Homeಮುಖಪುಟನರಗುಂದ ಬಂಡಾಯದ ನಂತರ

ನರಗುಂದ ಬಂಡಾಯದ ನಂತರ

- Advertisement -
- Advertisement -

ಸಿಪಿಎಂ ನಾಯಕರಾದ ಜಿ.ಎನ್ ನಾಗರಾಜ್‌ರವರು 80ರ ದಶಕದ ರೈತ ಚಳವಳಿ ಕುರಿತು ದಾಖಲಿಸಿದ್ದಾರೆ. ಇದು ಪ್ರಾಮಾಣಿಕವಾದ ಐತಿಹಾಸಿಕ ವಿವರಗಳನ್ನೊಳಗೊಂಡ ಬರಹ. ನರಗುಂದ ರೈತ ಬಂಡಾಯದ ಸಮಯದಲ್ಲಿ ನಾಗರಾಜ್ ಕೃಷಿ ಇಲಾಖೆಯ ಅಧಿಕಾರಿಯಾಗಿದ್ದರು, ಜೊತೆಗೆ ರೈತರು, ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯ ನಡುವೆ ವ್ಯವಹರಿಸುವ ಜವಾಬ್ದಾರಿ ಹೊತ್ತವರಾಗಿದ್ದರು. ಎಲ್ಲವೂ ಕೈಮೀರುವ ಹಂತ ತಲುಪಿದಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದಕ್ಕೆ ಕಾರಣ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಅವರಿಗಿದ್ದ ಕಾಳಜಿ. ಕೃಷಿ ಅಧಿಕಾರಿಯೊಬ್ಬ ಆಗ ಹಠಾತ್ತನೆ ರಾಜೀನಾಮೆ ಬರೆದು ಸಂಘಟಕರಾಗಿ ಬದಲಾಗುವುದು ಒಂದು ಸಾಹಸ. ಇಂತಹ ತೀರ್ಮಾನಕ್ಕೆ ಧೈರ್ಯಬೇಕು. ಅದನ್ನು ತಮ್ಮ ಬದುಕಿನಲ್ಲಿ ತೋರಿಸಿದವರು ನಾಗರಾಜ್.

ಕರ್ನಾಟಕದ ಇತಿಹಾಸದಲ್ಲಿ ರೈತ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಬಲಿಷ್ಠ ಎತ್ತುಗಳೊಂದಿಗೆ ಹೊಲ ಉತ್ತು ಬೇಸಾಯ ಮಾಡಿದ್ದ ದೇವರಾಜ ಅರಸರಿಂದ ಅಧಿಕಾರವನ್ನು ಕಿತ್ತು ಗುಂಡೂರಾಯರಿಗೆ ಕೊಟ್ಟ ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಆ ಕಾರಣಕ್ಕೆ ಅಂದು ರಾಜಕೀಯವಾಗಿ ಕರ್ನಾಟಕವನ್ನು ಕಳೆದುಕೊಂಡರು. ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದ ಅರಸು ಆಡಳಿತದ ಫಲವಾಗಿ ಕರ್ನಾಟಕದಲ್ಲಿ ಕಾಂಗೈಯನ್ನ ಅಲುಗಾಡಿಸುವುದು ಕಷ್ಟವಿತ್ತು. ಆದರೆ ಜನಾಭಿಪ್ರಾಯವಿಲ್ಲದೆ ನೇಮಕಗೊಂಡಿದ್ದ ಗುಂಡೂರಾವ್ ಆಡಳಿತ ವೈಖರಿಯಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಕರ್ನಾಟಕದ ಜನ ಸಮೂಹದ ಪ್ರತಿಭಟನೆಗಳು ತನ್ನ ವಿರುದ್ಧವಾಗಿವೆ ಎಂದು ಭಾವಿಸಿದ್ದ ಗುಂಡೂರಾಯರ ಮಾತಿನಲ್ಲಿ ಪ್ರತೀಕಾರದ ಮಾತು ಬರುತ್ತಿದ್ದವು. ನಾಯಕನಾದವನ ಬಾಯಲ್ಲಿ ಹಿಂಸೆಯ ಮಾತುಗಳು ಬರಬಾರದು, ಬಂದರೆ ಅದರ ಪರಿಣಾಮ ಘೋರ. ನಾಯಕನ ಬಾಯಿಂದ ಪ್ರತಿಹಿಂಸೆ ಮಾತು ಬಂದರೆ ಪೊಲೀಸರಿಗೆ ಎಲ್ಲಿಲ್ಲದ ಶಕ್ತಿ ಬರುತ್ತದೆ. ಗುಂಡೂರಾಯರ ಕಾಲದ ಪೊಲೀಸರು ರಕ್ಕಸರಂತಾಗಿದ್ದರು. ಇದರ ಪರಿಣಾಮ ನರಗುಂದದಲ್ಲಿ ರೈತರ ದಂಗೆಯಾಗಿ ಗೋಲಿಬಾರಿಗೆ ಎರಡು ಜೀವ ಬಲಿಯಾಗಿದ್ದವು. ಪೊಲೀಸ್ ಇನ್‌ಸ್ಪೆಕ್ಟರ್ ಹತನಾಗಿದ್ದ.

