Homeಅಂತರಾಷ್ಟ್ರೀಯ“ಅಪ್ಪನಿಂದ ಒಂದು ದೊಡ್ಡ ಮುತ್ತು!”: ಚೇಗುವಾರ ಕುರಿತು ಆಪ್ತವಾಗಿ ಮಾತಾಡಿದ ಮಗಳು ಅಲೈದಾ...

“ಅಪ್ಪನಿಂದ ಒಂದು ದೊಡ್ಡ ಮುತ್ತು!”: ಚೇಗುವಾರ ಕುರಿತು ಆಪ್ತವಾಗಿ ಮಾತಾಡಿದ ಮಗಳು ಅಲೈದಾ…

ನಾನು ಕೊನೆಯ ಬಾರಿ ತಂದೆಯನ್ನ ನೋಡಿದ್ದು ನನಗೆ ಏಳು ವರ್ಷಗಳಿದ್ದಾಗ. ಬೊಲಿವಿಯಾಗೆ ಹೋಗುತ್ತಾ ನಮ್ಮನ್ನ ಭೇಟಿ ಮಾಡಲು ಬಂದಿದ್ದರು. ನಂತರ ಅವರ ಸಾವಿನ ಸುದ್ಧಿ ತಿಳಿಯಿತು.

- Advertisement -
- Advertisement -

ಕೃಪೆ: ಆಂಧ್ರಜ್ಯೋತಿ

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಚೆಗೆವೆರಾ ವೃತ್ತಿಯಲ್ಲಿ ವೈದ್ಯ. ನಂತರ ಕ್ಯೂಬಾ ವಿಮುಕ್ತಿಗಾಗಿ ಕ್ರಾಂತಿಕಾರಿ ಹೋರಾಟ ಆಯ್ಕೆ ಮಾಡಿಕೊಂಡವನು. 1967ರಲ್ಲಿ ಬೊಲೆವಿಯಾನ್ ಸೈನ್ಯದ ಕೈಯಲ್ಲಿ ಕೊಲೆಯಾದರು. ಆತನ ಎರಡನೆ ಹೆಂಡತಿ ಅಲೈದಾ ಮಾರ್ಚಗೆ ನಾಲ್ಕು ಜನ ಮಕ್ಕಳು. ಅವರಲ್ಲಿ ಅಲೈದಾ ದೊಡ್ಡವಳು. ಅಲೈದಾ ಸಹ ವೈದ್ಯೆಯಾಗಿದ್ದು ಕ್ಯೂಬಾ ಅಲ್ಲದೆ ಹಿಂದುಳಿದ ದೇಶಗಳಲ್ಲಿ ಮಕ್ಕಳ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಲೈದಾಗೆ ಭಾರತ ಹೊಸದಲ್ಲ . ಚೆಗುವೆರಾ ಕೂಡ 1959ರಲ್ಲಿ ಇಲ್ಲಿಗೆ ಬಂದಿದ್ದರು. ಕ್ಯೂಬಾ ಆ ಕ್ರಾಂತಿಯ ಹಿಂದೆ ಇದ್ದ ಒಂದು ಬಲವಾದ ಶಕ್ತಿ ಚೆಗುವೆರಾ. ಜಾಗತಿಕ ಮಟ್ಟದಲ್ಲಿ ಬಂಡಾಯದ ಸಂಕೇತ ಚೆ ಗುವೇರಾ. ಕ್ಯೂಬಾ ಕ್ರಾಂತಿಗೆ ಕಳೆದ ವಾರಕ್ಕೆ 60 ವರ್ಷಗಳು ಪೂರ್ಣಗೊಂಡಿದೆ. ಹಾಗಾಗಿ ಕೇರಳ, ದೆಹಲಿ ಮುಂತಾದ ಹಲವು ಕಡೆ ಕ್ಯೂಬಾ ಕ್ರಾಂತಿ ಕುರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಲೈದಾ ಭಾರತಕ್ಕೆ ಬಂದಿದ್ದಾರೆ. ತನ್ನ ತಂದೆ ಚೆ ಗುವೆರಾ ಬಗೆಗಿನ ನೆನಪುಗಳ ಕುರಿತು ಮಾತನಾಡಿದ್ದಾರೆ. ಅದರ ಅಕ್ಷರ ರೂಪ ಇಲ್ಲಿದೆ.

