Homeಮುಖಪುಟನೆರೆ ನೀರಿನಲ್ಲಿ ಫೋಟೋ ಶೂಟ್‌ ನಡೆಸಿ ನಟನೆ ಮಾಡಿದ ಅಣ್ಣಾಮಲೈ - ‘ಕೋಡಂಗಿ’ ಎಂದ ತಮಿಳರು

ನೆರೆ ನೀರಿನಲ್ಲಿ ಫೋಟೋ ಶೂಟ್‌ ನಡೆಸಿ ನಟನೆ ಮಾಡಿದ ಅಣ್ಣಾಮಲೈ – ‘ಕೋಡಂಗಿ’ ಎಂದ ತಮಿಳರು

- Advertisement -
- Advertisement -

ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾದ ಅವಘಡಗಳಿಂದ 4 ಜನರು ಮೃತಪಟ್ಟಿದ್ದಾರೆ. ಚೆನ್ನೈ, ಚೆಂಗಲ್‌ಪೇಟ್‌, ಕಾಂಚೀಪುರಂ, ತಿರುವಳ್ಳೂರು ಮತ್ತು ವೆಲ್ಲೂರು ಜಿಲ್ಲೆಯಲ್ಲಿ ಸೋಮವಾರದಂದೂ ಮಳೆಯಾಗಿದ್ದವು. ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭೇಟಿ ನೀಡಿ ಪರಿಶೀಲಿಸಿದ್ದರು. ಈ ನಡುವೆ ಪರಿಹಾರ ಕಾರ್ಯಕೂಡಾ ಭರದಿಂದ ಸಾಗಿತ್ತು. ಜೊತೆಗೆ ಹವಾಮಾನ ಇಲಾಖೆಯು ಬುಧವಾರ ಮತ್ತು ಗುರುವಾರ ಕೂಡಾ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಸರ್ಕಾರದ ಜೊತೆಗೆ ಕೈಜೋಡಿಸಿರುವ ಹಲವಾರು ಸಂಘ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ನೆರವಾಗುತ್ತಿದೆ. ಈ ಮಧ್ಯೆ ಪರಿಹಾರ ಕಾರ್ಯದಲ್ಲಿ ನಾಟಕೀಯ ದೃಶ್ಯ ಸೃಷ್ಟಿಸಲು ಹೋಗಿ ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ನಗೆಪಾಟಲಿಗೀಡಾಗಿದ್ದಾರೆ.

ಇದನ್ನೂ ಓದಿ: ಮುಂದಿನ 6 ತಿಂಗಳಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ: ಅಣ್ಣಾಮಲೈ ವಿವಾದಿತ ಹೇಳಿಕೆ

ಅಣ್ಣಾಮಲೈ ಅವರು ಮೊಣಕಾಲುದ್ದ ನೀರಿರುವ ಸ್ಥಳದಲ್ಲಿ ರಕ್ಷಣಾ ದೋಣಿಯನ್ನು ನಿಲ್ಲಿಸಿ ಫೋಟೊಗೆ ಪೋಸ್‌ ನೀಡಿದ್ದಾರೆ. ಆದರೆ ಈ ವಿಡಿಯೊ ವೈರಲ್‌ ಆಗಿದ್ದು, ತಮಿಳುನಾಡಿನ ಜನತೆ ಈ ವಿಡಿಯೊವನ್ನು ಇಟ್ಟು, ಕೋಡಂಗಿ ಅಣ್ಣಾಮಲೈ(ಕೋಮಾಲಿ ಅಣ್ಣಾಮಲೈ) ಎಂದು ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಹಲವು ರೀತಿಯ ವಿಡಿಯೊ ವೈರಲ್ ಆಗಿದ್ದು, ಅಣ್ಣಾಮಲೈ ಅವರು ಮೊಣಕಾಲುದ್ದ ನೀರಿರುವ ಸ್ಥಳದಲ್ಲಿ ರಕ್ಷಣೆಗೆ ಬಳಸುವ ದೋಣಿಯಲ್ಲಿ ಕೂತು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಮೊಣಕಾಲಿನಷ್ಟು ಕೂಡಾ ನೀರಿಲ್ಲದ ಜಾಗದಲ್ಲಿ ದೋಣಿಯೊಳಗಡೆ ಕೂತಿರುವ ಅಣ್ಣಾಮಲೈ ಫೋಟೋ ಶೂಟ್‌ಗೆ ತಯಾರಾಗುತ್ತಿರುವುದು ಕಾಣುತ್ತದೆ. ನಂತರ ಯಾರೋ ಹಿನ್ನಲೆಯಲ್ಲಿ ಶುರುಮಾಡಿ ಎಂದು ಹೇಳುತ್ತಾರೆ. ಆಗ, ಅಣ್ಣಾಮಲೈ ಅವರು ಮುಂದಕ್ಕೆ ಕೈ ಮುಗಿದು ಯಾರೊಂದಿಗೋ ಮಾತನಾಡುವ ಶೈಲಿಯಲ್ಲಿ ‘ಇಲ್ಲೆ ಇರುವವರಾ ಬ್ರದರ್‌ ನೀವು’ ಎಂದು ಕೇಳುತ್ತಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿದ ಅಣ್ಣಾಮಲೈಗೆ ಸಿ.ಟಿ ರವಿ ಬೆಂಬಲ!

