Homeಅಂತರಾಷ್ಟ್ರೀಯಟಿಪ್ಪುಸುಲ್ತಾನರ ವಂಶಜರಾದ ನೂರ್ ಇನಾಯತ್‍ಖಾನಳ ಸಾಹಸಗಾಥೆ ನಿಮಗೆ ಗೊತ್ತೆ?

ಟಿಪ್ಪುಸುಲ್ತಾನರ ವಂಶಜರಾದ ನೂರ್ ಇನಾಯತ್‍ಖಾನಳ ಸಾಹಸಗಾಥೆ ನಿಮಗೆ ಗೊತ್ತೆ?

- Advertisement -
- Advertisement -

ವೈಚಾರಿಕ ಚರಿತ್ರೆ ಕೆಲವೊಮ್ಮೆ ಊಹಾತೀತವಾಗಿ ಚಲಿಸಿಬಿಡುತ್ತದೆ. ಇದಕ್ಕೆ ನೂರ್ ಇನಾಯತ್‍ಖಾನಳ (1914-1944) ಬಾಳುವೆ ಸಾಕ್ಷಿ. ಟಿಪ್ಪುಸುಲ್ತಾನರ ವಂಶಜರಾದ ಸೂಫಿದಾರ್ಶನಿಕನ ಮಗಳಾದ ಈಕೆ, ರಷ್ಯಾದಲ್ಲಿ ಹುಟ್ಟಿದವಳು; ಎರಡನೇ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಗೂಢಚಾರಿಣಿಯಾಗಿ ಫ್ರಾನ್ಸಿಗೆ ಹೋಗಿ, ಜರ್ಮನಿಯ ನಾಜಿಗಳ ಕೈಯಲ್ಲಿ ಸಿಕ್ಕು, ಡಕಾವ್ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿ ಜೀವಂತ ಸುಟ್ಟುಹೋದವಳು.

ಅವಳ ಪೂರ್ವಜ ಟಿಪ್ಪು, ಬ್ರಿಟಿಷರನ್ನು ಆಜನ್ಮವೈರಿಗಳೆಂದು ಪರಿಭಾವಿಸಿ ಜೀವನವಿಡೀ ಅವರ ವಿರುದ್ಧ ಹೋರಾಡುತ್ತ, ರಣರಂಗದಲ್ಲಿ ನೆತ್ತರು ಹರಿಸುತ್ತ ಪ್ರಾಣಬಿಟ್ಟಿದ್ದನು. ಅವನ ವಂಶದ ಕುಡಿಯೊಂದು ಒಂದೂವರೆ ಶತಮಾನದ ನಂತರ, ಇದೇ ಬ್ರಿಟಿಷರ ಪ್ರತಿನಿಧಿಯಾಗಿ ಹೋಗಿ, ಸಜೀವ ದಹನವಾಯಿತು. ಟಿಪ್ಪುವನ್ನು ಕೊಂದು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ರಹದಾರಿ ಮಾಡಿಕೊಂಡ ಬ್ರಿಟಿಷರೇ, ಟಿಪ್ಪುವಿನ ವಂಶದ ಕುಡಿಯನ್ನು ತಮ್ಮ ಯುದ್ಧದಲ್ಲಿ ಉಪಕರಣವಾಗಿ ಬಳಸಿದರು. ಚರಿತ್ರೆಯ ವೈರುಧ್ಯವೆಂದರೆ ಇದೇ ಇರಬೇಕು. ಈ ವೈರುಧ್ಯವನ್ನು ಕೊಲ್ಕತ್ತೆಯಲ್ಲಿರುವ ಟಿಪ್ಪುಸುಲ್ತಾನ ಮಸೀದಿಯಲ್ಲಿ ಕೂಡ ಕಾಣಬಹುದು. ಈ ಮಸೀದಿಯನ್ನು ಬ್ರಿಟಿಷರು ಟಿಪ್ಪು ವಂಶಜರಿಗೆ ಕೊಟ್ಟ ಪರಿಹಾರದ ಹಣದಲ್ಲಿ ಕಟ್ಟಲಾಯಿತು. ಅದೂ ಬ್ರಿಟಿಷ್ ವಾಸ್ತುಶಿಲ್ಪದ ವಿನ್ಯಾಸದಲ್ಲಿ!

