Homeಸಾಹಿತ್ಯ-ಸಂಸ್ಕೃತಿಕವನಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

ಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

- Advertisement -
- Advertisement -

(“ಇತ್ತೀಚೆಗೆ ಭಾಷಾಧಿಪತ್ಯದ ಧೊರಣೆಯ ಬಗ್ಗೆ ರಹೀಂ ಪೊನ್ನಾಡ್ ಬರೆದ ಮಲೆಯಾಳಂ ಕವನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಂದ ಹಿಂದೀ ಅನುವಾದವನ್ನು ನೋಡಿ ತೆಲುಗಿಗೆ ಅನುವಾದ ಮಾಡದೇ ಇರಲು ಸಾಧ್ಯವಾಗಲಿಲ್ಲ” ಎಂದು ಕವನವನ್ನು ತೆಲುಗಿಗೆ ಅನುವಾದ ಮಾಡಿದ ಮುಖಪುಟದ ಗೆಳೆಯ ಎನ್. ವೇಣುಗೋಪಾಲ್ ಬರೆದುಕೊಂಡಿದ್ದಾರೆ. ನನ್ನ ಸ್ಥಿತಿಯು ಸಹಾ ಅಂಥದ್ದೇ ಆಗಿರುವುದರಿಂದ ಕನ್ನಡಾನುವಾದ ನಮ್ಮೆಲ್ಲರಿಗಾಗಿ…)

ಒಂದು ದಿನ ಅರ್ಧ ರಾತ್ರಿ
ಆತ ಭಾಷೆಯ ಮೇಲೆ ನಿಷೇಧವೇರಿದ
‘ಇಂದಿನಿಂದ ಎಲ್ಲರದ್ದೂ ಒಂದೇ ಭಾಷೆ”
ಹಳೇ ಭಾಷಾ ಪದಗಳು ನಿಮ್ಮಲ್ಲಿದ್ದರೆ
ಅಂಚೆ ಕಚೇರಿಯಲ್ಲಿ ಬದಲಾಯಿಸಿ ಕೊಳ್ಳಬಹುದು’
ಎಂಬ ಗಂಭೀರ ಪ್ರಕಟಣೆ ಹೊರಡಿತು

ಅರ್ಧ ನಿದ್ರೆಯಲ್ಲಿದ್ದ ಜನರು
ಬೆಚ್ಚಿಬಿದ್ದು
ಓಟ ಶುರುಮಾಡಿದರು
ಪ್ರತಿಯೊಂದು ಜಾಗದಲ್ಲೂ ನಿಶ್ಶಬ್ಧ
ತಾಯಂದಿರು ಮಕ್ಕಳ ಬಾಯನ್ನು ಕೈಗಳಿಂದ ಮುಚ್ಚಿದ್ದಾರೆ
ಮುದುಕರ ಮುಖಗಳನ್ನು ಬಟ್ಟೆಯಿಂದ ಮರೆಮಾಚಿದ್ದಾರೆ
ದೇವಾಲಯಗಳಲ್ಲಿ ಹಾಡುಗಳು ನಿಂತುಹೋಗಿವೆ
ಮಸೀದಿಯಲ್ಲಿ ಅಜಾನ್ ಸಹಾ ಕೇಳಿಸುತ್ತಿಲ್ಲ
ರೇಡಿಯೋದಲ್ಲಿ ವೀಣಾ ವಾದನೆ ಬಿಟ್ಟರೆ ಮತ್ತೇನೂ ಕೇಳಿಸುತ್ತಿಲ್ಲ
ಟೀವಿ ಪರದೆಯ ಮೇಲೆ ಸನ್ನೆಯ ಭಾಷೆಯಲ್ಲೇ ವಾರ್ತೆಗಳು ಬರುತ್ತಿವೆ
ಪತ್ರಿಕೆಗಳ ಹೆಸರಲ್ಲಿ
ಸಂತೆಗೆ ಬಂದಿರುವುದು ಎಂಟು ಕಾಲಂಗಳು ಖಾಲಿ ಇರುವ ಬಿಳಿ ಕಾಗದಗಳು
ಎಲ್ಲಾ ಕೀಬೋರ್ಡ್‍ಗಳು ಮೌನತಾಳಿವೆ
ಮೊಬೈಲ್ ಸ್ಕ್ರೀನ್‍ಗಳ ಮೇಲೆ
ಗೊಂಬೆಗಳು ಮಾತ್ರ ಉಳಿದಿವೆ

