರಾಯ ರಾಮಾಯಣದ ಕತೆಗಳ ಭಾರದಲಿ’ ಎಂಬ ಮಾತನ್ನು ಹೇಳುತ್ತಾನೆ. ಅವನಿಗೆ ಕನ್ನಡ ನಾಡೂ ಸೇರಿದಂತೆ ಭಾರತದ ಹಲವು ಕಡೆಗಳಲ್ಲಿ ಪ್ರಚಲಿತದಲ್ಲಿದ್ದ ಹಲವು ರಾಮಾಯಣಗಳ ಬಗ್ಗೆ ತಿಳಿದಿತ್ತು. 10 ನೇ ಶತಮಾನದ ಕೊನೆಯಲ್ಲಿ ರಚಿತವಾದ ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’, 16 ನೇ ಶತಮಾನದ ತೊರವೆ ನರಹರಿಯ ‘ತೊರವೆ ರಾಮಾಯಣ’, 12-18ನೇ ಶತಮಾನಗಳಲ್ಲಿ ರಚಿತವಾದ ಯಕ್ಷಗಾನ ರಾಮಾಯಣಗಳು, ಮುದ್ದಣನ ರಾಮಾಶ್ವಮೇಧ, ಅದ್ಭುತ ರಾಮಾಯಣ – ಕೆಲವು ಉದಾಹರಣೆಗಳಷ್ಟೆ.

ದೇಶದಾದ್ಯಂತ ಹಲವು ಜನಪದ ರಾಮಾಯಣಗಳಿವೆ. ಈ ಜನಪದ ರಾಮಾಯಣಗಳು ರಾಮ ಕೇಂದ್ರಿತವಾಗಿರದೆ, ಬಹುಮಟ್ಟಿಗೆ ಸೀತಾ ಕೇಂದ್ರಿತವಾಗಿವೆ. ಚಿತ್ರ ಪಟ ರಾಮಾಯಣದಲ್ಲಿ ಸೀತೆಯು ಲಂಕೆಯಿಂದ ಹಿಂದೆ ಬಂದ ಆನಂತರ ರಾವಣ ಚಿತ್ರ ಬರೆಯುವ ಮಾರ್ಮಿಕ ಘಟನೆಯ ವಿವರ ಬರುತ್ತದೆ. ಈ ನಡುವೆ ಹಲವಾರು ರಾಮಾಯಣಗಳು ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದು ಆನಂತರ ಕಾಣೆಯಾಗಿವೆ. ರಾಮಾಯಣದ ವಸ್ತುವು ಬರ್ಮಾ, ಲಾವೋಸ್‌, ಫಿಲಿಪೈನ್ಸ್‌, ನೇಪಾಲ, ಜಪಾನ್‌, ಮಂಗೋಲಿಯಾ ಇಂಡೊನೇಷಿಯಾ, ಮಲೇಷಿಯಾ, ಕಾಂಬೋಡಿಯಾ, ಶ್ರೀಲಂಕಾ ದೇಶಗಳ ಸಂಸ್ಕೃತಿಗಳನ್ನು ಆಳವಾಗಿ ಪ್ರವೇಶಿಸಿ ಮರು ಹುಟ್ಟು ಪಡೆಯುತ್ತಿವೆ.

ಇದನ್ನೂ ಓದಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್. ಡಿ. ಕುಮಾರಸ್ವಾಮಿ ಆಕ್ರೋಶ

ಈ ಎಲ್ಲಾ ರಾಮಾಯಣಗಳಿಗೆ ಮೂಲ ಆದಿಕವಿ ವಾಲ್ಮೀಕಿಯ ರಾಮಾಯಣ ಎಂದು ಹೇಳಲಾಗಿದೆ. ವಾಲ್ಮೀಕಿಗೆ ರಾಮ ಕತೆಯನ್ನು ನಾರದ ಹೇಳಿದನೆಂಬ ನಂಬಿಕೆಯೂ ಇದೆ. ಈ ನಾರದ ಬ್ರಹ್ಮನ ಮಗನಾಗಿದ್ದು ಭಾರತೀಯ ಮಹಾಕಾವ್ಯ ಮತ್ತು ಪುರಾಣಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಒಂದು ಪಾತ್ರವೇ ಹೊರತು ಐತಿಹಾಸಿಕ ವ್ಯಕ್ತಿಯಲ್ಲ. ಹೀಗಾಗಿ ಈ ಕಥನವನ್ನು ಪುರಾಣ-ಕಾವ್ಯಗಳ ಭಾಗವಾಗಿ ನೋಡಬೇಕೇ ವಿನಾ ವಾಸ್ತವ ಸತ್ಯವೆಂದು ಅಲ್ಲ.

