- Advertisement -
- Advertisement -
“ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಭಾಷ್ಯ ಬರೆದ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ರವರ ಜಯಂತಿಯಂದು ಶತ ನಮನಗಳು” ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಭಗತ್ ಸಿಂಗ್ರವರನ್ನು ಸ್ಮರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿಯವರು ಸಹ “ಯುವ ಜನತೆಯ ಆದರ್ಶವಾಗಿರುವ ವೀರ ಸೇನಾನಿ ಭಗತ್ ಸಿಂಗ್ ಜನ್ಮದಿನವಿಂದು. ಭಾರತವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತ ಮಾಡಲು ಕ್ರಾಂತಿಮಾರ್ಗವನ್ನಿಡಿದು ಹೋರಾಡಿ ಚಿರಾಯುವಾದ ಕ್ರಾಂತಿಕಾರಿಗೆ ಜನ್ಮಜಯಂತಿಯ ಶತಪ್ರಣಾಮಗಳನ್ನು ಸಲ್ಲಿಸುತ್ತೇನೆ” ಎಂದು ಭಗತ್ ಸಿಂಗ್ ನೆನಪು ಮಾಡಿಕೊಂಡಿದ್ದಾರೆ.