Homeಅಂಕಣಗಳುಗಾಂಧಿ ಕಥನಕ್ಕೂ ಪ್ರಶಸ್ತಿ

ಗಾಂಧಿ ಕಥನಕ್ಕೂ ಪ್ರಶಸ್ತಿ

- Advertisement -
- Advertisement -

ಗಾಂಧೀಜಿಯನ್ನು ಕೊಂದವರನ್ನು ವೇದಿಕೆಯ ಮೇಲೆ ಸಮರ್ಥಿಸಿಕೊಳ್ಳುವವರನ್ನು ಮಟ್ಟಹಾಕದ, ಅಂತಹವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವವರು ದೇಶ ಆಳುತ್ತಿರುವ ಸಮಯದಲ್ಲಿ ಗಾಂಧೀಜಿ ಕುರಿತ ಪುಸ್ತಕ ಬರೆದವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ಶ್ಯಾನೆ ಸಂಶಯಗಳಿಗೆ ಎಡೆಮಾಡಿಕೊಟ್ಟಿರುವುದಲ್ಲದೆ, ಸ್ವತಹ ಬರೆದವರಿಗೇ ಅಚ್ಚರಿ ಮೂಡಿಸಿದೆಯಲ್ಲಾ! ಯಾಕೆಂದರೆ, ಈ ಬಿಜೆಪಿ ಸರಕಾರ ಏನೇ ಮಾಡಿದರು ಅಲ್ಲೊಂದು ಸಂಚು ಅಂತರ್ಗತವಾಗಿ ಕೆಲಸ ಮಾಡಿರುತ್ತದೆ. ಇರಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಒಂದು ಸ್ವತಂತ್ರ ಸಂಸ್ಥೆ ಎಂಬ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಂದು ದೇಶದ ಸ್ವತಂತ್ರ ಸಂಸ್ಥೆಗಳು ಹಿಡಿದಿರುವ ದಾರಿ ನೋಡಿದರೆ ಸರ್ಕಾರದ ಕೈವಾಡಗಳ ಬಗ್ಗೆ ಅನುಮಾನ ಮೂಡದೇ ಇರದು.

ಇಂತಹ ಅನುಮಾನದಲ್ಲಿಯೇ ಯೋಚಿಸುವುದಾದರೆ ಈ ಸರ್ಕಾರಕ್ಕೆ ಮುಂದೆ ಗಾಂಧೀಜಿಯೂ ಬೇಕಾಗಬಹುದು. (ಸದ್ಯಕ್ಕೆ ವಿದೇಶಗಳಲ್ಲಿ ಹಾರ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ ಗಾಂಧಿ ಪ್ರೇಮ!). ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಕಥನ ಬರೆದವರ ಈವರೆಗಿನ ಬದುಕು ಮತ್ತು ಬರವಣಿಗೆಯನ್ನೂ ಪ್ರಶಸ್ತಿ ಕೊಟ್ಟವರು ಪರಿಗಣಿಸಿರಬಹುದು. ಅದರಲ್ಲಿ ಪ್ರಧಾನವಾಗಿ, ಬೋಫೋರ್ಸು ಹಗರಣದಷ್ಟೇ ಗಂಭೀರವಾದ ರಫೇಲ್ ಹಗರಣದ ಬಗ್ಗೆ ಗಾಂಧಿ ಕಥನದ ಲೇಖಕರು ಬರೆಯುತ್ತಾ ಈ ರಫೇಲ್ ಒಪ್ಪಂದವನ್ನು ಪ್ರಧಾನಿಯವರು ತ್ವರಿತವಾಗಿ ಮುಗಿಸಿದ್ದಾರೆ, ಇದರಲ್ಲಿ ಅವರ ಸ್ವಂತ ಹಿತಾಸಕ್ತಿ ಏನೂ ಇಲ್ಲ ಎಂದು ಬರೆದಾಗ, ಕ್ಯಾರವಾನ್ ಪತ್ರಿಕೆ ಮೂವತ್ತು ಪೇಜಿನಲ್ಲಿ ರಫೇಲ್ ಹಗರಣದ ವರದಿ ಪ್ರಕಟಿಸಿತ್ತು. ಮುಂದೆ ಇದೇ ಲೇಖಕರು ಬದಲಾಗುತ್ತಿರುವ ಆರೆಸ್ಸೆಸ್ ಎಂದು ವಕಾಲತ್ತು ವಹಿಸಿದರು. ಅದಾದ ಮೇಲೆ ತಮ್ಮ ಮನೆಯ ಮುಂದೆಯೇ ಮಹೇಂದ್ರ ಟಿಕಾಯತ್ ರೈತಚಳವಳಿ ಸಭೆ ಮಾಡಿದಾಗ, ಲೇಖಕರು ತಮ್ಮ ಅನಿಸಿಕೆ ಬಿಟ್ಟು, ರೈತನಾಯಕರಿಗೇ ಈ ಬಗ್ಗೆ ಬರೆಯಿರಿ ಎಂದು ಅಹ್ವಾನ ಕೊಟ್ಟರು. ಸದ್ಯದ ಎಡ ಬಲದ ಚರ್ಚೆಯಲ್ಲಿ ಗಾಂಧಿ ಕಥನಕಾರರು ಬಲಗಡೆಯಿದ್ದಾರೆಂದೂ, ಎಡ ಮತ್ತು ಬಲದ ನಡುವೆ ಹೃದಯವಿದ್ದು ಅದು ಎಡಭಾಗದಲ್ಲಿದೆ ಎಂದೂ, ಗಾಂಧಿ ಕಥನಕಾರರನ್ನು ಕಂಡರಾಗದವರ ಹೇಳಿಕೆ ಕೊಡುತ್ತಿದ್ದಾರೆಲ್ಲಾ ಥೂತ್ತೇರಿ.