ಒಂದೇ ಕುಟುಂಬದಲ್ಲಿ ಹುಟ್ಟಿದ ಆದರೆ ಬೇರೆಬೇರೆ ಕಾಲಘಟ್ಟಕ್ಕೆ ಸೇರಿದ ಟಿಪ್ಪು ಮತ್ತು ನೂರ್ ಇಬ್ಬರಲ್ಲೂ ಒಂದು ವಿಷಯದಲ್ಲಿ ಸಮಾನತೆಯಿದೆ. ಅದೆಂದರೆ, ಟಿಪ್ಪು ಹಾಗೂ ನೂರ್, ವಸಾಹತುಶಾಹಿ ಮತ್ತು ಫ್ಯಾಸಿಸಂ ಎಂಬ ನಾಗರಿಕ ಸಮಾಜ ಕಂಡ ಎರಡು ರೋಗಗ್ರಸ್ತ ರಾಜಕೀಯ ವ್ಯವಸ್ಥೆಗಳ ವಿರುದ್ಧ ಸೆಣಸಾಡಿದವರು. ಮನುಕುಲಕ್ಕೆ ಮಹಾಕಂಟಕವಾಗಿದ್ದ ಫ್ಯಾಸಿಸಂ ಮುಂದೆ ವಸಾಹತುಶಾಹಿಯು ಆಮೇಲೆ ವಿಚಾರಿಸಿಕೊಳ್ಳಬಹುದಾದ, ಚಿಕ್ಕಶತ್ರುವಾಗಿ ಕಾಣಿಸಿತು. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಕಾಂಗ್ರೆಸ್, ಸ್ವತಃ ಫ್ಯಾಸಿಸಂ ವಿರುದ್ಧ ಹೋರಾಡಲು ಬ್ರಿಟಿಷರ ಜತೆ ಕೈಜೋಡಿಸಬೇಕೆಂದು ಕರೆಗೊಟ್ಟಿದ್ದು ಇದೇ ಹಿನ್ನೆಲೆಯಲ್ಲಿ. ಇದರ ಭಾಗವಾಗಿ ನೂರಳ ಸೈನಿಕ ಸೇವೆಯನ್ನು ಗಮನಿಸಬೇಕು.

ಇಂತಹ ಅಪರೂಪದ ಮತ್ತು ಬಹಳ ಜನರಿಗೆ ತಿಳಿಯದ ವ್ಯಕ್ತಿಯಾದ ನೂರ್ ಬಗ್ಗೆ, ಕನ್ನಡದ ಯುವಲೇಖಕರಾದ ಚಂದ್ರಶೇಖರ ಮಂಡೆಕೋಲು ಅವರು ವ್ಯಾಪಕವಾದ ಹುಡುಕಾಟ ಮಾಡಿ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಅದರ ಹಸ್ತಪ್ರತಿಯನ್ನು ಓದುತ್ತ ಅದರ ವಿಶಿಷ್ಟತೆಗಳನ್ನು ಓದುಗರಿಗೆ ಹಂಚಿಕೊಳ್ಳಬೇಕು ಅನಿಸಿತು. ನನಗೆ ನೂರಳ ತಂದೆ ಹಜರತ್ ಇನಾಯತ್ ಖಾನರ ಬಗ್ಗೆ ತುಸು ಗೊತ್ತಿತ್ತು. ಪಂಡಿತ ರವಿಶಂಕರರ ಹಾಗೆ, ನುಸ್ರತ್‍ಫತೇ ಅಲಿಖಾನರ ಹಾಗೆ ಇನಾಯತ್ ಖಾನ್ (1882-1927) ಭಾರತದ ಉಪಖಂಡದ ಸಂಗೀತವನ್ನು ಪಶ್ಚಿಮದ ಜತೆ ಸಮ್ಮಿಲನಗೊಳಿಸುವ ಕಾರ್ಯ ಮಾಡಿದವರು. ಅವರಿಗೆ ಸೂಫೀ ದೀಕ್ಷೆ ಕೊಟ್ಟವರು ಹೈದರಾಬಾದಿನ ಇಬ್ಬರು ಸೂಫಿಸಂತರು.

