Homeಕರ್ನಾಟಕಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಡಾ.ರಾಜ್‌ ಕುಟುಂಬದೊಂದಿಗೆ ಅಪಾರ ಒಡನಾಟ ಹೊಂದಿರುವ ಸಾಹಿತಿ ಹಾಗೂ ಸಿನಿಮಾ ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಮಾನವೀಯ ಕಾರ್ಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

- Advertisement -
- Advertisement -

ಪುನೀತ್‌ ಎಂದ ಕೂಡಲೇ ನನ್ನ ಕಣ್ಣೆದುರಿಗೆ ಬರುವುದು ರಾಜ್‌ಕುಮಾರ್‌ ಅವರೇನೇ. ಪುನೀತ್‌ ಅಷ್ಟೇ ಅಲ್ಲ, ರಾಜ್‌ಕುಮಾರ್‌ ಅವರ ಮೂವರು ಮಕ್ಕಳೂ ಡಾ.ರಾಜ್‌ ಅವರ ಸಾರ್ವಜನಿಕ ನಡವಳಿಕೆಯ ಮಾದರಿಯನ್ನು ಅನುಸರಿಸಿದವರು.

ಜನಪ್ರಿಯ ಹೀರೋ ಎಂದ ಕೂಡಲೇ ಅಭಿಮಾನಿಗಳ ದೊಡ್ಡ ಬಳಗವೇ ಇರುತ್ತದೆ. ಆಗ ಒಬ್ಬ ಹೀರೋ ನಿಜವಾದ ಅರ್ಥದಲ್ಲಿ ತನ್ನ ಚಿತ್ರಗಳ ಮೂಲಕ ಯಾವ ಸಂದೇಶವನ್ನು ನೀಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ಅಂದರೆ ಅವರು ಎಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿ.

ಪಾತ್ರದ ವಿಚಾರ ನಿರ್ದೇಶಕನದ್ದಲ್ಲವೇ ಎಂದು ಕೆಲವರು ಕೇಳಬಹುದು, ನಿಜ. ಆದರೆ ಜನಪ್ರಿಯ ನಟರಾದವರ ಕೈಯಲ್ಲೇ ಕಥಾ ವಸ್ತುವಿನ ಆಯ್ಕೆ ಇರುತ್ತದೆ. ನಾನು ಇಂತಹ ಕಥೆ ಇದ್ದರೆ ಮಾತ್ರ ನಟಿಸುತ್ತೇನೆ ಎಂದು ಹೇಳುವ ಮಟ್ಟಕ್ಕೆ ನಟ ಬೆಳೆದಿರುತ್ತಾನೆ. ಇಂತಹ ಸಂದರ್ಭದಲ್ಲಿ ತನಗೆ ಹೊಂದುವಂತಹ ಕಥೆ ಇದ್ದಾಗ ಮಾತ್ರ ನಟನೆಗೆ ಮುಂದಾಗುತ್ತಾನೆ. ಒಬ್ಬ ನಾಯಕ ಎಂತಹ ಕಥೆ ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ. ಈ ಅರ್ಥದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಸದಭಿರುಚಿಯ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ತಾಯಿ ಮತ್ತು ಮಗನ ಸಂಬಂಧದ ಕೌಟುಂಬಿಕ ಪಾತ್ರಗಳು ಒಂದು ಕಡೆ ಇರುತ್ತವೆ. ಇನ್ನೊಂದು ಕಡೆ ಅನಾಥ ಮಕ್ಕಳನ್ನು ಪುನರ್ವಸತಿ ಕೇಂದ್ರದಲ್ಲಿ ಇಟ್ಟಾಗ ಏನು ಸಂದೇಶ ಸಾರಬಹುದು, ಗಣಿಗಾರಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಗಣಿಗಾರಿಕೆಯ ಅನಾಹುತಗಳೇನು?- ಈ ಥರದ ಕಥಾ ವಸ್ತುಗಳಲ್ಲೂ ಅವರು ಹೀರೋ ಆಗಿ ಅಭಿನಯಿಸಿದರು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ

