Homeಮುಖಪುಟನರಗುಂದ ಬಂಡಾಯದ ನಂತರ

ನರಗುಂದ ಬಂಡಾಯದ ನಂತರ

- Advertisement -
- Advertisement -

ಸಿಪಿಎಂ ನಾಯಕರಾದ ಜಿ.ಎನ್ ನಾಗರಾಜ್‌ರವರು 80ರ ದಶಕದ ರೈತ ಚಳವಳಿ ಕುರಿತು ದಾಖಲಿಸಿದ್ದಾರೆ. ಇದು ಪ್ರಾಮಾಣಿಕವಾದ ಐತಿಹಾಸಿಕ ವಿವರಗಳನ್ನೊಳಗೊಂಡ ಬರಹ. ನರಗುಂದ ರೈತ ಬಂಡಾಯದ ಸಮಯದಲ್ಲಿ ನಾಗರಾಜ್ ಕೃಷಿ ಇಲಾಖೆಯ ಅಧಿಕಾರಿಯಾಗಿದ್ದರು, ಜೊತೆಗೆ ರೈತರು, ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯ ನಡುವೆ ವ್ಯವಹರಿಸುವ ಜವಾಬ್ದಾರಿ ಹೊತ್ತವರಾಗಿದ್ದರು. ಎಲ್ಲವೂ ಕೈಮೀರುವ ಹಂತ ತಲುಪಿದಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದಕ್ಕೆ ಕಾರಣ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಅವರಿಗಿದ್ದ ಕಾಳಜಿ. ಕೃಷಿ ಅಧಿಕಾರಿಯೊಬ್ಬ ಆಗ ಹಠಾತ್ತನೆ ರಾಜೀನಾಮೆ ಬರೆದು ಸಂಘಟಕರಾಗಿ ಬದಲಾಗುವುದು ಒಂದು ಸಾಹಸ. ಇಂತಹ ತೀರ್ಮಾನಕ್ಕೆ ಧೈರ್ಯಬೇಕು. ಅದನ್ನು ತಮ್ಮ ಬದುಕಿನಲ್ಲಿ ತೋರಿಸಿದವರು ನಾಗರಾಜ್.

ಕರ್ನಾಟಕದ ಇತಿಹಾಸದಲ್ಲಿ ರೈತ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಬಲಿಷ್ಠ ಎತ್ತುಗಳೊಂದಿಗೆ ಹೊಲ ಉತ್ತು ಬೇಸಾಯ ಮಾಡಿದ್ದ ದೇವರಾಜ ಅರಸರಿಂದ ಅಧಿಕಾರವನ್ನು ಕಿತ್ತು ಗುಂಡೂರಾಯರಿಗೆ ಕೊಟ್ಟ ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಆ ಕಾರಣಕ್ಕೆ ಅಂದು ರಾಜಕೀಯವಾಗಿ ಕರ್ನಾಟಕವನ್ನು ಕಳೆದುಕೊಂಡರು. ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದ ಅರಸು ಆಡಳಿತದ ಫಲವಾಗಿ ಕರ್ನಾಟಕದಲ್ಲಿ ಕಾಂಗೈಯನ್ನ ಅಲುಗಾಡಿಸುವುದು ಕಷ್ಟವಿತ್ತು. ಆದರೆ ಜನಾಭಿಪ್ರಾಯವಿಲ್ಲದೆ ನೇಮಕಗೊಂಡಿದ್ದ ಗುಂಡೂರಾವ್ ಆಡಳಿತ ವೈಖರಿಯಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಕರ್ನಾಟಕದ ಜನ ಸಮೂಹದ ಪ್ರತಿಭಟನೆಗಳು ತನ್ನ ವಿರುದ್ಧವಾಗಿವೆ ಎಂದು ಭಾವಿಸಿದ್ದ ಗುಂಡೂರಾಯರ ಮಾತಿನಲ್ಲಿ ಪ್ರತೀಕಾರದ ಮಾತು ಬರುತ್ತಿದ್ದವು. ನಾಯಕನಾದವನ ಬಾಯಲ್ಲಿ ಹಿಂಸೆಯ ಮಾತುಗಳು ಬರಬಾರದು, ಬಂದರೆ ಅದರ ಪರಿಣಾಮ ಘೋರ. ನಾಯಕನ ಬಾಯಿಂದ ಪ್ರತಿಹಿಂಸೆ ಮಾತು ಬಂದರೆ ಪೊಲೀಸರಿಗೆ ಎಲ್ಲಿಲ್ಲದ ಶಕ್ತಿ ಬರುತ್ತದೆ. ಗುಂಡೂರಾಯರ ಕಾಲದ ಪೊಲೀಸರು ರಕ್ಕಸರಂತಾಗಿದ್ದರು. ಇದರ ಪರಿಣಾಮ ನರಗುಂದದಲ್ಲಿ ರೈತರ ದಂಗೆಯಾಗಿ ಗೋಲಿಬಾರಿಗೆ ಎರಡು ಜೀವ ಬಲಿಯಾಗಿದ್ದವು. ಪೊಲೀಸ್ ಇನ್‌ಸ್ಪೆಕ್ಟರ್ ಹತನಾಗಿದ್ದ.

