HomeಮುಖಪುಟÀ la lanterne 2.0? ಚೈನಾದ ಇತ್ತೀಚಿನ ವಿದ್ಯಮಾನದ ಕುರಿತು ರಾಜಾರಾಂ ತಲ್ಲೂರು

À la lanterne 2.0? ಚೈನಾದ ಇತ್ತೀಚಿನ ವಿದ್ಯಮಾನದ ಕುರಿತು ರಾಜಾರಾಂ ತಲ್ಲೂರು

ಚೀನಾದ ಶಾಂಘೈನಲ್ಲಿ ನಡೆದ ಬಂಡ್ ಸಮ್ಮಿಟ್ ಆರ್ಥಿಕ ಸಮಾವೇಶದಲ್ಲಿ ನೆರೆದಿದ್ದ ಚೀನಾದ ಪ್ರಮುಖ ನಾಯಕರು, ಆರ್ಥಿಕ ಚಿಂತಕರನ್ನು ಉದ್ದೇಶಿಸಿ ಮಾತನಾಡಿದ ಜಾಕ್ ಮಾ, ಚೀನಾದ ಬ್ಯಾಂಕುಗಳು ಖಾಸಗಿ ಲೇವಾದೇವಿಯವರಂತೆ ವರ್ತಿಸುತ್ತಿವೆ ಮತ್ತು ದೇಶದ ಆರ್ಥಿಕ ನಿಯಂತ್ರಣಕ್ಕೆ ಕುಳಿತವರು ‘ಮುದುಕಪ್ಪಗಳು’, ಅವರಿಗೆ ಆಧುನಿಕ ವ್ಯವಹಾರ ಗೊತ್ತಿಲ್ಲ ಎಂದು ಬಹಿರಂಗವಾಗಿ ಟೀಕಿಸಿದ್ದರು.

- Advertisement -
- Advertisement -

17 ನೇ ಶತಮಾನದ ಕೊನೆಯ ವೇಳೆಗೆ ಸಂಭವಿಸಿದ ಫ್ರೆಂಚ್ ಕ್ರಾಂತಿಯ ಪ್ರಸಿದ್ಧ ಘೋಷಣೆ “ಲಾ ಲಾಂಟರ್ನ್” ಅಂದರೆ ಸಿರಿವಂತರನ್ನು “ಲೈಟುಕಂಬಕ್ಕೆ ನೇಣುಹಾಕಿ” ಎಂದು!

ಇಂದು ಜಗತ್ತಿನಾದ್ಯಂತ ಇಂಟರ್‌ನೆಟ್ ಮತ್ತು ಅದರ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಸಂಭವಿಸಿರುವ ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳು ಎಷ್ಟು ಗಂಭೀರ ಸ್ವರೂಪದವೆಂದರೆ, ಜಗತ್ತಿನಾದ್ಯಂತ ಸರ್ಕಾರಗಳು ಪರಿಸ್ಥಿತಿ ತಮ್ಮ ಕೈಮೀರಿ ಹೋಗುತ್ತಿರುವುದನ್ನು ಮನಗಂಡಿವೆ; ಅದನ್ನು ಮತ್ತೆ ಕೈವಶ ಮಾಡಿಕೊಳ್ಳಲು ಹೆಣಗಾಡುತ್ತಿವೆ.