ವಾಲ್ಮೀಕಿಯ ಕುರಿತಾದ ನಂಬಿಕೆಗಲೂ ಕಾಲಾಂತರದಲ್ಲಿ ಹಲವು ರೂಪಗಳನ್ನು ಧರಿಸಿವೆ. ಮಹಾಕಾವ್ಯದ ಭವ್ಯತೆ ದಿವ್ಯತೆಗಳನ್ನು ಹೆಚ್ಚು ಮಾಡಲು ಇಂಥ ಕತೆಗಳು ಸೇರಿಕೊಳ್ಳುತ್ತವೆ.

ಭಾರತದ ವಿವಿಧ ಭಾಷೆಗಳಲ್ಲಿ ಕಂಡು ಬರುವ ಜನಪದ ರಾಮಾಯಣಗಳ ವಸ್ತು ವಾಲ್ಮೀಕಿ ರಾಮಾಯಣಕ್ಕಿಂತ ತುಂಬ ಬೇರೆಯಾಗಿವೆ. ಎಷ್ಟೋ ರಾಮಾಯಣಗಳಲ್ಲಿ ಸೀತೆಯನ್ನು ಲಕ್ಷ್ಮಣ ಗೆದ್ದು ರಾಮನಿಗೆ ಅರ್ಪಿಸುವುದಿದೆ. ವಾಲ್ಮೀಕಿ ಇಂಥ ಹಲವು ರಾಮಾಯಣಗಳನ್ನು ಕೇಳಿ ಕೊನೆಗೆ ತನ್ನದೇ ಆದ ಒಂದು ರಾಮಾಯಣ ನಿರ್ಮಿಸಿರುವ ಸಾಧ್ಯತೆಯೇ ಹೆಚ್ಚು. ಏನಿದ್ದರೂ ಇದು ಕೋಳಿ ಮತ್ತು ಮೊಟ್ಟೆಯ ಕತೆ. ಯಾವುದರಿಂದ ಯಾವುದು ಹುಟ್ಟಿತು, ಯಾವುದು ಮೂಲ ಎಂದು ಹೇಳುವುದು ಅಸಾಧ್ಯ.

ಈಚಿನ ರಾಜಕೀಯದ ಭಾಗವಾಗಿ ‘ಸಂಸ್ಕೃತದ ರಾಮಾಯಣಕ್ಕೆ ಪ್ರತಿರೋಧವಾಗಿ ದೇಶಭಾಷೆಯಲ್ಲಿ ರಾಮಾಯಣವನ್ನು ಮರುಸೃಷ್ಟಿಸುತ್ತಿದ್ದಾರೆಂಬ’ ಆರೋಪವನ್ನು ಹಲವರು ಮಾಡುತ್ತಾ, ಮೂಲಕ್ಕೆ ನಿಷ್ಟರಾಗಿರಬೇಕೆಂಬ ಮಾತನ್ನು ಹೇಳುತ್ತಿದ್ದಾರೆ. ಇದನ್ನು ಒಪ್ಪಿಕೊಂಡರೆ, ಸಂಸ್ಕೃತದಲ್ಲೂ ಹಲವು ರಾಮಾಯಣಗಳಿರುವುದಕ್ಕೆ ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾಗುತ್ತದೆ. ಭಾಸನ ‘ಪ್ರತಿಮಾನಾಟಕ’, ಮತ್ತು ‘ಅಭಿಷೇಕ’ ನಾಟಕಗಳು ಇದಕ್ಕೊಂದು ಉತ್ತಮ ಉದಾಹರಣೆ.

