Homeಮುಖಪುಟನರಗುಂದ ಬಂಡಾಯದ ನಂತರ

ನರಗುಂದ ಬಂಡಾಯದ ನಂತರ

- Advertisement -
- Advertisement -

ಸಿಪಿಎಂ ನಾಯಕರಾದ ಜಿ.ಎನ್ ನಾಗರಾಜ್‌ರವರು 80ರ ದಶಕದ ರೈತ ಚಳವಳಿ ಕುರಿತು ದಾಖಲಿಸಿದ್ದಾರೆ. ಇದು ಪ್ರಾಮಾಣಿಕವಾದ ಐತಿಹಾಸಿಕ ವಿವರಗಳನ್ನೊಳಗೊಂಡ ಬರಹ. ನರಗುಂದ ರೈತ ಬಂಡಾಯದ ಸಮಯದಲ್ಲಿ ನಾಗರಾಜ್ ಕೃಷಿ ಇಲಾಖೆಯ ಅಧಿಕಾರಿಯಾಗಿದ್ದರು, ಜೊತೆಗೆ ರೈತರು, ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯ ನಡುವೆ ವ್ಯವಹರಿಸುವ ಜವಾಬ್ದಾರಿ ಹೊತ್ತವರಾಗಿದ್ದರು. ಎಲ್ಲವೂ ಕೈಮೀರುವ ಹಂತ ತಲುಪಿದಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದಕ್ಕೆ ಕಾರಣ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಅವರಿಗಿದ್ದ ಕಾಳಜಿ. ಕೃಷಿ ಅಧಿಕಾರಿಯೊಬ್ಬ ಆಗ ಹಠಾತ್ತನೆ ರಾಜೀನಾಮೆ ಬರೆದು ಸಂಘಟಕರಾಗಿ ಬದಲಾಗುವುದು ಒಂದು ಸಾಹಸ. ಇಂತಹ ತೀರ್ಮಾನಕ್ಕೆ ಧೈರ್ಯಬೇಕು. ಅದನ್ನು ತಮ್ಮ ಬದುಕಿನಲ್ಲಿ ತೋರಿಸಿದವರು ನಾಗರಾಜ್.

ಕರ್ನಾಟಕದ ಇತಿಹಾಸದಲ್ಲಿ ರೈತ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಬಲಿಷ್ಠ ಎತ್ತುಗಳೊಂದಿಗೆ ಹೊಲ ಉತ್ತು ಬೇಸಾಯ ಮಾಡಿದ್ದ ದೇವರಾಜ ಅರಸರಿಂದ ಅಧಿಕಾರವನ್ನು ಕಿತ್ತು ಗುಂಡೂರಾಯರಿಗೆ ಕೊಟ್ಟ ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಆ ಕಾರಣಕ್ಕೆ ಅಂದು ರಾಜಕೀಯವಾಗಿ ಕರ್ನಾಟಕವನ್ನು ಕಳೆದುಕೊಂಡರು. ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದ ಅರಸು ಆಡಳಿತದ ಫಲವಾಗಿ ಕರ್ನಾಟಕದಲ್ಲಿ ಕಾಂಗೈಯನ್ನ ಅಲುಗಾಡಿಸುವುದು ಕಷ್ಟವಿತ್ತು. ಆದರೆ ಜನಾಭಿಪ್ರಾಯವಿಲ್ಲದೆ ನೇಮಕಗೊಂಡಿದ್ದ ಗುಂಡೂರಾವ್ ಆಡಳಿತ ವೈಖರಿಯಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಕರ್ನಾಟಕದ ಜನ ಸಮೂಹದ ಪ್ರತಿಭಟನೆಗಳು ತನ್ನ ವಿರುದ್ಧವಾಗಿವೆ ಎಂದು ಭಾವಿಸಿದ್ದ ಗುಂಡೂರಾಯರ ಮಾತಿನಲ್ಲಿ ಪ್ರತೀಕಾರದ ಮಾತು ಬರುತ್ತಿದ್ದವು. ನಾಯಕನಾದವನ ಬಾಯಲ್ಲಿ ಹಿಂಸೆಯ ಮಾತುಗಳು ಬರಬಾರದು, ಬಂದರೆ ಅದರ ಪರಿಣಾಮ ಘೋರ. ನಾಯಕನ ಬಾಯಿಂದ ಪ್ರತಿಹಿಂಸೆ ಮಾತು ಬಂದರೆ ಪೊಲೀಸರಿಗೆ ಎಲ್ಲಿಲ್ಲದ ಶಕ್ತಿ ಬರುತ್ತದೆ. ಗುಂಡೂರಾಯರ ಕಾಲದ ಪೊಲೀಸರು ರಕ್ಕಸರಂತಾಗಿದ್ದರು. ಇದರ ಪರಿಣಾಮ ನರಗುಂದದಲ್ಲಿ ರೈತರ ದಂಗೆಯಾಗಿ ಗೋಲಿಬಾರಿಗೆ ಎರಡು ಜೀವ ಬಲಿಯಾಗಿದ್ದವು. ಪೊಲೀಸ್ ಇನ್‌ಸ್ಪೆಕ್ಟರ್ ಹತನಾಗಿದ್ದ.

