ಉತ್ತರಪ್ರದೇಶದ ಅಲಿಗಢ್ನ ಕೋಲ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ಸತೀಶ್ ಗೌತಮ್ ಅವರು ಶಾಸಕಿಯ ಜೊತೆಗಿನ ದುರ್ವತನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿ ಸಂಸದ ಸತೀಶ್ ಗೌತಮ್ ಅವರು ವೇದಿಕೆಯಲ್ಲಿ ಶಾಸಕಿ ಮುಕ್ತಾ ರಾಜಾ ಅವರ ಭುಜದ ಮೇಲೆ ಕೈ ಹಾಕಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವೇಳೆ ಶಾಸಕಿ ವಿರೋಧವನ್ನು ವ್ಯಕ್ತಪಡಿಸಿ ತಮ್ಮ ಆಸನವನ್ನು ಬದಲಿಸಿ ಬೇರೆಡೆ ಕುಳಿತುಕೊಂಡಿದ್ದಾರೆ.
ಸೆ.25ರಂದು ಶಾಸಕ ಅನಿಲ್ ಪರಾಶರ್ ಅವರು ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿದ ಅಂಗವಾಗಿ ಅಲಿಗಢದ ಶ್ರೀ ರಾಮ್ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ಸಾರಿಗೆ ಸಚಿವ ದಯಾಶಂಕರ್ ಸಿಂಗ್, ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ, ಮಾಜಿ ಮೇಯರ್ ಶಕುಂತಲಾ ಭಾರತಿ, ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಪೂನಂ ಬಜಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ಸಂಸದ ಸತೀಶ್ ಗೌತಮ್ ಅವರು ಮಹಿಳಾ ಶಾಸಕಿಯ ಭುಜದ ಮೇಲೆ ಕೈಯಿಟ್ಟಿರುವುದು ಕಂಡು ಬಂದಿದೆ. ಇದಕ್ಕೆ ಶಾಸಕರು ವಿರೋಧಿಸಿ ತಮ್ಮ ಕುರ್ಚಿಯನ್ನು ಬದಲಾಯಿಸಿ ವೇದಿಕೆಯ ಮೇಲಿದ್ದ ಮತ್ತೊಂದು ಆಸನದಲ್ಲಿ ಕುಳಿತುಕೊಂಡಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಸಂಸದನ ಅಸಭ್ಯ ವರ್ತನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ. ಇದು ಸುಸಂಸ್ಕೃತ ಬಿಜೆಪಿಯ ನಿಜವಾದ ಮುಖ ಎಂದು ಕಾಂಗ್ರೆಸ್ ನಾಯಕ ಸುರೇಂದ್ರ ರಜಪೂತ್ ಅವರು ಟೀಕಿಸಿದ್ದಾರೆ.
ये हैं अलीगढ़ के सांसद सतीश गौतम। जो सरेआम कार्यक्रम के बीच में विधायिका मुक्ता राजा से छेड़खानी कर रहे हैं। इनकी इस हरकत से विधायिका जी भी काफ़ी असहज महसूस कर रही हैं।
जिस पार्टी के सांसद ही शोहदा हो, उसके छुटभैय्या नेता कैसे होंगे? बाक़ी कार्यकर्ता तो न जाने कैसे-कैसे होंगे?… pic.twitter.com/cSAlEqdvjI
— UP Congress (@INCUttarPradesh) September 29, 2023