Homeಮುಖಪುಟಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ನೀವು ‘ಪೆಂಗ್ವಿನ್‌’ ಆಗಿರಬೇಕು!

ಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ನೀವು ‘ಪೆಂಗ್ವಿನ್‌’ ಆಗಿರಬೇಕು!

- Advertisement -
- Advertisement -

ಹೌದು, ಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ಇದು ನಿಮ್ಮ ಅನುಭವಕ್ಕೆ ಬರಬೇಕಾದರೆ ನೀವು ‘ಪೆಂಗ್ವಿನ್’ ಆಗಿರಬೇಕು! ಏನಿದು ವಿಚಿತ್ರ ಹೇಳಿಕೆ ಎಂದು ನಿಮಗನಿಸುತ್ತಿದೆಯೆ? ಮುಂದಕ್ಕೆ ಓದಿ.

ಡಿಸೆಂಬರ್ ಬಂತೆಂದರೆ ಜಗತ್ತಿನ ನಾಶ, ಪ್ರಳಯ, ಎಂಬ ಸುದ್ದಿಯೆಲ್ಲಾ ಓಡಾಡುತ್ತವೆ. ಆದರೆ ಈ ಸುದ್ದಿ ಆ ರೀತಿಯ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಕಟ್ಟಿದ ಕಟ್ಟುಕತೆಯಲ್ಲ. ಅಷ್ಟಕ್ಕೂ ಇದು ಜಗತ್ತು ನಾಶವಾಗುವ ಕತೆಯಲ್ಲ, ಜಗತ್ತು ಅಂದು ಕೊನೆಗೊಳ್ಳುವುದೂ ಇಲ್ಲ. ನಮ್ಮ ಭೂಮಿಯಲ್ಲಿ ಸಾಮಾನ್ಯವಾಗಿ ನಡೆಯುವ ಒಂದು ವಿದ್ಯಮಾನ ಮಾತ್ರವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡಿಸೆಂಬರ್‌‌ 21ರಂದು ನಿಜಕ್ಕೂ ಸೂರ್ಯ ಅಸ್ತಮಿಸದ ದಿನವಾಗಿದೆ. ಆದರೆ ಇದನ್ನು ನೀವು ನೋಡಬೇಕಾದರೆ ಭೂಮಿಯ ದಕ್ಷಿಣ ಧ್ರುವಕ್ಕೆ ತೆರಳಬೇಕಾಗುತ್ತದೆ. ಅಥವಾ ಅಲ್ಲಿಯೇ ಬದುಕುತ್ತಿರುವ ಪೆಂಗ್ವಿನ್ ನೀವಾಗಿರಬೇಕಾಗುತ್ತದೆ. ಹಾಗೆಯೇ ಡಿಸೆಂಬರ್‌ 21ರಂದು ಸೂರ್ಯೋದಯ ಕೂಡಾ ಆಗದ ದಿನವಾಗಿದೆ. ಇದರ ಅನುಭವ ಬರಬೇಕಾದರೆ, ಕತೆಗಳಲ್ಲಿ ಬರುವ ಸಾಂಟಾಕ್ಲಾಸ್‌ನಂತೆ ನೀವು ಉತ್ತರ ಧ್ರವದಲ್ಲಿ ವಾಸಿಸುತ್ತಿರಬೇಕು!

ಇದನ್ನೂ ಓದಿ:ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಇದು ಹೇಗೆ ಸಾಧ್ಯ? ವೈಜ್ಞಾನಿಕ ಕಾರಣಗಳೇನು?

ಭೂಮಿಯು ತನ್ನ ಅಕ್ಷದಲ್ಲಿ ಸುತ್ತುವುದರಿಂದ ಸೂರ್ಯ ಉದಯಿಸಿದ ಹಾಗೆ ಮತ್ತು ಸೂರ್ಯ ಮುಳುಗುವ ಹಾಗೆ ಕಾಣುತ್ತದೆ. ಭೂಮಿ ತನ್ನ ಅಕ್ಷದಲ್ಲಿ ವಾರೆಯಾಗಿ ಸುತ್ತುತ್ತದೆ (ಮೇಲಿನ ಚಿತ್ರ ನೋಡಿ). ಭೂಮಿ ತನ್ನ ಅಕ್ಷದಲ್ಲಿ ಓರೆಯಾಗಿ ಸುತ್ತುವ ಕಾರಣದಿಂದಲೇ, ಭೂಮಿಯ ಉತ್ತರ ಮತ್ತು ದಕ್ಷಿಣ ಗೋಲದಲ್ಲಿ ಇರುವವರಿಗೆ ಹಗಲು ಮತ್ತು ರಾತ್ರಿಗಳ ಸಮಯ ವ್ಯತ್ಯಾಸ ಆಗುತ್ತದೆ.

