Homeಮುಖಪುಟಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ನೀವು ‘ಪೆಂಗ್ವಿನ್‌’ ಆಗಿರಬೇಕು!

ಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ನೀವು ‘ಪೆಂಗ್ವಿನ್‌’ ಆಗಿರಬೇಕು!

- Advertisement -
- Advertisement -

ಹೌದು, ಡಿಸೆಂಬರ್‌ 21ರಂದು ಸೂರ್ಯ ಅಸ್ತಮಿಸುವುದಿಲ್ಲ; ಆದರೆ ಇದು ನಿಮ್ಮ ಅನುಭವಕ್ಕೆ ಬರಬೇಕಾದರೆ ನೀವು ‘ಪೆಂಗ್ವಿನ್’ ಆಗಿರಬೇಕು! ಏನಿದು ವಿಚಿತ್ರ ಹೇಳಿಕೆ ಎಂದು ನಿಮಗನಿಸುತ್ತಿದೆಯೆ? ಮುಂದಕ್ಕೆ ಓದಿ.

ಡಿಸೆಂಬರ್ ಬಂತೆಂದರೆ ಜಗತ್ತಿನ ನಾಶ, ಪ್ರಳಯ, ಎಂಬ ಸುದ್ದಿಯೆಲ್ಲಾ ಓಡಾಡುತ್ತವೆ. ಆದರೆ ಈ ಸುದ್ದಿ ಆ ರೀತಿಯ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಕಟ್ಟಿದ ಕಟ್ಟುಕತೆಯಲ್ಲ. ಅಷ್ಟಕ್ಕೂ ಇದು ಜಗತ್ತು ನಾಶವಾಗುವ ಕತೆಯಲ್ಲ, ಜಗತ್ತು ಅಂದು ಕೊನೆಗೊಳ್ಳುವುದೂ ಇಲ್ಲ. ನಮ್ಮ ಭೂಮಿಯಲ್ಲಿ ಸಾಮಾನ್ಯವಾಗಿ ನಡೆಯುವ ಒಂದು ವಿದ್ಯಮಾನ ಮಾತ್ರವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡಿಸೆಂಬರ್‌‌ 21ರಂದು ನಿಜಕ್ಕೂ ಸೂರ್ಯ ಅಸ್ತಮಿಸದ ದಿನವಾಗಿದೆ. ಆದರೆ ಇದನ್ನು ನೀವು ನೋಡಬೇಕಾದರೆ ಭೂಮಿಯ ದಕ್ಷಿಣ ಧ್ರುವಕ್ಕೆ ತೆರಳಬೇಕಾಗುತ್ತದೆ. ಅಥವಾ ಅಲ್ಲಿಯೇ ಬದುಕುತ್ತಿರುವ ಪೆಂಗ್ವಿನ್ ನೀವಾಗಿರಬೇಕಾಗುತ್ತದೆ. ಹಾಗೆಯೇ ಡಿಸೆಂಬರ್‌ 21ರಂದು ಸೂರ್ಯೋದಯ ಕೂಡಾ ಆಗದ ದಿನವಾಗಿದೆ. ಇದರ ಅನುಭವ ಬರಬೇಕಾದರೆ, ಕತೆಗಳಲ್ಲಿ ಬರುವ ಸಾಂಟಾಕ್ಲಾಸ್‌ನಂತೆ ನೀವು ಉತ್ತರ ಧ್ರವದಲ್ಲಿ ವಾಸಿಸುತ್ತಿರಬೇಕು!

ಇದನ್ನೂ ಓದಿ:ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಇದು ಹೇಗೆ ಸಾಧ್ಯ? ವೈಜ್ಞಾನಿಕ ಕಾರಣಗಳೇನು?

ಭೂಮಿಯು ತನ್ನ ಅಕ್ಷದಲ್ಲಿ ಸುತ್ತುವುದರಿಂದ ಸೂರ್ಯ ಉದಯಿಸಿದ ಹಾಗೆ ಮತ್ತು ಸೂರ್ಯ ಮುಳುಗುವ ಹಾಗೆ ಕಾಣುತ್ತದೆ. ಭೂಮಿ ತನ್ನ ಅಕ್ಷದಲ್ಲಿ ವಾರೆಯಾಗಿ ಸುತ್ತುತ್ತದೆ (ಮೇಲಿನ ಚಿತ್ರ ನೋಡಿ). ಭೂಮಿ ತನ್ನ ಅಕ್ಷದಲ್ಲಿ ಓರೆಯಾಗಿ ಸುತ್ತುವ ಕಾರಣದಿಂದಲೇ, ಭೂಮಿಯ ಉತ್ತರ ಮತ್ತು ದಕ್ಷಿಣ ಗೋಲದಲ್ಲಿ ಇರುವವರಿಗೆ ಹಗಲು ಮತ್ತು ರಾತ್ರಿಗಳ ಸಮಯ ವ್ಯತ್ಯಾಸ ಆಗುತ್ತದೆ.