ಇತ್ತ ಶಿವಮೊಗ್ಗದಲ್ಲಿ ಅದಾಗಲೇ ರೈತನಾಯಕ ಹೆಚ್.ಎಸ್ ರುದ್ರಪ್ಪನವರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಂಘ ಹುಟ್ಟಿಕೊಂಡು ಸರಕಾರದ ವಿರುದ್ಧ ಹೋರಾಡುತ್ತಿತ್ತು. ಅಂತಹ ಸಮಯದಲ್ಲಿ ಮುಲಾಜಿಲ್ಲದೆ ರೈತರನ್ನು ಗೋಲಿಬಾರ್ ಮುಖಾಂತರ ಉಡಾಯಿಸಿದ ಸರಕಾರದ ವಿರುದ್ಧ ರುದ್ರಪ್ಪನವರ ಟೀಮು ಸಿಡಿಗೆದ್ದಿತು. ತಮ್ಮ ಮುಂದಿನ ಚಳವಳಿಯ ನಾಯಕತ್ವಕ್ಕಾಗಿ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರನ್ನ ಕರೆಸಿಕೊಂಡರು. ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ ಗಂಗಾಧರ, ಬಸವರಾಜಪ್ಪ ಇವರೆಲ್ಲಾ ನರಗುಂದಕ್ಕೆ ಹೋದರು. ಅಲ್ಲಿ ಪೊಲೀಸರು ರೈತರನ್ನು ಬೇಟೆಯಾಡಿ ತಂದು ಜೈಲಿಗೆ ದಬ್ಬುತ್ತಿದ್ದುದನ್ನ ನೋಡಿದ ರೈತ ನಾಯಕರಿಗೆ ಸಿಟ್ಟು ಕಟ್ಟಯೊಡೆಯಿತು. ಗುಂಡೂರಾಯರು ಎಲ್ಲ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿದಂತೆ ಕಂಡಿತು.

ಪ್ರೊ. ನಂಜುಂಡಸ್ವಾಮಿಯವರ ಟೀಮು ಮಡಿದ ರೈತರ ನೆನಪಿಗೆ ನೆಡಲು ವೀರಗಲ್ಲುಗಳ ಸಮೇತ ನರಗುಂದಕ್ಕೆ ಹೋಗಿದ್ದರು. IB ಬಳಿ ಹೋದಾಗ ಅಲ್ಲಿನ ಪೊಲೀಸರು IBಯಲ್ಲಿ ರೂಮಿಲ್ಲ, ಅದಾಗಲೆ ಎಸ್‌ಪಿಗೆ ಅಲಾಟ್ ಮಾಡಲಾಗಿದೆ ಎಂದರು. ಪ್ರೊ. ನಂಜುಂಡಸ್ವಾಮಿಯವರು ಕೆ.ಟಿ ಗಂಗಾದರ್ ಕಡೆ ನೋಡಿ “ಬಾಗಿಲು ಓಪನ್ ಮಾಡಿ” ಎಂದರು. ಕೂಡಲೇ ಗಂಗಾಧರ್ ಕಲ್ಲುತೆಗೆದುಕೊಂಡು ಬೀಗ ಹೊಡೆದರು. ಬಾಗಿಲು ತೆಗೆಯಿತು. ಆ ನಂತರ ಯಾವ ಪೊಲೀಸರು ಇವರ ಸನಿಹ ಸುಳಿಯಲಿಲ್ಲ. ಇಲ್ಲೊಂದು ಮಹತ್ವದ ವಿಷಯವಿದೆ; ನರಗುಂದ ನವಲಗುಂದದ ಬಂಡಾಯಕ್ಕೆ ಓಗೊಟ್ಟು ಬಂದಿದ್ದ ಈ ನಾಯಕರು ಅಸಾಮಾನ್ಯ ವ್ಯಕ್ತಿಗಳಾಗಿದ್ದರು. ಪ್ರೊ. ನಂಜುಂಡಸ್ವಾಮಿ ದೊಡ್ಡ ಜಮೀನ್ದಾರರ ಮಗ. ವಿದೇಶದಲ್ಲಿ ಲಾ ಓದಿಕೊಂಡು ಬಂದವರು. ನಮ್ಮ ಸಂವಿಧಾನ, ಕಾನೂನು, ಲೋಹಿಯಾರನ್ನೆಲ್ಲ ಅರೆದು ಕುಡಿದವರು. ಇನ್ನ ರುದ್ರಪ್ಪ ಗಾಂಧಿವಾದಿ, ರಾಜಕಾರಣಿ, ವಿಧಾನಸಭೆ ಸ್ಪೀಕರ್‌ರಾಗಿದ್ದವರು. ಎನ್.ಡಿ ಸುಂದರೇಶ್ ಕೂಡ ಜಮೀನ್ದಾರರ ಮಗ ಹಾಗೂ ಹೈಕೋರ್ಟ್ ಜಡ್ಜು ಎನ್.ಡಿ ವೆಂಕಟೇಶರ ತಮ್ಮ. ಇನ್ನ ಕಡಿದಾಳು ಶಾಮಣ್ಣ ಕಡಿದಾಳ ಮಂಜಪ್ಪನವರ ಅಣ್ಣನ ಮಗ. ಗಂಗಾಧರ ಸಮಾಜವಾದಿ ಚಿಂತನೆಯ ಹೋರಾಟಗಾರ. ಇಂತವರ ದಂಡು ನರಗುಂದಕ್ಕೆ ಬಂದಾಗ ಸರಕಾರ ಮತ್ತು ಪೊಲೀಸರ ಪುಂಗಿ ಬಂದಾದವು.