ಭೂಮಿಯ ದಕ್ಷಿಣ ಗೋಳವು ಸೂರ್ಯನೆಡೆಗೆ ಬಾಗಿದ್ದಾಗ ಆ ಪ್ರದೇಶದ ಜನರಿಗೆ ಹಗಲು ಹೆಚ್ಚು ದೀರ್ಘವಾಗಿ ಇರುತ್ತದೆ. ಉತ್ತರ ಧ್ರುವವು ಸೂರ್ಯನಿಂದ ದೂರವಾಗಿ ಇದ್ದರೆ ಈ ಪ್ರಕ್ರಿಯೆಯು ಹಿಂದುಮುಂದಾಗಿ ಇರುತ್ತದೆ. ಉದಾಹರಣೆಗೆ, ಭಾರತ ಉತ್ತರಾರ್ಧಗೋಳದಲ್ಲಿ ಇರುವುದರಿಂದ ನಮಗೆ ಡಿಸೆಂಬರ್‌ ತಿಂಗಳಲ್ಲಿ ರಾತ್ರಿ ಅತೀ ದೀರ್ಘವಾಗಿ ಹಗಲು ಚಿಕ್ಕದಾಗಿರುತ್ತದೆ.

ಆದ್ದರಿಂದಲೇ, ಡಿಸೆಂಬರ್‌ 21ರಂದು ಭೂಮಿಯ ಉತ್ತರ ಧ್ರವದಲ್ಲಿ ಸೂರ್ಯನ ಬೆಳಕೇ ಇರುವುದಿಲ್ಲ. ಇದಕ್ಕೆ ‘ಧ್ರುವ ರಾತ್ರಿ’ ಎಂದು ಕರೆಯುತ್ತಾರೆ. ಈ ದಿನ ಅಲ್ಲಿ ಸೂರ್ಯೋದಯ ಆಗುವುದಿಲ್ಲ. ಅದೇ ಸಮಯದಲ್ಲಿ ಭೂಮಿಯ ದಕ್ಷಿಣ ಧ್ರುವದಲ್ಲಿ ಸೂರ್ಯಾಸ್ತ ಆಗುವುದಿಲ್ಲ. ಮಧ್ಯ ರಾತ್ರಿಯ ಸಮಯವಾದರೂ ಅಲ್ಲಿ ಸೂರ್ಯ ಕಾಣುತ್ತಾ ಇರುತ್ತಾನೆ. ಈ ದಿನವನ್ನು ಧ್ರುವ ದಿನ ಅಥವಾ ಮಧ್ಯರಾತ್ರಿಯ ಸೂರ್ಯ ಎಂದು ಕರೆಯುತ್ತಾರೆ.

ಹೀಗಾಗಿ ಡಿಸೆಂಬರ್‌ 21 ರಂದು ಭೂಮಿಯ ಉತ್ತರ ಧ್ರವದಲ್ಲಿ ಸೂರ್ಯ ಹುಟ್ಟುವುದೇ ಇಲ್ಲ. ಹಾಗೂ ಅದೇ ದಿನ ಭೂಮಿಯ ದಕ್ಷಿಣ ಧ್ರುವದಲ್ಲಿ ಸೂರ್ಯ ಅಸ್ತಮಿಸುವುದೇ ಇಲ್ಲ.

ಹಾಗೆ ನೋಡಿದರೆ ಸೂರ್ಯ ‘ಹುಟ್ಟವುದುದು ಮತ್ತು ಮುಳುಗುವುದು’ ಎಂಬ ಪದಗಳು ಕೇವಲ ಆಡು ಮಾತುಗಳಾಗಿದ್ದು, ವೈಜ್ಞಾನಿಕವಾಗಿ ಇದು ಸರಿಯಲ್ಲ. ಸೂರ್ಯ ಪ್ರತಿ ದಿನ ಹುಟ್ಟುವುದು ಮತ್ತು ಮುಳುಗುವುದು ಕೂಡಾ ಇಲ್ಲ. ಸೂರ್ಯ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಇರುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವುದರಿಂದ ಸೂರ್ಯ ಹುಟ್ಟಿದ ಹಾಗೆ ಮತ್ತು ಅಸ್ತಮಿಸಿದ ಹಾಗೆ ಕಾಣುತ್ತದೆ.

ಇದನ್ನೂ ಓದಿ:ವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...