Homeಮುಖಪುಟಬಿಹಾರ: ಲಾಲು ಪ್ರಸಾದ್‌ ಯಾದವ್‌ ನೇತೃತ್ವದ RJDಯೊಂದಿಗೆ ವಿಲೀನಗೊಂಡ LJD

ಬಿಹಾರ: ಲಾಲು ಪ್ರಸಾದ್‌ ಯಾದವ್‌ ನೇತೃತ್ವದ RJDಯೊಂದಿಗೆ ವಿಲೀನಗೊಂಡ LJD

ಲಾಲು ಪ್ರಸಾದ್ ಯಾದವ್‌ ಮತ್ತು ಶರದ್‌ ಯಾದವ್‌ 25 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ

- Advertisement -
- Advertisement -

ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರು ಭಾನುವಾರ ತಮ್ಮ ಲೋಕತಾಂತ್ರಿಕ ಜನತಾ ದಳವನ್ನು (ಎಲ್‌ಜೆಡಿ) ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದೊಂದಿಗೆ (ಆರ್‌ಜೆಡಿ) ವಿಲೀನಗೊಳಿಸಿದ್ದಾರೆ. ಉಭಯ ಪಕ್ಷಗಳ ವಿಲೀನವನ್ನು ಘೋಷಿಸಿದ ನಂತರ, ಶರದ್ ಯಾದವ್ ಈ ಕ್ರಮವು ‘ಸಂಯುಕ್ತ ವಿರೋಧ ಪಕ್ಷದ ರಚನೆಯ ಕಡೆಗಿನ ಮೊದಲ ಹೆಜ್ಜೆ’ ಎಂದು ಹೇಳಿದ್ದಾರೆ.

“ಆರ್‌ಜೆಡಿಯೊಂದಿಗೆ ನಮ್ಮ ಪಕ್ಷವನ್ನು ವಿಲೀನಗೊಳಿಸುವುದು ಪ್ರತಿಪಕ್ಷಗಳ ಒಗ್ಗಟ್ಟಿನ ಮೊದಲ ಹೆಜ್ಜೆಯಾಗಿದೆ. ಬಿಜೆಪಿಯನ್ನು ಸೋಲಿಸಲು ಇಡೀ ಪ್ರತಿಪಕ್ಷಗಳು ಭಾರತದಾದ್ಯಂತ ಒಗ್ಗೂಡುವುದು ಅತ್ಯಗತ್ಯ. ಸದ್ಯಕ್ಕೆ, ಏಕೀಕರಣವು ನಮ್ಮ ಆದ್ಯತೆಯಾಗಿದ್ದು, ಅದನ್ನು ಮೊದಲು ಮಾಡುತ್ತೇವೆ. ಅದರ ನಂತರ ಒಗ್ಗಟ್ಟಿನ ಪ್ರತಿಪಕ್ಷವನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಕುರಿತು ಯೋಚಿಸಲಾಗುವುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ: ಚಂಪಾರಣ್ಯ ಸತ್ಯಾಗ್ರಹ ಸ್ಥಳದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ 

ಈ ಮಧ್ಯೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಎಲ್‌ಜೆಡಿಯನ್ನು ತಮ್ಮ ಪಕ್ಷದೊಂದಿಗೆ ವಿಲೀನಗೊಳಿಸುವ ಕ್ರಮವನ್ನು ಸ್ವಾಗತಿಸಿದ್ದಾರೆ. ದೇಶದ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಲ್ಲುವಂತೆ ಒತ್ತಾಯಿಸಿದ ಅವರು, “ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಏಕೀಕರಣಕ್ಕೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆ” ಎಂದು ಹೇಳಿದ್ದಾರೆ.