ಇದನ್ನೂ ಓದಿ: ‘#ಕನ್ನಡದಲ್ಲಿUPSC’ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನ ಬೆಂಬಲಿಸಲು ಕನ್ನಡಿಗರ ಕರೆ

ಆಧ್ಯಾತ್ಮ ನಾಮಾಯಣ, ವಶಿಷ್ಟ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ಅದ್ಭುತ ರಾಮಾಯಣ, ಉತ್ತರ ರಾಮಚರಿತ – ಹೀಗೆ ಹಲವು ರಾಮಾಯಣಗಳ ಪರಂರೆ ಸಂಸ್ಕೃತಕ್ಕೇ ಇದೆ. ಅದೇ ರೀತಿಯಲ್ಲಿ ಭಾರತೀಯ ಭಾಷೆಗಳು ಕಂಬನ್‌ ರಾಮಾಯಣ, ತುಲಸೀ ರಾಮಾಯಣ ಮೊದಲಾದುವುಗಳನ್ನು ಸೃಷ್ಟಿಸಿಕೊಂಡಿವೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಬಂದ ಮಹತ್ಕೃತಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’. 20 ನೇ ಶತಮಾನಕ್ಕೆ ರಾಮಾಯಣ ಮುಖಾ ಮುಖಿಯಾದಾಗ ಹುಟ್ಟಿಕೊಂಡ ಮಹಾಕಾವ್ಯವದು.

ಈ ಬಹುಪಠ್ಯಗಳು ಮೂಲತಃ ಭಾರತದ ವೈವಿಧ್ಯತೆಗಳಿಗೊಂದು ರೂಪಕ. ವ್ಯಾಸರು ಬರೆದ ಮಹಾಭಾರತದ ಸಾವಿರಾರು ಪಠ್ಯಗಳನ್ನು ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ವಿಷ್ಣು ಎಸ್. ಸೂಕ್ತಂಕರ್ ಸಂಗ್ರಹಿಸಿ, ಅದರಿಂದ ಒಂದು ಪಠ್ಯವನ್ನು ಪರಿಷ್ಕರಿಸಿ ಪೂನಾದಿಂದ ಪ್ರಕಟಿಸಿದರು. ಹಾಗೆ ಪ್ರಕಟಿಸುವಾಗ ಅವರು ಬರೆದ ಬಹಳ ಮಹತ್ವದ ವಾಕ್ಯವೊಂದು ಇಂತಿದೆ- “ವ್ಯಾಸರು ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ. ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ ಅಷ್ಟೆ”. ಈ ಮಾತು ರಾಮಾಯಣಕ್ಕೂ ಅನ್ವಯವಾಗುತ್ತದೆ.

ಗಮನಿಸಬೇಕಾದ ವಿಷಯವೆಂದರೆ, ನಮ್ಮ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತಮಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತವೆ ಅಥವಾ ಹೇಳಿಕೊಳ್ಳುತ್ತವೆ ಎಂಬುದನ್ನು ನಾವೀಗ ಮರೆತುಬಿಟ್ಟಿರುವುದು. ತನ್ನ ಕಾಲದ, ಸಮುದಾಯದ, ಪ್ರದೇಶದ ಮತ್ತು ನಿರೂಪಕನ ಅಗತ್ಯಗಳಿಗೆ ಅನುಗುಣವಾಗಿ ಕಾವ್ಯಗಳನ್ನು ಮತ್ತೆ ಮತ್ತೆ ಬರೆಯಲಾಗುತ್ತದೆ. ಆಕಾಶದಲ್ಲಿರುವ ನಕ್ಷತ್ರಗಳ ಹಾಗೆ. ಅವುಗಳನ್ನು ನಾವು ಎಣಿಸಲಾರೆವು, ಅವುಗಳಿಗೆ ವ್ಯಾಕರಣವನ್ನೂ ಬರೆಯಲಾರೆವು, ಆದರೆ ಅವು ಆಗಸದ ಒಟ್ಟಂದವನ್ನು ಹೆಚ್ಚಿಸಿವೆ.

ಕುವೆಂಪು ಮತ್ತು ಅವರು ಬರೆದ ರಾಮಾಯಣದ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳು ಮತ್ತು ಆರೋಪಗಳು ರಾಜಕೀಯ ಪ್ರೇರಿತವಾದುವು. ಅವುಗಳನ್ನು ರಾಜಕೀಯವಾಗಿಯೇ ಎದುರಿಸಬೇಕು ಅಷ್ಟೆ.

ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...