ಹಜರತ್ ಇನಾಯತ್ ಖಾನ್

ಹುಮನಾಬಾದಿನ ಮಾಣಿಕಪ್ರಭುಗಳ ಗದ್ದಿಗೆಗೆ ಇನಾಯತ್ ಖಾನರು ಬಂದುಹೋಗುತ್ತಿದ್ದರು. ನಾನು ದೆಹಲಿಗೆ ಹೋದಾಗಲೆಲ್ಲ ಹಜರತ್ ನಿಜಾಮುದ್ದೀನ್ ದರ್ಗಾದ ಹಿಂಬದಿಯಲ್ಲಿರುವ ಅವರ ದರ್ಗಾಕ್ಕೆ ಹೋಗುವುದುಂಟು. ಅವರ ಮೇಲೆ ಲೇಖನವನ್ನೂ ಪ್ರಕಟಿಸಿದ್ದುಂಟು. ಆದರೆ ಅವರ ಮಗಳು ನೂರ್ ಇನಾಯತ್ ಖಾನರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಮಂಡೆಕೋಲು ಅವರ ವಿಸ್ತಾರವಾದ ಸಂಶೋಧನೆಯ ಫಲಶೃತಿಯಾಗಿರುವ ಈ ಕೃತಿ, ನೂರಳ ಚರಿತ್ರೆಯನ್ನು ತಿಳಿಸಿಕೊಟ್ಟಿತು. ನೂರಳ ಈ ಜೀವನ ಚರಿತ್ರೆಯು ನಾಲ್ಕು ಆಯಾಮಗಳನ್ನು ಒಳಗೊಂಡಿದೆ.

ಮೊದಲನೆಯದು- ಕುಟುಂಬಕೇಂದ್ರಿತ ಆಯಾಮ. ಈ ಭಾಗವು ನೂರ್ ಇನಾಯತ್ ಖಾನರ ಕುಟುಂಬ, ಖಾನರು ಸೂಫಿ ದಾರ್ಶನಿಕರೂ ಸಂಗೀತಗಾರರೂ ಆಗಿ ರೂಪುಗೊಂಡ ಬಗೆ, ಮಾಡಿದ ದೇಶಾಂತರಗಳ ತಿರುಗಾಟ, ಮಕ್ಕಳನ್ನು ಸರ್ವಧರ್ಮದ ಸಮಭಾವದಲ್ಲಿ ಬೆಳೆಸುವ ಕಥನವನ್ನು ಒಳಗೊಂಡಿದೆ.

ಎರಡನೆಯದು- 20ನೇ ಶತಮಾನದ ಮೊದಲ ಭಾಗದಲ್ಲಿ ಸಂಭವಿಸಿದ ವಸಾಹತುಶಾಹಿ ಕಾಲಘಟ್ಟದ ಯುದ್ಧಗಳ ಕಥೆ. ಇಲ್ಲಿ ಫ್ಯಾಸಿಸಂ ವಿರೋಧಿಸುವ ಜಾಗತಿಕ ಚಳುವಳಿಯಲ್ಲಿ ಭಾಗವಹಿಸುವ ಇಂಗ್ಲೆಂಡಿನ ಪ್ರಜೆಯಾದ ನೂರ್ ದಾರುಣವಾಗಿ ಕೊಲೆಯಾಗುವ ಭಾಗ ಬರುತ್ತದೆ. ಇಲ್ಲಿ ನೂರಳ ಜೀವನಚರಿತ್ರೆಯು ದಾರುಣವೂ ಮೈನವಿರೇಳಿಸುವ ಘಟನೆಗಳಿಂದಲೂ ಕೂಡಿದ್ದು, ಪತ್ತೇದಾರಿ ಕಥೆಯಿದ್ದಂತಿದೆ. ಇದಕ್ಕೆ ಕಾರಣ, ಆಕೆ ಗೂಢಚಾರಿಣಿಯಾಗಿ ಅಪಾಯಕರವಾದ ನಾಜಿಗಳ ನಡುವೆ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದು. ಅದು ಯಾವುದೇ ಕ್ಷಣದಲ್ಲಿ ಪ್ರಾಣಹೋಗುವ ಕಾರ್ಯದಲ್ಲಿ ಮೂವತ್ತು ವರ್ಷದ ಈ ಸುಂದರಿ ಪ್ರಾಣತೆತ್ತಳು.

