Homeಮುಖಪುಟನೆಲಕ್ಕುರುಳಿದ ಅಂಬೇಡ್ಕರ್ ಪ್ರತಿಮೆಯ ತಲೆ: ಈ ನೆಲದ ಹುನ್ನಾರಗಳ ಅನಾವರಣ..

ನೆಲಕ್ಕುರುಳಿದ ಅಂಬೇಡ್ಕರ್ ಪ್ರತಿಮೆಯ ತಲೆ: ಈ ನೆಲದ ಹುನ್ನಾರಗಳ ಅನಾವರಣ..

- Advertisement -
- Advertisement -

ಆಕ್ಟಿವಿಸ್ಟ್, ಸಿನೆಮಾ ನಿರ್ದೇಶಕಿ, ಪತ್ರಕರ್ತೆ, ಬರಹಗಾರ್ತಿಯಾದ ರೇವತಿ ಸುನಾಮಿ ಪೀಡಿತ ಪ್ರದೇಶದ ಪರಿಹಾರ ಕೆಲಸಕ್ಕೆ ನಾಗಪಟ್ಟಣಂಗೆ ಹೋದರು. ಪರಿಹಾರ ಕಾರ್ಯದಲ್ಲೂ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ತಾರತಮ್ಯ ಕಂಡು ರೋಸಿ ಹೋಗಿ ಸಿನೆಮಾ ಮಾಡಿದರು. ಅಷ್ಟಕ್ಕೇ ಸುಮ್ಮನಾಗದೇ, ಶೋಷಿತ ಸಮುದಾಯದ ಮಕ್ಕಳಿಗೆಂದು ‘ವಾನವಿಲ್ (ಕಾಮನಬಿಲ್ಲು)’ ಎಂಬ ಶಾಲೆಯನ್ನು ತೆರೆದರು. ಇಂದು ಆ ಮಕ್ಕಳಿಗೆ ವಿಶಿಷ್ಟ ಲೋಕಜ್ಞಾನವನ್ನು ಕಲಿಸುತ್ತಿರುವ ವಾನವಿಲ್ ರೇವತಿಯ ಕ್ರಿಯಾಶೀಲತೆಗೆ ಸಾಕ್ಷಿ. ಎಲ್ಲ ಜನಪರ ಆಂದೋಲನಗಳ ಒಡನಾಡಿ ರೇವತಿಗೆ ಜಾತಿ ದೌರ್ಜನ್ಯ ಬಹುವಾಗಿ ಕಾಡುವ ವಿಚಾರವಾದ್ದರಿಂದ ಅದರ ಸುತ್ತಲೇ ತಮ್ಮ ಲೇಖನವನ್ನು ಕೇಂದ್ರೀಕರಿಸಿದ್ದಾರೆ. ಈ ಲೇಖನವನ್ನು ಕನ್ನಡಕ್ಕೆ ರಾಜಶೇಖರ್ ಅಕ್ಕಿಯವರು ಅನುವಾದಿಸಿದ್ದಾರೆ

ಆಗಸ್ಟ್ 26ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಮ್ ಎಂಬ ಊರಿನ ವೀಡಿಯೊ ಒಂದು ವೈರಲ್ ಆಗತೊಡಗಿತು. ಅಲ್ಲಿಯ ಪೊಲೀಸ್ ಸ್ಟೇಷನ್ ಎದುರಿಗಿರುವ ವೇದಾರಣ್ಯಮ್ ಬಸ್ ಸ್ಟ್ಯಾಂಡ್‍ನಲ್ಲಿ ಸ್ಥಾಪಿಸಲಾದ ಅಂಬೇಡ್ಕರ್ ಪ್ರತಿಮೆಯ ವೇದಿಕೆಗೆ ಒಬ್ಬ ಯುವಕ ಹತ್ತುವುದನ್ನು ಹಾಗೂ ಡಾ.ಅಂಬೇಡ್ಕರ್ ಅವರ ಸಿಮೆಂಟಿನ ಪ್ರತಿಮೆಯ ಶಿರಚ್ಛೇದ ಮಾಡಿದ್ದನ್ನು ಈ ವೀಡಿಯೊದಲ್ಲಿ ಕಾಣಬಹುದಾಗಿದೆ. ಅಲ್ಲಿ ಜನರ ಒಂದು ದೊಡ್ಡ ಗುಂಪು ಆ ವ್ಯಕ್ತಿಯನ್ನು ಕೇಕೆಹಾಕಿ ಹುರಿದುಂಬಿಸುವುದನ್ನೂ ಕಾಣಬಹುದು.