ಅಪ್ಪನೊಡನೆ ನನ್ನ ಬಾಲ್ಯ

ನನಗೆ ನಾಲ್ಕು ವರ್ಷ ವಯಸ್ಸಿದ್ದಾಗ ನಮ್ಮ ತಂದೆ ನಮ್ಮನ್ನ ಬಿಟ್ಟು ಕ್ರಾಂತಿಕಾರಿ ಮಾರ್ಗದಲ್ಲಿ ಹೊರಟುಬಿಟ್ಟರು. ಆತ ಅಜ್ಞಾತವಾಗಿ ಇರುತ್ತಿದ್ದರು. ಅಲ್ಲಿಂದಲೇ ಪತ್ರಗಳನ್ನು ಬರೆಯುತ್ತಿದ್ದರು. ಆಗಾಗ ಮಾರುವೇಶದಲ್ಲಿ ನಮ್ಮನ್ನು ಬೇಟಿಯಾಗುತ್ತಿದ್ದರು. ಆಗಲೂ ಸಹ ‘ನಾನು ನಿಮ್ಮ ತಂದೆಯ ಸ್ನೇಹಿತ’ ಎಂದು ಅರ್ಜೆಂಟೀನಾ ಭಾಷೆಯ ಧಾಟಿಯಲ್ಲಿ ಹೇಳಿದ್ದು ನನಗೆ ನೆನಪಿದೆ. ಆತನೆ ನನ್ನ ತಂದೆ ಎಂದು ನಾನು ಕಂಡುಹಿಡಿಯಲಿಲ್ಲ.

 

ಮಾರುವೇಷದಲ್ಲಿ ಅವರು ಬಂದಾಗ ನಡೆದ ಒಂದು ಘಟನೆ ಇನ್ನೂ ನನಗೆ ನೆನಪಿದೆ. ನಾವು ಒಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದೆವು, ನಾನು ಕೆಳಕ್ಕೆ ಬಿದ್ದುಹೋದೆ. ನನ್ನ ತಲೆಗೆ ಪೆಟ್ಟು ಬಿತ್ತು. ಅವರು ವೈದ್ಯರಲ್ಲವೇ! ಓಡಿಬಂದು, ನನ್ನನ್ನು ಮೇಲಕ್ಕೆ ಎತ್ತಿದರು. ನನಗೆ ಚಿಕಿತ್ಸೆ ಮಾಡಲು ಶುರು ಮಾಡಿದರು. ಒಂದು ಬಾರಿ ನನಗೆ ಕೊಟ್ಟ ಸಿಹಿ ತಿಂಡಿಯ ಇಡೀ ಪ್ಯಾಕೆಟನ್ನು ನನ್ನ ತಮ್ಮನಿಗೆ ಕೊಟ್ಟುಬಿಟ್ಟೆ. ಅವರು ತುಂಬಾ ಖುಷಿಪಟ್ಟರು. ‘ನಿನ್ನನ್ನು ನೋಡಿದರೆ ನನಗೆ ಹೆಮ್ಮೆಯೆನಿಸುತ್ತದೆ. ಮಕ್ಕಳಲ್ಲಿ ದೊಡ್ಡವಳಾಗಿ ನಿನ್ನ ಸಿಹಿ ತಿಂಡಿಯೆಲ್ಲ ಅವರಿಗೆ ಕೊಟ್ಟಿದ್ದು ಘನತೆಯ ಕೆಲಸ, ನಾನು ನಿನಗೆ ಮತ್ತೊಂದು ಪ್ಯಾಕೆಟ್ ಕೊಡುತ್ತೇನೆ ಬಿಡು’ ಎಂದಿದ್ದರು.

ನಾನು ಕೊನೆಯ ಬಾರಿ ತಂದೆಯನ್ನ ನೋಡಿದ್ದು ನನಗೆ ಏಳು ವರ್ಷಗಳಿದ್ದಾಗ. ಬೊಲಿವಿಯಾಗೆ ಹೋಗುತ್ತಾ ನಮ್ಮನ್ನ ಬೇಟಿ ಮಾಡಲು ಬಂದಿದ್ದರು. ನಂತರ ಅವರ ಸಾವಿನ ಸುದ್ಧಿ ತಿಳಿಯಿತು.