ಈಚೆಗೆ ಇಂಗ್ಲೆಂಡು ಆಕೆಯನ್ನು ಹುತಾತ್ಮಳೆಂದು ಕರೆದು ಗೌರವಿಸಿತು. ಆಕೆಯ ಹೆಸರಲ್ಲಿ ಸ್ಮಾರಕವನ್ನೂ ನಿರ್ಮಿಸಿತು. ಈ ಗೌರವವನ್ನು ಬ್ರಿಟಿಷರು ಹೂಡಿದ ಯುದ್ಧಗಳಲ್ಲಿ ಹಲವಾರು ದೇಶಗಳಿಗೆ ಹೋಗಿ ಮಡಿದ ಭಾರತೀಯ ಸೈನಿಕರಿಗೆ ಸಿಕ್ಕಿಲ್ಲ. ಗೌರವ ಸಿಕ್ಕಿರಲಿ ಸಿಗದಿರಲಿ, ವಸಾಹತುಗಳಿಗೆ ಸೇರಿದ ಜನ ವಸಾಹತುಶಾಹಿ ಹೂಡುವ ಯುದ್ಧಗಳಲ್ಲಿ ಉಪಕರಣವಾಗಿ ಬಳಕೆಯಾದ ವಾಸ್ತವವನ್ನು ಅಲ್ಲಗಳೆಯುವಂತಿಲ್ಲ.

ನೂರ್ ಫ್ಯಾಸಿಸಂ ವಿರುದ್ಧ ಹೋರಾಡುವ ದಿಟ್ಟತನ ತೋರಿದಳು. ಆದರೆ ಅವಳು ಬ್ರಿಟಿಷರಿಗೆ ಉಪಕರಣವಾಗಿ ಕೂಡ ಬಳಕೆಯಾದವಳು. ಅವಳ ಕೌಟುಂಬಿಕ ತಬ್ಬಲಿತನ ಬಡತನ ವಲಸೆ ಅಭದ್ರತೆಗಳು ಕೂಡ ಈ ಅಪಾಯಕಾರಿ ಕೆಲಸಕ್ಕೆ ಆಕೆಯನ್ನು ದೂಡಿದವು. ಹೀಗಾಗಿ ನೂರಳ ಜೀವನ ಚರಿತ್ರೆಯು, ಸೂಫಿ ಸಂಗೀತಗಾರನ ಕುಟುಂಬವೊಂದರ ಏಳುಬೀಳುಗಳನ್ನು 19-20ನೇ ಶತಮಾನದ ಜಗತ್ತಿನ ಏಳುಬೀಳಿನ ವಿದ್ಯಮಾನಗಳೊಂದಿಗೆ ಬೆಸೆದುಕೊಂಡಿದೆ. ಈ ಏಳುಬೀಳುಗಳಲ್ಲಿ ಮೈಸೂರು ಒಡೆಯರ ಹಾಗೂ ರಾಜಸ್ಥಾನದ ರಾಜರ ದೇಶೀಚರಿತ್ರೆಯೂ ಸೇರಿಕೊಳ್ಳುತ್ತದೆ. ಮೈಸೂರಿನಿಂದ ಶುರುವಾಗಿ ಅಮೆರಿಕ ರಷ್ಯ ಇಂಗ್ಲೆಂಡ್ ಫ್ರಾನ್ಸ್ ಹೀಗೆ ಸುತ್ತಾಡುವ ಈ ಚರಿತ್ರೆಯು, ಅಂತಾರಾಷ್ಟ್ರೀಯ ಆಯಾಮವುಳ್ಳ ಕರ್ನಾಟಕದ ಚರಿತ್ರೆಯನ್ನು ಕಟ್ಟಿಕೊಡುತ್ತದೆ.