ಗೂಗಲ್, ಫೇಸ್‌ಬುಕ್, ಅಮೆಜಾನ್, ಆಪಲ್‌ನಂತಹ ಬೃಹತ್ ಕಾರ್ಪೊರೇಷನ್‌ಗಳು ತಮ್ಮ ದೇಶದ ಸರ್ಕಾರಗಳನ್ನೂ ಮೀರಿ ಬೆಳೆಯತೊಡಗಿರುವುದನ್ನೂ, ಅದರೊಂದಿಗೆ AI, ಬಿಗ್‌ಡೇಟಾ, ಬ್ಲಾಕ್ ಚೈನ್ ನಂತಹ ತಂತ್ರಜ್ಞಾನಗಳು ಈ ಕಾರ್ಪೊರೇಷನ್‌ಗಳಿಗೆ ಅಪರಿಮಿತ ತಾಕತ್ತು ತಂದುಕೊಡುತ್ತಿರುವುದನ್ನೂ ಗಮನಿಸಿದ ಅಮೆರಿಕ, ಯುರೋಪಿನ ಸರ್ಕಾರಗಳು, ತಮ್ಮ ಅಸ್ತಿತ್ವದ ಪ್ರಶ್ನೆ ಬಂದಾಗ ಹೇಗೆ ಪ್ರತಿಕ್ರಿಯಿಸಿದವು ಎಂಬುದನ್ನು ಜಗತ್ತು ಕಳೆದ ವರ್ಷವಿಡೀ ಕಂಡಿವೆ. ಈ ಕಾರ್ಪೊರೇಷನ್‌ಗಳ ಮುಖ್ಯಸ್ಥರು ಸರ್ಕಾರಗಳ ಎದುರು ಮಂಡಿಯೂರಿ, ತನಿಖೆಗೆ ಒಳಗಾಗಿ, ಸ್ಪರ್ಧಿಗಳನ್ನು ಹೊಸಕಿಹಾಕಲಾಗುತ್ತಿದೆ ಎಂಬ ತಮ್ಮ ಮೇಲಿನ ದೂರಿಗೆ ಸ್ಪಷ್ಟೀಕರಣ ಕೊಡುತ್ತಿದ್ದಾರೆ.

ಇದು, ಸಾಂಪ್ರದಾಯಿಕ ಸರ್ಕಾರಗಳು ಮತ್ತು ಬೃಹತ್ ಟೆಕ್ ಕಂಪನಿಗಳು ಜನತೆಯ ಮೇಲೆ ನಿಯಂತ್ರಣ ಹೊಂದುವುದಕ್ಕಾಗಿ ನಡೆಸಿರುವ ಮೇಲಾಟವಾಗಿದ್ದು, ಅಂತಿಮವಾಗಿ ಯಾರು ಹೆಚ್ಚು ಬಲಶಾಲಿಗಳು ಎಂಬ ಕುರಿತಾದ ನಿರ್ಣಾಯಕ ಜಗಳ ಇದಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಜಗತ್ತಿನಾದ್ಯಂತ ಬಡವರು ಮತ್ತು ಸಿರಿವಂತರ ನಡುವಿನ ಅಂತರ ಹೆಚ್ಚುತ್ತಿರುವುದು ಮತ್ತು ಪ್ರಜಾಪ್ರಭುತ್ವದ ಮೂಲ ಉದ್ದೇಶಗಳನ್ನು ಈ ಅಂತರ ನಾಶಪಡಿಸುತ್ತಿರುವುದಕ್ಕೆ ವ್ಯಕ್ತವಾಗುತ್ತಿರುವ ಸಾರ್ವಜನಿಕ ಪ್ರತಿರೋಧವನ್ನು ಇವೆರಡೂ ಸಾಂಸ್ಥಿಕ ರೂಪಗಳು ತಮ್ಮ ಲಾಭಕ್ಕಾಗಿ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಿವೆ.

