Homeಮುಖಪುಟಬಾಂಬೆ ಆಕ್ಸಿಜನ್ ಷೇರು ಬೆಲೆ 133% ಏರಿಕೆ!: ಆಮ್ಲಜನಕಕ್ಕೂ ಇದಕ್ಕೂ ಸಂಬಂಧವೇ ಇಲ್ಲ!

ಬಾಂಬೆ ಆಕ್ಸಿಜನ್ ಷೇರು ಬೆಲೆ 133% ಏರಿಕೆ!: ಆಮ್ಲಜನಕಕ್ಕೂ ಇದಕ್ಕೂ ಸಂಬಂಧವೇ ಇಲ್ಲ!

- Advertisement -
- Advertisement -

ಇದು ಆಕ್ಸಿಜನ್ ಎಂಬ ಪದದ ಮಹಿಮೆ! ಆಮ್ಲಜನಕ ಉತ್ಪಾದನೆ, ವಿತರಣೆ ಯಾವುದಕ್ಕೂ ಸಂಬಂಧವೇ ಇಲ್ಲದ ಬ್ಯಾಂಕೇತರ ಹಣಕಾಸು ಸಂಸ್ಥೆಗೆ ಬಂಪರ್ ಭಾಗ್ಯ ದೊರೆತಿದೆ. ಆದರೆ ಷೇರುಪ್ರಿಯ ಜನರು ತಪ್ಪಾಗಿ ಭಾವಿಸಿದ್ದರ ಪರಿಣಾಮ ಈ ಕಂಪನಿಗೆ ಬಂಪರ್ ಹೊಡೆದಿದೆ ಎಂದು ಫೈನಾನ್ಸಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆಮ್ಲಜನಕದ ಬೇಡಿಕೆಯ ಹಠಾತ್ ಏರಿಕೆಯೊಂದಿಗೆ ಒಂದು ತಿಂಗಳೊಳಗೆ ಬಾಂಬೆ ಆಕ್ಸಿಜನ್ ಇನ್‌ವೆಸ್ಟ್ಮೆಂಟ್ ಕಂಪನಿಯ ಷೇರು ಬೆಲೆ 133% ರಷ್ಟು ಭಾರಿ ಪ್ರಮಾಣದಲ್ಲಿ ಏರಿದೆ. ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹೂಡಿಕೆದಾರರು ಆಮ್ಲಜನಕವನ್ನು ಉತ್ಪಾದಿಸುವ ಕಂಪನಿಗಳ ಷೇರುಗಳನ್ನು ಉತ್ಸಾಹದಿಂದ ಖರೀದಿಸಿದರು. ಆದರೆ, ಈ ಪ್ರವೃತ್ತಿಯ ಪ್ರಧಾನ ಫಲಾನುಭವಿ ಬಾಂಬೆ ಆಕ್ಸಿಜನ್ ಇನ್ವೆಸ್ಟ್ಮೆಂಟ್ ಕಂಪನಿಯು ಆಮ್ಲಜನಕ ಉತ್ಪಾದನಾ ವ್ಯವಹಾರದಲ್ಲಿಲ್ಲ. ಇದು ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಆಗಿದೆ. ಹೂಡಿಕೆದಾರರಿಗೆ ಈ ವಾಸ್ತವ ಅರಿವಾದಾಗ ಬಾಂಬೆ ಆಕ್ಸಿಜನ್ ಇನ್ವೆಸ್ಟ್ಮೆಂಟ್‌ನ ಷೇರು ಬೆಲೆ ಮಂಗಳವಾರ 5% ಕುಸಿದು 23,346 ರೂ.ಗೆ ಇಳಿಯಿತು. ಆದರೂ ಒಂದು ತಿಂಗಳಲ್ಲಿ ಭರ್ಜರಿ ಏರಿಕೆಯಂತೂ ಸಿಕ್ಕಿತಲ್ಲ?

ಬ್ಯಾಂಕೇತರ ಹಣಕಾಸು ಕಂಪನಿಯಾದ ಠೇವಣಿ ರಹಿತ ಬಾಂಬೆ ಆಕ್ಸಿಜನ್ ಇನ್ವೆಸ್ಟ್ಮೆಂಟ್ಸ್ ಮಾರುಕಟ್ಟೆ ಬಂಡವಾಳ 350 ಕೋಟಿ ರೂ. ಈ ಮೊದಲು ಕಂಪನಿಯನ್ನು ಬಾಂಬೆ ಆಕ್ಸಿಜನ್ ಕಾರ್ಪೊರೇಷನ್ ಎಂದು ಕರೆಯಲಾಗುತ್ತಿತ್ತು. ಆದರೆ 2019 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈ ಹೆಸರನ್ನು ಬದಲಾಯಿಸಲಾಗಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ, ಸಂಸ್ಥೆಯು ತನ್ನ ಪ್ರಾಥಮಿಕ ವ್ಯವಹಾರವು ಆಗಸ್ಟ್ 2019 ರವರೆಗೆ ಕೈಗಾರಿಕಾ ಅನಿಲಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದೆ ಎಂದು ಹೇಳುತ್ತದೆ, ನಂತರ ಅದನ್ನು ನಿಲ್ಲಿಸಲಾಯಿತು. “ಕಂಪನಿಯು ಷೇರುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಇತರ ಹಣಕಾಸು ಭದ್ರತೆಗಳ ರೂಪದಲ್ಲಿ ಸಾಕಷ್ಟು ಹಣಕಾಸಿನ ಹೂಡಿಕೆಗಳನ್ನು ಹೊಂದಿದೆ ಮತ್ತು ಅಂತಹ ಹಣಕಾಸು ಹೂಡಿಕೆಗಳಿಂದ ಬರುವ ಆದಾಯವು ಕಂಪನಿಯ ಆದಾಯದ ಮೂಲವಾಗಿದೆ” ಎಂದು ಬಾಂಬೆ ಆಕ್ಸಿಜನ್ ಹೇಳಿದೆ.