ಇನ್ಯಾರೆ ಆ ಸಮಯದಲ್ಲಿ ನರಗುಂದಕ್ಕೆ ಹೋಗಿದ್ದರೆ, ಹೊಡೆದು ಓಡಿಸುತ್ತಿದ್ದರು. ಗುಂಡೂರಾಯರು ಕೂಡ ಉಸಿರೆತ್ತಲಿಲ್ಲ. ಅಂದು ನರಗುಂದ ನವಲಗುಂದದಲ್ಲಿ ನಡೆದ ಬಂಡಾಯವನ್ನು ಈ ರೈತನಾಯಕರು ಅವಲೋಕಿಸಿದಾಗ ಅಲ್ಲಿ ನಾಯಕತ್ವದ ಕೊರತೆ ಇದೆಯೆಂದು ಭಾವಿಸಿದರು. ಅಲ್ಲಿನ ಬಂಡಾಯವನ್ನು ಜವಾಬ್ದಾರಿಯುತ ನಾಯಕರು ನಿಭಾಯಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂಬುದು ರೈತನಾಯಕರ ಅರಿವಿಗೆ ಬಂತು. ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ರೈತರು ಮತ್ತವರ ಕುಟುಂಬದವರನ್ನ ಭೇಟಿ ಮಾಡಿ ಧೈರ್ಯ ತುಂಬಲು ಕಡಿದಾಳು ಶಾಮಣ್ಣ ಮತ್ತು ಕೆ.ಟಿ ಗಂಗಾಧರ್‌ರನ್ನು ನೇಮಿಸಿದ ಪ್ರೊಫೆಸರ್ ಟೀಮು ಶಿವಮೊಗ್ಗಕ್ಕೆ ಬಂದು ನಿರಾಯುಧರಾದ ರೈತರನ್ನು ಕೊಂದ ಸರಕಾರದ ವಿರುದ್ಧ ಚಳವಳಿ ಆರಂಭಿಸಿದರು. ಡಿ.ಸಿ ಕಚೆರಿ ಎದುರು ಪೆಂಡಾಲ್ ಹಾಕಿ ಪ್ರತಿಭಟನೆ ಆರಂಭಿಸಿದ ನಾಯಕರ ಬೆಂಬಲಕ್ಕೆ ಇಡೀ ಶಿವಮೊಗ್ಗ ಜಿಲ್ಲೆಯ ರೈತರು ಹರಿದು ಬರತೊಡಗಿದರು. ಆಗ ಅಗಸ್ಟ್ 15 ಬಂತು, ಆ ದಿನವನ್ನು ಕರಾಳ ದಿನವಾಗಿ ಆಚರಿಸಿದ ರೈತನಾಯಕರು ಮುಂದೆ ಅಕ್ಟೋಬರ್ 2ರವರೆಗೂ ಧರಣಿ ಕುಳಿತರು. 45 ದಿನ ನಡೆದಂತಹ ಈ ಧರಣಿಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಯ್ತು. ಜನ ಸಾಗರವನ್ನು ಹತ್ತಿಕ್ಕಲೋಸ್ಕರ ಪೊಲೀಸರು ರೈತರನ್ನು ಅರೆಸ್ಟು ಮಾಡಿ ಜೈಲಿಗೆ ತೆಗೆದುಕೊಂಡು ಹೋದರೆ, ಜೈಲೆ ಭರ್ತಿಯಾಗಿ ಅಲ್ಲಿ ಜಾಗವೇ ಇಲ್ಲ ಎಂಬಂತಾಯಿತು. ಕಡೆಗೆ ಪೊಲೀಸರು ಅವರನ್ನೆಲ್ಲಾ ಶಿವಮೊಗ್ಗದಿಂದ ದೂರ ಕರೆದುಕೊಂಡು ಹೋಗಿ ಬಿಟ್ಟು ಬರತೊಡಗಿದರು.