ಮೂರನೆಯದು- ದಾರ್ಶನಿಕವಾಗಿ ಸೂಫಿಸಂ ಹಾಗೂ ಕಲೆಯಾದ ಸಂಗೀತಗಳು ಭಾರತದಲ್ಲಿ ಪರಸ್ಪರ ಕೂಡಿಬೆರೆತು ರೂಪುಗೊಂಡ ಸಾಂಸ್ಕೃತಿಕ ಕಥನ. ಅದು ರೂಪಿಸುವ ಅಂತಾರಾಷ್ಟ್ರೀಯ ಪ್ರಜ್ಞೆ, ಮಾನವತಾವಾದ ಹಾಗೂ ವಿಶ್ವಮಾನವ ಪ್ರಜ್ಞೆಗಳು. ಚರಿತ್ರೆ ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ, ಕೃತಿಯು ಏಕಕಾಲಕ್ಕೆ ಕಲೆ ತತ್ವಶಾಸ್ತ್ರ ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ. ಗಂಡುಹೆಣ್ಣಿನ ಪ್ರೇಮವನ್ನು, ವ್ಯಕ್ತಿಗಳ ಅನುಭಾವದ ಸಾಧನೆಯನ್ನು, ಸಂಗೀತದ ಅಭಿರುಚಿಯನ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ. ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ. ಈ ಕಾರಣಕ್ಕಾಗಿ ಇದು ಸಾಂಸ್ಕೃತಿಕ ಪಠ್ಯವೂ ಆಗಿದೆ.

ನಾಲ್ಕನೆಯದು-ಮಹಿಳೆಯರ ಚೈತನ್ಯಶೋಧಕ ಕೃತಿಯಾಗಿರುವುದು. ಇಲ್ಲಿ ನೂರಳ ಸಾಹಸಗಾಥೆಯ ಜತೆಗೆ ಎಲೆಮರೆಯ ಪಾತ್ರದಂತಿರುವ ನೂರಳ ತಾಯಿ ನೋರಾ ಬೇಕರ್ ಉರುಫ್ ಶಾರದಾ ಅಮೀನಾಬೇಗಮರ ಕತೆ ಸೆಳೆಯುತ್ತದೆ. ತಾನು ಪ್ರೀತಿಸಿದ ಇನಾಯತ್‍ಖಾನರ ಜತೆ ಬದುಕಲು, ತನ್ನ ಕುಟುಂಬದವರ ಪ್ರತಿರೋಧವನ್ನು ಲೆಕ್ಕಿಸದೆ, ಸಿರಿವಂತ ಬದುಕನ್ನು ತೊರೆದು ಆಕೆ ಬಂದವರು. ಬಂದಬಳಿಕ ಅಲೆಮಾರಿಯಾಗಿದ್ದ ಇನಾಯತ್ ಖಾನರ ಜತೆ ನಿಂತು, ದೇಶಾಂತರ ತಿರುಗುವ, ನಿರಂತರ ಕಷ್ಟಗಳನ್ನು ಹಂಚಿಕೊಂಡು ಬದುಕುವ ಕಠೋರದಾರಿಗೆ ಮೈಯೊಡ್ಡಿದವರು. ಬದುಕಿನ ಯಾವುದೊ ಒಂದು ಘಟ್ಟದಲ್ಲಿ ಗಂಡಸರು ಸಂಸಾರ ವಿಮುಖರಾಗಿ ತಮ್ಮ ಕಲೆಯಲ್ಲೊ ಅನುಭಾವದಲ್ಲೊ ತಲೆಮರೆಸಿಕೊಂಡಾಗ, ಸಂತಾನವನ್ನು ಪೋಷಿಸುವ ಹಾಗೂ ಕುಟುಂಬವು ಕುಸಿಯದಂತೆ ಹಿಡಿದುಕೊಳ್ಳುವ ಹೊಣೆಯನ್ನು ಮಹಿಳೆಯರು ಹೊರುತ್ತಾರೆ. ಅದು ಫ್ಯಾಸಿಸಂ ವಿರುದ್ಧದ ಯುದ್ಧಕ್ಕಿಂತ ಯಾವ ಬಗೆಯಲ್ಲೂ ಕಡಿಮೆಯಿಲ್ಲ. ಹೀಗಾಗಿ ಈ ಕೃತಿಯ ಅದೃಶ್ಯ ನಾಯಕಿ ನೂರಳ ತಾಯಿ. ಈಕೆ ಗಾರ್ಕಿಯ ‘ಮದರ್’ ಕಾದಂಬರಿಯ ತಾಯಿಯನ್ನು ನೆನಪಿಸುವರು.