ಬಾಂಬೆ ಆಕ್ಸಿಜನ್ ಹೂಡಿಕೆಯ ಷೇರು ಬೆಲೆ ವರ್ಷದ ಆರಂಭದಿಂದ ಮಾರ್ಚ್ 25 ರವರೆಗೆ ಸಮತಟ್ಟಾಗಿ ವಹಿವಾಟು ನಡೆಸುತ್ತಿದೆ. ಮಾರ್ಚ್ 25 ರಂದು ಈ ಸ್ಟಾಕ್ 10,000 ರೂಗಳನ್ನು ಉಲ್ಲೇಖಿಸುತ್ತಿತ್ತು ಮತ್ತು ಅಂದಿನಿಂದ ಮಂಗಳವಾರ 52 ವಾರಗಳ ಗರಿಷ್ಠ 25,500 ರೂ.ಗಳನ್ನು ತಲುಪಲು ಪ್ರಾರಂಭಿಸಿತು.

ಬಾಂಬೆ ಆಕ್ಸಿಜನ್ ಸ್ಟಾಕ್ ಬೆಲೆಯಲ್ಲಿ ಅನೌಪಚಾರಿಕ ಚಲನೆಯನ್ನು ಗ್ರಹಿಸಿದ ಬಾಂಬೆ ಸ್ಟಾಕ್ ಎಕ್ಸ್‌ಚೆಂಜ್ (ಬಿಎಸ್‌ಇ) ಏಪ್ರಿಲ್ 8 ರಂದು ಕಂಪನಿಯಿಂದ ಸ್ಪಷ್ಟೀಕರಣವನ್ನು ಕೋರಿತು. ಸ್ಪಷ್ಟೀಕರಣವನ್ನು ಕೋರಿದ ನಂತರ ಷೇರು ಬೆಲೆ ಒಂದು ಸಣ್ಣ ತಿದ್ದುಪಡಿಯನ್ನು ಕಂಡರೂ, ಇದು ಹೂಡಿಕೆದಾರರರಿಗೆ ತಟ್ಟಿದಂತೆ ತೋರುತ್ತಿಲ್ಲ, ಅಂದಿನಿಂದ ಇಂದಿನವರೆಗೆ ಷೇರುಗಳ ಬಲೆ ಶೆ.27ರಷ್ಟು ಹೆಚ್ಚಾಗಿದೆ.

ಒಟ್ಟಿನಲ್ಲಿ ನಮ್ಮ ಜನ ಕೊರೊನಾ ಎರಡನೇ ಅಲೆಯಲ್ಲಿ ಸಾಮೂಹಿಕ ಸನ್ನಿಗೆ ಒಳಗಾಗಿದ್ದು ಹಿಂದು ಮುಂದು ನೋಡದೇ ಗಾಳಿ ಸುದ್ದಿಗಳನ್ನು ನಂಬುತ್ತಿದ್ದಾರೆ. ಕೋವಿಡ್‌ ರೋಗಿಗಳಿಗೆ ರೆಮ್‌ಡಿಸಿವಿರ್ ಇಂಜೆಕ್ಷನ್ ಉತ್ತಮ ಚಿಕಿತ್ಸಕವಲ್ಲ ಎಂದು ವಿಜ್ಞಾನಿಗಳು ಹೇಳಿದ್ದರೂ, ಅದರ ಬಗ್ಗೆ ಇನ್ನು ಚರ್ಚೆಗಳು ನಡೆಯುತ್ತಿದ್ದರೂ ಆ ಔ‍ಷಧಿಗೆ ಭಾರೀ ಬೇಡಿಕೆ ಕಂಡುಬಂದಿರುವುದನ್ನು ಇದೇ ಅರ್ಥದಲ್ಲಿ ಗ್ರಹಿಸಬೇಕಾಗಿದೆ.

ಈ ನಡುವೆ, ಆಮ್ಲಜನಕ ಉತ್ಪಾದಿಸುವ ವ್ಯವಹಾರದಲ್ಲಿರುವ ಇತರ ಕಂಪನಿಗಳು ಇನ್ನೂ ಷೇರು ವಿನಿಮಯ ಕೇಂದ್ರಗಳಲ್ಲಿ ಬಲವಾದ ಹಿಡಿತ ಹೊಂದಿವೆ.. ನ್ಯಾಷನಲ್ ಆಕ್ಸಿಜನ್, ಭಗವತಿ ಆಕ್ಸಿಜನ್, ಲಿಂಡೆ ಇಂಡಿಯಾ, ಮತ್ತು ಗಗನ್ ಅನಿಲಗಳ ಷೇರು ಬೆಲೆಗಳು ಹಸಿರು ಬಣ್ಣದಲ್ಲಿವೆ.


ಇದನ್ನೂ ಓದಿ: ದೇಶದೆಲ್ಲೆಡೆ ಆಮ್ಲಜನಕ ಕೊರತೆ: ಒಂದು ವರ್ಷದಲ್ಲಿ ಭಾರತದ ಆಮ್ಲಜನಕ ರಫ್ತು 700% ಕ್ಕಿಂತ ಹೆಚ್ಚಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...