ಊರಿಗೊಂದು ದಾರಿಯಾದರೆ ಪೋರನಿಗೆ ಇನ್ನೊಂದೇ ದಾರಿ ಎಂದು ತನ್ನದೇ ಜಗತ್ತು ಸೃಷ್ಟಿಸಿಕೊಂಡು, ಈಗ ಕೊರೊನಾ ಕಾಲದಲ್ಲಂತೂ ತನ್ನ ಜಗತ್ತೇ ಬೇರೆ ಎಂಬ ಮಟ್ಟಿಗೆ ಪ್ರತ್ಯೇಕವಾಗಿ ಕುಳಿತಿರುವ ಚೀನಾ ಕೂಡ ಇಂತಹದೊಂದು ಆರ್ಥಿಕ ಅಸಮಾನತೆಯ ಚಿಂತೆಗೆ ಹೊರತಲ್ಲ. 80ರ ದಶಕದಲ್ಲಿ ಚೀನಾದ ಆರ್ಥಿಕತೆಯನ್ನು ಉದಾರೀಕರಣಗೊಳಿಸಿದ ತೆಂಗ್ ಸಿಯಾವ್ ಪಿಂಗ್ (Deng Xiaoping) ನೀಡಿದ್ದ “ಬದಲಾವಣೆಗೆ ತೆರೆದುಕೊಳ್ಳಿ”, “ಸಿರಿವಂತಿಕೆಯಿಂದ ಪ್ರಸಿದ್ಧಿಯೆಡೆಗೆ” ಎಂಬ ಎರಡನೇ ಕ್ರಾಂತಿಯ ಮಂತ್ರಗಳೀಗ ಚೀನಾದಲ್ಲಿ ಒಂದು ಸುತ್ತು ಪೂರೈಸಿವೆ. ಆಧುನಿಕ ಟೆಕ್ ಕಂಪನಿಗಳ ನಾಗಾಲೋಟಕ್ಕೆ ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ತನ್ನ ಪ್ರತಿಕ್ರಿಯೆಯ ವಿಧದಲ್ಲಿ ಚೀನಾ ಭಿನ್ನವಾಗಿ ನಿಂತಿದೆ. ಈ ಕಾರಣಕ್ಕಾಗಿಯೂ, ಇಂದು ಅಲ್ಲಿನ ದೊಡ್ಡ ಟೆಕ್ ಕಂಪನಿ “ಆಲಿಬಾಬಾ” ಸಂಸ್ಥೆಯ ಸಂಸ್ಥಾಪಕ ಜಾಕ್ ಮಾ ಅವರು ಸುದ್ದಿಯಲ್ಲಿದ್ದಾರೆ.

PC : Alizila.com

2007ರಲ್ಲಿ, ಐಟಿಗೆ ಸಂಬಂಧಿಸಿದಂತೆ ಬೇರೆ ದೇಶಗಳಿಗಿಂತ ಒಂದು ಹೆಜ್ಜೆ ಮುಂದೆ ಇರುವ ಭಾರತದಲ್ಲೇ ಏನಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು, ಆಗಿನ ಐಟಿ ದೈತ್ಯ ಇನ್ಫೋಸಿಸ್‌ನ ನಾರಾಯಣಮೂರ್ತಿಯವರು ಒಳ್ಳೆಯ ರಾಷ್ಟ್ರಪತಿ ಆಗಬಲ್ಲರು ಎಂದದ್ದು ಎಷ್ಟರಮಟ್ಟಿಗೆ ಅಲೆ ಸೃಷ್ಟಿಸಿತೆಂದರೆ, ಅಲ್ಲಿಯತನಕ ಭಾರತದ ’ಬ್ಯುಸಿನೆಸ್ ಜಗತ್ತಿನ ಗೋಲ್ಡ್ ಹ್ಯಾಂಡ್’ ಅನ್ನಿಸಿದ್ದ ನಾರಾಯಣಮೂರ್ತಿ, ಆ ಬಳಿಕ ಏಳುಗತಿ ಕಾಣಲೇ ಇಲ್ಲ. ಅವರ ಮೈಸೂರು ಕ್ಯಾಂಪಸ್‌ನ ’ರಾಷ್ಟ್ರಗೀತೆ’ ವಿವಾದ ಮತ್ತಿತರ ಹಲವು ವಿವಾದಗಳು ಅವರು ಮತ್ತೆಂದೂ ರಾಷ್ಟ್ರಪತಿ ಕ್ಯಾಂಡಿಡೇಟ್ ಆಗಿ ಪ್ರ್ರೊಜೆಕ್ಟ್ ಆಗದಂತೆ ಮಾಡಿಬಿಟ್ಟವು. ಮೇಲುನೋಟಕ್ಕೆ ಇದು ‘ಆರ್ಥಿಕ ಅಸಮಾನತೆಯ ವಿರುದ್ಧ ಇರುವ ಸಹಜ ಸಿಟ್ಟು’ ಅನ್ನಿಸಿದರೂ, ಇಂದು ಜಾಗತಿಕವಾಗಿ ನಡೆದಿರುವ ಬೆಳವಣಿಗೆಗಳೂ ಇದೇ ಹಾದಿಯಲ್ಲಿರುವುವುದೇ. ಈ ಬೆಳವಣಿಗೆಯ ಹಿಂದಿರಬಹುದಾದ ರಾಜಕೀಯ, ಸಾಮಾಜಿಕ, ಆರ್ಥಿಕ ಮಗ್ಗುಲುಗಳತ್ತ ನಮ್ಮ ಗಮನ ಸೆಳೆಯುತ್ತವೆ.