ಚಂದ್ರಶೇಖರ ಮಂಡೆಕೋಲು

ಚಂದ್ರಶೇಖರ ಮಂಡೆಕೋಲು ಅವರು ಈಗಾಗಲೇ ಭಾರತದ ಮೊದಲ ವೈದ್ಯೆ ಆನಂದಿಬಾಯಿ ಮೇಲೆ ಕೃತಿ ರಚಿಸಿದವರು. ಕನ್ನಡದಲ್ಲಿ ಮಂಡೆಕೋಲು, ಎಂ.ಆರ್.ಕಮಲಾ, ಜಗದೀಶ ಕೊಪ್ಪ, ವೇಣುಗೋಪಾಲ-ಶೈಲಜ ಅವರು, ಕಳೆದ ಕೆಲವು ವರ್ಷಗಳಿಂದ ಮಹಿಳಾ ಸಾಧಕಿಯರ ಮೇಲೆ ಕೃತಿ ರಚಿಸಿದರು. ವೃತ್ತಿಪರ ಇತಿಹಾಸಕಾರರಲ್ಲದ ಇವರು, ರಾಜಮಹಾರಾಜರ ಕ್ಲಾಸಿಕಲ್ ಚರಿತ್ರೆಯು ಅವಗಣಿಸಿರುವ ಅಜ್ಞಾತರೂ ಮಹತ್ವದವರೂ ಆದ ವ್ಯಕ್ತಿಗಳ ಮೇಲೆ ಚರಿತ್ರೆ ಕಟ್ಟುತ್ತಿರುವರು. ಇದು ಸಾಂಪ್ರದಾಯಿಕ ಚರಿತ್ರೆಯನ್ನು ಬೇರೊಂದೇ ಬಗೆಯಲ್ಲಿ ನೋಡಲು ನಮ್ಮನ್ನು ಒತ್ತಾಯಿಸಬಲ್ಲದಾಗಿದೆ.

ಹೀಗೆ ವ್ಯಕ್ತಿ, ಕುಟುಂಬ, ದೇಶ ಮತ್ತು ಪರಂಪರೆಗಳ ನಾಲ್ಕು ಆಯಾಮಗಳನ್ನು ಒಳಗೊಂಡಿರುವ, ಒಬ್ಬ ಮಹಿಳೆಯ ಮೇಲೆ ಜೀವನಚರಿತ್ರೆಯನ್ನು ಶ್ರದ್ಧೆಯಿಂದ ರಚಿಸಿರುವುದಕ್ಕಾಗಿ ಚಂದ್ರಶೇಖರ ಮಂಡೆಕೋಲು ಅವರಿಗೆ ಕನ್ನಡದ ಓದುಗರ ವತಿಯಿಂದ ಕೃತಜ್ಞತೆ ಸಲ್ಲಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ; ಇದು ಬಿಜೆಪಿಯ ಗೆಲುವಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಗೆಲುವೂ ಅಲ್ಲ. ಇದೊಂದು ದಲಿತ ಸಮುದಾಯ ನಾಯಕರ...

ಬಿಜೆಪಿ ಕಾರ್ಯಕರ್ತನ ಬಳಿ 3,400ಕ್ಕೂ ಹೆಚ್ಚು SIR ಎನ್ಯುಮರೇಷನ್‌ ಫಾರಂಗಳು ಪತ್ತೆ!-ವರದಿ

ಮತದಾರರ ವಿವರಗಳಿರುವ 3,400ಕ್ಕೂ ಹೆಚ್ಚು ಎಸ್‌ಐಆರ್ ಎನ್ಯುಮರೇಷನ್ ಫಾರಂಗಳು ಸ್ಥಳೀಯ ಬಿಜೆಪಿ ಕಾರ್ಯಕರ್ತನ ಬಳಿ ಪತ್ತೆಯಾದ ಬಳಿಕ, ನವಿ ಮುಂಬೈನಲ್ಲಿ ಐವರು ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಗುರುವಾರ (ಆ.27)...

ಹಾವೇರಿ| ಆಹಾರ ಸಂಸ್ಕರಣಾ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಕಲುಷಿತ ಆಹಾರ ಪದಾರ್ಥ ವಶಕ್ಕೆ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಹಶೀಲ್ದಾರ್ ನೇತೃತ್ವದ ತಂಡ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ರಾಣೆಬೆನ್ನೂರು ತಾಲೂಕಿನ ವಿವಿಧ ಆಹಾರ ಸಂಸ್ಕರಣಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿ, 1,033 ಕೆಜಿ ಕಲುಷಿತ ಆಹಾರ...