ಅಕ್ಟೋಬರ್ 2ರಂದು ಒಂದು ಬೃಹತ್ ಸಭೆ ಶಿವಮೊಗ್ಗದಲ್ಲಿ ನಡೆಯಿತು. ಆ ಸಭೆಗೆ ಲಂಕೇಶ್, ತೇಜಸ್ವಿಯವರೂ ಬಂದರು. ಐಬಿಯಲ್ಲಿದ್ದ ಜಾರ್ಜ್ ಫರ್ನಾಂಡಿಸ್ ತಾನು ಬಂದು ರೈತರನ್ನು ಕುರಿತು ಭಾಷಣ ಮಾಡುವುದಾಗಿ ಹೇಳಿ ಕಳುಹಿಸಿದರು. ಆಗ ಪ್ರೊಫೆಸರ್ ಅವರು ಹೇಳಿದ್ದು ಹೀಗೆ: ಫರ್ನಾಂಡಿಸ್ ಒಂದು ಪಾರ್ಟಿಯಲ್ಲಿರುವುದರಿಂದ ಇಲ್ಲಿ ಬಂದು ಭಾಷಣ ಮಾಡುವ ಅಗತ್ಯವಿಲ್ಲ ಎಂದು. ಅಂತು ಒಂದು ಐತಿಹಾಸಿಕ ಸಭೆ ಜರುಗಿತು. ನರಗುಂದ ನವಲುಗುಂದದ ಬಂಡಾಯದ ಫಲವಾಗಿ ಕರ್ನಾಟಕ ರೈತ ಸಂಘ ಉದಯವಾಯ್ತು. ರೈತನಾಯಕರು ಇಡೀ ನಾಡನ್ನು ತಿರುಗಿ, ರೈತರನ್ನ ಸಂಘಟಿಸಿದರು. ಎಲ್ಲೆಲ್ಲಿ ಕಬ್ಬು ಬೆಳೆಗಾರರ ಸಂಘವಿತ್ತೋ ಅವರೆಲ್ಲಾ ರೈತ ಸಂಘದಲ್ಲಿ ಗುರುತಿಸಿಕೊಂಡರು. ಸರಕಾರದ ಬದಲಾವಣೆಯಲ್ಲಿ ಹಲವು ಜೀವಗಳನ್ನ ಕಳೆದುಕೊಂಡ ಏಕೈಕ ಸಂಘ ರೈತ ಸಂಘವಾಗಿತ್ತು.

ಇವತ್ತೇನು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ರೈತರ ಕೂಗಿಗೆ ಕಿವುಡಾಗಿ ಹಠ ಸಾಧಿಸಿತೋ ಅದೇ ರೀತಿ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರ ರೈತರನ್ನು ತಮ್ಮ ವೈರಿಗಳೆಂದು ಭಾವಿಸಿ ನಡೆದುಕೊಂಡಿತ್ತು. ರೈತರ ಮೇಲೆ ಮುಲಾಜಿಲ್ಲದೆ ಗೋಲಿಬಾರು ಮಾಡಿದರು. ಇದರ ಫಲವಾಗಿ ಆಳವಾಗಿ ಬೇರೂರಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಮುಂದೆ ನಡೆದ ರೈತ ಸಂಘದ ಸಾಧನೆಗಳು ಮೆಲುಕು ಹಾಕಿ ಮರುಗುವಂತಹವು!

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...