ಇಂಗ್ಲಿಷ್ ಮೇಸ್ಟ್ರ ಬಾಯಿ ಬಂದ್!

ಜಾಕ್ ಮಾ ಎಂಬ ಇಂಗ್ಲಿಷ್ ಮೇಸ್ಟ್ರು, ಉದಾರೀಕರಣಗೊಂಡ ಚೀನಾದ ಐಕಾನ್ ಆದದ್ದೇ ಒಂದು ಸಾಹಸಗಾಥೆ. ಇಂದು ಆನ್‌ಲೈನ್ ಮಾರಾಟ ಸಂಸ್ಥೆಯ ಅಮೆಜಾನ್‌ಗೆ ಸರಿಮಿಗಿಲೆನ್ನುವಂತೆ ಬೆಳೆದು ನಿಂತಿರುವ ’ಆಲಿಬಾಬಾ’ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜಿನಲ್ಲಿ ನೋಂದಣಿಗೊಂಡಾಗ (2014) ಚೀನಾ ಸಂಭ್ರಮಿಸಿತ್ತು. ಚೀನಾ ಸರ್ಕಾರ ಆಗ ಒಂದು ಹಂತದಲ್ಲಿ ಆಲಿಬಾಬ ಇಂಟರ್ನೆಟ್‌ನಲ್ಲಿ ನಕಲಿ ಮಾಲುಗಳನ್ನು ಮಾರುತ್ತದೆ ಎಂದು ಆಪಾದಿಸಿತ್ತು. ಅದನ್ನು ಬಹಿರಂಗವಾಗಿಯೇ ವಿರೋಧಿಸಿದ ಜಾಕ್ ಮಾ, ಆ ಆಪಾದನೆ ಮಾಡಿದ ಚೀನಾದ ಇಲಾಖೆಯನ್ನು ಕಟುವಾಗಿ ಟೀಕಿಸಿದ್ದರು. ಜನ ಜಾಕ್ ಮಾ ಬೆಂಬಲಕ್ಕೆ ನಿಂತದ್ದರಿಂದ, ಚೀನಾ ಸರ್ಕಾರ ತನ್ನ ದೂರಿನಿಂದ ಹಿಂದೆ ಸರಿಯಬೇಕಾಯಿತು. ಅದು ಚೀನಾದಲ್ಲಿ ಬಿಗ್ ಟೆಕ್ ಕಂಪನಿಗಳ ಆರಂಭ. ಅಲ್ಲಿಂದೀಚೆಗೆ ಜಾಕ್ ಮಾ ಚೀನಾದಲ್ಲಿ ಸೆಲೆಬ್ರಿಟಿ ಮತ್ತು ಜಾಗತಿಕ ಮುಖವಾಗಿ ಬದಲಾಗಿಬಿಟ್ಟರು.

ಅದಾಗಿ ಇಂದು ಐದು ವರ್ಷದ ಬಳಿಕ, ಸರ್ಕಾರದ ವಿರುದ್ಧ ಜಾಕ್ ಮಾ ಮಾಡಿದ ಅಂತಹದೇ ಒಂದು ಬಹಿರಂಗ ಟೀಕೆ ಎಷ್ಟು ಗಂಭೀರ ಸ್ವರೂಪ ತಳೆದಿದೆ ಎಂದರೆ, ಕಳೆದ ಮೂರು ತಿಂಗಳುಗಳಿಂದ, ಜಾಕ್ ಮಾ ಎಲ್ಲಿದ್ದಾರೆ ಎಂಬುದು ಸಾರ್ವಜನಿಕವಾಗಿ ಗೊತ್ತಿಲ್ಲ!