ಹಾಸನ: ಎಡಪಂಥೀಯರು ಮೋಸ್ಟ್ ಡೇಂಜರಸ್, ಕಳ್ಳರು! ನಿಶ್ಚಲಾನಂದನಾಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಗೆ CPI(M) ಖಂಡನೆ

ಹಾಸನ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 'ವಿಶ್ವ...

ನೇಪಾಳ ಪ್ರವಾಹ : 620 ದಾಟಿದ ಮೃತರ ಸಂಖ್ಯೆ; 3 ಸಾವಿರದಷ್ಟು ಜನರು ಇನ್ನೂ ನಾಪತ್ತೆ-ವರದಿ

ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಕನಿಷ್ಠ 616 ಜನರು ಸಾವನ್ನಪ್ಪಿದ್ದಾರೆ ಎಂದು ನೇಪಾಳ ಪೊಲೀಸರು ಶನಿವಾರ (ಆ.29) ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಶುಕ್ರವಾರ (ಆ.28) ಪೊಲೀಸರು...

ನಾಗೇಂದ್ರ ರಾಜೀನಾಮೆ: ಬಡಿಗೆ ಕೊಟ್ಟು ಹೊಡೆಸಿಕೊಂಡಂತಾಯ್ತು ಕಾಂಗ್ರೆಸ್ ಪರಿಸ್ಥಿತಿ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ '40% ಸರ್ಕಾರ' ಮತ್ತು 'ಪೇ ಸಿಎಂ' ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್‌ಗೆ,...

SIR ಕುತಂತ್ರ: 43.81 ಲಕ್ಷ ಜನರ ಮನೆ ಬಾಗಿಲಿಗೆ ನೋಟಿಸ್‌ ಬಿಸಿ, ಪೌರತ್ವ ಸಾಬೀತುಪಡಿಸಲು ನಾಗರಿಕರು ಅಲೆಯಬೇಕೇ ?

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ಲಕ್ಷಾಂತರ ನಾಗರಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.ಚುನಾವಣಾ ಆಯೋಗವು ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ ಸುಮಾರು 1.08...

ದಿಮಾಗಿ ನಕ್ಸಲ್: ರೈತ, ವಿದ್ಯಾರ್ಥಿ ಹೋರಾಟಗಳೂ ದೇಶದ್ರೋಹವೇ? RSS ಪತ್ರಿಕೆಯ ವಿವಾದಾತ್ಮಕ ಪ್ರತಿಪಾದನೆ

ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿ ಮಾದರಿಗೆ ತೀವ್ರ ಸ್ವರೂಪದ ಸುಧಾರಣೆಗಳ ಅಗತ್ಯವಿದೆ. ಆದರೆ ಈ ಸಮಸ್ಯೆಗಳು ಕಳೆದ ಹನ್ನೆರಡು ವರ್ಷಗಳಲ್ಲಿ ಹುಟ್ಟಿಕೊಂಡಿದ್ದಲ್ಲ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ. ಹಿಂದುತ್ವವನ್ನು ದಮನಕಾರಿ...

ಅಹಮದಾಬಾದ್‌ನಲ್ಲಿ ಪುಸ್ತಕ ಓದುಗರ ಮೇಲೆ ಭಜರಂಗದಳ ದೌರ್ಜನ್ಯ: ಮಲಾಲಾ, ಆನ್ ಫ್ರಾಂಕ್ ಕೃತಿಗಳಿಗೆ ವಿರೋಧಿಸಿ ಬೆದರಿಕೆ!

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾಹಿತ್ಯಾಭಿಮಾನಿಗಳ ಮೇಲೆ ಭಜರಂಗದಳ ಕಾರ್ಯಕರ್ತರು ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಗರದ ಸಾರ್ವಜನಿಕ ಉದ್ಯಾನವನವೊಂದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜೈ ಹಾಗೂ ವಿಶ್ವಪ್ರಸಿದ್ಧ ಲೇಖಕಿ ಆನ್...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಹಿಂದಿನ ಪ್ರಮುಖ ಸಂಚುಕೋರರು ಎಂದು ಆರೋಪಿಸಿರುವ ದೆಹಲಿ ಪೊಲೀಸರು, ಕಾರಾಗೃಹದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ...