Homeಮುಖಪುಟನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ: ಮರೆಯಬೇಡಿ ಇದು ಬಹಳ ಮುಖ್ಯ

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

- Advertisement -
- Advertisement -

ಜೀವನ ಕಲೆಗಳು: ಅಂಕಣ-29

ನಿಮ್ಮೊಳಗಿನ ಮಗುವನ್ನು ಸಂರಕ್ಷಿಸುವ ಕಲೆ

ಲೇಖನದ ಶೀರ್ಷಿಕೆ ಓದಿ ಚಕಿತರಾಗಬೇಡಿ. ಹೌದು, ನಮ್ಮೆಲ್ಲರೊಳಗೂ ಒಂದು ಮುಗ್ಧ ಮಗು ಇದೆ, ಇತ್ತು, ಇನ್ನೂ ಇರಬಹುದು. ಕೆಲವರು ಬೇಗನೇ ದೊಡ್ಡವರಾಗುವ ತವಕದಲ್ಲಿ ಆ ಮಗುವನ್ನು ತಿಳಿದೋ ತಿಳಿಯದೆಯೋ ಹತ್ಯೆಗೈದಿರುತ್ತಾರೆ ಅಥವಾ ಮಾರಣಾಂತಿಕವಾಗಿ ಘಾಸಿಗೊಳಿಸಿರುತ್ತಾರೆ. ಸಂತೋಷದ ಸಂಗತಿಯೆಂದರೆ ಈ ಮಗುವನ್ನು ದೃಢ ಪ್ರಯತ್ನದಿಂದ ಮತ್ತೆ ಜೀವಂತಗೊಳಿಸಬಹುದು.

“ನಿಮ್ಮ ಆತ್ಮಕ್ಕೆ ಸನಿಹದಲ್ಲಿರುವ ಈ ಮಗುವಿನ ಕೈ ಎಂದಿಗೂ ಬಿಡಬೇಡಿ, ಈಕೆಂದರೆ ಈ ಮಗುವಿಗೆ ಅಸಾಧ್ಯ ಎನ್ನುವುದು ಏನೂ ಇಲ್ಲ” ಎಂದು ಬ್ರಾಜಿಲ್ ದೇಶದ ಖ್ಯಾತ ಲೇಖಕ ಮತ್ತು ಕವಿ ಪಾವ್ಲೋ ಕೊಯಿಲ್ಹೋ ಹೇಳುತ್ತಾರೆ.

ಇಂದಿನ ಜೀವನದ ಭಯಾನಕ ಆತಂಕಗಳ ಮಧ್ಯೆ ಬದುಕಲು ಕೇವಲ ಮಕ್ಕಳಿಗೆ ಮಾತ್ರ ಸಾಧ್ಯ. ಸಿರಿಯಾ-ಇರಾಕ್ ನಂತಹ ಯುದ್ಧಗ್ರಸ್ಥ ಭಾಗದಲ್ಲೂ ಸಹ ಮಕ್ಕಳು ನಿಶ್ಚಿಂತೆಯಿಂದ ಆಟವಾಡಿಕೊಂಡಿರುವುದನ್ನು ನೀವು ದೃಶ್ಯ ಮಾಧ್ಯಮದಲ್ಲಿ ನೋಡಿರಬಹುದು. ಈ ಮಕ್ಕಳಿಗೆ ಯಾವುದೇ ಸರಹದ್ದು, ಬೇಲಿಗಳು ಇರುವುದಿಲ್ಲ. ಇದ್ದರೂ ಅವರು ಅದನ್ನು ಲೆಕ್ಕಿಸುವುದಿಲ್ಲ. ಯಾವಾಗಲೂ ಸಕಾರತ್ಮಕವಾಗಿ ಚಿಂತಿಸುತ್ತಾರೆ. ಇದೇ ಮಗು ನಿಮಗೆ ಮತ್ತೆ ಮುಕ್ತವಾಗಿ ಜೀವಿಸುವ ಪಾಠ ಕಲಿಸುವ ಸಾಧನವಾಗಬಹುದು. ದೊಡ್ಡವರೂ ಸಹ ಒಂದಲ್ಲ ಒಮ್ಮೆ ಮತ್ತೆ ತಮ್ಮ ಬಾಲ್ಯ ಹಿಂತಿರುಗಬೇಕು ಎಂದು ಹಂಬಲಿಸುವುದನ್ನು ನೀವು ನೋಡಿರಬಹುದು. ಆದ್ದರಿಂದ ಈ ಮಗುವನ್ನು ಕೊಲ್ಲಬೇಡಿ. ಅದರೊಂದಿಗೆ ಮಾತನಾಡಿ, ಅದು ಏನು ಹೇಳುತ್ತಿದೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ.

