Homeಮುಖಪುಟರಸಗೊಬ್ಬರ ಕಾರ್ಖಾನೆಯಿಂದ ಅಮೋನಿಯಾ ಅನಿಲ ಸೋರಿಕೆ: 25ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು!

ರಸಗೊಬ್ಬರ ಕಾರ್ಖಾನೆಯಿಂದ ಅಮೋನಿಯಾ ಅನಿಲ ಸೋರಿಕೆ: 25ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು!

- Advertisement -
- Advertisement -

ಉತ್ತರ ಚೆನ್ನೈನ ಎನ್ನೋರ್‌ನಲ್ಲಿರುವ ರಸಗೊಬ್ಬರ ತಯಾರಿಕಾ ಘಟಕದಿಂದ ಅಮೋನಿಯಾ ಅನಿಲ ಸೋರಿಕೆಯಾಗಿದ್ದರಿಂದ ಸುಮಾರು 25ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 26ರ ರಾತ್ರಿ ಸುಮಾರು 11.45ಕ್ಕೆ ಈ ಘಟನೆ ನಡೆದಿದ್ದು, ಕಾರ್ಖಾನೆಯಿಂದ ಅನಿಲ ಸೋರಿಕೆಯಾದ ನಂತರ, ಕೆಮಿಕಲ್ ವಾಸನೆಯು ನೆರೆಹೊರೆಯಲ್ಲಿ ಹರಡಿತ್ತು ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.

ರಸಗೊಬ್ಬರ ಉತ್ಪಾದನಾ ಘಟಕದ ಸುತ್ತಮುತ್ತಲಿನ ಪೆರಿಯ ಕುಪ್ಪಂನಂತಹ ವಸತಿ ಪ್ರದೇಶದ ಸುತ್ತಮುತ್ತಲಿನ 25 ಕ್ಕೂ ಹೆಚ್ಚು ಜನರು ಅಮಿಲ ಸೋರಿಕೆಯಿಂದ ಅಸ್ವಸ್ಥರಾಗಿದ್ದು, ಕೆಲವರು ವಾಕರಿಕೆ ಮಾಡಿಕೊಂಡು ಮೂರ್ಛೆ ತಪ್ಪಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅನಿಲ ಸೋರಿಕೆ ಸುದ್ದಿ ಹರಡಿದ ತಕ್ಷಣ, ಜನರು ಗಾಬರಿಯಿಂದ ತಮ್ಮ ಮನೆಗಳಿಂದ ಹೊರಬಂದು ರಸ್ತೆಗಳಲ್ಲಿ ಜಮಾಯಿಸಿದರು. ಸಹಾಯಕ್ಕಾಗಿ ಅಧಿಕಾರಿಗಳ ಮೊರೆ ಹೋದರು.

ಕೂಡಲೇ ಎಚ್ಚೆತ್ತ ರಸಗೊಬ್ಬರ ಘಟಕದ ಸಿಬ್ಬಂದಿಗಳು ತಾಂತ್ರಿಕ ದೋಷವನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕಾರ್ಖಾನೆಯ ತಜ್ಞರು ಸಮಸ್ಯೆ ಪರಿಹರಿಸುತ್ತಿದ್ದಾರೆ ಎಂದು ಜನರಿಗೆ ಮನವರಿಕೆ ಮಾಡಿದ ಪೊಲೀಸರು, ಸ್ಥಳೀಯ ನಿವಾಸಿಗಳನ್ನು ಸಮಾಧಾನಪಡಿಸಿದರು.

ಸ್ಥಳೀಯರಿಂದ ಪ್ರತಿಭಟನೆ:

ಎನ್ನೋರ್‌ ರಸಗೊಬ್ಬರ ಕಾರ್ಖಾನೆ ಪೈಪ್‌ನಲ್ಲಿ ಅಮೋನಿಯಾ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಜನರು ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ್ದಾರೆ. ಕೋರಮಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಉಪ-ಸಮುದ್ರದ ಪೈಪ್‌ನಿಂದ ಸೋರಿಕೆಯಾಗಿರುವ ಅನಿಲದ ವಾಸನೆಯು ಗಾಳಿಯಲ್ಲಿ ಸೇರಿಕೊಂಡಿದ್ದು, ಸಮುದ್ರ ತೀರದ ಬಳಿ ವಾಸಿಸುವ ನಿವಾಸಿಗಳು ಅಸ್ವಸ್ಥರಾಗಿ, ಉಸಿರಾಟದ ತೊಂದರೆ ಅನುಭವಿಸಿದರು.

‘ಭಯಪಡುವ ಅಗತ್ಯವಿಲ್ಲ. ಸೋರಿಕೆಯನ್ನು ಸ್ಥಿರಗೊಳಿಸಲಾಗಿದೆ. ಇನ್ನು ಎನ್ನೂರಿನಲ್ಲಿ ಗ್ಯಾಸ್ (ಅಮೋನಿಯಾ) ಸೋರಿಕೆಯಾಗುವುದಿಲ್ಲ. ಜನರು ಸಮಾಧಾನಗೊಂಡು ಮನೆಗೆ ಮರಳಿದ್ದಾರೆ. ವೈದ್ಯಕೀಯ ಮತ್ತು ಪೊಲೀಸ್ ತಂಡಗಳು ಸ್ಥಳದಲ್ಲಿ ಹಾಜರಿವೆ’ ಎಂದು ಆವಡಿ ಪೊಲೀಸ್ ಕಮಿಷನರ್ ವಿಜಯಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ; ತಮಿಳುನಾಡು: ಪೆರಿಯಾರ್ ವಿಶ್ವವಿದ್ಯಾನಿಲಯದ ಉಪಕುಲಪತಿ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...