ಇತ್ತ ಶಿವಮೊಗ್ಗದಲ್ಲಿ ಅದಾಗಲೇ ರೈತನಾಯಕ ಹೆಚ್.ಎಸ್ ರುದ್ರಪ್ಪನವರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಂಘ ಹುಟ್ಟಿಕೊಂಡು ಸರಕಾರದ ವಿರುದ್ಧ ಹೋರಾಡುತ್ತಿತ್ತು. ಅಂತಹ ಸಮಯದಲ್ಲಿ ಮುಲಾಜಿಲ್ಲದೆ ರೈತರನ್ನು ಗೋಲಿಬಾರ್ ಮುಖಾಂತರ ಉಡಾಯಿಸಿದ ಸರಕಾರದ ವಿರುದ್ಧ ರುದ್ರಪ್ಪನವರ ಟೀಮು ಸಿಡಿಗೆದ್ದಿತು. ತಮ್ಮ ಮುಂದಿನ ಚಳವಳಿಯ ನಾಯಕತ್ವಕ್ಕಾಗಿ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರನ್ನ ಕರೆಸಿಕೊಂಡರು. ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ ಗಂಗಾಧರ, ಬಸವರಾಜಪ್ಪ ಇವರೆಲ್ಲಾ ನರಗುಂದಕ್ಕೆ ಹೋದರು. ಅಲ್ಲಿ ಪೊಲೀಸರು ರೈತರನ್ನು ಬೇಟೆಯಾಡಿ ತಂದು ಜೈಲಿಗೆ ದಬ್ಬುತ್ತಿದ್ದುದನ್ನ ನೋಡಿದ ರೈತ ನಾಯಕರಿಗೆ ಸಿಟ್ಟು ಕಟ್ಟಯೊಡೆಯಿತು. ಗುಂಡೂರಾಯರು ಎಲ್ಲ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿದಂತೆ ಕಂಡಿತು.

ಪ್ರೊ. ನಂಜುಂಡಸ್ವಾಮಿಯವರ ಟೀಮು ಮಡಿದ ರೈತರ ನೆನಪಿಗೆ ನೆಡಲು ವೀರಗಲ್ಲುಗಳ ಸಮೇತ ನರಗುಂದಕ್ಕೆ ಹೋಗಿದ್ದರು. IB ಬಳಿ ಹೋದಾಗ ಅಲ್ಲಿನ ಪೊಲೀಸರು IBಯಲ್ಲಿ ರೂಮಿಲ್ಲ, ಅದಾಗಲೆ ಎಸ್‌ಪಿಗೆ ಅಲಾಟ್ ಮಾಡಲಾಗಿದೆ ಎಂದರು. ಪ್ರೊ. ನಂಜುಂಡಸ್ವಾಮಿಯವರು ಕೆ.ಟಿ ಗಂಗಾದರ್ ಕಡೆ ನೋಡಿ “ಬಾಗಿಲು ಓಪನ್ ಮಾಡಿ” ಎಂದರು. ಕೂಡಲೇ ಗಂಗಾಧರ್ ಕಲ್ಲುತೆಗೆದುಕೊಂಡು ಬೀಗ ಹೊಡೆದರು. ಬಾಗಿಲು ತೆಗೆಯಿತು. ಆ ನಂತರ ಯಾವ ಪೊಲೀಸರು ಇವರ ಸನಿಹ ಸುಳಿಯಲಿಲ್ಲ. ಇಲ್ಲೊಂದು ಮಹತ್ವದ ವಿಷಯವಿದೆ; ನರಗುಂದ ನವಲಗುಂದದ ಬಂಡಾಯಕ್ಕೆ ಓಗೊಟ್ಟು ಬಂದಿದ್ದ ಈ ನಾಯಕರು ಅಸಾಮಾನ್ಯ ವ್ಯಕ್ತಿಗಳಾಗಿದ್ದರು. ಪ್ರೊ. ನಂಜುಂಡಸ್ವಾಮಿ ದೊಡ್ಡ ಜಮೀನ್ದಾರರ ಮಗ. ವಿದೇಶದಲ್ಲಿ ಲಾ ಓದಿಕೊಂಡು ಬಂದವರು. ನಮ್ಮ ಸಂವಿಧಾನ, ಕಾನೂನು, ಲೋಹಿಯಾರನ್ನೆಲ್ಲ ಅರೆದು ಕುಡಿದವರು. ಇನ್ನ ರುದ್ರಪ್ಪ ಗಾಂಧಿವಾದಿ, ರಾಜಕಾರಣಿ, ವಿಧಾನಸಭೆ ಸ್ಪೀಕರ್‌ರಾಗಿದ್ದವರು. ಎನ್.ಡಿ ಸುಂದರೇಶ್ ಕೂಡ ಜಮೀನ್ದಾರರ ಮಗ ಹಾಗೂ ಹೈಕೋರ್ಟ್ ಜಡ್ಜು ಎನ್.ಡಿ ವೆಂಕಟೇಶರ ತಮ್ಮ. ಇನ್ನ ಕಡಿದಾಳು ಶಾಮಣ್ಣ ಕಡಿದಾಳ ಮಂಜಪ್ಪನವರ ಅಣ್ಣನ ಮಗ. ಗಂಗಾಧರ ಸಮಾಜವಾದಿ ಚಿಂತನೆಯ ಹೋರಾಟಗಾರ. ಇಂತವರ ದಂಡು ನರಗುಂದಕ್ಕೆ ಬಂದಾಗ ಸರಕಾರ ಮತ್ತು ಪೊಲೀಸರ ಪುಂಗಿ ಬಂದಾದವು.