ಆ ವಿಡಿಯೋ ವೈರಲ್ ಆದ ನಂತರ ಎಲ್ಲೆಡೆಯಿಂದ ಖಂಡನೆಗಳು ಹರಿದುಬಂದವು. ವಿದುತಲೈ ಚಿರತೈಗಲ್ ಕಾಟ್ಚಿ, ತಮಿಳುನಾಡು ಅನ್‍ಟಚಬಿಲಿಟಿ ಇರ್ಯಾಡಿಕೇಷನ್ ಫ್ರಂಟ್ ಹಾಗೂ ಇತರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡವು. ಅವರು ದುಷ್ಕರ್ಮಿಗಳನ್ನು ಗೂಂಡಾ ಕಾಯಿದೆಯ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು. ಘಟನೆಯಾದ ಎರಡು ದಿನಗಳವರೆಗೆ ವೇದಾರಣ್ಯಮ್ ಪಟ್ಟಣವನ್ನು ಪೊಲೀಸ್ ಕಣ್ಗಾವಲಿನಲ್ಲಿ ಇಡಲಾಗಿತ್ತು ಹಾಗೂ ಪೊಲೀಸರು 37 ಜನರನ್ನು ಬಂಧಿಸಿದರು.

ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲು ಒಂದು ಚಿಕ್ಕ ಘಟನೆಯು ಕಾರಣವಾಗಿದೆ ಎಂದು ವರದಿ ಮಾಡಲಾಗಿದೆ. ಒಂದು ಚಿಕ್ಕ ಅಪಘಾತವು ಒಂದು ಚಿಕ್ಕ ಹಿಂದೂ ಸಂಘಟನೆಯ ಒಬ್ಬ ನಾಯಕ ಮತ್ತು ರಾಮಕೃಷ್ಣಪುರಮ್‍ನ ಒಬ್ಬ ದಲಿತ ಯುವಕನ ನಡುವೆ ಜಗಳಕ್ಕೆ ಕಾರಣವಾಯಿತು. ಆದರೆ ಅಲ್ಲಿಯ ಸಾಮಾಜಿಕ ಕಾರ್ಯಕರ್ತರು ಹೇಳುವುದೇನೆಂದರೆ, ಈ ಹಿಂದೂ ಜಾತಿವಾದಿ ಸಂಘಟನೆಯು ಅಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ತೆಗೆದುಹಾಕಬೇಕೆಂದು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ ಹಾಗೂ ಈ ವಿಷಯದಲ್ಲಿ ಕಾನೂನಾತ್ಮಕ ಮಾರ್ಗವನ್ನೂ ಅಳವಡಿಸಿ ವಿಫಲವಾಗಿದ್ದಾರೆ.

ಭಾರತ ಸಂವಿಧಾನದ ಪಿತಾಮಹನ ಪ್ರತಿಮೆಯನ್ನು ಅಲ್ಲಿಂದ ತೆಗೆಯಲು ಇವರು ನೀಡಿರುವ ಕಾರಣ, ಈ ಪ್ರತಿಮೆ ವರ್ಷಕ್ಕೊಂದು ಸಲ ಆಗುವ ದೇವಸ್ಥಾನದ ಮೆರವಣಿಗೆಗೆ ಅಡ್ಡಿಯಾಗುತ್ತದೆ ಎಂಬುದು. ಆದರೆ ಈ ಪ್ರತಿಮೆ ಅದೇ ಸ್ಥಳದಲ್ಲಿ ಅನೇಕ ದಶಕಗಳಿಂದ ಇದೆ ಹಾಗೂ ಇಲ್ಲಿಯವರೆಗೆ ಯಾವ ಮೆರವಣಿಗೆಗೂ ಅಡ್ಡಿಯಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ನ್ಯಾಯಾಲಯವು ಈ ಅರ್ಜಿಯನ್ನು ತಳ್ಳಿಹಾಕಿತು. ಹಾಗೂ ಈ ಜಾತಿಸಂಘಟನೆಯು ತಮಿಳುನಾಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿರುವ ತೀವ್ರಗಾಮಿ ಹಿಂದೂ ಸಂಘಟನೆಗಳಲ್ಲಿ ಒಂದಾಗಿದ್ದು, ಇವುಗಳು ತಮ್ಮ ಗುರಿ ಸಾಧಿಸಲು ಉದ್ವಿಗ್ನತೆಯನ್ನು ಸೃಷ್ಟಿಸುವ ಪರ್ಯಾಯ ದಾರಿಯನ್ನು ಹಿಡಿದಿವೆ.

ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಸಮಯದಲ್ಲಿ ಆದ ಒಂದು ಸಾಮಾನ್ಯ ಜಗಳವನ್ನು ಒಂದು ದೊಡ್ಡ ಘಟನೆಯನ್ನಾಗಿ ಬಿಂಬಿಸಲಾಗಿದೆ. ಆ ಘಟನೆಯಿಂದ ಸಿಟ್ಟಿಗೆದ್ದ ಆ ಗ್ರಾಮದ ದಲಿತರು ಹಿಂದೂ ಜಾತಿವಾದಿ ನಾಯಕ ಪಾಂಡಿಯಾನ್‍ನ ವಾಹನಕ್ಕೆ ಬೆಂಕಿ ಹಚ್ಚಿದರು ಹಾಗೂ ಇದೇ ಕಾರಣವನ್ನಿಟ್ಟುಕೊಂಡು ಆ ಜಾತಿಸಂಘಟನೆಯ ಜನರು ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದರು.

ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳಬಹುದು ಎನ್ನುವ ಆತಂಕದಿಂದ ಹಾಗೂ ಖಂಡನೆಯ ಗಟ್ಟಿ ಧ್ವನಿ ಎತ್ತಿದ ವಿರೋಧಪಕ್ಷವನ್ನು ತಣಿಸುವ ಪ್ರಯತ್ನದಲ್ಲಿ ತಮಿಳುನಾಡು ಸರಕಾರವು ಹೊಸದೊಂದು ಪ್ರತಿಮೆಯನ್ನು ರಾತ್ರೋರಾತ್ರಿ ತಂದು ಪ್ರತಿಷ್ಠಾಪನೆ ಮಾಡಿದರು. ಜೊತೆಗೆ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.

ಆದರೆ ಸೆಪ್ಟೆಂಬರ್ 19 ರಂದು ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಅಂದು ತಮಿಳುನಾಡು ಪೊಲೀಸರು 11 ಜನರ ವಿರುದ್ಧ ಗೂಂಡಾ ಕಾಯಿದೆಯನ್ನು ಹಾಕಿದರು; ಆ 11 ಜನರಲ್ಲಿ 6 ಜನರು ದಲಿತರಾಗಿದ್ದರು.

“ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವ ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಮತ್ತು ದಲಿತರನ್ನು ದಾಳಿ ಮಾಡಲು ಪ್ರಯತ್ನಿಸುತ್ತಿರುವ ಜಾತಿವಾದಿ ಹಿಂದೂ ಶಕ್ತಿಗಳಿಗೆ ಒಂದು ಬಲವಾದ ಸಂದೇಶ ನೀಡುವ ಬದಲಿಗೆ, ಈ ಘಟನೆಯಲ್ಲಿ ದಲಿತರ ಮೇಲೆ ದೋಷಾರೋಪ ಹೊರಿಸುವ ಮೂಲಕ ತಮಿಳುನಾಡು ಸರಕಾರವು ತನ್ನ ಜಾತಿವಾದಿ ಮನಸ್ಥಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ” ಎಂದು ಟಿಎನ್‍ಯುಎಎಫ್‍ನ ಸಾಮ್ಯುವೆಲ್ ರಾಜ್ ಹೇಳಿದ್ದಾರೆ.

ಇದೇ ಅಂಶವನ್ನು ಹೇಳುತ್ತ ವೇದಾರಣ್ಯಮ್‍ನ ಸಾಮಾಜಿಕ ಕಾರ್ಯಕರ್ತ ಬಿರ್ಲಾ ತಂಗದುರೈ ಅವರು “ಸುಮಾರು 500 ಜನರ ದೊಡ್ಡ ಗುಂಪು ಪ್ರತಿಮೆಯನ್ನು ಉರುಳಿಸುವುದನ್ನು ಒಂದು ಸಾರ್ವಜನಿಕ ಉನ್ಮಾದದ ಸಮಾರಂಭದಂತೆ ಆಯೋಜಿಸಿತ್ತು, ಆದರೆ ಆ ವಿಡಿಯೋದಲ್ಲಿ ಅನೇಕರನ್ನು ಸ್ಪಷ್ಟವಾಗಿ ಗುರುತಿಸಬಹುದಾದರೂ ಪೊಲೀಸರು ಆ ಕಡೆಯಿಂದ ಹೆಚ್ಚು ಜನರನ್ನು ಬಂಧಿಸಿಲ್ಲ. ಅದರ ಬದಲಿಗೆ ರಾಮಕೃಷ್ಣಪುರಂನ ನಿರಪರಾಧಿ ಕಟ್ಟಡ ಕಾರ್ಮಿಕರನ್ನು ತಡರಾತ್ರಿ ಬಂಧಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವುದು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಅಪರಾಧವಾಗಿದೆ. ಆದರೆ, ಈ ಸೆಕ್ಷನ್‍ಗಳ ಅಡಿಯಲ್ಲಿ ದಲಿತರನ್ನು ಏಕೆ ಬಂಧಿಸಲಾಗುತ್ತಿದೆ? ಒಂದು ಖಾಸಗಿ ವಾಹನವನ್ನು ಒಡೆದುಹಾಕಿದ್ದಷ್ಟೆ ಅವರು ಮಾಡಿದ್ದು” ಎಂದು ವಾದಿಸಿದರು.