ಇತ್ತ ಶಿವಮೊಗ್ಗದಲ್ಲಿ ಅದಾಗಲೇ ರೈತನಾಯಕ ಹೆಚ್.ಎಸ್ ರುದ್ರಪ್ಪನವರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಂಘ ಹುಟ್ಟಿಕೊಂಡು ಸರಕಾರದ ವಿರುದ್ಧ ಹೋರಾಡುತ್ತಿತ್ತು. ಅಂತಹ ಸಮಯದಲ್ಲಿ ಮುಲಾಜಿಲ್ಲದೆ ರೈತರನ್ನು ಗೋಲಿಬಾರ್ ಮುಖಾಂತರ ಉಡಾಯಿಸಿದ ಸರಕಾರದ ವಿರುದ್ಧ ರುದ್ರಪ್ಪನವರ ಟೀಮು ಸಿಡಿಗೆದ್ದಿತು. ತಮ್ಮ ಮುಂದಿನ ಚಳವಳಿಯ ನಾಯಕತ್ವಕ್ಕಾಗಿ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರನ್ನ ಕರೆಸಿಕೊಂಡರು. ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ ಗಂಗಾಧರ, ಬಸವರಾಜಪ್ಪ ಇವರೆಲ್ಲಾ ನರಗುಂದಕ್ಕೆ ಹೋದರು. ಅಲ್ಲಿ ಪೊಲೀಸರು ರೈತರನ್ನು ಬೇಟೆಯಾಡಿ ತಂದು ಜೈಲಿಗೆ ದಬ್ಬುತ್ತಿದ್ದುದನ್ನ ನೋಡಿದ ರೈತ ನಾಯಕರಿಗೆ ಸಿಟ್ಟು ಕಟ್ಟಯೊಡೆಯಿತು. ಗುಂಡೂರಾಯರು ಎಲ್ಲ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿದಂತೆ ಕಂಡಿತು.

ಪ್ರೊ. ನಂಜುಂಡಸ್ವಾಮಿಯವರ ಟೀಮು ಮಡಿದ ರೈತರ ನೆನಪಿಗೆ ನೆಡಲು ವೀರಗಲ್ಲುಗಳ ಸಮೇತ ನರಗುಂದಕ್ಕೆ ಹೋಗಿದ್ದರು. IB ಬಳಿ ಹೋದಾಗ ಅಲ್ಲಿನ ಪೊಲೀಸರು IBಯಲ್ಲಿ ರೂಮಿಲ್ಲ, ಅದಾಗಲೆ ಎಸ್‌ಪಿಗೆ ಅಲಾಟ್ ಮಾಡಲಾಗಿದೆ ಎಂದರು. ಪ್ರೊ. ನಂಜುಂಡಸ್ವಾಮಿಯವರು ಕೆ.ಟಿ ಗಂಗಾದರ್ ಕಡೆ ನೋಡಿ “ಬಾಗಿಲು ಓಪನ್ ಮಾಡಿ” ಎಂದರು. ಕೂಡಲೇ ಗಂಗಾಧರ್ ಕಲ್ಲುತೆಗೆದುಕೊಂಡು ಬೀಗ ಹೊಡೆದರು. ಬಾಗಿಲು ತೆಗೆಯಿತು. ಆ ನಂತರ ಯಾವ ಪೊಲೀಸರು ಇವರ ಸನಿಹ ಸುಳಿಯಲಿಲ್ಲ. ಇಲ್ಲೊಂದು ಮಹತ್ವದ ವಿಷಯವಿದೆ; ನರಗುಂದ ನವಲಗುಂದದ ಬಂಡಾಯಕ್ಕೆ ಓಗೊಟ್ಟು ಬಂದಿದ್ದ ಈ ನಾಯಕರು ಅಸಾಮಾನ್ಯ ವ್ಯಕ್ತಿಗಳಾಗಿದ್ದರು. ಪ್ರೊ. ನಂಜುಂಡಸ್ವಾಮಿ ದೊಡ್ಡ ಜಮೀನ್ದಾರರ ಮಗ. ವಿದೇಶದಲ್ಲಿ ಲಾ ಓದಿಕೊಂಡು ಬಂದವರು. ನಮ್ಮ ಸಂವಿಧಾನ, ಕಾನೂನು, ಲೋಹಿಯಾರನ್ನೆಲ್ಲ ಅರೆದು ಕುಡಿದವರು. ಇನ್ನ ರುದ್ರಪ್ಪ ಗಾಂಧಿವಾದಿ, ರಾಜಕಾರಣಿ, ವಿಧಾನಸಭೆ ಸ್ಪೀಕರ್‌ರಾಗಿದ್ದವರು. ಎನ್.ಡಿ ಸುಂದರೇಶ್ ಕೂಡ ಜಮೀನ್ದಾರರ ಮಗ ಹಾಗೂ ಹೈಕೋರ್ಟ್ ಜಡ್ಜು ಎನ್.ಡಿ ವೆಂಕಟೇಶರ ತಮ್ಮ. ಇನ್ನ ಕಡಿದಾಳು ಶಾಮಣ್ಣ ಕಡಿದಾಳ ಮಂಜಪ್ಪನವರ ಅಣ್ಣನ ಮಗ. ಗಂಗಾಧರ ಸಮಾಜವಾದಿ ಚಿಂತನೆಯ ಹೋರಾಟಗಾರ. ಇಂತವರ ದಂಡು ನರಗುಂದಕ್ಕೆ ಬಂದಾಗ ಸರಕಾರ ಮತ್ತು ಪೊಲೀಸರ ಪುಂಗಿ ಬಂದಾದವು.

