Homeಕರ್ನಾಟಕಸಾಂಸ್ಕೃತಿಕವಾಗಿ ಕ್ರಿಯಾಶೀಲವಾದ ವಿಜಯನಗರ ಪ್ರದೇಶಕ್ಕೆ ರಂಗಾಯಣಕ್ಕಾಗಿ ಕಲಾವಿದರಿಂದ ಒತ್ತಾಯ..‌

ಸಾಂಸ್ಕೃತಿಕವಾಗಿ ಕ್ರಿಯಾಶೀಲವಾದ ವಿಜಯನಗರ ಪ್ರದೇಶಕ್ಕೆ ರಂಗಾಯಣಕ್ಕಾಗಿ ಕಲಾವಿದರಿಂದ ಒತ್ತಾಯ..‌

- Advertisement -
- Advertisement -

ವಿಜಯನಗರ ಸಾಮ್ರಾಜ್ಯ ಎನ್ನುವುದು ಕನ್ನಡ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಭಾಷೆಗೆ ಸಂಬಂಧಿಸಿ ಮತ್ತೆ ಮತ್ತೆ ಪ್ರಸ್ತಾಪವಾಗುವ ಇತಿಹಾಸವುಳ್ಳ ನಾಡಾಗಿದೆ. ಈ ಮಧ್ಯಕರ್ನಾಟಕದ ತುದಿಯಲ್ಲಿರುವ ಈ ವಿಜಯನಗರಕ್ಕೊಂದು (ಹಂಪಿ) ರಂಗಾಯಣ ಅವಶ್ಯಕತೆಯಿದೆ.

“ಹಂಪಿಯ ಸುತ್ತಮುತ್ತಲಿನ ದೊಡ್ಡಾಟದಲ್ಲಿ ಹಾಡುತ್ತಿದ್ದ ಧಾಟಿಗಳು ಹಾಡಿನ‌ಮಟ್ಟುಗಳ ಪ್ರಭಾವ ಆರಂಭದ ತೆಲಗು ಸಿನಿಮಾಗಳ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಆಗಿತ್ತು..” ಎಂಬ ಮಾತನ್ನು ನನ್ನ ಗುರುಗಳಾದ ಬಸವರಾಜ ಮಲಶೆಟ್ಟರ್ ಸರ್ ಆಗಾಗ ಹೇಳುತ್ತಿದ್ದರು. ಅಲ್ಲದೆ ವಿಜಯನಗರದಲ್ಲಿಯೇ ಮೊಟ್ಟಮೊದಲು ಯಕ್ಕಲಗಾಣ ಪ್ರದರ್ಶನ ಆಗುತ್ತಿತ್ತು ಎಂಬ ಮಾತನ್ನು ನೆನಪಿಸುತ್ತಿದ್ದರು. ಮತ್ತೂ ಇಂದಿನ ಯಕ್ಷಗಾನ ಕಲಾಪ್ರಕಾರವನ್ನು ಇದೇ ಸಾಮ್ರಾಜ್ಯದ ಕೂಚಿಪುಡಿ ಗ್ರಾಮದ ಸಿದ್ಧೇಂದ್ರ ಯತಿಗಳು ಉಡುಪಿ ಸೀಮೆಗೆ ಕೊಂಡೊಯ್ದು ಯಕ್ಷಗಾನ ರೂಪಿಸಿದರೆಂಬ ಬಗ್ಗೆಯೂ ಇತಿಹಾಸ ಹೇಳುತ್ತದೆ.

ಮಹಾದೇವ ಹಡಪದ

ಈ ಸೀಮೆಯ ದರೋಜಿಯ ಬುರ್ರಕತೆ, ಗೊಂದಲಿಗರ ಹಾಡು, ಕೊಟ್ಟೂರಿನ ಗೊಂಬೇಯಾಟ, ಹಳ್ಳಿಹಳ್ಳಿಗಳಲ್ಲಿ ನಡೆಯುವ ಆಹೋರಾತ್ರಿಯ ಬಯಲಾಟಗಳು ಸಾಕಷ್ಟು ಪ್ರಮಾಣದಲ್ಲಿ ನಾಟಕ ಕಂಪನಿಗಳ ಹುಟ್ಟಿಗೂ ಕಾರಣವಾಗಿವೆ. ಗರುಡ ಸದಾಶಿವರಾಯರು, ಜೋಳದರಾಶಿ ದೊಡ್ಡನಗೌಡರು, ಹಣ್ಣಿ ವೀರಭದ್ರಪ್ಪ, ದುರ್ಗಾದಾಸರು ಬಳ್ಳಾರಿ ರಾಘವಾಚಾರರು ಹೀಗೆ ಸಾಲುಸಾಲು ವೃತ್ತಿರಂಗಭೂಮಿಯ ಮೇರುನಟರು ಇದೇ ಸೀಮೆಯವರು. ಇನ್ನು ನಾಟಕದ ನಟನಟಿಯರಿಗೇ ಹೆಸರಾದ ಊರುಗಳೂ ಈ ಸೀಮೆಯಲ್ಲಿವೆ.

