Homeಕರ್ನಾಟಕಉಪಚುನಾವಣೆ - ಬಿಜೆಪಿ ಉಪೇಕ್ಷೆ: ಬಂದ್ರೆ ಬೆಟ್ಟ..... ಹೋದ್ರೆ....

ಉಪಚುನಾವಣೆ – ಬಿಜೆಪಿ ಉಪೇಕ್ಷೆ: ಬಂದ್ರೆ ಬೆಟ್ಟ….. ಹೋದ್ರೆ….

- Advertisement -
- Advertisement -

ಅನರ್ಹ ಶಾಸಕರ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ, ಪ್ರಚಾರಕ್ಕೆ ಅಣಿಯಾಗುತ್ತಿದ್ದರೆ ಬಿಜೆಪಿ ಪಾಳೆಯದಲ್ಲಿ ಸದ್ದೇ ಇಲ್ಲ. ಅದರಲ್ಲೂ ಬೆಳಗಾವಿಯಲ್ಲಿ (ಈ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಿದೆ) ಬೃಹತ್ ಪ್ರತಿಭಟನೆ ಮತ್ತು ಹೊಸಕೋಟೆಯಲ್ಲಿ ಸಮಾವೇಶ ಮಾಡಿರುವ ಕಾಂಗ್ರೆಸ್ ‘ಇವರನ್ನು ಸೋಲಿಸಿಯೇ ಸಿದ್ಧ’ ಎಂದು ಪಣ ತೊಟ್ಟಂತಿದೆ. ಕೆಪಿಸಿಸಿ ಕಚೇರಿಯಲ್ಲಿ ಸಭೆಗಳ ಮೇಲೆ ಸಭೆಗಳು ನಡೆಯುತ್ತಿದ್ದು, ಪ್ರತಿ ಕ್ಷೇತ್ರಕ್ಕೂ ವೀಕ್ಷಕರ ನೇಮಕಾತಿಯಾಗಿಯೇ ಒಂದು ತಿಂಗಳಾಗಿದೆ. ಜೆಡಿಎಸ್ ಸಹಾ ಅದರ ಸಾರಥಿಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಿದೆ. ಯಡಿಯೂರಪ್ಪನವರು ಮತ್ತು ಅನರ್ಹ ಶಾಸಕರು ಭೇಟಿ ಮಾಡಿ ಚರ್ಚಿಸಿದ್ದಾರಾದರೂ, ಬಿಜೆಪಿ ಕಚೇರಿ ಹಾಗೂ ಸಂಘಟನೆಗೂ ಈ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲದಂತೆ ಇವೆ.

ಈ ಉಪಚುನಾವಣೆ ಏನಿದ್ದರೂ ಆಯಾ ಅನರ್ಹ ಶಾಸಕರು ಮತ್ತು ಯಡಿಯೂರಪ್ಪನವರಿಗೆ ಸಂಬಂಧಿಸಿದ್ದು ಎಂಬಂತೆ ಬಿಜೆಪಿಯು ವರ್ತಿಸುತ್ತಿದೆ. ಬಿಜೆಪಿ ಯಾವಾಗಲೂ ಗೆಲ್ಲುತ್ತಾ ಬಂದಿರುವುದು ಮತದಾರರು ತಮ್ಮಂತೆ ತಾವೇ ಆ ಪಕ್ಷದ ಜೊತೆಗೆ ಇದ್ದಾರೆ ಎಂಬ ಕಾರಣಕ್ಕಲ್ಲ. ಸಂಘಪರಿವಾರದ ಸಂಘಟನೆಗಳು ಮತ್ತು ಚುನಾವಣಾ ಯಂತ್ರಾಂಗ ವ್ಯವಸ್ಥಿತವಾಗಿ ಫೀಲ್ಡಿಗಿಳಿಯುತ್ತಾರೆ. ಈ ಸಾರಿ ಆ ರೀತಿ ಆಗಲಿಕ್ಕಿಲ್ಲ ಎಂಬ ಸ್ಪಷ್ಟ ಸೂಚನೆಗಳು ಈಗಾಗಲೇ ಸಂಭವಿಸಿವೆ.