ಎರಡೂ ಪಕ್ಷಗಳು ತೆಗೆದುಕೊಂಡ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ, “ಎಲ್‌ಜೆಡಿಯನ್ನು ಆರ್‌ಜೆಡಿಗೆ ವಿಲೀನಗೊಳಿಸುವ ಬಗ್ಗೆ ಶರದ್ ಯಾದವ್ ಅವರು ತೆಗೆದುಕೊಂಡ ನಿರ್ಧಾರ ಜನರ ಬೇಡಿಕೆಯಾಗಿದೆ. ಇದು ಇತರ ವಿರೋಧ ಪಕ್ಷಗಳಿಗೆ ನಮಗೆ ಉತ್ತಮ ಸಮಯ ಎಂಬ ಸಂದೇಶವನ್ನು ನೀಡಿದೆ. 2019 ರಲ್ಲಿ ಒಂದುಗೂಡಬೇಕಿತ್ತು, ಆದರೂ ಇದು ಸರಿಯಾದ ಸಮಯ” ಎಂದು ಅವರು ಹೇಳಿದ್ದಾರೆ.

ಶರದ್ ಯಾದವ್ ಅವರು 2024 ರ ಲೋಕಸಭೆ ಚುನಾವಣೆಗೆ ಏಕೀಕೃತ ವಿರೋಧ ಪಕ್ಷವನ್ನು ಕಟ್ಟಲು ಎಲ್ಲಾ ಹಿಂದಿನ ಜನತಾ ದಳದ ಬಣಗಳು ಮತ್ತು ಇದೇ ರೀತಿಯ ಸಿದ್ಧಾಂತಗಳನ್ನು ಹೊಂದಿರುವ ಇತರ ಪಕ್ಷಗಳನ್ನು ಮತ್ತೆ ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಹಾರ: ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಕೈಗಳನ್ನು ಕಟ್ಟಿ ಬಂಧಿಸಿದ ಪೊಲೀಸರು

ನಿತೀಶ್ ಕುಮಾರ್‌ ನೇತೃತ್ವದ ಜೆಡಿಯು 2018 ರಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿದ ನಂತರ ಅದರಿಂದ ಹೊರ ಬಂದ ಶರದ್ ಯಾದವ್ ಅವರು LJD ಅನ್ನು ರಚಿಸಿದ್ದರು. LJD ತನ್ನ ಆರಂಭದಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಅದರ ಮುಖ್ಯಸ್ಥ ಆಗಿದ್ದ ಶರದ್ ಯಾದವ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಮಾಧೇಪುರದಿಂದ ತೇಜಸ್ವಿ ಯಾದವ್‌ ನೇತೃತ್ವದ RJD ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದರು.

ಒಕ್ಕೂಟ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇದ್ದಾಗ ಶರದ್ ಯಾದವ್ ಕ್ಯಾಬಿನೆಟ್ ಸಚಿವರಾಗಿದ್ದರು.

ಲಾಲು ಪ್ರಸಾದ್ ಯಾದವ್‌ ಮತ್ತು ಶರದ್‌ ಯಾದವ್‌ 25 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. 1997 ರಲ್ಲಿ ಲಾಲು ಪ್ರಸಾದ್ ಯಾದವ್ ಆರ್‌ಜೆಡಿ ಸ್ಥಾಪಿಸಿದಾಗ, ಶರದ್ ಯಾದವ್ ಅವರು ನಿತೀಶ್ ಕುಮಾರ್ ಅವರೊಂದಿಗೆ ಜೆಡಿಯು ಪ್ರಾರಂಭಿಸಿ ಬೇರೆಯಾಗಿದ್ದರು.

ನಂತರ ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಶಿಕ್ಷೆಗೊಳಗಾದರು. ಅವರು 1990 ರ ದಶಕದಲ್ಲಿ ಬಿಹಾರ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಲು ಬೇಕಾಗಿ ‘ಮಂಡಲ್ ಕಮೀಷನ್‌’ ಜಾರಿಗೆ ಹೋರಾಟ ನಡೆಸಿದ್ದರು. ಜೊತೆಗೆ ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್‌ಜೆಡಿ-ಆರ್‌ಜೆಡಿ ವಿಲೀನದಿಂದಾಗಿ ಜೂನ್‌ನಲ್ಲಿ ನಡೆಯಲಿರುವ, ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಆರ್‌ಜೆಡಿ ಶರದ್ ಯಾದವ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ: ತಲೆಯ ಮೇಲೆ ಬಟ್ಟೆ, ಹಣೆಯ ಮೇಲೆ ಶ್ರೀಗಂಧ ಇದ್ದರೆ ಸಮಸ್ಯೆಯೇನು: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌‌ ಪ್ರಶ್ನೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...