ಅವರನ್ನೆ ಅನುಸರಿಸುತ್ತಿದ್ದೆ!

ಅಪ್ಪನ ಜೊತೆ ಹೆಚ್ಚು ಕಾಲ ಕಳೆಯದೆ ಹೋದರು ಸಹ ಅವರ ಪ್ರಭಾವ ನನ್ನ ಮೇಲೆ ಬಲವಾಗಿದೆ. ಚಿಕ್ಕಂದಿನ ವಿಷಯಗಳು ನನಗೆ ಕಡಿಮೆ ನೆನಪಿವೆ. ಆದರೂ ಅಪ್ಪನ ವಿಷಯಗಳೆನ್ನೆಲ್ಲ ಅಮ್ಮ ನಮಗೆ ಪ್ರತಿ ಬಾರಿ ಹೇಳುತ್ತಿದ್ದರು. ನಂತರ ನಮ್ಮ ತಂದೆಯ ಬಗ್ಗೆ ‘ಮೋಟಾರ್ ಸೈಕಲ್ ಡೈರೀಸ್’ ನಂತಹ ಪ್ರಕಟಿತ ರಚನೆಗಳು, ಅಪ್ರಕಟಿತ ಪುಸ್ತಕಗಳು, ಪತ್ರಗಳನ್ನು ಓದುತ್ತಿರುವಾಗ ಮತ್ತಷ್ಟು ಅರ್ಥ ಮಾಡಿಕೊಂಡೆ. ಅವರೂ ಇಂದು, ಎಂದಿಗೂ ನನ್ನ ಹಿರೋ, ಒಂದುವೇಳೆ ನಮ್ಮ ತಂದೆ ಬದುಕಿದ್ದರೆ, ಈಗ ನಾನು ಮಾಡುತ್ತಿರುವುದೇನನ್ನು ಮಾಡುತ್ತಿರಲಿಲ್ಲ. ಯಾವಾಗಲೂ ಅವರ ಜೊತೆಯೇ ಇರುತ್ತಿದ್ದೆ. ಅವರನ್ನೇ ಅನುಸರಿಸುತ್ತಿದ್ದೆ.

ಜನರಿಗೆ ಕೊಡುವ ಪ್ರತಿಫಲ… ?

ನಮ್ಮ ತಂದೆ ವೈದ್ಯರಾದ್ದರಿಂದ ನಾನು ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ ಎಂದು ಹಲವಾರು ಜನ ಅಂದುಕೊಳ್ಳುತ್ತಿರುತ್ತಾರೆ. ಅದು ವಾಸ್ತವವಲ್ಲ. ನಮ್ಮ ತಾಯಿ ನಾಲ್ಕು ಮಕ್ಕಳಿಗೆ ಜನ್ಮನೀಡಿದರು. ಪ್ರತಿಬಾರಿಯೂ ಸಿಜೇರಿಯನ್ ಮಾಡಬೇಕಾಗಿ ಬಂದಿತು. ಕೊನೆಯ ಭಾರಿ ಮಾಡಿದಾಗ ಏನೋ ವ್ಯತ್ಯಾಸವಾಯಿತು. ಹೊಲಿಗೆ ಸರಿಯಾಗಿ ಬೀಳಲಿಲ್ಲ. ಇನ್‍ಫೆಕ್ಷನ್ ಆಗಿ ಆ ಜಾಗವನ್ನು ಆಲ್ಕೋಹಾಲ್‍ನಿಂದ ಶುಭ್ರಗೊಳಿಸಲು ನಾನು ಸಹಾಯ ಮಾಡುತ್ತಿದ್ದೆ. ಆಗ ನನ್ನ ವಯಸ್ಸು ಕೇವಲ ನಾಲ್ಕು ವರೆ ವರ್ಷ. ಇಂತಹವೆಲ್ಲ ವೈದ್ಯ ವೃತ್ತಿಯ ಮೇಲೆ ನನ್ನ ಆಸಕ್ತಿಯನ್ನು ಹೆಚ್ಚಿಸಿದವು. ನಾನು ಇಪ್ಪತ್ತ್ಮೂರು ವರ್ಷದಿಂದ ವೈದ್ಯ ವೃತ್ತಿಯಲ್ಲಿ ಇದ್ದೇನೆ. ‘ನಾನು ಚೆ ಗುವೆರಾ ಮಗಳಾದ್ದರಿಂದ , ಜನರು ನನಗೆ ಅಪಾರವಾದ ಪ್ರೀತಿಯನ್ನು ನೀಡುತ್ತಿದ್ದಾರೆ. ಇದಕ್ಕೆ ಬದಲಾಗಿ ನಾನೇನು ನೀಡಬಲ್ಲೆ?’ ಎಂದು ನನ್ನನ್ನು ನಾನು ಪ್ರಶ್ನಿಸಿಕೊಂಡಾಗ, ಜನಸಾಮಾನ್ಯರ ಆರೋಗ್ಯದ ಬಗ್ಗೆ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗ್ಗೆ ಶ್ರಧ್ದೆ ತೋರಿಸುವುದು ಅವರಿಗೆ ನಾನು ತಿರುಗಿ ನೀಡುವ ಪ್ರತಿಫಲ ಎಂದಿನ್ನಿಸುತ್ತದೆ. ಏಕೆಂದರೆ ಮಕ್ಕಳೇ ನಮ್ಮ ಭವಿಷ್ಯವಾಗಿದ್ದಾರೆ.