ಈ ಮಗುವಿಗೆ ಸದಾ ಹಸಿವು. ಎಲ್ಲವನ್ನೂ ತಿಂದು ಜೀರ್ಣಿಸಿಕೊಳ್ಳುವ ಹಸಿವು. ಆದ್ದರಿಂದ ಈ ಮಗುವನ್ನು ಉಪವಾಸ ಕೆಡವಬೇಡಿ. ಇದರ ಲಾಲನೆ ಪೋಷಣೆ ಸರಿಯಾಗಿ ಮಾಡಿ. ಹೇಗೆ ನಿಮ್ಮ ಸ್ವಂತ ಮಗು ಹಸಿದುಕೊಂಡಿದ್ದರೆ ನಿಮಗೆ ಸಹಿಸಲು ಸಾಧ್ಯವಿಲ್ಲವೋ, ಅದೇ ರೀತಿ ಈ ಮಗುವನ್ನೂ ಸರಿಯಾಗಿ ನೋಡಿಕೊಳ್ಳಿ. ಈ ಮಗು ತುಂಬ ಕುತೂಹಲವುಳ್ಳದ್ದು. ಎಲ್ಲವನ್ನೂ ಅರಿಯುವ ಈ ಕುತೂಹಲವೇ ಅದಕ್ಕೆ ದಿನನಿತ್ಯ ಹೊಸ ವಿಷಯ ಕಲಿಯುವಂತೆ ಪ್ರೇರೇಪಿಸುತ್ತದೆ.ಇದರ ಜ್ಞಾನಾರ್ಜನೆಗೆ ಸಹಕಾರಿಯಾಗಿ. ಕೌನ್ ಬನೇಗಾ ಕರೋಡಪತಿ ಎಂಬ ಟಿವಿ ಮಾಲಿಕೆಯೊಂದರಲ್ಲಿ ಅದರ ನಿರೂಪಕ ಅಮಿತಾಭ್ ಬಚ್ಚನ್ ಹೇಳಿದಂತೆ, “ಸೀಖನಾ ಬಂದ್ ತೋ ಜೀತನಾ ಬಂದ್” (ಕಲಿಯುವುದನ್ನು ನಿಲ್ಲಿಸಿದಾಗ ಗೆಲ್ಲುವುದೂ ನಿಲ್ಲುತ್ತದೆ).ಈ ಮಗುವಿಗೆ ಸಂರಕ್ಷಣೆ ಬೇಕು, ನಿಮ್ಮಂತೆ ದಿನಕ್ಕೆ 12 ತಾಸು ವಾರಕ್ಕೆ 7 ದಿನ ದುಡಿಯಲು ಇದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ಹಾಯಾಗಿರಲು, ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಬೇಕು. ಅದನ್ನು ಈ ಮಗುವಿನಿಂದ ಕಿತ್ತುಕೊಳ್ಳಬೇಡಿ.

ಈ ಮಗುವಿಗೆ ಮಗುವಾಗಿ ಇರಲು ಇಷ್ಟ. ಆದ್ದರಿಂದ ನೀವು ನಿಮಗೆ ವಯಸ್ಸಾಯಿತು, ನಾವು ಹೇಗೆ ಮಕ್ಕಳಂತೆ ವರ್ತಿಸಬಹುದು ಎಂದು ಹೇಳಿಕೊಳ್ಳುವುದನ್ನು ಬಿಡಿ. ಮಗುವಿನಂತೆ ಜೀವನವನ್ನು ಆಸ್ವಾದಿಸುವುದನ್ನು ಕಲಿಯಿರಿ. ಕುಣಿದು ಕುಪ್ಪಳಿಸಿ. ನಿಮ್ಮ ದಿನ ನಿತ್ಯದ ಬಿಗುಪು ಕಡಿಮೆಯಾಗುತ್ತದೆ. ತಂದೆ-ತಾಯಿಗೆ ಮಗುವಿನೊಂದಿಗೆ ಸಂತೋಷದ ಸಮಯ ಹೆಚ್ಚಾಗಿ ಕಳೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಮಗುವಿನೊಂದಿಗೆ ಮಗುವಾಗಿರದೆ, ಪೋಷಕರಾಗುತಾರೆ, ಶಿಕ್ಷಕರಾಗುತ್ತಾರೆ. ಆದರೆ ಅಜ್ಜಿ-ತಾತ ಈ ಪೋಷಕ-ಶಿಕ್ಷಕ ಕಟ್ಟುಪಾಡಿನಿಂದ ಹೊರಗುಳಿದು ಮಕ್ಕಳೊಂದಿಗೆ ಮಕ್ಕಳಾಗಿ ತಾವೂ ಹೆಚ್ಚು ಸಂತೋಷವಾಗಿರುತ್ತಾರೆ ಮತ್ತು ಮಕ್ಕಳೂ ಸಹ ಅಜ್ಜಿ-ತಾತನ ಜೊತೆಯನ್ನು ಹೆಚ್ಚಾಗಿ ಬಯಸುತ್ತಾರೆ.