ರಾತ್ರೋರಾತ್ರಿ ಪ್ರತಿಮೆಯನ್ನು ಸ್ಥಾಪಿಸಿ, ಒಂದೆಡೆ ಜಾತಿವಾದಿ ಹಿಂದೂ ಸಂಘಟನೆಯ ನಾಯಕನ್ನು ಬಂಧಿಸಿ ಇನ್ನೊಂದೆಡೆ ಅದಕ್ಕಿಂತ ಹೆಚ್ಚು ಸಂಖ್ಯೆಯ ದಲಿತರನ್ನು ಬಂಧಿಸಿ, ಅವರ ಮೇಲೆ ಗೂಂಡಾ ಕಾಯಿದೆಯನ್ನು ಹೊರಿಸಿರುವುದು ತಮಿಳುನಾಡು ಸರಕಾರದ ಒಂದು ಪ್ರವೃತ್ತಿಯನ್ನು ತೋರಿಸುತ್ತದೆ. ಅವಶ್ಯಕತೆ ಇದ್ದಾಗ ಅಂಬೇಡ್ಕರ್ ಅವರ ಪ್ರಶಂಸೆ ಮಾಡುವುದು ಹಾಗೂ ಅದೇ ಸಮಯದಲ್ಲಿ ಜಾತಿವಾದಿ ಹಿಂದೂ ಸಂಘಟನೆಗಳಿಗೆ ಅಭಯಹಸ್ತ ನೀಡುವುದೇ ಈ ಸರಕಾರದ ನಿಲುವಾಗಿದೆ.

ದ್ರಾವಿಡ ಚಳವಳಿಯ ತವರೂ, ಇಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಡೆಯೆಂದೂ ಭಾವಿಸಲಾದ ತಮಿಳುನಾಡಿನಲ್ಲಿ ಈ ಪರಿಸ್ಥಿತಿ ಇದೆ. ಕೋಮುವಾದವು ಹುಲುಸಾಗಿ ಬೆಳೆಯಲು ಜಾತಿವ್ಯವಸ್ಥೆಯು ತಳಹದಿಯಾಗಿರುವುದೇ ನಿಜವಾದಲ್ಲಿ ತಮಿಳುನಾಡು ‘ಅಭೇದ್ಯ ಕೋಟೆ’ಯಾಗಿ ಉಳಿಯುವುದೇ? ದಲಿತರ ಮೇಲೆ ದೌರ್ಜನ್ಯವೆಸಗುವಲ್ಲಿ ಎಲ್ಲಾ ಪಕ್ಷಗಳೂ ಶಾಮೀಲಾಗುತ್ತವೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿರುವಾಗ ಪ್ರಜಾತಂತ್ರವಾದಿಗಳ ಮುಂದೆ ಇರುವ ದಾರಿಯೇನು? ಇವು ಎಲ್ಲರೂ ಯೋಚಿಸಬೇಕಾದ ಪ್ರಶ್ನೆಗಳಾಗಿವೆ.
ದೇಶಾದ್ಯಂತ ವೈರಲ್ ಆದ ವಿಡಿಯೋ ಹಿಂದೆ ಒಂದು ‘ನಿರ್ಜೀವ’ ಪ್ರತಿಮೆ ಧ್ವಂಸವಾಗಿದ್ದಷ್ಟೇ ಅಲ್ಲ ಎಂಬುದನ್ನು ತಿಳಿಸಲು ಇಷ್ಟೆಲ್ಲಾ ವಿವರಗಳನ್ನು ಒದಗಿಸಬೇಕಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...