ಮತ್ತೊಂದು ವಿಡಿಯೊದಲ್ಲಿ, ಅಣ್ಣಾಮಲೈ ಸೇರಿದಂತೆ ಕೆಲವರನ್ನು ದೋಣಿಯಲ್ಲಿ ಕೂರಿಸಿ ಎಳೆದುಕೊಂಡು ಹೋಗುತ್ತಿದ್ದಾರೆ. ಅವರ ಹಿಂದೆ ಬಿಜೆಪಿಯ ಧ್ವಜ ಹಿಡಿದು ಹಲವು ಕಾರ್ಯಕರ್ತರು ಕೂಡಾ ಇರುತ್ತಾರೆ. ಈ ವೇಳೆ ಕೂಡಾ ಅಣ್ಣಾಮಲೈ ಸುಖಾಸುಮ್ಮನೆ ಮುಂದೆ ಯಾರೋ ಇದ್ದಾರೆ ಎಂಬ ರೀತಿಯಲ್ಲಿ ನಮಸ್ಕರಿಸಿದ್ದಾರೆ. ಇದೇ ರೀತಿಯ ದೃಶ್ಯವನ್ನು ಉತ್ತರ ಕರ್ನಾಟಕದಲ್ಲಿ ಮಳೆ ಬಂದಾಗ ಬಿಜೆಪಿಯ ಶಾಸಕ ರೇಣುಕಾಚಾರ್ಯ ಅವರು ಕೂಡಾ ಮಾಡಿದ್ದರು. ಈ ಸಂದಂರ್ಭದಲ್ಲೂ ಜನ ಅವರನ್ನು ಟ್ರೋಲ್ ಮಾಡಿದ್ದರು.

ಇನ್ನೊಂದು ವಿಡಿಯೊದಲ್ಲಿ ಮೊಣಕಾಲುದ್ದ ನೀರಿರುವ ಜಾಗದಲ್ಲಿ ಇರುವ ದೋಣಿಯಲ್ಲಿ ಅಣ್ಣಾಮಲೈ ಕೂತಿದ್ದಾರೆ. ಈ ವೇಳೆ ಕ್ಯಾಮೆರಾ ಮ್ಯಾನ್, ‘ಎಲ್ಲರೂ ಈ ಕಡೆ ಬನ್ನಿ, ಒಂದು ಖಾಲಿಯಾಗಿರುವ ಫೋಟೋ ಕ್ಲಿಕ್ ಮಾಡುತ್ತೇನೆ’ ಎಂದು ಹೇಳುತ್ತಾರೆ. ಆಗ ಅಣ್ಣಾ ಮಲೈ ಕೂಡಾ ಅವರನ್ನು ಕಳುಹಿಸುತ್ತಾರೆ. ಜೊತೆಗೆ ಅಲ್ಲೇ ಇದ್ದ ಮಹಿಳೆಯೊಂದಿಗೆ ಕೂಡಾ ಅಣ್ಣಾ ಮಲೈ ಮಾತನಾಡುತ್ತಾರೆ. ಆಗ, ಆ ಅಕ್ಕ ಜೊತೆ ಮಾತಾಡ್ತಾ ಇರೋ ಥರ ಒಂದು ಶಾಟ್ ತಗೋ ಎಂಬ ಧ್ವನಿಯು ಕೇಳುತ್ತದೆ. ಈ ನಡುವೆ ಅಣ್ಣಾಮಲೈ ಮತ್ತೆ ಯಾರಿಗೋ ನಮಸ್ಕಾರ ಮಾಡುವ ರೀತಿಯಲ್ಲಿ ನಟಿಸುತ್ತಾರೆ.