ಇನ್ಯಾರೆ ಆ ಸಮಯದಲ್ಲಿ ನರಗುಂದಕ್ಕೆ ಹೋಗಿದ್ದರೆ, ಹೊಡೆದು ಓಡಿಸುತ್ತಿದ್ದರು. ಗುಂಡೂರಾಯರು ಕೂಡ ಉಸಿರೆತ್ತಲಿಲ್ಲ. ಅಂದು ನರಗುಂದ ನವಲಗುಂದದಲ್ಲಿ ನಡೆದ ಬಂಡಾಯವನ್ನು ಈ ರೈತನಾಯಕರು ಅವಲೋಕಿಸಿದಾಗ ಅಲ್ಲಿ ನಾಯಕತ್ವದ ಕೊರತೆ ಇದೆಯೆಂದು ಭಾವಿಸಿದರು. ಅಲ್ಲಿನ ಬಂಡಾಯವನ್ನು ಜವಾಬ್ದಾರಿಯುತ ನಾಯಕರು ನಿಭಾಯಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂಬುದು ರೈತನಾಯಕರ ಅರಿವಿಗೆ ಬಂತು. ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ರೈತರು ಮತ್ತವರ ಕುಟುಂಬದವರನ್ನ ಭೇಟಿ ಮಾಡಿ ಧೈರ್ಯ ತುಂಬಲು ಕಡಿದಾಳು ಶಾಮಣ್ಣ ಮತ್ತು ಕೆ.ಟಿ ಗಂಗಾಧರ್‌ರನ್ನು ನೇಮಿಸಿದ ಪ್ರೊಫೆಸರ್ ಟೀಮು ಶಿವಮೊಗ್ಗಕ್ಕೆ ಬಂದು ನಿರಾಯುಧರಾದ ರೈತರನ್ನು ಕೊಂದ ಸರಕಾರದ ವಿರುದ್ಧ ಚಳವಳಿ ಆರಂಭಿಸಿದರು. ಡಿ.ಸಿ ಕಚೆರಿ ಎದುರು ಪೆಂಡಾಲ್ ಹಾಕಿ ಪ್ರತಿಭಟನೆ ಆರಂಭಿಸಿದ ನಾಯಕರ ಬೆಂಬಲಕ್ಕೆ ಇಡೀ ಶಿವಮೊಗ್ಗ ಜಿಲ್ಲೆಯ ರೈತರು ಹರಿದು ಬರತೊಡಗಿದರು. ಆಗ ಅಗಸ್ಟ್ 15 ಬಂತು, ಆ ದಿನವನ್ನು ಕರಾಳ ದಿನವಾಗಿ ಆಚರಿಸಿದ ರೈತನಾಯಕರು ಮುಂದೆ ಅಕ್ಟೋಬರ್ 2ರವರೆಗೂ ಧರಣಿ ಕುಳಿತರು. 45 ದಿನ ನಡೆದಂತಹ ಈ ಧರಣಿಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಯ್ತು. ಜನ ಸಾಗರವನ್ನು ಹತ್ತಿಕ್ಕಲೋಸ್ಕರ ಪೊಲೀಸರು ರೈತರನ್ನು ಅರೆಸ್ಟು ಮಾಡಿ ಜೈಲಿಗೆ ತೆಗೆದುಕೊಂಡು ಹೋದರೆ, ಜೈಲೆ ಭರ್ತಿಯಾಗಿ ಅಲ್ಲಿ ಜಾಗವೇ ಇಲ್ಲ ಎಂಬಂತಾಯಿತು. ಕಡೆಗೆ ಪೊಲೀಸರು ಅವರನ್ನೆಲ್ಲಾ ಶಿವಮೊಗ್ಗದಿಂದ ದೂರ ಕರೆದುಕೊಂಡು ಹೋಗಿ ಬಿಟ್ಟು ಬರತೊಡಗಿದರು.