ಮಕ್ಕಳು ಮೂರ್ಖತನ ಮಾಡುತ್ತಾರೆ, ಅದು ಅವರ ಹಕ್ಕು. ಆ ಮೂರ್ಖತನ ಅವರಿಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹ ಪಾಠ ಕಲಿಸುತ್ತದೆ. ಆಪಲ್ ಕಂಪನಿಯ ಸಂಸ್ಥಾಪಕ ಅಮೇರಿಕದ ಸ್ಟೀವ್ ಜಾಬ್ಸ್ ಅವರ ಒಂದು ಪ್ರಖ್ಯಾತ ಹೇಳಿಕೆ “ಸ್ಟೇ ಹಂಗ್ರೀ, ಸ್ಟೇ ಫೂಲಿಷ್” (ಸದಾ ಹಸಿದುಕೊಂಡಿರು, ಸದಾ ಮೂರ್ಖನಾಗಿರು) ಪ್ರಕಾರ ಈ ಹಸಿವು ನಮ್ಮನ್ನು ಏನಾದರೂ ಮಾಡಲು ಪ್ರಚೋದಿಸುತ್ತದೆ ಮತ್ತು ಈ ಮೂರ್ಖತನ ನಮಗೆ ಕಲಿಯಲು ಸಹಕಾರಿಯಾಗುತ್ತದೆ. ಒಟ್ಟಾಗಿ ಇವೆರಡು ನಮ್ಮನ್ನು ಉನ್ನತ ಮಟ್ಟಕ್ಕೆ ಏರಿಸುತ್ತವೆ. ಮಕ್ಕಳಿಗೆ ಯಾವುದು ಅಸಾಧ್ಯ ಎಂಬುದು ತಿಳಿದಿರುವುದಿಲ್ಲ, ಹಾಗಾಗಿ ಅವರು ಅಸಾಧ್ಯವಾದುದನ್ನು ಮಾಡಲು ಸದಾ ಪ್ರಯತ್ನಿಸುತ್ತಾರೆ ಮತ್ತು ಅದರಲ್ಲಿ ಸಫಲರೂ ಆಗುತ್ತಾರೆ.

ಜೀವನದ ಎಲ್ಲಾ ಸನ್ನಿವೇಶಗಳೂ ಸಮಸ್ಯೆಗಳಲ್ಲ, ಅದನ್ನು ಪರಿಹರಿಸಲು ಯಾರೂ ನಮಗೆ ಗುತ್ತಿಗೆ ಕೊಟ್ಟಿಲ್ಲ. “ಲೋಕದ ಡೊಂಕ ನೀವೇಕೆ ತಿದ್ದುವಿರಿಯ್ಯಾ”ಎಂದು ಬಸವಣ್ಣನವರು ಹೇಳಿದ ಹಾಗೆ, ಜೀವನವನ್ನು ಬಂದಂತೆ ಸ್ವೀಕರಿಸಬೇಕು. ಏಕೆಂದರೆ ಯಾರ ಕೈಯಲ್ಲಿ ಸುತ್ತಿಗೆ ಇರುತ್ತದೋ ಅವರಿಗೆ ಎಲ್ಲವೂ ಮೊಳೆಯಂತೆ ಕಾಣುತ್ತದೆ; ಯಾರ ಕೈಯಲ್ಲಿ ಸ್ಪ್ಯಾನರ್ ಇರುತ್ತದೋ ಅವರಿಗೆ ಎಲ್ಲವೂ ಸಡಿಲವಾದ, ಬಿಗಿಯಾಗಿ ಭದ್ರಪಡಿಸಬೇಕಾಗಿರುವ, ನಟ್-ಬೋಲ್ಟಿನಂತೆ ಕಾಣುತ್ತದೆ. ಆ ಸುತ್ತಿಗೆ, ಆ ಸ್ಪ್ಯಾನರ್ ಬದಿಗಿಡಿ. ಜೀವನವನ್ನು ಮಗುವಿನ ದೃಷ್ಟಿಕೋನದಿಂದ ನೋಡಿ, ಅದರಿಂದ ಏನು ಕಲಿಯಬಹುದು, ಅದನ್ನು ಕಲಿಯಿರಿ.

