Homeಕರ್ನಾಟಕಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಡಾ.ರಾಜ್‌ ಕುಟುಂಬದೊಂದಿಗೆ ಅಪಾರ ಒಡನಾಟ ಹೊಂದಿರುವ ಸಾಹಿತಿ ಹಾಗೂ ಸಿನಿಮಾ ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಮಾನವೀಯ ಕಾರ್ಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

- Advertisement -
- Advertisement -

ಪುನೀತ್‌ ಎಂದ ಕೂಡಲೇ ನನ್ನ ಕಣ್ಣೆದುರಿಗೆ ಬರುವುದು ರಾಜ್‌ಕುಮಾರ್‌ ಅವರೇನೇ. ಪುನೀತ್‌ ಅಷ್ಟೇ ಅಲ್ಲ, ರಾಜ್‌ಕುಮಾರ್‌ ಅವರ ಮೂವರು ಮಕ್ಕಳೂ ಡಾ.ರಾಜ್‌ ಅವರ ಸಾರ್ವಜನಿಕ ನಡವಳಿಕೆಯ ಮಾದರಿಯನ್ನು ಅನುಸರಿಸಿದವರು.

ಜನಪ್ರಿಯ ಹೀರೋ ಎಂದ ಕೂಡಲೇ ಅಭಿಮಾನಿಗಳ ದೊಡ್ಡ ಬಳಗವೇ ಇರುತ್ತದೆ. ಆಗ ಒಬ್ಬ ಹೀರೋ ನಿಜವಾದ ಅರ್ಥದಲ್ಲಿ ತನ್ನ ಚಿತ್ರಗಳ ಮೂಲಕ ಯಾವ ಸಂದೇಶವನ್ನು ನೀಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ಅಂದರೆ ಅವರು ಎಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿ.

ಪಾತ್ರದ ವಿಚಾರ ನಿರ್ದೇಶಕನದ್ದಲ್ಲವೇ ಎಂದು ಕೆಲವರು ಕೇಳಬಹುದು, ನಿಜ. ಆದರೆ ಜನಪ್ರಿಯ ನಟರಾದವರ ಕೈಯಲ್ಲೇ ಕಥಾ ವಸ್ತುವಿನ ಆಯ್ಕೆ ಇರುತ್ತದೆ. ನಾನು ಇಂತಹ ಕಥೆ ಇದ್ದರೆ ಮಾತ್ರ ನಟಿಸುತ್ತೇನೆ ಎಂದು ಹೇಳುವ ಮಟ್ಟಕ್ಕೆ ನಟ ಬೆಳೆದಿರುತ್ತಾನೆ. ಇಂತಹ ಸಂದರ್ಭದಲ್ಲಿ ತನಗೆ ಹೊಂದುವಂತಹ ಕಥೆ ಇದ್ದಾಗ ಮಾತ್ರ ನಟನೆಗೆ ಮುಂದಾಗುತ್ತಾನೆ. ಒಬ್ಬ ನಾಯಕ ಎಂತಹ ಕಥೆ ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ. ಈ ಅರ್ಥದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಸದಭಿರುಚಿಯ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ತಾಯಿ ಮತ್ತು ಮಗನ ಸಂಬಂಧದ ಕೌಟುಂಬಿಕ ಪಾತ್ರಗಳು ಒಂದು ಕಡೆ ಇರುತ್ತವೆ. ಇನ್ನೊಂದು ಕಡೆ ಅನಾಥ ಮಕ್ಕಳನ್ನು ಪುನರ್ವಸತಿ ಕೇಂದ್ರದಲ್ಲಿ ಇಟ್ಟಾಗ ಏನು ಸಂದೇಶ ಸಾರಬಹುದು, ಗಣಿಗಾರಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಗಣಿಗಾರಿಕೆಯ ಅನಾಹುತಗಳೇನು?- ಈ ಥರದ ಕಥಾ ವಸ್ತುಗಳಲ್ಲೂ ಅವರು ಹೀರೋ ಆಗಿ ಅಭಿನಯಿಸಿದರು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ

ಹೀರೋಗಳ ಸಾರ್ವಜನಿಕ ನಡೆವಳಿಕೆಯೂ ಬಹಳ ಮುಖ್ಯ ಎಂದು ಭಾವಿಸಿದ್ದೇನೆ. ಆ ದೃಷ್ಟಿಯಿಂದಲೂ ನಮ್ಮ ಚಿತ್ರರಂಗದಲ್ಲಿ ಮೆಚ್ಚಲೇಬೇಕಾದ, ಗೌರವಿಸಬೇಕಾದ ವ್ಯಕ್ತಿತ್ವ ಪುನೀತ್‌ ರಾಜ್‌ಕುಮಾರ್‌. ವರನಟ ಡಾ.ರಾಜ್‌ಕುಮಾರ್‌ ಥರದ ಪ್ರಬುದ್ಧ ಕಲಾವಿದ ಮತ್ತೊಬ್ಬ ಸಿಗುವುದು ಕಷ್ಟ. ಹೀಗಾಗಿ ರಾಜ್‌ ಕುಮಾರ್ ಅವರನ್ನು ಇಡೀ ನಾಡು ಅಪಾರವಾಗಿ ಗೌರವಿಸುತ್ತದೆ. ಜೊತೆಗೆ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಮಾದರಿಯಾದದ್ದು. ಡಾ.ರಾಜ್‌ಕುಮಾರ್‌ ಅವರ ಸಜ್ಜನಿಕೆ, ವಿನಯ, ಅನ್ಯರ ಬಗೆಗಿನ ಗೌರವ, ಸರಳತೆ, ಅಹಂಕಾರ ಇಲ್ಲದೆ ಇರುವುದು- ಇದೆಲ್ಲವೂ ಪುನೀತ್‌ ರಾಜ್‌ಕುಮಾರ್‌ ಅವರಲ್ಲಿತ್ತು.

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಇವತ್ತಿನ ಯುವಕರ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಯಾಕೆಂದರೆ ಒಬ್ಬ ಹೀರೋ ಹೇಗಿರುತ್ತಾನೋ ಹಾಗೇ ತಮ್ಮ ಅಭಿಮಾನಿಗಳು ವರ್ತಿಸಲು ಶುರುಮಾಡುತ್ತಾರೆ. ಪುನೀತ್‌ ಅವರ ಸಭ್ಯತೆ ಮತ್ತು ಸಂಭಾವಿತನದ ಇಮೇಜ್‌ ಯುವಕರಿಗೆ ಮಾದರಿಯಾಗಿತ್ತು. ಈ ಗುಣಗಳು ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದೆ.

ರಾಜ್‌ಕುಮಾರ್‌ ಅವರ ಮಕ್ಕಳು ಎಲ್ಲಿಯೂ ಸಾರ್ವಜನಿಕ ವಿವಾದಗಳಿಗೆ ಒಳಗಾದವರಲ್ಲ. ಪುನೀತ್ ಅವರನ್ನು ಕರ್ನಾಟಕದ ಅಸಂಖ್ಯಾತ ಯುವಕರು ಇಷ್ಟಪಡುತ್ತಾರೆ. ಅವರನ್ನು ಸಾರ್ವತ್ರಿಕವಾಗಿ ಇಷ್ಟಪಡುವ ಬಹುದೊಡ್ಡ ಪಡೆಯೇ ನಾಡಿನಲ್ಲಿದೆ. ಅವರ ನಡವಳಿಕೆಯನ್ನು ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಎನ್ನಬಹುದು.

ಸಾರ್ವಜನಿಕ ಸೇವೆಯ ಗುರುತು

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ಸೇವೆ ಅನನ್ಯವಾದದ್ದು. ಮೈಸೂರಿನಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ನೇತೃತ್ವದಲ್ಲಿ ಶಕ್ತಿಧಾಮ ಶುರು ಮಾಡಲಾಯಿತು. ರಾಜ್‌ಕುಮಾರ್‌ ಅವರ ಬೆಂಬಲ ಶಕ್ತಿಧಾಮ ಸ್ಥಾಪನೆಗೆ ಇತ್ತು. ಬೀದಿಗೆ ಬಿದ್ದ ಹೆಣ್ಣು ಮಕ್ಕಳಿಗೆ ಆಶ್ರಯವನ್ನು ಶಕ್ತಿಧಾಮ ನೀಡುತ್ತಿದೆ. ಪುನೀತ್‌ ರಾಜ್‌ಕುಮಾರ್‌ ಹಾಡಿ ಸಂಪಾದಿಸಿದ್ದು ಇರಬಹುದು, ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಮೂಲಕ ಬಂದ ಸಂಭಾವನೆ ಇರಬಹುದು- ಇದರ ಬಹುಪಾಲನ್ನು ಶಕ್ತಿಧಾಮಕ್ಕೆ ನೀಡುತ್ತಾ ಬಂದಿದ್ದರು. ಅನೇಕ ಅನಾಥಾಶ್ರಮಗಳಿಗೆ ಹಣ ಕೊಡುತ್ತಿದ್ದರು.