ಆದದ್ದು ಇಷ್ಟು. ಇದೇ ಅಕ್ಟೋಬರ್ 24ರಂದು ಚೀನಾದ ಶಾಂಘೈನಲ್ಲಿ ನಡೆದ ಬಂಡ್ ಸಮ್ಮಿಟ್ ಆರ್ಥಿಕ ಸಮಾವೇಶದಲ್ಲಿ ನೆರೆದಿದ್ದ ಚೀನಾದ ಪ್ರಮುಖ ನಾಯಕರು, ಆರ್ಥಿಕ ಚಿಂತಕರನ್ನು ಉದ್ದೇಶಿಸಿ ಮಾತನಾಡಿದ ಜಾಕ್ ಮಾ, ಚೀನಾದ ಬ್ಯಾಂಕುಗಳು ಖಾಸಗಿ ಲೇವಾದೇವಿಯವರಂತೆ ವರ್ತಿಸುತ್ತಿವೆ ಮತ್ತು ದೇಶದ ಆರ್ಥಿಕ ನಿಯಂತ್ರಣಕ್ಕೆ ಕುಳಿತವರು ‘ಮುದುಕಪ್ಪಗಳು’, ಅವರಿಗೆ ಆಧುನಿಕ ವ್ಯವಹಾರ ಗೊತ್ತಿಲ್ಲ ಎಂದು ಬಹಿರಂಗವಾಗಿ ಟೀಕಿಸಿದ್ದರು. “There’s no systemic financial risks in China because there’s no system in China,’” ಎಂದಿದ್ದರು.

ಇದು ಎಷ್ಟು ದುಬಾರಿ ಭಾಷಣ ಆಯಿತೆಂದರೆ, ಅದಾಗಿ ಒಂದೇ ವಾರದಲ್ಲಿ ಜಾಕ್ ಮಾ ಅವರಿಗೆ ಸೇರಿದ Ant Group Co.ನ ಹೊಸ ಶೇರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿ 34.5ಬಿಲಿಯ ಡಾಲರ್ ಸಂಗ್ರಹಿಸುವ ಯೋಜನೆಯನ್ನು ಚೀನಾ ಸರ್ಕಾರ ಅಮಾನತಿನಲ್ಲಿರಿಸಿತು. ಆಲಿಬಾಬಾ ಗುಂಪಿನ ವಿರುದ್ಧ ಏಕಸ್ವಾಮ್ಯ-ಸ್ಪರ್ಧಿಗಳ ಹತ್ತಿಕ್ಕುವಿಕೆಯ ದೂರು ಹೊರಿಸಿ, ಆಂಟಿಟ್ರಸ್ಟ್ ತನಿಖೆಗಳನ್ನು ಆರಂಭಿಸಿತು. ಈಗ ಜಾಕ್ ಮಾ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವು ಮಾಧ್ಯಮಗಳು ಅವರು ಸರ್ಕಾರದ ಆದೇಶದ ಮೇರೆಗೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದರೆ, ಇನ್ನು ಕೆಲವರು ಅವರು ಸರಕಾರದ ವಶದಲ್ಲಿರಬಹುದು ಎನ್ನುತ್ತಾರೆ; ಆದರೆ ಯಾವುದೂ ಸ್ಪಷ್ಟವಿಲ್ಲ. ಚೀನಾ ಸರ್ಕಾರವು ಆಲಿಬಾಬಾ ಗುಂಪಿನ ಮೇಲೆ ನಡೆದಿರುವ ತನಿಖೆ ಹಾಗೂ ಜಾಕ್ ಮಾ ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ವರದಿಗಳನ್ನು ಪ್ರಕಟಿಸಬಾರದೆಂದು ವಿಧಿಸಿದೆ. ಸ್ವತಃ ಚೀನಾ ಅಧ್ಯಕ್ಷರು ಈ ತೀರ್ಮಾನದ ಹಿಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿನ ಸರ್ಕಾರಿ ಪತ್ರಿಕೆ ಪೀಪಲ್ಸ್ ಡೈಲಿ, ಈ ರೀತಿಯ ಮಾರುಕಟ್ಟೆ ಸಾಂದ್ರತೆಯ ಬಗ್ಗೆ ಕಣ್ಣಿಡುವುದು ಆರ್ಥಿಕತೆಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿತ್ತು. ಜಾಕ್ ಮಾ ಅವರ ಕಂಪನಿಯಲ್ಲಿ, ಚೀನಾದಲ್ಲಿ ರಾಜಕೀಯವಾಗಿ ಬಲಾಢ್ಯರಾದವರ ಹೂಡಿಕೆಗಳಿದ್ದವು; ಹಾಗಾಗಿ ಇದು ಚೀನಾದ ಆಂತರಿಕ ರಾಜಕೀಯ ಮೇಲಾಟದ ಫಲಿತಾಂಶವೂ ಇರಬಹುದೆಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಇದಾದ ಮೇಲೆ ಆಲಿಬಾಬಾ ಶೇರು ಮೌಲ್ಯ ಮಾರುಕಟ್ಟೆಯಲ್ಲಿ 30% ಕುಸಿದಿದೆ.