ಅಕ್ಟೋಬರ್ 2ರಂದು ಒಂದು ಬೃಹತ್ ಸಭೆ ಶಿವಮೊಗ್ಗದಲ್ಲಿ ನಡೆಯಿತು. ಆ ಸಭೆಗೆ ಲಂಕೇಶ್, ತೇಜಸ್ವಿಯವರೂ ಬಂದರು. ಐಬಿಯಲ್ಲಿದ್ದ ಜಾರ್ಜ್ ಫರ್ನಾಂಡಿಸ್ ತಾನು ಬಂದು ರೈತರನ್ನು ಕುರಿತು ಭಾಷಣ ಮಾಡುವುದಾಗಿ ಹೇಳಿ ಕಳುಹಿಸಿದರು. ಆಗ ಪ್ರೊಫೆಸರ್ ಅವರು ಹೇಳಿದ್ದು ಹೀಗೆ: ಫರ್ನಾಂಡಿಸ್ ಒಂದು ಪಾರ್ಟಿಯಲ್ಲಿರುವುದರಿಂದ ಇಲ್ಲಿ ಬಂದು ಭಾಷಣ ಮಾಡುವ ಅಗತ್ಯವಿಲ್ಲ ಎಂದು. ಅಂತು ಒಂದು ಐತಿಹಾಸಿಕ ಸಭೆ ಜರುಗಿತು. ನರಗುಂದ ನವಲುಗುಂದದ ಬಂಡಾಯದ ಫಲವಾಗಿ ಕರ್ನಾಟಕ ರೈತ ಸಂಘ ಉದಯವಾಯ್ತು. ರೈತನಾಯಕರು ಇಡೀ ನಾಡನ್ನು ತಿರುಗಿ, ರೈತರನ್ನ ಸಂಘಟಿಸಿದರು. ಎಲ್ಲೆಲ್ಲಿ ಕಬ್ಬು ಬೆಳೆಗಾರರ ಸಂಘವಿತ್ತೋ ಅವರೆಲ್ಲಾ ರೈತ ಸಂಘದಲ್ಲಿ ಗುರುತಿಸಿಕೊಂಡರು. ಸರಕಾರದ ಬದಲಾವಣೆಯಲ್ಲಿ ಹಲವು ಜೀವಗಳನ್ನ ಕಳೆದುಕೊಂಡ ಏಕೈಕ ಸಂಘ ರೈತ ಸಂಘವಾಗಿತ್ತು.

ಇವತ್ತೇನು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ರೈತರ ಕೂಗಿಗೆ ಕಿವುಡಾಗಿ ಹಠ ಸಾಧಿಸಿತೋ ಅದೇ ರೀತಿ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರ ರೈತರನ್ನು ತಮ್ಮ ವೈರಿಗಳೆಂದು ಭಾವಿಸಿ ನಡೆದುಕೊಂಡಿತ್ತು. ರೈತರ ಮೇಲೆ ಮುಲಾಜಿಲ್ಲದೆ ಗೋಲಿಬಾರು ಮಾಡಿದರು. ಇದರ ಫಲವಾಗಿ ಆಳವಾಗಿ ಬೇರೂರಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಮುಂದೆ ನಡೆದ ರೈತ ಸಂಘದ ಸಾಧನೆಗಳು ಮೆಲುಕು ಹಾಕಿ ಮರುಗುವಂತಹವು!

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...