PC: newindianexpress.com

ರಾಜ್‌ಕುಮಾರ್‌‌ ಅವರು ನೂರು ಸಿನಿಮಾಗಳನ್ನು ಪೂರೈಸಿದಾಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿ.ವಿ.ಎಲ್‌.ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಶಿಕ್ಷಣ ಸಮಿತಿ ರಚಿಸುತ್ತಾರೆ. ಆನಂತರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಅನಾಥಾಶ್ರಮಗಳಿಗೆ ಸಹಕಾರ ನೀಡುತ್ತಾರೆ. ರಂಗ ಮಂದಿರಗಳು ರಾಜ್ಯಾದ್ಯಾಂತ ಸ್ಥಾಪನೆಯಾಗಲು ರಸಸಂಜೆ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಾರೆ.

ಒಮ್ಮೆ ರಾಜ್‌ಕುಮಾರ್‌ ಅವರು ನಮ್ಮ ಮನೆಗೆ ಬಂದಾಗ, “ಇಷ್ಟೆಲ್ಲ ಮಾಡುತ್ತೀರಿ, ಆದರೂ ಎಲ್ಲಿಯೂ ಪ್ರಚಾರ ತೆಗೆದುಕೊಳ್ಳುವುದಿಲ್ಲವಲ್ಲ ಸಾರ್” ಎಂದೆ. “ನಾವು ಕಲಾವಿದರು. ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು. ನಾವು ಸಿನಿಮಾ ಮಾಡ್ತೀವಿ. ಇದನ್ನೆಲ್ಲ ಯಾಕೆ ಪ್ರಚಾರ ಮಾಡಬೇಕು” ಎಂದಿದ್ದರು.

ಇದನ್ನೂ ಓದಿರಿ: ಹೊಸ ಪ್ರತಿಭೆಗಳ ಮಹಾನ್‌ ಪ್ರೋತ್ಸಾಹಕ ಪುನೀತ್‌ ರಾಜ್‌ಕುಮಾರ್

ಪುನೀತ್ ಅವರಲ್ಲಿ ಒಮ್ಮೆ ಮಾತನಾಡುತ್ತಿದ್ದಾಗ ಹೇಳಿದೆ: “ನಿಮ್ಮ ತಂದೆಯವರು ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂದು ಹೇಳುತ್ತಿದ್ದರು. ಆ ಕಾಲದಲ್ಲಿ ಹೇಳಿದ್ದನ್ನೇ ನೀವು ಈಗಲೂ ಅನುಸರಿಸುತ್ತಿದ್ದೀರಿ. ಆದರೆ ಇವತ್ತಿನ ಪ್ರಪಂಚ, ಇವತ್ತಿನ ಸಮಾಜ ಬದಲಾಗಿದೆ. ನೀವು ಏನು ಮಾಡುತ್ತಿದ್ದೀರಿ ಎಂದು ಜನ ಕೇಳುತ್ತಾರೆ. ನೀವು ಮಾಡಿರುವುದನ್ನು ಹೇಳಬಹುದಲ್ಲ” ಎಂದೆ. ಆಗ ಪುನೀತ್ ಅವರು (ಐದು ವರ್ಷಗಳ ಹಿಂದೆ) ನಮ್ಮ ಮನೆಗೆ ಸಹಾಯಕರ ಮೂಲಕ ಒಂದು ಪಟ್ಟಿ ಕಳುಹಿಸಿಕೊಟ್ಟರು. ಸುಮಾರು ಐವತ್ತರಿಂದ ಅರವತ್ತು ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ನೀಡಿರುವ ವಿವರಗಳನ್ನು ಆ ಪಟ್ಟಿಯಲ್ಲಿ ನೋಡಿದೆ.

ಸರ್ಕಾರಿ ಶಾಲೆಗಳಿಗೆ ಅವರು ಹಣ ನೀಡಿರುವುದು ಮುಖ್ಯ ಅನಿಸಿತು. ಕೆಲವು ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದರು, ಕೆಲವು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಕೊಟ್ಟಿದ್ದರು. ಹಣ ಸಹಾಯ ಮಾಡಿದ್ದರು. ವೃದ್ಧಾಶ್ರಮಗಳಿಗೆ, ಅನಾಥಾಶ್ರಮಗಳಿಗೆ ಹಣ ಕೊಟ್ಟಿದ್ದರು. ಹಾಗಾಗಿ ಪುನೀತ್‌ ಯುವಕರಿಗೆ ರಂಜನೆ ಮಾಡುತ್ತಿದ್ದ ನಟನಾಗಿ ಅಷ್ಟೇ ಇರಲಿಲ್ಲ. ಸಾಮಾಜಿಕ ಜವಾಬ್ದಾರಿಗಳನ್ನು ಸಿನಿಮಾಗಳ ಮೂಲಕ ತೋರಿಸಿಕೊಡುತ್ತಿದ್ದರು. ಯುವಕರು ಹಾದಿ ತಪ್ಪಬಹುದಾದ ಸಿನಿಮಾಗಳನ್ನು ಅವರು ಮಾಡಲಿಲ್ಲ.