ಅಂಚೆ ಕಚೇರಿಯ ಮುಂದೆ ನಿಶ್ಶಬ್ದವಾಗಿ ನಿಂತ ಉದ್ದನೆಯ ಕ್ಯೂ
ದಿನಕ್ಕೆರಡು ಪದಗಳನ್ನು ಮಾತ್ರ ಬದಲಾಯಿಸಿಕೊಳ್ಳಲು
ಅನುಮೋದನೆ ನೀಡಲಾಗಿದೆ
ಆದರೆ ಕೆಲವರು ಚೀಲಗಳ ತುಂಬಾ ಶಬ್ದಗಳನ್ನು ತುಂಬಿಕೊಂಡು ಬಂದಿದ್ದಾರೆ
ಟಿಫಿನ್ ಬಾಕ್ಸ್‌ಗಳಲ್ಲಿ ಬ್ಯಾಗುಗಳಲ್ಲಿ ಮಾತುಗಳನ್ನು
ತುಂಬಿಕೊಂಡು ಬಂದ ಪುಟಾಣಿ ಮಕ್ಕಳು ಕೂಡಾ ಕ್ಯೂನಲ್ಲಿ ನಿಂತಿದ್ದಾರೆ

‘ಅಮ್ಮ’ ಎಂಬ ಮಾತು ಕೊಟ್ಟವರಿಗೆ
‘ಮಾ’ ಎಂಬ ಮಾತು ಸಿಕ್ಕಿದೆ
‘ಅಪ್ಪ’ ಎಂಬ ಮಾತಿಗೆ
‘ಬಾಪ್‘ ಎಂಬ ಮಾತು ಸಿಕ್ಕಿತು
ಚಾಕೊಲೇಟ್, ಗೇಮ್ ಎಂಬ ಪದಗಳನ್ನು ಬದಲಾಯಿಸಿಕೊಳ್ಳಲು ಬಂದ ಮಕ್ಕಳನ್ನು
ಕೌಂಟರ್‌ನಿಂದ ಕಳುಹಿಸೇಬಿಟ್ಟರು
ಇಲ್ಲಿ ಭಾಷೆಯನ್ನು ಮಾತ್ರ ಬದಲಾಯಿಸಿಕೊಳ್ಳಬಹುದು ಎಂದರು

ಬದಲಾಯಿಸಲು ಶಬ್ಧಗಳಿಲ್ಲ ಎಂಬ ಕಾರಣಕ್ಕಾಗಿ
‘ಅಸಂತೃಪ್ತಿ’ ಎಂಬ ಪದವನ್ನು
‘ಹೆಣದ ವಸ್ತ್ರ’ ಎಂಬ ಪದವನ್ನು ಹಿಂದಕ್ಕೆ ಕಳುಹಿಸಿದರು

‘ಚೂರಿ’ ಪದವನ್ನು ಬದಲಾಯಿಸಲು ಬಂದವರನ್ನು ಓಡಿಸಿಬಿಟ್ಟರು
‘ಮದ್ದುಗುಂಡು’ ಎಂಬ ಪದ ಬದಲಾಯಿಸಿ ಎಂದರೆ
ಪೊಲೀಸರು ಸೆರೆ ಹಿಡಿದರು
ಕ್ಯೂನಲ್ಲಿ ನಿಂತು ನಿಂತು ಸುಸ್ತಾದ ಮುದುಕರು
ಕುಡಿಯಲು ನೀರು ಕೇಳಿದರೆ
ತುಪಾಕಿ ತೋಟಾಗಳಿಂದ ಬಾಯಿ ಮುಚ್ಚಿಸಿದರು

ಇದೆಲ್ಲವನ್ನೂ ನೋಡಿ ನೋಡಿ
ಸಾಕಾಗಿ ಮನೆಗೆ ಬಂದರೆ
ಮನೆ ಅಂಗಳದಲ್ಲಿ ಮಾತುಗಳ ರಾಶಿ ಬಿದ್ದಿದೆ
ಹೊಸ ಪದಗಳು, ಹಳೆ ಪದಗಳು, ಲಿಪಿ ಇಲ್ಲದ ಪದಗಳು
ಬದಲಾಯಿಸಿಕೊಂಡು ತರಬೇಕಾದ ಪದಗಳು

ಮನೆಯವರು ಎಲ್ಲವನ್ನೂ ರಾಶಿರಾಶಿಯಾಗಿ ಸುರಿದಿದ್ದಾರೆ
ಅಪ್ಪ ತನ್ನ ತಲೆದಿಂಬು ಒಳಗಿಂದ ತೆಗೆದ ಪದಗಳು
ನನಗೆ ಅರ್ಥವೇ ಆಗಲಿಲ್ಲ
ಅಮ್ಮ ತನ್ನ ಮಡಿಲಲ್ಲಿ ತುಂಬಿಕೊಂಡಿರುವ ಪದಗಳನ್ನು ನಾನೆಂದೂ ಕೇಳಲೇ ಇಲ್ಲ
ನನ್ನ ಹೆಂಡತಿ ಅಡುಗೆ ಮನೆಯಿಂದ ಎಳೆದುತಂದ ಪದಗಳನ್ನು ನೋಡಿದರೆ
ಅಷ್ಟು ಮಾತುಗಳ ಮಧ್ಯದಲ್ಲೇ ಆಕೆ ಅಡುಗೆ ಮಾಡುತ್ತಿದ್ದಳು ಅನಿಸಿತು
ನನ್ನ ಮಗಳ ಶಾಲೆಯ ಬ್ಯಾಗಿನಲ್ಲಿ ಹೋಂವರ್ಕ್ ಪದಗಳು
ನನ್ನ ಮಗನ ಪೆಟ್ಟಿಗೆಯಲ್ಲಿ ಹರಡಿರುವ ಜೋಷಿನ ಮಾತುಗಳು
ಎಷ್ಟೇ ಪದಗಳಿದ್ದರೂ ಬದಲಾಗಿ ಎರಡೇ ಎರಡು ಮಾತುಗಳು
ಮಾತ್ರ ಸಿಗುತ್ತವೆ ಎಂದು ಹೇಗೆ ಹೇಳಲಿ?