ಮಕ್ಕಳಾ ಅಥವಾ ಹೋರಾಟವಾ?

ಯಾರೋ ಒಂದು ಬಾರಿ ಕೇಳಿದರು. ಡಾಕ್ಟರ್, ನಿಮ್ಮ ಮಕ್ಕಳು ಒಂದು ಕಡೆ, ಕ್ರಾಂತಿಕಾರಿ ಹೋರಾಟ ಒಂದು ಕಡೆ ಆದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದಾಗ ‘ಹೋರಾಟವನ್ನೇ’ ಎಂದಿದ್ದೇನೆ. ಏಕೆಂದರೆ ನಾನು ಬೆಳೆದ ಘನತೆಯ ರೀತಿಯಲ್ಲಿಯೇ ನನ್ನ ಮಕ್ಕಳು ಬೆಳೆಯಬೇಕೆಂದು ಬಯಸುತ್ತೇನೆ. ನಾನು ಸಹ ಸಂತೋಷವನ್ನು, ಒಳ್ಳೆಯ ವಸ್ತುಗಳನ್ನು ಬಯಸುತ್ತೇನೆ. ಆದರೆ ಅವುಗಳಿಗಾಗಿ ಮನುಷ್ಯತ್ವ ಬೆಳೆಯಲು ಅಡ್ಡಿಯಾದರೆ ಆದರ್ಶಗಳನ್ನು ಬಿಟ್ಟುಕೊಡುವುದಿಲ್ಲ. ನಾನು ಎಂದಿಗೂ ಒಪ್ಪಿಕೊಳ್ಳದ ವಿಷಯಗಳು ಎರಡು ವಸಹಾತು ಆಳ್ವಿಕೆ ಮತ್ತು ಜನಾಂಗೀಯ ತಾರತಮ್ಯ

ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ

ಚೆ ಹೆಸರಿನಲ್ಲಿ ನಡೆಯುವ ವ್ಯಾಪಾರವನ್ನು ಒಪ್ಪಿಕೊಳ್ಳುವುದಿಲ್ಲ

ಚೆ ಗುವೆರಾ ಪರಂಪರೆಯನ್ನು ಆರ್ಥಿಕ ಪ್ರಯೋಜನಗಳಿಗಾಗಿ ಕೆಲವರು ಉಪಯೋಗಿಸಿಕೊಳ್ಳುತ್ತಿದ್ದಾರೆ ಅದನ್ನು ನಾವು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಒಳ ಉಡುಪುಗಳ ಮೇಲೆ, ಜೀನ್ಸ್ ಪ್ಯಾಂಟ್‍ಗಳ ಮೇಲೆ.. ಎಲ್ಲಿ ಅಂದರೆ ಅಲ್ಲಿ ನಮ್ಮ ತಂದೆಯನ್ನು ಚಿತ್ರಿಸಿ ಮಾರಾಟ ಮಾಡುತ್ತಿದ್ದಾರೆ . ಇದು ಅವರಿಗೆ ಗೌರವ ತರುವ ವಿಷಯವಲ್ಲ. ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಬದಲಾಗಿ ಕಾನೂನು ಹೋರಾಟ ಮಾಡುತ್ತೇವೆ.