ಜೂನಿಯರ್‌ ರಾಜ್‌ಕುಮಾರ್‌ ಎಂದೇ ಖ್ಯಾತರಾದ ಹಾವೇರಿಯ ಅಶೋಕ್‌ ಬಸ್ತಿ ಅವರು ರಾಜ್‌ಕುಮಾರ್‌ ಅವರ ಹೆಸರಲ್ಲಿ ಸಾಂಸ್ಕೃತಿಕ ಭವನ ಮಾಡಲಿದ್ದರು. ಅದೇ ಸಮಯದಲ್ಲಿ ಧಾರಾವಾಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಶೂಟಿಂಗ್‌ನಲ್ಲಿ ಇದ್ದರು. ಅಶೋಕ್ ಬಸ್ತಿ ಅವರ ಸಾಂಸ್ಕೃತಿಕ ಭವನದ ಕುರಿತು ಪುನೀತ್‌ ಅವರಿಗೆ ತಿಳಿಸಿದೆ. ಸಾಂಸ್ಕೃತಿಕ ಭವನದ ಶಂಕು ಸ್ಥಾಪನೆಗೆ ಹೋಗಿಬಂದಿದ್ದರು. ಇನ್ನೊಬ್ಬರು ಜೂನಿಯರ್‌ ರಾಜ್‌ಕುಮಾರ್‌ ಕುಂಬಳಗೋಡು ಬಳಿಯ ಮುನಿಕುಮಾರ್‌. ಪುನೀತ್‌ ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಬೇಕು ಎಂಬ ಆಕಾಂಕ್ಷೆಯನ್ನು ತೋಡಿಕೊಂಡಿದ್ದರು. ಇದನ್ನು ತಿಳಿಸಲು ಹದಿನೈದು ದಿನಗಳ ಹಿಂದೆ ಪುನೀತ್ ಅವರಿಗೆ ಕರೆ ಮಾಡಿದ್ದೆ. “ಚೂರು ಕೆಲಸಗಳಿವೆ. ಖಂಡಿತ ಭೇಟಿ ಮಾಡೋಣ” ಎಂದಿದ್ದರು.

ಮೊದಲೆಲ್ಲ ಕರೆ ಮಾಡಿದಾಗ ‘ಸಾರ್‌’ ಎನ್ನುತ್ತಿದ್ದರು. ಇತ್ತೀಚೆಗೆ ನನ್ನನ್ನು ‘ಅಣ್ಣ’ ಎನ್ನುತ್ತಿದ್ದರು. ಮೊನ್ನೆಯೂ ‘ಆಯ್ತು ಅಣ್ಣ, ಮುನಿಕುಮಾರ್‌ ಅವರನ್ನು ಭೇಟಿಯಾಗೋಣ’ ಎಂದಿದ್ದರು. ಅಷ್ಟು ಆತ್ಮೀಯತೆ ಇತ್ತು. ಯಾವುದಾದರೂ ಆಡಿಯೋ ರಿಲೀಸ್‌ಗೆ ಕರೆದರೆ ತಕ್ಷಣ ಬಂದು ಬಿಡುತ್ತಿದ್ದರು. ಒಂದು ಸಿನಿಮಾವನ್ನು ನೀವು ನೋಡಬೇಕು ಎಂದರೆ ಬಂದು ನೋಡುತ್ತಿದ್ದರು. ಅವರ ವಿನಯವಂತಿಗೆ ಅಪಾರ.

ಅವರನ್ನು ಚಿಕ್ಕವರಿದ್ದಾಗಿನಿಂದಲೂ ನೋಡಿದ್ದೇನೆ. ಅವರ ಅಭಿನಯ, ಅವರು ನಡೆದುಕೊಳ್ಳುತ್ತಿದ್ದ ರೀತಿ… ಇಷ್ಟು ಚಿಕ್ಕ ವಯಸ್ಸಿಗೆ ಹೋಗಿದ್ದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ.

-ಡಾ.ಬರಗೂರು ರಾಮಚಂದ್ರಪ್ಪ

ನಿರೂಪಣೆ: ಯತಿರಾಜ್‌ ಬ್ಯಾಲಹಳ್ಳಿ


ಇದನ್ನೂ ಓದಿರಿ: ಕಂಠೀರವ ಸ್ಟುಡಿಯೊದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಂತ್ಯ ಸಂಸ್ಕಾರ; ಬಿಗಿ ಬಂದೋಬಸ್ತ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...