ಮರಿಯಮ್ಮನಹಳ್ಳಿ, ಹೂವಿನಹಡಗಲಿ, ಬಳ್ಳಾರಿಗಳಲ್ಲಿ ಅಸಂಖ್ಯಾತ ಕಲಾವಿದರಿದ್ದಾರೆ. ರಾಜಕಾರಣದಲ್ಲಿದ್ದೂ ನಾಟಕರಂಗದೊಂದಿಗೆ ನಂಟನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಈ ನಾಡಿನ ಗೃಹಮಂತ್ರಿಗಳೂ ಆಗಿದ್ದ ದಿ. ಎಂ.ಪಿ. ಪ್ರಕಾಶ ಅವರು ಇದೇ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಹಂಪಿ ಉತ್ಸವ ಆರಂಭಿಸುವ ಮೂಲಕ ಉತ್ಸವಗಳದ್ದೊಂದು ಪರಂಪರೆಯನ್ನೇ ಆರಂಭಿಸಿದ್ದರು. ಅದಕ್ಕೂ ಮಿಗಿಲಾಗಿ ಕನ್ನಡ ಭಾಷೆಗೆ ಸೀಮಿತವಾದ ವಿಶ್ವವಿದ್ಯಾಲಯವೂ ಹಂಪಿಯಲ್ಲಿಯೇ ಇದೆ.

ಇಷ್ಟೆಲ್ಲ ಕನ್ನಡ ನಾಡಿಗೆ ಕೊಡುಗೆ ಕೊಟ್ಟಿರುವ ಈ ಸೀಮೆಯಲ್ಲೊಂದು ಸಾಂಸ್ಕೃತಿಕ ಕೇಂದ್ರದ ಅಗತ್ಯವಿದೆ.
ಈ ಭಾಗಕ್ಕೆ ಸಂಬಂಧಿಸಿದ ರಂಗಾಯಣವು ದೂರದ ಕಲಬುರ್ಗಿಯಲ್ಲಿದ್ದು ಅದು ಯಾವ ರೀತಿಯಲ್ಲೂ ಬಳ್ಳಾರಿ-ಕೊಪ್ಪಳ ರಾಯಚೂರು ಜಿಲ್ಲೆಗಳನ್ನು ಪರಿಗಣಿಸಿ ಸ್ವತಂತ್ರವಾದ ಕಾರ್ಯಕ್ರಮ ರೂಪಿಸಿದ್ದ ದಾಖಲೆ ಇಲ್ಲ. ಅಲ್ಲದೆ ಇತ್ತ ಧಾರವಾಡ ರಂಗಾಯಣವೂ, ಶಿವಮೊಗ್ಗ ರಂಗಾಯಣಗಳೂ ಸಮಾನ ದೂರದಲ್ಲಿವೆ.

ಕರ್ನಾಟಕದ ಮೇರು ವೃತ್ತಿಕಲಾವಿದರು, ದೊಡ್ಡಾಟ ಕಲಾವಿದರು, ಹೆಸರಾಂತ ಸಾಹಿತಿಗಳಿರುವ, ಸಾಕಷ್ಟು ನಾಟಕ ಕಂಪನಿಗಳ ಹುಟ್ಟಿಗೂ ಕಾರಣವಾಗಿರುವ ಮತ್ತು ವಂಶಪಾರಂಪರ್ಯವಾಗಿ ಕೆಲವು ಕುಟುಂಬಗಳು ಈಗಲೂ ಕಲಾಪ್ರಕಾರಗಳನ್ನು ಈ ಭಾಗದಲ್ಲಿ ಪೋಷಿಸಿಕೊಂಡು ಬಂದಿವೆ. ಈ ಎಲ್ಲ ಹಿನ್ನೆಲೆ ಈ ಸೀಮೆಗಿದ್ದರೂ ಸಾಂಸ್ಕೃತಿಕವಾದ ಅಧ್ಯಯನಕ್ಕೊಂದು ರಂಗಾಯಣ ಇಲ್ಲದಿರುವುದು ಬೇಸರದ ಸಂಗತಿ. ಇಂಥ ನಾಡನ್ನು ಕಡೆಗಣಿಸಿ ದೂರದೂರದಲ್ಲಿ ರಂಗಾಯಣ ಸ್ಥಾಪಿಸಿದ್ದು ಸ್ಥಳಿಯವಾಗಿ ಸಾಂಸ್ಕೃತಿಕ ಲೋಕಕ್ಕೆ ಅಡಚಣೆಯಾಗಿದೆ.

ದಯಮಾಡಿ ಸರಕಾರವು ಈ ಭಾಗದ ರಂಗಭೂಮಿಗೆ ಜೀವ ಕೊಡಲು ಹಂಪಿಯನ್ನು ಕೇಂದ್ರವಾಗಿಸಿಕೊಂಡು ಒಂದು ರಂಗಾಯಣವನ್ನು ಸ್ಥಾಪಿಸಿದರೆ ಈ ಗಡಿನಾಡ ಭಾಗದಲ್ಲಿ ರಂಗಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕವಾದ ವಾತಾವರಣ ಕಟ್ಟಲು ಹೆಚ್ಚು ಉಪಯೋಗವಾಗುತ್ತದೆ.

ಮಹಾದೇವ ಹಡಪದ, ರಂಗ ನಿರ್ದೇಶಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...