PC : MSN.com

ತನಗೆ ಸವಾಲು ಹಾಕಿದವರನ್ನು ಮಟ್ಟಹಾಕುವ ಚೀನಾದ ಈ ಪರಿ ಹೊಸದಲ್ಲ. ಕಲಾವಿದ ಅಯಿ ವೇಯಿ ವೇಯಿಯಿಂದ (2011) ಆರಂಭಿಸಿ, ಇಲ್ಲಿಯ ತನಕ ಹಲವಾರು ಮಂದಿ ಚೀನಾದಲ್ಲಿ ಸರ್ಕಾರವನ್ನು ವಿರೋಧಿಸಿ ಸೆರೆವಾಸ ಅನುಭವಿಸಿದ್ದಿದೆ. 2021 ಮೊದಲ ವಾರದಲ್ಲಿ, ಕೊರೊನಾ ನಿರ್ವಹಣೆಗಾಗಿ ಚೀನಾ ಸರ್ಕಾರವನ್ನು ಟೀಕಿಸಿ, ಅಧ್ಯಕ್ಷರನ್ನು ‘ಜೋಕರ್’ ಎಂದ ರಿಯಲ್ ಎಸ್ಟೇಟ್ ಕುಳ ರೆನ್ ಜಿಖಿಯಾಂಗ್ ಅವರನ್ನು ಬಂಧಿಸಿ, 18ವರ್ಷಗಳ ಸೆರೆವಾಸ ವಿಧಿಸಲಾಗಿದೆ. 2018 ಫೆಬ್ರವರಿಯಲ್ಲಿ, ಉದ್ಯಮಿವು ಸಿಯಾವೊಹುಯ್ ವಂಚನೆ ಮಾಡಿದ್ದಾರೆ ಎಂದು ಬಂಧಿಸಿ, 18 ವರ್ಷಗಳ ಅವಧಿಗೆ ಸೆರೆಗೆ ಹಾಕಲಾಗಿದೆ. 2017ರಿಂದ ಟುಮಾರೊ ಗ್ರೂಪ್‌ನ ಸಿಯಾವೊ ಜಿಯಾನುವಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. 2015ರಲ್ಲಿ ಶಾಂಘೈನ ಫೋಸುನ್ ಇಂಟರ್ನ್ಯಾಷನಲ್ ಸಂಸ್ಥೆಯ ಗುವೊ ಗುವಾನ್ಚಾಂಗ್ ಹಲವಾರು ದಿನಗಳ ಕಾಲ ಕಾಣೆ ಆಗಿದ್ದರು. ಹಿಂದಿರುಗಿದ ಬಳಿಕ, ತಾನು ತೆರಿಗೆ ಅಧಿಕಾರಿಗಳಿಗೆ ಸಹಕರಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ದೇಶೀಯರನ್ನು ಮಾತ್ರವಲ್ಲದೇ ಹಾಂಕಾಂಗ್ ವಿವಾದದ ಸಂಬಂಧ, ಗುಪ್ತಚರ್ಯೆಯ ಆರೋಪದಲ್ಲಿ ಸ್ವೀಡನ್, ಕೆನಡಾದ ನಾಗರಿಕರನ್ನೂ ಚೀನಾ ಬಂಧಿಸಿದ ಸುದ್ದಿಗಳಿವೆ. ಜೊತೆಗೆ, ಅಧ್ಯಕ್ಷ ಕ್ಸಿ, ಚೀನಾದ ಖಾಸಗಿ ಕಂಪನಿಗಳಲ್ಲಿ ಅವರ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣ ಹೆಚ್ಚಿಸಲು, ಖಾಸಗಿ ಸಂಸ್ಥೆಗಳು ಸರ್ಕಾರದ ಸೇವೆಯಲ್ಲಿ ತೊಡಗಲು ಮತ್ತು ಹೊಸ ವಿಧದ ಖಾಸಗಿ ವ್ಯವಹಾರಗಳಿಗೆ ಸರ್ಕಾರಿ ಬ್ಯಾಂಕುಗಳಿಂದ ಸಾಲ ನಿರಾಕರಿಸಲು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷದ ಆರಂಭದಲ್ಲಿ ಕೊರೊನಾ ಕಾರಣಕ್ಕೆ ಜಾಗತಿಕವಾಗಿ ಸುದ್ದಿಯಲ್ಲಿದ್ದ ಚೀನಾ ಈ ಬಾರಿ ಸಾಮಾಜಿಕ- ಆರ್ಥಿಕ ಚೇತರಿಕೆಯ ಹಾದಿಯಲ್ಲಿದೆ ಎನ್ನಲಾಗುತ್ತಿದ್ದರೂ, ಅದರ ಜಾಗತಿಕ ಸಂಬಂಧಗಳು ಸೀದುಹೋಗಿವೆ. ಈ ಹಂತದಲ್ಲಿ, ಆರ್ಥಿಕ ಅಸಮಾನತೆಯ ಕುರಿತು ಏಳುತ್ತಿರುವ ಜಾಗತಿಕ ಕಳವಳಗಳಿಗೆ ಮತ್ತು ಸರ್ಕಾರಗಳು-ಖಾಸಗಿ ಕಾರ್ಪೊರೇಶನ್‌ಗಳ ನಡುವಿನ ಪಾರಮ್ಯದ ಹಗ್ಗಜಗ್ಗಾಟಕ್ಕೆ ಚೀನಾ ಕಂಡುಕೊಂಡಿರುವ ಈ ಕಟುವಾದ, ಅಪಾರದರ್ಶಕ ಮಾರ್ಗವು ಉಳಿದ ದೇಶಗಳಿಗೆ ಮಾರ್ಗದರ್ಶಿಯಾಗದಿದ್ದರೆ ಸಾಕು. ಏಕೆಂದರೆ, ಜಗತ್ತಿನ ಯಾವುದೇ ದೇಶದ ಸರ್ಕಾರ, ಇವತ್ತಿಗೂ ಟೆಕ್ ಕಂಪನಿಗಳ ಬೆಳವಣಿಗೆಯ ಈ ವೇಗಕ್ಕೆ ಹೊಂದಿಕೊಂಡಿಲ್ಲ.