ಹೀರೋಗಳ ಸಾರ್ವಜನಿಕ ನಡೆವಳಿಕೆಯೂ ಬಹಳ ಮುಖ್ಯ ಎಂದು ಭಾವಿಸಿದ್ದೇನೆ. ಆ ದೃಷ್ಟಿಯಿಂದಲೂ ನಮ್ಮ ಚಿತ್ರರಂಗದಲ್ಲಿ ಮೆಚ್ಚಲೇಬೇಕಾದ, ಗೌರವಿಸಬೇಕಾದ ವ್ಯಕ್ತಿತ್ವ ಪುನೀತ್‌ ರಾಜ್‌ಕುಮಾರ್‌. ವರನಟ ಡಾ.ರಾಜ್‌ಕುಮಾರ್‌ ಥರದ ಪ್ರಬುದ್ಧ ಕಲಾವಿದ ಮತ್ತೊಬ್ಬ ಸಿಗುವುದು ಕಷ್ಟ. ಹೀಗಾಗಿ ರಾಜ್‌ ಕುಮಾರ್ ಅವರನ್ನು ಇಡೀ ನಾಡು ಅಪಾರವಾಗಿ ಗೌರವಿಸುತ್ತದೆ. ಜೊತೆಗೆ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಮಾದರಿಯಾದದ್ದು. ಡಾ.ರಾಜ್‌ಕುಮಾರ್‌ ಅವರ ಸಜ್ಜನಿಕೆ, ವಿನಯ, ಅನ್ಯರ ಬಗೆಗಿನ ಗೌರವ, ಸರಳತೆ, ಅಹಂಕಾರ ಇಲ್ಲದೆ ಇರುವುದು- ಇದೆಲ್ಲವೂ ಪುನೀತ್‌ ರಾಜ್‌ಕುಮಾರ್‌ ಅವರಲ್ಲಿತ್ತು.

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಇವತ್ತಿನ ಯುವಕರ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಯಾಕೆಂದರೆ ಒಬ್ಬ ಹೀರೋ ಹೇಗಿರುತ್ತಾನೋ ಹಾಗೇ ತಮ್ಮ ಅಭಿಮಾನಿಗಳು ವರ್ತಿಸಲು ಶುರುಮಾಡುತ್ತಾರೆ. ಪುನೀತ್‌ ಅವರ ಸಭ್ಯತೆ ಮತ್ತು ಸಂಭಾವಿತನದ ಇಮೇಜ್‌ ಯುವಕರಿಗೆ ಮಾದರಿಯಾಗಿತ್ತು. ಈ ಗುಣಗಳು ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದೆ.

ರಾಜ್‌ಕುಮಾರ್‌ ಅವರ ಮಕ್ಕಳು ಎಲ್ಲಿಯೂ ಸಾರ್ವಜನಿಕ ವಿವಾದಗಳಿಗೆ ಒಳಗಾದವರಲ್ಲ. ಪುನೀತ್ ಅವರನ್ನು ಕರ್ನಾಟಕದ ಅಸಂಖ್ಯಾತ ಯುವಕರು ಇಷ್ಟಪಡುತ್ತಾರೆ. ಅವರನ್ನು ಸಾರ್ವತ್ರಿಕವಾಗಿ ಇಷ್ಟಪಡುವ ಬಹುದೊಡ್ಡ ಪಡೆಯೇ ನಾಡಿನಲ್ಲಿದೆ. ಅವರ ನಡವಳಿಕೆಯನ್ನು ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಎನ್ನಬಹುದು.

ಸಾರ್ವಜನಿಕ ಸೇವೆಯ ಗುರುತು

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ಸೇವೆ ಅನನ್ಯವಾದದ್ದು. ಮೈಸೂರಿನಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ನೇತೃತ್ವದಲ್ಲಿ ಶಕ್ತಿಧಾಮ ಶುರು ಮಾಡಲಾಯಿತು. ರಾಜ್‌ಕುಮಾರ್‌ ಅವರ ಬೆಂಬಲ ಶಕ್ತಿಧಾಮ ಸ್ಥಾಪನೆಗೆ ಇತ್ತು. ಬೀದಿಗೆ ಬಿದ್ದ ಹೆಣ್ಣು ಮಕ್ಕಳಿಗೆ ಆಶ್ರಯವನ್ನು ಶಕ್ತಿಧಾಮ ನೀಡುತ್ತಿದೆ. ಪುನೀತ್‌ ರಾಜ್‌ಕುಮಾರ್‌ ಹಾಡಿ ಸಂಪಾದಿಸಿದ್ದು ಇರಬಹುದು, ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಮೂಲಕ ಬಂದ ಸಂಭಾವನೆ ಇರಬಹುದು- ಇದರ ಬಹುಪಾಲನ್ನು ಶಕ್ತಿಧಾಮಕ್ಕೆ ನೀಡುತ್ತಾ ಬಂದಿದ್ದರು. ಅನೇಕ ಅನಾಥಾಶ್ರಮಗಳಿಗೆ ಹಣ ಕೊಡುತ್ತಿದ್ದರು.

