ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಂತ್ರಿಯಾಗಿ ಅಧಿಕಾರಕ್ಕೆ ಏರಿದ ನಂತರ ಅವರು ಮಾಡಿರುವ ಅಪರಾಧಗಳನ್ನು ಪಟ್ಟಿ ಮಾಡಿ ಅವರ ವಿರುದ್ಧ ‘ಚಾರ್ಜ್ ಶೀರ್ಟ್’(ದೋಷಾರೋಪಣಾ ಪತ್ರ)ಅನ್ನು ಮಂಗಳವಾರ ಹೊರಡಿಸಲಾಗಿದೆ. ಸಾರ್ವಜನಿಕರ ಹೆಸರಿನಲ್ಲಿ ‘ಬಹುತ್ವ ಕರ್ನಾಟಕ’ ವೇದಿಕೆಯೂ ಇದನ್ನು ಹೊರಡಿಸಿದ್ದು ವಿನೂತನವಾಗಿ ಪ್ರತಿಭಟಿಸಿದೆ.
ಶಿಕ್ಷಣ ಸಚಿವರಾಗಿ ಬಿಸಿ ನಾಗೇಶ್ ಅವರು ಅಧಿಕಾರಕ್ಕೆ ಏರಿದ ನಂತರ ಅವರು ಮಾಡಿರುವ ಪ್ರಮುಖ ಆರು ಅಪರಾಗಳು ಮತ್ತು ಅವರು ಉಲ್ಲಂಘಿಸಿರುವ ಕಾನೂನುಗಳನ್ನು ಈ ಚಾರ್ಜ್ಶೀಟ್ನಲ್ಲಿ ಪಟ್ಟಿ ಮಾಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಷ್ಟೆ ಅಲ್ಲದೆ, ಅವರು ಮಾಡಿರುವ ಅಪರಾಧಕ್ಕೆ ಶಿಕ್ಷೆಯನ್ನೂ ದೋಷಾರೋಪಣ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, “ಸಚಿವ ಸ್ಥಾನದಿಂದ ಉಚ್ಛಾಟನೆ ಮತ್ತು ಶಾಸಕ ಸ್ಥಾನಕ್ಕೆ ಅನರ್ಹ ಎಂದು ಘೋಷಿಸುವುದು” ಎಂದು ಹೇಳಲಾಗಿದೆ.
ಚಾಜ್ಶೀಟ್ ಅನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದಾಗಿದೆ
ಇದನ್ನೂ ಓದಿ: ಪಠ್ಯಪುಸ್ತಕ ಹಗರಣ – ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್’: ಸಚಿವ ಬಿಸಿ ನಾಗೇಶ್ ವಿವಾದಾತ್ಮಕ ಹೇಳಿಕೆ
ಇಂಗ್ಲಿಷ್ನಲ್ಲಿ ಹೊರಡಿಸಲಾಗಿರುವ ಚಾರ್ಜ್ಶೀಟ್ ಅನ್ನು ಕೆಳಗೆ ನೋಡಬಹುದಾಗಿದೆ