ಆತ್ಮನಿರ್ಭರ ಚೀನಾ

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶಗಳಾದ ಚೀನಾ ಮತ್ತು ಭಾರತಗಳ ನಡುವೆ ದೊಡ್ಡ ವ್ಯತ್ಯಾಸ ಎಂದರೆ ಚೀನಾದ ಮಾತು ಕಡಿಮೆ-ಹೆಚ್ಚು ದುಡಿಮೆ. ಹಾಗಾಗಿ ಭಾರತದ ಆತ್ಮನಿರ್ಭರತೆ ಬಡಾಯಿಯಾಗಿಯೇ ಕೇಳಿಸುತ್ತದೆ. ಜಗತ್ತಿನ ಎಲ್ಲ ದೇಶಗಳಿಗೆ ಬಹುತೇಕ ಎಲ್ಲವನ್ನೂ ರಫ್ತು ಮಾಡುವ ಚೀನಾ, ಬೇರೆ ದೇಶಗಳ ಜೊತೆ ವಾಣಿಜ್ಯ ಅಸಮತೋಲನ ಹೊಂದಿರುವುದು ತೀರಾಕಡಿಮೆ; ಅದೂ ಕೂಡ ಜಪಾನ್, ಕೊರಿಯಾ, ಥೈಪೆಗಳಿಂದಲೇ ಅದರ ಆಮದಿನ ಬಹುಪಾಲು ಸರಿದೂಗುತ್ತದೆ.

