Homeಮುಖಪುಟಬಿಹಾರ ವಿಧಾನಸಭೆ: ವಿಶ್ವಾಸ ಸಾಬೀತುಪಡಿಸಿದ ನಿತೀಶ್ ಕುಮಾರ್, ಸದನ ಬಹಿಷ್ಕರಿಸಿದ ಆರ್‌ಜೆಡಿ

ಬಿಹಾರ ವಿಧಾನಸಭೆ: ವಿಶ್ವಾಸ ಸಾಬೀತುಪಡಿಸಿದ ನಿತೀಶ್ ಕುಮಾರ್, ಸದನ ಬಹಿಷ್ಕರಿಸಿದ ಆರ್‌ಜೆಡಿ

- Advertisement -
- Advertisement -

ಬಿಹಾರ ವಿಧಾನಸಭೆಯಲ್ಲಿ ಸೋಮವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 130-0 ಅಂತರದಲ್ಲಿ ಗೆದ್ದಿದ್ದಾರೆ. ಈ ವೇಳೆ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸದನ ಬಹಿಷ್ಕರಿಸಿದರು.

ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟವಾದ ಮಹಾಘಟಬಂಧನ್ ತೊರೆದು, ಎನ್‌ಡಿಎ ಒಕ್ಕೂಟಕ್ಕೆ ನಿತೀಶ್ ಜಿಗಿದ ಎರಡು ವಾರಗಳ ನಂತರ ವಿಶ್ವಾಸ ಮತ ಪರೀಕ್ಷೆ ಇಂದು ನಡೆಯಿತು. ಇದೇ ಅಧಿವೇಶನದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ಮೂವರು ಶಾಸಕರಾದ ಪ್ರಹ್ಲಾದ್ ಯಾದವ್, ನೀಲಂ ದೇವಿ ಮತ್ತು ಚೇತನ್ ಆನಂದ್ ಎನ್‌ಡಿಎ ಒಕ್ಕೂಟಕ್ಕೆ ಬೆಂಬಲಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ‘ಕಳೆದ 15 ವರ್ಷಗಳಿಂದ ಲಾಲು ಪ್ರಸಾದ್-ರಾಬ್ರಿ ದೇವಿ ಸರ್ಕಾರಗಳು ಬಿಹಾರದ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ’ ಎಂದು ಆರೋಪಿಸಿದರು.

ಮತದಾನದ ಮೊದಲು ಸ್ಪೀಕರ್ ಅವಧ್ ಬಿಹಾರಿ ಚೌಧರಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಸಭೆಯು ಅಂಗೀಕರಿಸಿತು. ಉಚ್ಛಾಟನೆಯ ಪರವಾಗಿ 125 ಸದಸ್ಯರು ಮತ ಚಲಾಯಿಸಿದರು. ವಿಶ್ವಾಸಮತಕ್ಕೂ ಮುನ್ನ, ‘ಆಪರೇಷನ್’ ಕಳವಳದ ನಡುವೆ ಕಾಂಗ್ರೆಸ್ ಕಳೆದ ವಾರವೆ ತನ್ನ ಶಾಸಕರನ್ನು ಹೈದರಾಬಾದ್‌ಗೆ ಸ್ಥಳಾಂತರಿಸಿತ್ತು. ಆದರೆ, ಆರ್‌ಜೆಡಿಯ ಶಾಸಕರು ತೇಜಸ್ವಿ ಯಾದವ್ ಅವರ ಮನೆಯಲ್ಲಿ ಒಟ್ಟಿಗೆ ಇರಲು ನಿರ್ಧರಿಸಿದ್ದರು. ಬಿಜೆಪಿ ನಾಯಕ ನಿತ್ಯಾನಂದ ರೈ ಕೇಸರಿ ಪಕ್ಷದ ಎಲ್ಲಾ 78 ಶಾಸಕರನ್ನು ನಿರ್ವಹಿಸಿದರು. ಅವರೆಲ್ಲರೂ ಪಾಟ್ನಾದ ಹೋಟೆಲ್‌ನಲ್ಲಿ ಇದ್ದರು. ನಿತೀಶ್ ಕುಮಾರ್ ಅವರ ಜೆಡಿಯು ತನ್ನ 40 ಶಾಸಕರನ್ನು ರಾಜ್ಯ ರಾಜಧಾನಿಯ ಮತ್ತೊಂದು ಹೋಟೆಲ್‌ನಲ್ಲಿ ತಂಗುವಂತೆ ಮಾಡಿತ್ತು.

ವಿಶ್ವಾಸ ಮತಕ್ಕೆ ನಿಮಿಷಗಳ ಮೊದಲು, ಆರ್‌ಜೆಡಿ ನೇತೃತ್ವದ ಪ್ರತಿಪಕ್ಷಗಳು ಸದನದಿಂದ ಹೊರನಡೆದವು. ಜನತಾ ದಳ (ಯುನೈಟೆಡ್) ಮುಖ್ಯಸ್ಥರು ತೇಜಸ್ವಿ ಯಾದವ್ ಅವರ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರು.

ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ, ನಿತೀಶ್‌ ಕುಮಾರ್ ಮೊದಲು ಧ್ವನಿ ಮತದ ಮೂಲಕ ಬಹುಮತವನ್ನು ಸಾಬೀತುಪಡಿಸಿದರು. ನಂತರ, ಅವರು ಕೈಯಿಂದ ಮತದಾನಕ್ಕೆ ಒತ್ತಾಯಿಸಿದರು. ಅವರು ವಿಶ್ವಾಸ ಮತವನ್ನು ಗೆದ್ದರು, ಅವರ ಸರ್ಕಾರದ ಪರವಾಗಿ 129 ಮತಗಳನ್ನು ಪಡೆದರು.

ಕಳೆದ ತಿಂಗಳು ಮಿತ್ರಪಕ್ಷ ಆರ್‌ಜೆಡಿಯನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿರುವ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಅವರ ಪೋಷಕರಾದ ಲಾಲು ಯಾದವ್ ಮತ್ತು ರಾಬ್ರಿ ದೇವಿ ಅವರ ಮೇಲೆ ವಾಗ್ದಾಳಿ ನಡೆಸಿದರು. ‘ಇದಕ್ಕಿಂತ ಮೊದಲು, ಅವರ ತಂದೆ ಮತ್ತು ತಾಯಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು, ಆಗ ಬಿಹಾರದಲ್ಲಿ ಏನಾಯಿತು? ಆ ಸಮಯದಲ್ಲಿ ಯಾರಾದರೂ ರಾತ್ರಿಯಲ್ಲಿ ಹೊರಗೆ ಹೋಗಲು ಧೈರ್ಯ ಮಾಡುತ್ತಾರೆಯೇ? ಯಾವುದೇ ರಸ್ತೆ ಇದೆಯೇ?’ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಇದನ್ನೂ ಓದಿ; ಪ.ಬಂಗಾಳ: ಸದನದಲ್ಲಿ ಹೈಡ್ರಾಮ ಮಾಡಿದ 6 ಮಂದಿ ಬಿಜೆಪಿ ಶಾಸಕರು ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...