Homeಮುಖಪುಟ'ಯುವ, ಅನುಭವಿಗಳ ಶ್ರೇಷ್ಠ ಮಿಶ್ರಣ..'; ತಮ್ಮ ಹೊಸ ಸಂಪುಟ ಸದಸ್ಯರನ್ನು ಪ್ರಶಂಸಿದ ಪ್ರಧಾನಿ ಮೋದಿ

‘ಯುವ, ಅನುಭವಿಗಳ ಶ್ರೇಷ್ಠ ಮಿಶ್ರಣ..’; ತಮ್ಮ ಹೊಸ ಸಂಪುಟ ಸದಸ್ಯರನ್ನು ಪ್ರಶಂಸಿದ ಪ್ರಧಾನಿ ಮೋದಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಕೇಂದ್ರ ಸಚಿವ ಸಂಪುಟವನ್ನು “ಯುವ ಮತ್ತು ಅನುಭವಿಗಳ ಉತ್ತಮ ಮಿಶ್ರಣ” ಎಂದು ಬಣ್ಣಿಸಿದ್ದಾರೆ, ಅವರು ಜನರ ಜೀವನವನ್ನು ಸುಧಾರಿಸುವಲ್ಲಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಪ್ರತಿಪಾದಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, “ನಾನು 140 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ಮತ್ತು ಭಾರತವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮಂತ್ರಿಗಳ ಮಂಡಳಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಸಚಿವರನ್ನು ಅಭಿನಂದಿಸಿದ ಅವರು, “ಈ ಸಚಿವರ ತಂಡವು ಯುವಕರು ಮತ್ತು ಅನುಭವಿಗಳ ಉತ್ತಮ ಮಿಶ್ರಣವಾಗಿದ್ದು, ಜನರ ಜೀವನವನ್ನು ಸುಧಾರಿಸುವಲ್ಲಿ ನಾವು ಯಾವುದೇ ಅವಕಾಶವನ್ನೂ ಬಿಡುವುದಿಲ್ಲ” ಎಂದು ಹೇಳಿದರು.

“ಮಾನವ ಪ್ರಗತಿಯ ಅನ್ವೇಷಣೆಯಲ್ಲಿ ಭಾರತ ಯಾವಾಗಲೂ ನಮ್ಮ ಮೌಲ್ಯಯುತ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ” ಎಂದು ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ವಿದೇಶಿ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ರಾಜ್ಯಾವಾರು ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವರು:

ಗುಜರಾತ್
1. ಅಮಿತ್ ಶಾ
2.ಎಸ್ ಜೈಶಂಕರ್
3.ಮನ್ಸುಖ್ ಮಾಂಡವಿಯಾ
4.ಸಿಆರ್ ಪಾಟೀಲ್
5. ನಿಮು ಬೆನ್ ಬಾಂಬ್ನಿಯಾ
6. ಜೆ ಪಿ ನಡ್ಡಾ

ಒಡಿಶಾ
1.ಅಶ್ವಿನಿ ವೈಷ್ಣವ್
2.ಧರ್ಮೇಂದ್ರ ಪ್ರಧಾನ್
3.ಜುಯಲ್ ಓರಮ್

ಕರ್ನಾಟಕ
1. ನಿರ್ಮಲಾ ಸೀತಾರಾಮನ್
2. ಎಚ್‌ಡಿ ಕುಮಾರಸ್ವಾಮಿ
3. ಪ್ರಲ್ಹಾದ್ ಜೋಶಿ
4. ಶೋಭಾ ಕರಂದ್ಲಾಜೆ
5. ವಿ. ಸೋಮಣ್ಣ

ಮಹಾರಾಷ್ಟ್ರ
1. ಪಿಯೂಷ್ ಗೋಯಲ್
2. ನಿತಿನ್ ಗಡ್ಕರಿ
3. ಪ್ರತಾಪ್ ರಾವ್ ಜಾಧವ್
4. ರಕ್ಷಾ ಖಡ್ಸೆ
5. ರಾಮ್ ದಾಸ್ ಅಠಾವಳೆ
6. ಮುರಳೀಧರ್ ಮೊಹೋಲ್