ಅಮೆರಿಕ, ಯುರೋಪಿನ ಜರ್ಮನಿ ಹೀಗೆ ಕಚ್ಛಾ ಪೆಟ್ರೋಲಿಯಂ, ಇಂಟೆಗ್ರೇಟೆಡ್ ಸರ್ಕ್ಯೂಟು, ಕಾರುಗಳನ್ನು ತರಿಸಿಕೊಳ್ಳುವ ಚೀನಾ ಉಳಿದಂತೆ ತನ್ನನ್ನು ಬಹುತೇಕ ಆತ್ಮನಿರ್ಭರಗೊಳಿಸಿಕೊಂಡಿರುವುದರಿಂದ, ಅಂದರೆ ಬಹುತೇಕ ದೇಶಗಳಲ್ಲಿ ಟ್ರೇಡ್ ಸರ್‌ಪ್ಲಸ್ ಹೊಂದಿರುವುದರಿಂದ ಆಗಿರುವ ಲಾಭ ಎಂದರೆ, ಜಗತ್ತು ವುಹಾನ್ ವೈರಸ್ ಎಂದಾಗಲಾಗಲೀ, ಆ ಬಳಿಕ ಈಗ ಜಾಕ್ ಮಾ “ಕಾಣೆ” ಎಂದು ಜಗತ್ತು ಸುದ್ಧಿಸಂಭ್ರಮ ತೋರಿದಾಗಲಾಗಲೀ ಅದಕ್ಕೆ ಸೊಪ್ಪೇ ಹಾಕುತ್ತಿಲ್ಲ.

ಆರ್ಥಿಕವಾಗಿ ಉದಾರೀಕರಣದ ಜೊತೆಜೊತೆಗೇ ಇಂತಹದೊಂದು ಆತ್ಮನಿರ್ಭರತೆಯನ್ನೂ ಸುಯೋಜಿಸ್ಥಿಕಟ್ಟಿಕೊಂಡು ಬಂದ ಕಾರಣದಿಂದಾಗಿ ಯಾವುದೇ ಅಂತಾರಾಷ್ಟ್ರೀಯ ಸಂಬಂಧದ ಏರಿಳಿತಗಳು ತನ್ನ ಆಂತರಿಕ ಸ್ಥಿತಿಯ ಮೇಲೆ ಪ್ರಭಾವ ಬೀರದಂತೆ ಖಚಿತಪಡಿಸಿಕೊಂಡಿರುವುದು ಗಮನಾರ್ಹ. ಕೇವಲ ಜಾಕ್ ಮಾ ಅವರ ಆಲಿಬಾಬಾವನ್ನೇ ತೆಗೆದುಕೊಂಡರೂ, ಅಮೆರಿಕದಲ್ಲಿ ಅಮೆಜಾನ್ ಮಾರುಕಟ್ಟೆ ಪಾಲು 39%ಇದ್ದರೆ ಚೀನಾದಲ್ಲಿ ಆಲಿಬಾಬಾ ಪಾಲು 58.2%. ಅಮೆಜಾನ್ ಜಗತ್ತಿನಾದ್ಯಂತ ಮಾರಾಟ ಜಾಲ ಹೊಂದಿದ್ದು, ಗಾತ್ರದಲ್ಲಿ ಆಲಿಬಾಬಾಕ್ಕಿಂತ 15 ಪಾಲು ದೊಡ್ಡದಾದರೂ, ಆಲಿಬಾಬಾದ ವ್ಯವಹಾರದ ತಾಕತ್ತು ಅವರಿಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗುವಷ್ಟು ಪ್ರಭಾವೀ ಆಗಿದೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಮಧ್ಯಪ್ರದೇಶ: ಮಹಿಳಾ ವಿರೋಧಿ ಹೇಳಿಕೆ ನೀಡಲು ಬಿಜೆಪಿ -ಕಾಂಗ್ರೆಸ್ ನಡುವೆ ಪೈಪೋಟಿ – ಈ ಸಮಾಜ ಬದಲಾಗುವುದೆಂದು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...