ಗಾಂಧಿ ಎಂಬ ಮುಕುಟಮಣಿಯನ್ನು ಸ್ಪರ್ಶಿಸಿದವರಿಗೆಲ್ಲಾ ಒಳ್ಳೆಯದಾಗಿದೆ ಮತ್ತು ಪ್ರಶಸ್ತಿಗಳೂ ಬಂದಿವೆ. ಪ್ರಶಸ್ತಿ ಎಂದ ಮೇಲೆ ಅಲ್ಲೊಂದಿಷ್ಟು ಕಾಸು ಇದ್ದೇ ಇರುತ್ತದೆ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ಗಾಂಧಿ ಕಾರಣವಾಗಿ ಈ ದೇಶದಲ್ಲಿ ಶತಮಾನದಿಂದಲೂ ಅಸಂಖ್ಯಾತ ಜನರು ಪಾವನವಾಗಿದ್ದಾರೆ.
ಗಾಂಧೀಜಿಯವರ ನಂತರ ನಮ್ಮ ಸಮಾಜವಾದಿಗಳು ಅವರ ಮುಂದುವರಿಕೆಯಾಗಿ
ಗೋಚರಿಸಬೇಕಿತ್ತು. ಆದರೆ ನಮ್ಮ ಸಮಾಜವಾದಿಗಳು ಹೋರಾಡಿದ್ದು ತಮ್ಮಗಳ ವಿರುದ್ಧವೇ. ಹೀಗೆ ಎಲ್ಲರನ್ನ ಕಳೆದುಕೊಂಡು ಏಕಾಂತಗೊಂಡಿರುವ ಸಮಾಜವಾದಿಗಳಿಗೆ ಗಾಂಧಿಯೇ ದಿಕ್ಕಾಗಿದ್ದಾರೆ. ಗಾಂಧಿಯವರ ಕಥನ ರೂಪುಗೊಂಡು ಹೊಸ ಸಂವೇದನೆಯ ಗಾಳಿ ಬೀಸಿದ್ದರೂ, ಲೇಖಕರ ಪೂರ್ವಗ್ರಹಗಳು ಹಾಗೂ ಹಠಮಾರಿತನಗಳೇನಾದರೂ ಕಥನದಲ್ಲಿ ಸೂಕ್ಷ್ಮವಾಗಿ ಬೆರೆತು ಕೆಲಸ ಮಾಡಿವೆಯೇ ಎಂಬುದನ್ನು ಕಲಿತ ಸಮಾಜವಾದಿಗಳು ಪತ್ತೆಹಚ್ಚಿ ಹೇಳಬೇಕೆಂದು ಗಾಂಧಿವಾದಿಗಳ ಗೊಣಗಾಟವಾಗಿದೆಯಂತಲ್ಲಾ ಥೂತ್ತೆರಿ.

ನಮ್ಮ ಕರ್ನಾಟಕದಲ್ಲಿ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವಿದೆಯಂತಲ್ಲಾ! ರಾಷ್ಟ್ರಮಟ್ಟದ ವಿರೋಧಿ ನಾಯಕರೆಲ್ಲಾ ಬಂದು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿಯಾಗಿಸಿ ಆಶೀರ್‍ವಾದ ಮಾಡಿ ಹೋದರು. ಇದೊಂತರ ಶ್ರೀಮಂತರ ಮದುವೆಗೆ ದೇಶದ ಗಣ್ಯರೆಲ್ಲಾ ಬಂದು ಭಾಗವಹಿಸಿದಂತಹ ಪ್ರಸಂಗ. ವರ ಮತ್ತು ವಧುವಿಗೆ ತಾಳೆಯಾಗದೆ, ತಾಜ್ ವೆಸ್ಟ್‌ಎಂಡ್ ಹೋಟೆಲಿನಲ್ಲಿ ಶುರುವಾದ ಸಂಸಾರ ಬಹಳದಿನ ಬಾಳಿಕೆ ಬರಲಿಲ್ಲ. ಹಾಡುಹಗಲೇ ಡೈವರ್ಸು ನಡೆದೇಹೋಯ್ತು. ಇದರ ಸತ್ಯಾಸತ್ಯತೆ ಗ್ರಹಿಸಲಾರದವರೆ ಅಂದಿನಿಂದಲೂ ವರಲುತ್ತ ಡೈವರ್ಸಿಗೆ ಕಾರಣರಾದವರನ್ನು ಹಾದಿಬೀದಿಯಲ್ಲಿ ಬೈಯುತ್ತ ಕಿರುಚುತ್ತಿರಬೇಕಾದರೆ, ಅವರ ಮಾತುಗಳೆಲ್ಲಾ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವನ್ನೇ ರೂಪಿಸುತ್ತಿದೆಯಂತಲ್ಲಾ. ಉದಾಹರಣೆಗೆ ರಾಜ್ಯದ ಕಂಟ್ರ್ಯಾಕ್ಟರುಗಳು ಈ ಆಳುವ ರಾಜಕಾರಣಗಳಿಗೆ ನಲವತ್ತು ಪರಸೆಂಟ್ ಕಮಿಶನ್ ಕೊಡಲಾಗುವುದಿಲ್ಲ ಎಂದು ಪತ್ರ ಬರೆದರು. ಕೂಡಲೇ ಕುಮಾರಣ್ಣ ಸದರಿ ಪರಸೆಂಟೇಜ್ ಸಿದ್ದರಾಮಯ್ಯನವರ ಕಾಲದಲ್ಲಿರಲಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ ಎಂದು ಸವಾಲೆಸೆದರು. ಹಾಗಾದರೆ ಕುಮಾರಣ್ಣ ತಾಜ್ ವೆಸ್ಟ್ ಹೋಟೆಲಿನಲ್ಲಿದ್ದಾಗ ಪರಸಂಟೇಜು ಸ್ಟಾಪಾಗಿತ್ತೇ ಎಂದು ರೇವಣ್ಣಾಭಿಮಾನಿಗಳ ಪ್ರಶ್ನೆಯಾಗಿದೆಯಂತಲ್ಲಾ? ಪರಸೆಂಟೇಜು ಕೊಟ್ಟುಕೊಟ್ಟು ಸುಸ್ತಾಗಿರುವ ಕಂಟ್ರ್ಯಾಕ್ಟರ್ ಪರವಾಗಿ ನಿಂತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಕುಮಾರಣ್ಣ ಉಲ್ಟಾಹೊಡೆದು ವಿರೋಧಪಕ್ಷ ಕಾಂಗ್ರೆಸ್‌ಗೆ ಸರಿಯಾದ ವಿರೋಧಪಕ್ಷವಾಗಿ ಕೆಲಸ ಮಾಡುತ್ತಿದ್ದಾರಂತಲ್ಲಾ ಥೂತ್ತೇರಿ.

ದೀರ್ಘಕಾಲದಿಂದಲೂ ಎಲ್‌ಕೆಜಿಯ ಮಕ್ಕಳಿಗೂ ಹಿಂದಿ ಕಲಿಸುತ್ತಿರುವ ಅಪಾಯದ ಬಗ್ಗೆ ಕನ್ನಡಿಗರ ಒಟ್ಟಾರೆಯಾಗಿ ಗಂಭೀರ ಅರಿವು ಮೂಡಿಲ್ಲ. ತಮ್ಮ ಮಾತೃಭಾಷೆಯನ್ನ ಕೊಂದು ಹಿಂದಿ ಉಳಿಸಲು ಹೋರಾಡುತ್ತಿರುವ ದೃಶ್ಯ ಆತ್ಮಹತ್ಯಾತ್ಮಕವಾಗಿದೆಯೆಲ್ಲಾ ಎಂಬುದು ಕೂಡ. ಇನ್ನ ಬಿಜೆಪಿ ಸರಕಾರ ಬಂದ ಮೇಲೆ ಅದರ ಎಂದಿನ ಸಂಚಿನ ಫಲವಾಗಿ ನಮ್ಮ ರೈಲುಗಳ ಮೈಮೇಲಿಂದ ಕನ್ನಡ ಅಳಿಸಿಹೋಯ್ತು, ಮೈಲಿಗಲ್ಲಿನಿಂದಲೂ ಕನ್ನಡ ಹೋಗಿದೆ. ಗ್ರಾಮಾಂತರ ಪ್ರದೇಶದ ಹೋಟೆಲುಗಳ ಮೆನು ಕಾರ್ಡಿನಿಂದ ಕೂಡ ಕನ್ನಡ ಮರೆಯಾಗಿದೆ. ನಿಮ್ಮ ಯಾವುದೇ ಅಂಗಡಿ ಮುಂಗಟ್ಟು ಹೋಟೆಲು ಇತ್ಯಾದಿ ಕಟ್ಟಡಗಳ ಮೇಲೆ ಮಾತೃಭಾಷೆ ಪ್ರಧಾನವಾಗಿದ್ದು ಉಳಿದ ಭಾಷೆ ಸಣ್ಣದಾಗಿರಲಿ ಎಂಬ ಆದೇಶಕ್ಕೆ ಕೂಡ ಮೂರು ಕಾಸಿನ ಬೆಲೆಯಿಲ್ಲದಂತಾಗಿದೆಯೆಲ್ಲಾ ಥೂತ್ತೆರಿ.


ಇದನ್ನೂ ಓದಿ: ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....