PC: newindianexpress.com

ರಾಜ್‌ಕುಮಾರ್‌‌ ಅವರು ನೂರು ಸಿನಿಮಾಗಳನ್ನು ಪೂರೈಸಿದಾಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿ.ವಿ.ಎಲ್‌.ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಶಿಕ್ಷಣ ಸಮಿತಿ ರಚಿಸುತ್ತಾರೆ. ಆನಂತರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಅನಾಥಾಶ್ರಮಗಳಿಗೆ ಸಹಕಾರ ನೀಡುತ್ತಾರೆ. ರಂಗ ಮಂದಿರಗಳು ರಾಜ್ಯಾದ್ಯಾಂತ ಸ್ಥಾಪನೆಯಾಗಲು ರಸಸಂಜೆ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಾರೆ.

ಒಮ್ಮೆ ರಾಜ್‌ಕುಮಾರ್‌ ಅವರು ನಮ್ಮ ಮನೆಗೆ ಬಂದಾಗ, “ಇಷ್ಟೆಲ್ಲ ಮಾಡುತ್ತೀರಿ, ಆದರೂ ಎಲ್ಲಿಯೂ ಪ್ರಚಾರ ತೆಗೆದುಕೊಳ್ಳುವುದಿಲ್ಲವಲ್ಲ ಸಾರ್” ಎಂದೆ. “ನಾವು ಕಲಾವಿದರು. ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು. ನಾವು ಸಿನಿಮಾ ಮಾಡ್ತೀವಿ. ಇದನ್ನೆಲ್ಲ ಯಾಕೆ ಪ್ರಚಾರ ಮಾಡಬೇಕು” ಎಂದಿದ್ದರು.

ಇದನ್ನೂ ಓದಿರಿ: ಹೊಸ ಪ್ರತಿಭೆಗಳ ಮಹಾನ್‌ ಪ್ರೋತ್ಸಾಹಕ ಪುನೀತ್‌ ರಾಜ್‌ಕುಮಾರ್

ಪುನೀತ್ ಅವರಲ್ಲಿ ಒಮ್ಮೆ ಮಾತನಾಡುತ್ತಿದ್ದಾಗ ಹೇಳಿದೆ: “ನಿಮ್ಮ ತಂದೆಯವರು ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂದು ಹೇಳುತ್ತಿದ್ದರು. ಆ ಕಾಲದಲ್ಲಿ ಹೇಳಿದ್ದನ್ನೇ ನೀವು ಈಗಲೂ ಅನುಸರಿಸುತ್ತಿದ್ದೀರಿ. ಆದರೆ ಇವತ್ತಿನ ಪ್ರಪಂಚ, ಇವತ್ತಿನ ಸಮಾಜ ಬದಲಾಗಿದೆ. ನೀವು ಏನು ಮಾಡುತ್ತಿದ್ದೀರಿ ಎಂದು ಜನ ಕೇಳುತ್ತಾರೆ. ನೀವು ಮಾಡಿರುವುದನ್ನು ಹೇಳಬಹುದಲ್ಲ” ಎಂದೆ. ಆಗ ಪುನೀತ್ ಅವರು (ಐದು ವರ್ಷಗಳ ಹಿಂದೆ) ನಮ್ಮ ಮನೆಗೆ ಸಹಾಯಕರ ಮೂಲಕ ಒಂದು ಪಟ್ಟಿ ಕಳುಹಿಸಿಕೊಟ್ಟರು. ಸುಮಾರು ಐವತ್ತರಿಂದ ಅರವತ್ತು ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ನೀಡಿರುವ ವಿವರಗಳನ್ನು ಆ ಪಟ್ಟಿಯಲ್ಲಿ ನೋಡಿದೆ.

ಸರ್ಕಾರಿ ಶಾಲೆಗಳಿಗೆ ಅವರು ಹಣ ನೀಡಿರುವುದು ಮುಖ್ಯ ಅನಿಸಿತು. ಕೆಲವು ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದರು, ಕೆಲವು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಕೊಟ್ಟಿದ್ದರು. ಹಣ ಸಹಾಯ ಮಾಡಿದ್ದರು. ವೃದ್ಧಾಶ್ರಮಗಳಿಗೆ, ಅನಾಥಾಶ್ರಮಗಳಿಗೆ ಹಣ ಕೊಟ್ಟಿದ್ದರು. ಹಾಗಾಗಿ ಪುನೀತ್‌ ಯುವಕರಿಗೆ ರಂಜನೆ ಮಾಡುತ್ತಿದ್ದ ನಟನಾಗಿ ಅಷ್ಟೇ ಇರಲಿಲ್ಲ. ಸಾಮಾಜಿಕ ಜವಾಬ್ದಾರಿಗಳನ್ನು ಸಿನಿಮಾಗಳ ಮೂಲಕ ತೋರಿಸಿಕೊಡುತ್ತಿದ್ದರು. ಯುವಕರು ಹಾದಿ ತಪ್ಪಬಹುದಾದ ಸಿನಿಮಾಗಳನ್ನು ಅವರು ಮಾಡಲಿಲ್ಲ.