ಇನ್ಯಾರೆ ಆ ಸಮಯದಲ್ಲಿ ನರಗುಂದಕ್ಕೆ ಹೋಗಿದ್ದರೆ, ಹೊಡೆದು ಓಡಿಸುತ್ತಿದ್ದರು. ಗುಂಡೂರಾಯರು ಕೂಡ ಉಸಿರೆತ್ತಲಿಲ್ಲ. ಅಂದು ನರಗುಂದ ನವಲಗುಂದದಲ್ಲಿ ನಡೆದ ಬಂಡಾಯವನ್ನು ಈ ರೈತನಾಯಕರು ಅವಲೋಕಿಸಿದಾಗ ಅಲ್ಲಿ ನಾಯಕತ್ವದ ಕೊರತೆ ಇದೆಯೆಂದು ಭಾವಿಸಿದರು. ಅಲ್ಲಿನ ಬಂಡಾಯವನ್ನು ಜವಾಬ್ದಾರಿಯುತ ನಾಯಕರು ನಿಭಾಯಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂಬುದು ರೈತನಾಯಕರ ಅರಿವಿಗೆ ಬಂತು. ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ರೈತರು ಮತ್ತವರ ಕುಟುಂಬದವರನ್ನ ಭೇಟಿ ಮಾಡಿ ಧೈರ್ಯ ತುಂಬಲು ಕಡಿದಾಳು ಶಾಮಣ್ಣ ಮತ್ತು ಕೆ.ಟಿ ಗಂಗಾಧರ್‌ರನ್ನು ನೇಮಿಸಿದ ಪ್ರೊಫೆಸರ್ ಟೀಮು ಶಿವಮೊಗ್ಗಕ್ಕೆ ಬಂದು ನಿರಾಯುಧರಾದ ರೈತರನ್ನು ಕೊಂದ ಸರಕಾರದ ವಿರುದ್ಧ ಚಳವಳಿ ಆರಂಭಿಸಿದರು. ಡಿ.ಸಿ ಕಚೆರಿ ಎದುರು ಪೆಂಡಾಲ್ ಹಾಕಿ ಪ್ರತಿಭಟನೆ ಆರಂಭಿಸಿದ ನಾಯಕರ ಬೆಂಬಲಕ್ಕೆ ಇಡೀ ಶಿವಮೊಗ್ಗ ಜಿಲ್ಲೆಯ ರೈತರು ಹರಿದು ಬರತೊಡಗಿದರು. ಆಗ ಅಗಸ್ಟ್ 15 ಬಂತು, ಆ ದಿನವನ್ನು ಕರಾಳ ದಿನವಾಗಿ ಆಚರಿಸಿದ ರೈತನಾಯಕರು ಮುಂದೆ ಅಕ್ಟೋಬರ್ 2ರವರೆಗೂ ಧರಣಿ ಕುಳಿತರು. 45 ದಿನ ನಡೆದಂತಹ ಈ ಧರಣಿಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಯ್ತು. ಜನ ಸಾಗರವನ್ನು ಹತ್ತಿಕ್ಕಲೋಸ್ಕರ ಪೊಲೀಸರು ರೈತರನ್ನು ಅರೆಸ್ಟು ಮಾಡಿ ಜೈಲಿಗೆ ತೆಗೆದುಕೊಂಡು ಹೋದರೆ, ಜೈಲೆ ಭರ್ತಿಯಾಗಿ ಅಲ್ಲಿ ಜಾಗವೇ ಇಲ್ಲ ಎಂಬಂತಾಯಿತು. ಕಡೆಗೆ ಪೊಲೀಸರು ಅವರನ್ನೆಲ್ಲಾ ಶಿವಮೊಗ್ಗದಿಂದ ದೂರ ಕರೆದುಕೊಂಡು ಹೋಗಿ ಬಿಟ್ಟು ಬರತೊಡಗಿದರು.