ಆ ಮಾತುಗಳ ಗಂಟಿನಲ್ಲಿ ತುಂಬಾ ಹುಡುಕಿದೆ
ಬಹಳ ಕಷ್ಟಪಟ್ಟ ಮೇಲೆ
ನನ್ನ ಕೈಗೆ ಎರಡು ಪದಗಳು ಸಿಕ್ಕವು
ಇರೋ ಬರೋ ಶಕ್ತಿ ಎಲ್ಲಾ ಬಳಸಿ
ಆ ಮಾತುಗಳನ್ನು ಹೊರಗೆ ಎಳೆದಿದೆ
ಒಂದು “ಪ್ರಜಾತಂತ್ರ” ಮತ್ತೊಂದು “ಬಹುಳ”

ಬೇಗ ಬೇಗ ಓಡಿಹೋಗಿ ಅಂಚೆ ಕಚೇರಿಗೆ ತಲುಪುವ ವೇಳೆಗೆ
ಮುಸ್ಸಂಜೆ ಕತ್ತಲಾಗುತ್ತಿತ್ತು
ನನ್ನ ಕೈಯಲ್ಲಿರುವ ಮಾತುಗಳನ್ನು ನೋಡಿ
ಬೆಚ್ಚಿಬಿದ್ದು ಎದ್ದು ನಿಂತರು
ಕೌಂಟರಿನ ಉದ್ಯೋಗಿಗಳು
ನನ್ನ ಕೈಯಲ್ಲಿನ ಮಾತುಗಳು ಜಾರಿ ಕೆಳಗೆ ಬಿದ್ದವು
ತುಂಬಾ ಜನ ಓಡಿ ಬಂದು ಸುತ್ತುವರೆಯುತ್ತಿರುವಂತೆ ಬೂಟು ಹೆಜ್ಜೆಗಳ ಸದ್ದು ಕೇಳಿಸಿತು
ಪ್ರಜ್ಞೆ ತಪ್ಪಿ ಬೀಳುತ್ತಿರುವ ನನಗೆ
ಎರಡೇ ಎರಡು ‘ಮಾತು’ಗಳು ಕೇಳಿಸಿತು
“ಸಾಯಿಸಿಬಿಡಿ” – “ದೇಶದ್ರೋಹಿಯನ್ನ”

ಮಲೆಯಾಳಂ ಮೂಲ : ರಹೀಮ್ ಪೊನ್ನಾಡ್
ಹಿಂದಿ : ಎ. ಆರ್. ಸಿಂಧು, ವೀಣಾ ಗುಪ್ತ
ತೆಲುಗು : ಎನ್.ವೇಣುಗೋಪಾಲ್
ಕನ್ನಡಾನುವಾದ : ಪದ್ಮಾ ಕೆ ರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈಶಾನ್ಯ ಭಾರತದಲ್ಲಿ ಕೇವಲ ನೂರು ವರ್ಷಗಳಲ್ಲಿ ಚರ್ಚ್ 60ಕ್ಕೂ ಅಧಿಕ ಭಾಷೆಗಳನ್ನು ಕೊಂದು ಇಂಗ್ಲಿಷ್ ಅನ್ನು ಸ್ಥಾಪಿಸಿದಾಗ, ಕೇರಳ ಸರಕಾರ ಕಾಸರಗೋಡಿನಲ್ಲಿ ಸಾವಿರಾರು ತುಳು, ಕನ್ನಡ, ಕೊಂಕಣಿ ಸಂಸಾರಗಳನ್ನು ಓಡಿಸಿದಾಗ ರಹೀಮರು ಕವನ ಬರೆಯಲಿಲ್ಲ!! ಮಂಗಳೂರು, ಚೆನ್ನೈ, ಮುಂಬಯಿ ಮುಂತಾದೆಡೆ ಕನ್ನಡ, ತುಳು, ತಮಿಳು, ಮರಾಠಿ ಭಾಷೆಗಳನ್ನು ಬಿಟ್ಟು ಹಿಡಿದದ್ದು ಹಿಂದಿಯನ್ನಲ್ಲ, ಇಂಗ್ಲಿಷನ್ನು!!! ಅವರ ಸಂಖ್ಯೆ ಈಗ ಶೇಕಡಾ 40 ದಾಟಿದೆ!!! ರಹೀಮರ ಪದ್ಯವನ್ನು ಅವರ ಮುಂದೆ ಓದಿದರೆ ಬಿದ್ದು ಬಿದ್ದು ನಗುತ್ತಾರೆ!!!

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...