ಜೂನಿಯರ್‌ ರಾಜ್‌ಕುಮಾರ್‌ ಎಂದೇ ಖ್ಯಾತರಾದ ಹಾವೇರಿಯ ಅಶೋಕ್‌ ಬಸ್ತಿ ಅವರು ರಾಜ್‌ಕುಮಾರ್‌ ಅವರ ಹೆಸರಲ್ಲಿ ಸಾಂಸ್ಕೃತಿಕ ಭವನ ಮಾಡಲಿದ್ದರು. ಅದೇ ಸಮಯದಲ್ಲಿ ಧಾರಾವಾಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಶೂಟಿಂಗ್‌ನಲ್ಲಿ ಇದ್ದರು. ಅಶೋಕ್ ಬಸ್ತಿ ಅವರ ಸಾಂಸ್ಕೃತಿಕ ಭವನದ ಕುರಿತು ಪುನೀತ್‌ ಅವರಿಗೆ ತಿಳಿಸಿದೆ. ಸಾಂಸ್ಕೃತಿಕ ಭವನದ ಶಂಕು ಸ್ಥಾಪನೆಗೆ ಹೋಗಿಬಂದಿದ್ದರು. ಇನ್ನೊಬ್ಬರು ಜೂನಿಯರ್‌ ರಾಜ್‌ಕುಮಾರ್‌ ಕುಂಬಳಗೋಡು ಬಳಿಯ ಮುನಿಕುಮಾರ್‌. ಪುನೀತ್‌ ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಬೇಕು ಎಂಬ ಆಕಾಂಕ್ಷೆಯನ್ನು ತೋಡಿಕೊಂಡಿದ್ದರು. ಇದನ್ನು ತಿಳಿಸಲು ಹದಿನೈದು ದಿನಗಳ ಹಿಂದೆ ಪುನೀತ್ ಅವರಿಗೆ ಕರೆ ಮಾಡಿದ್ದೆ. “ಚೂರು ಕೆಲಸಗಳಿವೆ. ಖಂಡಿತ ಭೇಟಿ ಮಾಡೋಣ” ಎಂದಿದ್ದರು.

ಮೊದಲೆಲ್ಲ ಕರೆ ಮಾಡಿದಾಗ ‘ಸಾರ್‌’ ಎನ್ನುತ್ತಿದ್ದರು. ಇತ್ತೀಚೆಗೆ ನನ್ನನ್ನು ‘ಅಣ್ಣ’ ಎನ್ನುತ್ತಿದ್ದರು. ಮೊನ್ನೆಯೂ ‘ಆಯ್ತು ಅಣ್ಣ, ಮುನಿಕುಮಾರ್‌ ಅವರನ್ನು ಭೇಟಿಯಾಗೋಣ’ ಎಂದಿದ್ದರು. ಅಷ್ಟು ಆತ್ಮೀಯತೆ ಇತ್ತು. ಯಾವುದಾದರೂ ಆಡಿಯೋ ರಿಲೀಸ್‌ಗೆ ಕರೆದರೆ ತಕ್ಷಣ ಬಂದು ಬಿಡುತ್ತಿದ್ದರು. ಒಂದು ಸಿನಿಮಾವನ್ನು ನೀವು ನೋಡಬೇಕು ಎಂದರೆ ಬಂದು ನೋಡುತ್ತಿದ್ದರು. ಅವರ ವಿನಯವಂತಿಗೆ ಅಪಾರ.

ಅವರನ್ನು ಚಿಕ್ಕವರಿದ್ದಾಗಿನಿಂದಲೂ ನೋಡಿದ್ದೇನೆ. ಅವರ ಅಭಿನಯ, ಅವರು ನಡೆದುಕೊಳ್ಳುತ್ತಿದ್ದ ರೀತಿ… ಇಷ್ಟು ಚಿಕ್ಕ ವಯಸ್ಸಿಗೆ ಹೋಗಿದ್ದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ.

-ಡಾ.ಬರಗೂರು ರಾಮಚಂದ್ರಪ್ಪ

ನಿರೂಪಣೆ: ಯತಿರಾಜ್‌ ಬ್ಯಾಲಹಳ್ಳಿ


ಇದನ್ನೂ ಓದಿರಿ: ಕಂಠೀರವ ಸ್ಟುಡಿಯೊದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಂತ್ಯ ಸಂಸ್ಕಾರ; ಬಿಗಿ ಬಂದೋಬಸ್ತ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...