ಜೀವನದಲ್ಲಿ ಎಲ್ಲವೂ ಒಪ್ಪ-ಓರಣವಾಗಿರಬೇಕಿಲ್ಲ. ಮಕ್ಕಳಂತೆ ವಸ್ತುಗಳು ಚೆಲ್ಲಪಿಲ್ಲಿಯಾಗಿರಲು ಬಿಡಿ. ಅವ್ಯವಸ್ಥೆಯಲ್ಲೂ ಜಗತ್ತು ನಡೆಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

ನಿಮ್ಮ ಬಾಲ್ಯದ ನೆನಪನ್ನು ಭದ್ರವಾಗಿರಿಸಿಕೊಳ್ಳಿ. ನೀವು ಮಾಡಿದ ತಪ್ಪುಗಳು, ಚೇಷ್ಟೆಗಳು ಎಂದಿದ್ದರೂ ನಿಮಗೆ ಸಂತೋಷ ನೀಡುವ ಚಿಲುಮೆಗಳು. ಅದು ಬತ್ತದಂತೆ ಜಾಗೃತೆ ವಹಿಸಿ. ಅದೇ ರೀತಿ ಮಕ್ಕಳು ತಮಗೆ ಬೇಡವಾದುದನ್ನು ಎಸೆಯುತ್ತಿರುತ್ತವೆ, ನೀವೂ ಸಹ ಬೇಡವಾದ ಕಹಿ ನೆನಪುಗಳ, ಸಂಬಂಧಗಳ ಭಾರವಾದ ಮೂಟೆ ಜೀವನವಿಡೀ ಹೊರುವುದನ್ನು ಬಿಡಿ, ಅವನ್ನು ಎತ್ತೆಸೆಯಿರಿ.

ಮಿಕ್ಕ ಮಕ್ಕಳಂತೆ ಈ ಮಗುವಿಗೂ ಪ್ರೀತಿ ಬೇಕು. ಉಡುಗೊರೆ ಬೇಕು. ಆದ್ದರಿಂದ ನಿಮ್ಮ ಕಲ್ಪನಾಶಕ್ತಿ ಉಪಯೋಗಿಸಿ ಇದರ ಜೊತೆಗೂ ನಿಮ್ಮ ಅಮೂಲ್ಯವಾದ ಸಮಯ ಕಳೆಯಿರಿ, ನಿಮ್ಮ ಪ್ರೀತಿ ತೋರಿಸಿ, ಉಡುಗೊರೆಗಳನ್ನು ನೀಡಿ. ಆ ಮಗುವೂ ನಿಮ್ಮ ಭಾವನೆಗಳನ್ನು ಬಡ್ಡಿಯೊಂದಿಗೆ ಹಿಂತಿರುಗಿಸುತ್ತದೆ.

“ವಿಶ್ವದ ನಿಜವಾದ ಸಮಸ್ಯೆ ಎಂದರೆ (ವಿಶ್ವದ) ಬಹುತೇಕ ಜನ ಬೇಗ ವಯಸ್ಕರಾಗುತ್ತಾರೆ” ಎನ್ನುತ್ತಾರೆ ಮಕ್ಕಳ ಅಚ್ಚುಮೆಚ್ಚಿನ ಖ್ಯಾತ ಕಾರ್ಟೂನ್ ಚಿತ್ರ ನಿರ್ಮಾಪಕ ವಾಲ್ಟ್ ಡಿಸ್ನಿ. ನೀವಾದರೂ ವಯಸ್ಕರಾಗದೇ ನಿಮ್ಮೊಳಗಿರುವ ಮಗುವನ್ನು ಸಂರಕ್ಷಿಸಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...