ಭೂಮಿಯ ದಕ್ಷಿಣ ಗೋಳವು ಸೂರ್ಯನೆಡೆಗೆ ಬಾಗಿದ್ದಾಗ ಆ ಪ್ರದೇಶದ ಜನರಿಗೆ ಹಗಲು ಹೆಚ್ಚು ದೀರ್ಘವಾಗಿ ಇರುತ್ತದೆ. ಉತ್ತರ ಧ್ರುವವು ಸೂರ್ಯನಿಂದ ದೂರವಾಗಿ ಇದ್ದರೆ ಈ ಪ್ರಕ್ರಿಯೆಯು ಹಿಂದುಮುಂದಾಗಿ ಇರುತ್ತದೆ. ಉದಾಹರಣೆಗೆ, ಭಾರತ ಉತ್ತರಾರ್ಧಗೋಳದಲ್ಲಿ ಇರುವುದರಿಂದ ನಮಗೆ ಡಿಸೆಂಬರ್‌ ತಿಂಗಳಲ್ಲಿ ರಾತ್ರಿ ಅತೀ ದೀರ್ಘವಾಗಿ ಹಗಲು ಚಿಕ್ಕದಾಗಿರುತ್ತದೆ.

ಆದ್ದರಿಂದಲೇ, ಡಿಸೆಂಬರ್‌ 21ರಂದು ಭೂಮಿಯ ಉತ್ತರ ಧ್ರವದಲ್ಲಿ ಸೂರ್ಯನ ಬೆಳಕೇ ಇರುವುದಿಲ್ಲ. ಇದಕ್ಕೆ ‘ಧ್ರುವ ರಾತ್ರಿ’ ಎಂದು ಕರೆಯುತ್ತಾರೆ. ಈ ದಿನ ಅಲ್ಲಿ ಸೂರ್ಯೋದಯ ಆಗುವುದಿಲ್ಲ. ಅದೇ ಸಮಯದಲ್ಲಿ ಭೂಮಿಯ ದಕ್ಷಿಣ ಧ್ರುವದಲ್ಲಿ ಸೂರ್ಯಾಸ್ತ ಆಗುವುದಿಲ್ಲ. ಮಧ್ಯ ರಾತ್ರಿಯ ಸಮಯವಾದರೂ ಅಲ್ಲಿ ಸೂರ್ಯ ಕಾಣುತ್ತಾ ಇರುತ್ತಾನೆ. ಈ ದಿನವನ್ನು ಧ್ರುವ ದಿನ ಅಥವಾ ಮಧ್ಯರಾತ್ರಿಯ ಸೂರ್ಯ ಎಂದು ಕರೆಯುತ್ತಾರೆ.

ಹೀಗಾಗಿ ಡಿಸೆಂಬರ್‌ 21 ರಂದು ಭೂಮಿಯ ಉತ್ತರ ಧ್ರವದಲ್ಲಿ ಸೂರ್ಯ ಹುಟ್ಟುವುದೇ ಇಲ್ಲ. ಹಾಗೂ ಅದೇ ದಿನ ಭೂಮಿಯ ದಕ್ಷಿಣ ಧ್ರುವದಲ್ಲಿ ಸೂರ್ಯ ಅಸ್ತಮಿಸುವುದೇ ಇಲ್ಲ.

ಹಾಗೆ ನೋಡಿದರೆ ಸೂರ್ಯ ‘ಹುಟ್ಟವುದುದು ಮತ್ತು ಮುಳುಗುವುದು’ ಎಂಬ ಪದಗಳು ಕೇವಲ ಆಡು ಮಾತುಗಳಾಗಿದ್ದು, ವೈಜ್ಞಾನಿಕವಾಗಿ ಇದು ಸರಿಯಲ್ಲ. ಸೂರ್ಯ ಪ್ರತಿ ದಿನ ಹುಟ್ಟುವುದು ಮತ್ತು ಮುಳುಗುವುದು ಕೂಡಾ ಇಲ್ಲ. ಸೂರ್ಯ ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಇರುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವುದರಿಂದ ಸೂರ್ಯ ಹುಟ್ಟಿದ ಹಾಗೆ ಮತ್ತು ಅಸ್ತಮಿಸಿದ ಹಾಗೆ ಕಾಣುತ್ತದೆ.

ಇದನ್ನೂ ಓದಿ:ವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...