ಗೋವಾ
1.ಶ್ರೀಪಾದ್ ನಾಯ್ಕ್

ಜಮ್ಮು-ಕಾಶ್ಮೀರ
1.ಜಿತೇಂದ್ರ ಸಿಂಗ್

ಮಧ್ಯಪ್ರದೇಶ
1. ಶಿವರಾಜ್ ಸಿಂಗ್ ಚಾಹಾಣ್
2. ಜ್ಯೋತಿರಾದಿತ್ಯ ಸಿಂಧಿಯಾ
3. ಸಾವಿತ್ರಿ ಠಾಕೂರ್
4. ವೀರೇಂದ್ರ ಕುಮಾರ್

ಉತ್ತರ ಪ್ರದೇಶ
1. ಹರ್ದೀಪ್ ಸಿಂಗ್ ಪುರಿ
2. ರಾಜನಾಥ್ ಸಿಂಗ್
3. ಜಯಂತ್ ಚೌಧರಿ
4. ಜಿತಿನ್ ಪ್ರಸಾದ್
5. ಪಂಕಜ್ ಚೌಧರಿ
6. ಬಿ ಎಲ್ ವರ್ಮಾ
7. ಅನುಪ್ರಿಯಾ ಪಟೇಲ್
8. ಕಮಲೇಶ್ ಪಾಸ್ವಾನ್
9. ಎಸ್‌ಪಿ ಸಿಂಗ್ ಬಘೇಲ್

ಬಿಹಾರ
1. ಚಿರಾಗ್ ಪಾಸ್ವಾನ್
2. ಗಿರಿರಾಜ್ ಸಿಂಗ್
3. ಜಿತನ್ ರಾಮ್ ಮಾಂಝಿ
4. ರಾಮನಾಥ್ ಠಾಕೂರ್
5. ಲಾಲನ್ ಸಿಂಗ್
6. ನಿರ್ಯಾನಂದ ರೈ
7. ರಾಜ್ ಭೂಷಣ್
8. ಸತೀಶ್ ದುಬೆ

ಅರುಣಾಚಲ
1. ಕಿರೆನ್ ರಿಜಿಜು

ರಾಜಸ್ಥಾನ
1. ಗಜೇಂದ್ರ ಸಿಂಗ್ ಶೇಖಾವತ್
2. ಅರ್ಜುನ್ ರಾಮ್ ಮೇಘವಾಲ್
3. ಭೂಪೇಂದರ್ ಯಾದವ್
4. ಭಾಗೀರಥ್ ಚೌಧರಿ

ಹರಿಯಾಣ
1. ಎಂಎಲ್ ಖಟ್ಟರ್
2. ರಾವ್ ಇಂದರ್ಜೀತ್ ಸಿಂಗ್
3. ಕೃಷ್ಣ ಪಾಲ್ ಗುರ್ಜರ್

ಕೇರಳ
1. ಸುರೇಶ್ ಗೋಪಿ
2. ಜಾರ್ಜ್ ಕುರಿಯನ್

ತೆಲಂಗಾಣ
1. ಜಿ ಕಿಶನ್ ರೆಡ್ಡಿ
2. ಬಂಡಿ ಸಂಜಯ್

ತಮಿಳುನಾಡು
1. ಎಲ್ ಮುರುಗನ್

ಜಾರ್ಖಂಡ್
1. ಸಂಜಯ್ ಸೇಠ್
2. ಅನ್ನಪೂರ್ಣ ದೇವಿ

ಛತ್ತೀಸ್‌ಗಢ
1. ತೋಖಾನ್ ಸಾಹು

ಆಂಧ್ರಪ್ರದೇಶ
1. ಡಾ. ಚಂದ್ರಶೇಖರ್ ಪೆಮ್ಮಸಾನಿ
2. ರಾಮ್ ಮೋಹನ್ ನಾಯ್ಡು ಕಿಂಜರಾಪು
3. ಶ್ರೀನಿವಾಸ ವರ್ಮ

ಪಶ್ಚಿಮ ಬಂಗಾಳ
1. ಶಾಂತನು ಠಾಕೂರ್
2. ಸುಕಾಂತ ಮಜುಂದಾರ್

ಪಂಜಾಬ್
1. ರವನೀತ್ ಸಿಂಗ್ ಬಿಟ್ಟು

ಅಸ್ಸಾಂ
1. ಸರ್ಬಾನಂದ ಸೋನೋವಾಲ್
2. ಪಬಿತ್ರಾ ಮಾರ್ಗಹ್ರಿತಾ

ಉತ್ತರಾಖಂಡ
1. ಅಜಯ್ ತಮ್ತಾ

ದೆಹಲಿ
1. ಹರ್ಷ್ ಮಲ್ಹೋತ್ರಾ

ಇದನ್ನೂ ಓದಿ; ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...