ಇದಕ್ಕೆ ಕಾರಣಗಳು ಮೂರು. ಒಂದು, ಸದರಿ ಅನರ್ಹ ಶಾಸಕರು ಸಂಘಪರಿವಾರದ ಮೂಲದವರಲ್ಲ. ಬಹಳ ಕೆಟ್ಟ ರೀತಿಯಲ್ಲಿ ಆಮಿಷಕ್ಕೊಳಗಾಗಿ ಬಿಜೆಪಿಯ ಕಡೆಗೆ ಬಂದವರು. ಹಾಗಾಗಿ ಮುಂದೆಯೂ ಇವರ ನಿಷ್ಠೆ ಸಂಶಯಾಸ್ಪದ. ಎರಡು, ಇವರು ಗೆದ್ದ ಬಂದರೆ ಬಿಜೆಪಿ ಪ್ರಬಲವಾಗುತ್ತದೆ ಎಂಬುದಕ್ಕಿಂತ ಯಡಿಯೂರಪ್ಪನವರು ಪ್ರಬಲರಾಗುತ್ತಾರೆ; ಇದು ಬಿಜೆಪಿಯ ತ್ರೈಕಮ್ಯಾಂಡ್‍ಗೆ (ಮೋದಿ, ಶಾ, ಸಂತೋಷ್) ಬೇಕಿಲ್ಲ.

ಮೂರನೆಯದ್ದೇ ಮುಖ್ಯವಾದುದು. ಪ್ರತಿ ಕ್ಷೇತ್ರದಲ್ಲಿರುವ ಬಿಜೆಪಿಯ ಹಳೆಯ ಕಾರ್ಯಕರ್ತರು, ಪಕ್ಷವನ್ನು ಈ ಪಕ್ಷಾಂತರಿಗಳ ಗೆಲುವಿಗೆ ದುಡಿಸಿದರೆ ಮುಂದೆ ಅದರಿಂದ ಬಿಜೆಪಿಗೆ ಅನುಕೂಲವಾಗುತ್ತದೋ ಇಲ್ಲವೋ ಹೇಳಲು ಬರುವುದಿಲ್ಲ. ಇವರುಗಳು ಸೋಲಲೂಬಹುದು. ಅಂತಹ ಸಂದರ್ಭದಲ್ಲಿ ಸರ್ಕಾರವೇ ಬಿದ್ದು ಹೋಗಿ, ಅನರ್ಹ ಶಾಸಕರೂ ಬಿಜೆಪಿಯಲ್ಲಿ ಉಳಿಯದೇ, ಹಳೆಯ ಕಾರ್ಯಕರ್ತರೂ ಮುನಿಸಿಕೊಂಡರೆ ಪಕ್ಷಕ್ಕೆ ಡ್ಯಾಮೇಜು. ಅದರ ಬದಲಿಗೆ, ನಮ್ಮ ಸಂಘಟನೆ ನಾವು ಉಳಿಸಿಕೊಂಡರೆ ಮುಂದಿನ ಚುನಾವಣೆಯಲ್ಲಾದರೂ ಅನುಕೂಲವಾಗುತ್ತದೆ. ಸರ್ಕಾರ ಬಿದ್ದು ಹೋದರೆ ಒಳ್ಳೆಯದೇ. ಮಧ್ಯಂತರ ಚುನಾವಣೆಯಲ್ಲಿ ಗೆದ್ದು ಬರೋಣ ಎಂಬುದು ಬಿಜೆಪಿ ಪಕ್ಷದ ಇರಾದೆ.

ಒಂದು ವೇಳೆ ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಗೆದ್ದು ಬಂದರೆ ಅದೂ ಒಳ್ಳೆಯದೇ. ಸರ್ಕಾರ ಉಳಿದುಕೊಳ್ಳುತ್ತದೆ. ಮೂವರು ಉಪಮುಖ್ಯಮಂತ್ರಿಗಳ ಮೂಲಕ ಯಡಿಯೂರಪ್ಪನವರನ್ನು ನಿಯಂತ್ರಿಸುತ್ತಾ, ಪಕ್ಷವನ್ನು ಬೆಳೆಸಿಕೊಳ್ಳೋಣ. ನಂತರ ನೋಡೋಣ ಎಂದು ಬಿಜೆಪಿಯು ಭಾವಿಸಿದೆ. ಹಾಗಾಗಿಯೇ ತಳಮಟ್ಟದಲ್ಲಾಗಲೀ, ಮೇಲ್ಮಟ್ಟದಲ್ಲಾಗಲೀ ಬಿಜೆಪಿ ಪಕ್ಷವು ಯಾವ ತಯಾರಿಯನ್ನೂ ನಡೆಸದೇ ಸುಮ್ಮನೇ ಕುಳಿತಿದೆ. ಹಾಗಾಗಿಯೇ ಅವರ ಮಟ್ಟಿಗೆ ಇದೊಂಥರಾ ಬಂದ್ರೆ ಬೆಟ್ಟ, ಹೋದ್ರೆ . .. .. ಎಂಬಂತಿದೆ ಎಂಬುದು ಬಿಜೆಪಿಯ ವಲಯಗಳಲ್ಲಿ ಕೇಳಿ ಬರುತ್ತಿರುವ ಮಾತು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...