ಸಮಸ್ಯೆಗಳ ಪರಿಹಾರಕ್ಕೆ ಉತ್ತರವೇನು ಗೊತ್ತೆ?

ಚೇ ಗುವೇರರನ್ನು ಅವರ ಸ್ವತಂತ್ರ ಅಭಿಪ್ರಾಯಗಳನ್ನು, ಆಲೋಚನಾ ವಿಧಾನವನ್ನು ಭಾರತದ ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಕಳೆದ ಇನ್ನೂರು ವರ್ಷಗಳಿಂದ ಬಂಡವಾಳಶಾಹಿ ನೀತಿ ಜಗತ್ತಿನ ಹಿಡಿತ ಸಾಧಿಸುತ್ತಿದೆ. ಆದರೆ ದಮನಿತ ವರ್ಗಗಳ ಜನಸಾಮಾನ್ಯರು ಎದುರಿಸುತ್ತಿರುವ ಅನೇಕ ಪ್ರಧಾನ ಸಮಸ್ಯೆಗಳಾವುದನ್ನು ಆ ನೀತಿಯಿಂದ ಪರಿಹರಿಸಲಾಗಲಿಲ್ಲ. ದೀನ ದಮನಿತ ಜನರ ಸಮಸ್ಯೆಗಳನ್ನು ಪರಿಹರಿಸುವುದು ಸೋಷಯಲಿಸಂ, ಕಮ್ಯೂನಿಸಂ ಮಾತ್ರವೇ. ಕ್ಯೂಬಾ ಕ್ರಾಂತಿಯಾಗಿ ಈ ವರ್ಷಕ್ಕೆ 60 ವರ್ಷ. ಆದರೆ ಕ್ರಾಂತಿಯ ಗುರಿ ಇನ್ನೂ ಪೂರ್ತಿಯಾಗಿಲ್ಲ. ಇಲ್ಲಿಯವರೆಗೂ ನಡೆದದ್ದು ಪೂರ್ತಿ ಸಂತೃಪ್ತಿಕರವಾಗಿಲ್ಲ. ಮಾಡಬೇಕಾದ ಕೆಲಸಗಳು ಎಷ್ಟೋ ಬಾಕಿ ಉಳಿದಿವೆ. ಪ್ರಸ್ತುತ ಕಾಲದಲ್ಲಿ ಚೆಗುವೆರಾ ಸಿದ್ಧಾಂತಗಳನ್ನು ಪ್ರಜೆಗಳು ಅನುಸರಿಸುವುದು ಮುಖ್ಯವಾಗಿದೆ. ಎಲ್ಲರಿಗೂ ಒಂದು ಅತ್ಯುತ್ತಮವಾದ ಜಗತ್ತು ಇರಬೇಕೆಂದು ಅವರು ಹೋರಾಡಿದರು. ಎಲ್ಲರಿಗೂ ಅತ್ಯುತ್ತಮವಾದ, ಸಮಾನವಾದ ಅವಕಾಶಗಳಿರುವ ಪ್ರಪಂಚವನ್ನು ರೂಪಿಸುವುದಕ್ಕಾಗಿ ಅವರಂತಹ ಮತ್ತಷ್ಟು ಜನ ಪುರುಷರು, ಮಹಿಳೆಯರ ಅವಶ್ಯಕತೆ ಈ ದಿನಗಳಲ್ಲಿ ಹೆಚ್ಚಾಗಿದೆ.