ಇದನ್ನೂ ಓದಿ: ಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! – ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಮಗದೊಂದು ವಿಡಿಯೊದಲ್ಲಿ, ನೀರಿನಿಂದ ರಕ್ಷಣೆಗಾಗಿ ಬದಿಯಲ್ಲಿ ನಿಂತಿದ್ದ ವೃದ್ದೆಯನ್ನು ಮಾತನಾಡಿಸಲು ಅಣ್ಣಾ ಮಲೈ ತೆರಳುತ್ತಾರೆ. ಅವರನ್ನು ಮಾತನಾಡಿಸಿದ ಅವರು, “ಪ್ರತಿಬಾರಿಯ ಮಳೆಗೂ ಹೀಗಾದರೆ ಹೇಗಮ್ಮ? 2015 ರಲ್ಲೂ ಹೀಗೆ, 2021 ರಲ್ಲೂ ಹೀಗೆ” ಎಂದು ಕೇಳುತ್ತಾರೆ. ಈ ವೇಳೆ ಮಹಿಳೆ, “ನೀವು ಬಂದು ಏನು ಮಾಡುತ್ತೀರಿ” ಎಂದು ಪ್ರಶ್ನಿಸುತ್ತಾರೆ.

ಮಾನವೀಯ ನೆರವು ನೀಡಬೇಕಾದ ಸಮಯದಲ್ಲೂ ನಾಟಕ ಮಾಡಲು ಪ್ರಯತ್ನಿಸಿದ ಅಣ್ಣಾ ಮಲೈ ಅವರನ್ನು ತಮಿಳುನಾಡಿನ ಜನರು ಟ್ವಿಟರ್‌ನಲ್ಲಿ ಮೀಮ್ಸ್‌ ಮಾಡಿ ವ್ಯಂಗ್ಯವಾಡುತ್ತಿದ್ದಾರೆ. ‘ಗೋಟ್‌‌ ಆನ್‌ ದಿ ಬೋಟ್’,(ದೋಣಿಯಲ್ಲಿ ಆಡು) ಕೋಮಾಲಿ ಅಣ್ಣಾಮಲೈ (ಕೋಡಂಗಿ ಅಣ್ಣಾಮಲೈ) ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ‘ಅಣ್ಣಾಮಲೈ’ ನೇಮಕ

ಡಿಎಂಕೆ ರಾಜ್ಯ ಐಟಿ ವಿಂಗ್ ನಾಯಕರಾದ ಇಸೈ ಅವರು, ಲೈಫ್ ಆಫ್ ಪೈ ಎಂಬ ಕಾದಂಬರಿಯ ಕವರ್‌ ಫೋಟೋದಲ್ಲಿ ಇರುವ ಮನುಷ್ಯನ ತಲೆಗೆ ಅಣ್ಣಾಮಲೈ ಅವರ ಚಿತ್ರ ಎಡಿಟ್ ಮಾಡಿ ‘ಲೈಫ್‌ ಆಫ್ ಪೊಯಿ’(ಸುಳ್ಳಿನ ಜೀವನ) ಎಂದು ವ್ಯಂಗ್ಯವಾಗಿದ್ದಾರೆ.

ಇಷ್ಟೇ ಅಲ್ಲದೆ ಹಲವಾರು ಮೀಮ್ಸ್‌ಗಳನ್ನು ಜನ ಶೇರ್‌ ಮಾಡುತ್ತಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿ: ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಣ್ಣಾ ಮಲೈ ಅವರ ಕೆಲಸದ ಬಗ್ಗೆ ಸರಿಯಾಗಿ ಅರಿಯದೆ ,ಮಾತಾಡೋ ಸೋಕಾಲ್ಡ್ ಎಡಬಿಡಂಗಿ ಕೆಲ ಪತ್ರಿಕೆಗಳ ಬಗ್ಗೆ ಜನ ತಲೆ ಕೆಡಿಸಿ ಕೊಳ್ಳಲ್ಲಾ ಬಿಡಿ , ಅದೂ ಚೈನಿ ಪಾಲನೆಯಲ್ಲಿ ನಡೆಯುವ ಕೆಲ ಮಾಧ್ಯಮಗಳು ಯಾವಾಗಲು ಹೀಗೆ ಮಾತಾಡೋದು ಅಂತ ಜನರಿಗೆ ತಿಳಿದಿದೆ.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...