ಅಕ್ಟೋಬರ್ 2ರಂದು ಒಂದು ಬೃಹತ್ ಸಭೆ ಶಿವಮೊಗ್ಗದಲ್ಲಿ ನಡೆಯಿತು. ಆ ಸಭೆಗೆ ಲಂಕೇಶ್, ತೇಜಸ್ವಿಯವರೂ ಬಂದರು. ಐಬಿಯಲ್ಲಿದ್ದ ಜಾರ್ಜ್ ಫರ್ನಾಂಡಿಸ್ ತಾನು ಬಂದು ರೈತರನ್ನು ಕುರಿತು ಭಾಷಣ ಮಾಡುವುದಾಗಿ ಹೇಳಿ ಕಳುಹಿಸಿದರು. ಆಗ ಪ್ರೊಫೆಸರ್ ಅವರು ಹೇಳಿದ್ದು ಹೀಗೆ: ಫರ್ನಾಂಡಿಸ್ ಒಂದು ಪಾರ್ಟಿಯಲ್ಲಿರುವುದರಿಂದ ಇಲ್ಲಿ ಬಂದು ಭಾಷಣ ಮಾಡುವ ಅಗತ್ಯವಿಲ್ಲ ಎಂದು. ಅಂತು ಒಂದು ಐತಿಹಾಸಿಕ ಸಭೆ ಜರುಗಿತು. ನರಗುಂದ ನವಲುಗುಂದದ ಬಂಡಾಯದ ಫಲವಾಗಿ ಕರ್ನಾಟಕ ರೈತ ಸಂಘ ಉದಯವಾಯ್ತು. ರೈತನಾಯಕರು ಇಡೀ ನಾಡನ್ನು ತಿರುಗಿ, ರೈತರನ್ನ ಸಂಘಟಿಸಿದರು. ಎಲ್ಲೆಲ್ಲಿ ಕಬ್ಬು ಬೆಳೆಗಾರರ ಸಂಘವಿತ್ತೋ ಅವರೆಲ್ಲಾ ರೈತ ಸಂಘದಲ್ಲಿ ಗುರುತಿಸಿಕೊಂಡರು. ಸರಕಾರದ ಬದಲಾವಣೆಯಲ್ಲಿ ಹಲವು ಜೀವಗಳನ್ನ ಕಳೆದುಕೊಂಡ ಏಕೈಕ ಸಂಘ ರೈತ ಸಂಘವಾಗಿತ್ತು.

ಇವತ್ತೇನು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ರೈತರ ಕೂಗಿಗೆ ಕಿವುಡಾಗಿ ಹಠ ಸಾಧಿಸಿತೋ ಅದೇ ರೀತಿ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರ ರೈತರನ್ನು ತಮ್ಮ ವೈರಿಗಳೆಂದು ಭಾವಿಸಿ ನಡೆದುಕೊಂಡಿತ್ತು. ರೈತರ ಮೇಲೆ ಮುಲಾಜಿಲ್ಲದೆ ಗೋಲಿಬಾರು ಮಾಡಿದರು. ಇದರ ಫಲವಾಗಿ ಆಳವಾಗಿ ಬೇರೂರಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಮುಂದೆ ನಡೆದ ರೈತ ಸಂಘದ ಸಾಧನೆಗಳು ಮೆಲುಕು ಹಾಕಿ ಮರುಗುವಂತಹವು!

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...