ತಂದೆಯ ಕೊನೆಯ ಪತ್ರ

ಚೆಗುವೆರಾ ಕುಟುಂಬವಾಗಿ ನಾವು ಪ್ರತ್ಯೇಕವಾದ ಸೌಕರ್ಯಗಳನ್ನು ಎಂದಿಗೂ ಬಯಸಲಿಲ್ಲ. ಅದಕ್ಕೆ ನಮ್ಮ ತಂದೆ ಸಂಪೂರ್ಣ ವಿರುದ್ದ. ನಮ್ಮ ತಾಯಿಯು ಸಹ ಯಾರಿಂದಲೂ ಸಹಾಯವನ್ನು ಬಯಸಲಿಲ್ಲ. ನಾವು ಎಷ್ಟೋ ಕಷ್ಟಗಳನ್ನು ಅನುಭವಿಸಿದೆವು. ತನ್ನ ಹಳೆಯ ಬ್ಲೌಸುಗಳಿಂದ ನಮ್ಮ ತಮ್ಮಂದಿರಿಗೆ ಪ್ಯಾಂಟ್ ಹೊಲಿದು ಕೊಡುತ್ತಿದ್ದರು ಅಮ್ಮ. ಆದರೂ ನಾವು ಸಂತೋಷವಾಗಿ ಇರುತ್ತಿದ್ದೆವು. ಸಾಧಾರಣ ಕ್ಯೂಬಾ ಮಕ್ಕಳ ರೀತಿಯಲ್ಲಿಯೇ ಬೆಳೆದೆವು. ನಾನು ಫಿಡಲ್ ಕ್ಯಾಸ್ಟ್ರೋ ಜೊತೆ ಯಾವುಗಲೂ ಇರುತ್ತಿದ್ದೆ. ಅವರು ಮರಣಿಸುವವರೆಗೂ ಅದು ಮುಂದುವರೆಯಿತು.

ನಮ್ಮ ತಂದೆ ಮರಣಿಸಿದಾಗ, ಆ ಸುದ್ಧಿಯನ್ನು ನಮಗೆ ತಿಳಿಸಬೇಕೆಂದು ಕ್ಯಾಸ್ಟ್ರೋ ಅಂದುಕೊಂಡರು. ಆದರೆ ನಮ್ಮ ತಾಯಿ ಅದಕ್ಕೆ ಒಪ್ಪಲಿಲ್ಲ. ಅದು ನನ್ನ ಜವಾಬ್ದಾರಿ ಎಂದು ನನ್ನ ತಾಯಿ ಹೇಳಿದ್ಧಳಂತೆ. ಆದರೆ ನಮ್ಮ ತಂದೆ ಒಂದು ಪತ್ರ ಬರೆದಿದ್ದಾರೆಂದು, ಒಂದು ವೇಳೆ ಯುದ್ಧದಲ್ಲಿ ನಾನು ಮರಣಿಸಿದರೆ ಅದನ್ನು ನಮಗೆ ಕೊಡಬೇಕು, ಅವರಿಗಾಗಿ ನಾವು ಅಳಬಾರದೆಂದು ಹೇಳಿದ್ದಾರೆ ಎಂದು ಕ್ಯಾಸ್ಟ್ಟ್ರೋ ಹೇಳಿದ್ದರು. ಮರುದಿನ ನಮ್ಮ ತಾಯಿ ನನ್ನನ್ನು ಕರೆದರು. ಆಕೆ ಕಣ್ಣೀರಿನ ಕೋಡಿಯಾಗಿದ್ದರು. ನನ್ನ ಕೈಯಲ್ಲಿ ಒಂದು ಪತ್ರವನ್ನು ಇಟ್ಟರು. “ಈ ಪತ್ರವನ್ನು ನೀವು ನೋಡುವ ಹೊತ್ತಿಗೆ ನಿಮಗೆ ಗೊತ್ತು – ನಾನು ನಿಮ್ಮ ಜೊತೆ ಇರುವುದಿಲ್ಲ’ ಎಂದು ಬರೆದಿತ್ತು. ನಾನು ಅಳುವುದಕ್ಕೆ ಶುರು ಮಾಡಿದೆ ಅದು ಬಹಳ ಚಿಕ್ಕ ಪತ್ರ. ಅದರ ಕೊನೆಯಲ್ಲಿ “ಅಪ್ಪನಿಂದ ಒಂದು ದೊಡ್ಡ ಮುತ್ತು!” ಎಂದು ಇತ್ತು. ತಂದೆ ಇನ್ನು ನಮಗೆ ಇಲ್ಲವೆಂದು ಅರ್ಥವಾಯಿತು.


ಇದನ್ನೂ ಓದಿ: ಇಂದು ಚೆಗುವಾರ ಜನ್ಮ ದಿನ: ಸಂಗಾತಿ ‘ಚೆ’ ಎಂಬ ವಿಸ್ಮಯಕ್ಕೆ ಸಾವಿಲ್ಲ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...