Homeಎಕಾನಮಿಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ....

ಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ….

- Advertisement -
- Advertisement -

ಏನಿಲ್ಲಾ, ಈ ನಮ್ಮ ಕರುನಾಡಿನ ಸಚಿವ ಸಂಪುಷ್ಟದ ಸನ್ಮಾನ್ಯ ಸದಸ್ಯರೆಲ್ಲಾ ʻNDRF NDRF’ ಅನ್ನಾಕ ಹತ್ಯಾರೆಲ್ಲಾ, ಏನದು?

ಅಷ್ಟ ಅಲ್ಲಾ, ಇದು ಒಂದಲ್ಲ. ಎರಡು. ಬದಲಾದ ರಾಜಕೀಯ ಪರಿಸ್ಥಿತಿಯೊಳಗ ಎಲ್ಲದಕ್ಕೂ ಎರಡೆರಡು ರೂಪ ಇರತಾವಲ್ಲಾ, ನಾಯಕರದು ರಾಜ್ಯಮಟ್ಟದೊಳಗ ಒಂದು, ತಮ್ಮ ಕ್ಷೇತ್ರದೊಳಗ ಇನ್ನೊಂದು ರೂಪ ಇರ್ತದಲ್ಲಾ, ಹಂಗ, ಇದರದೂ ಎರಡು ರೂಪ ಅದಾವು.

ದೇಶದ ಯಾವುದೇ ಮೂಲಿಯೊಳಗ ನೆರೆ, ಬರ, ಭೂಕಂಪ, ಸುಂಟರಗಾಳಿ ಅಥವಾ ಇತರ ಪ್ರಕೃತಿ ವಿಕೋಪಗಳು ಆದರ ಅಲ್ಲಿಗೆ ಸಹಾಯ ಮಾಡಲಿಕ್ಕೆ ಅಂತ ಇರೋದು ಭಾರತೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ. ಇದು ಕೇಂದ್ರ ಗೃಹ ಇಲಾಖೆಯ ಪ್ರಕೃತಿ ವಿಕೋಪ ವಿಭಾಗದ ಒಂದು ಭಾಗ. ಈ ಸಂಸ್ಥೆಯ ಕೆಳಗಡೆ ಇರೋವು ವಿವಿಧ ರಾಜ್ಯಗಳ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಗಳು. ಸನ್ 2005 ರಲ್ಲಿ ಜಾರಿಯಾದ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯ ಕೆಳಗ ಈ ಸಂಸ್ಥೆಗಳು ಆರಂಭವಾದವು.

ಇಂಥಾ ಎಜೆನ್ಸಿಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಕೃತಿ ವಿಕೋಪಗಳು ಎಲ್ಲೆಲ್ಲಿ ಆಗತಾವೋ ಅಲ್ಲಲ್ಲಿ ತನು ಮನ ಧನ ಸಹಾಯ ಮಾಡಬೇಕು ಅಥವಾ ಹಾಗೇಂತ ನಮ್ಮ ಆಶಾ ಇರಬಹುದೇನೋ.

ಈಗ ನಮ್ಮಲ್ಲೆ ತನುವಿಗೊಂದು ಎನ್‍ಡಿಆರ್‌ಎಫ್ ಹಾಗೂ ಧನಕ್ಕೆ ಇನ್ನೊಂದು ಎನ್‍ಡಿಆರ್‌ಎಫ್ ಅವ. ಆದರ ಮನಕ್ಕ ಅಂತ ಮಾತ್ರ ಪ್ರತ್ಯೇಕ ಸಂಸ್ಥೆ ಇಲ್ಲ. ಅದು ಕೇಂದ್ರ ಸರಕಾರದ ಮನದಲ್ಲಿ ಇರಬಹುದೇನೋ, ಹೋಗಲಿ ಬಿಡರಿ.

ಒಂದನೇ ಎನ್‍ಡಿಆರ್‌ಎಫ್ ಅಂದರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ದಳ. (NDRF national disaster response force) ದೆಹಲಿಯ ಮುಖ್ಯ ಕಚೇರಿ ಬಿಟ್ಟರ ಇದಕ್ಕ ಬ್ಯಾರೆ ಬ್ಯಾರೆ ರಾಜ್ಯದೊಳಗ 17 ಉಪವಿಭಾಗ ಅವ.

ಇದರಾಗ ಭಾರತೀಯ ಪೊಲೀಸ್ ಸೇವೆ ಹಾಗೂ ಭಾರತೀಯ ಅರೆಸೇನಾ ದಳದ ಅಧಿಕಾರಿಗಳು ಮತ್ತ ಬ್ಯಾರೆ ಬ್ಯಾರೆ ಸಿಬ್ಬಂದಿ ಇದ್ದಾರ. ಈ ಹಿಂದಿನ 15 ವರ್ಷದೊಳಗ ಇವರೆಲ್ಲಾ ಕೂಡಿ ಸುಮಾರು 17 ಲಕ್ಷ ಜನರ ಜೀವಾ ಉಳಿಸ್ಯಾರ. ಇಂಥವರ ಕೆಲಸದ ಬಗ್ಗೆ ಯಾರಿಗೂ ತಕರಾರು ಇಲ್ಲ. ಇರಲಿಕ್ಕೆ ಸಾಧ್ಯನೂ ಇಲ್ಲ. ಇದರಾಗೇನು ರಾಜಕೀಯ ಇದ್ದಂತಿಲ್ಲ. ಹೋದವರ್ಷ ಮಹಾರಾಷ್ಟ್ರದ ಕೊಲ್ಹಾಪುರದ ಪ್ರವಾಹದಾಗ ಉಳದ ಹೆಣಮಗಳೊಬ್ಬಳು ಆ ಸಿಬ್ಬಂದಿ ಕಾಲಿಗೆ ಬಿದ್ದು ‘ನೀನೇ ನಮ್ಮ ಪಾಂಡುರಂಗೋ ಯಪ್ಪಾ’ ಅಂತ ಹೇಳಿದ್ದ ವಿಡಿಯೋ ನಿಮ್ಮ ಫೋನಿನ ವಾಟ್ಸಪ್ಪಿಗೆ ಬಂದಿತ್ತಲ್ಲ, ಅಕೀ ಭಾವನೆಯೇ ಉಳಿದೆ ಎಲ್ಲಾರ ಭಾವನೆ.

ಆದರ ಎಲ್ಲಾರ ತಕರಾರು ಇರುವುದು ಆ ಇನ್ನೊಂದು ಎನ್‍ಡಿಆರ್‌ಎಫ್‍ನ ಬಗ್ಗೆ. ಇದು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (NDRF national disaster response force).

ಇವರು ರಾಜ್ಯಗಳೊಳಗ ವಿಕೋಪ ನಡೆದಾಗ ಅವರಿಗೆ ದುಡ್ಡು ಕೊಡುವವರು. (ಕೇಂದ್ರಕ್ಕಂತೂ ಪ್ರಕೃತಿ ವಿಕೋಪ ಬರಂಗಿಲ್ಲಲ್ಲಾ. ಅಲ್ಲಿ ಬರೋ ವಿಕೋಪ ಅಂದರ ಬರೇ ಎಲೆಕ್ಷನ್ ಒಂದ)

ಇವರು ಯಾವಾಗ ಯಾರಿಗೆ ಏನು ಕೊಡುತ್ತಾರೆ ಅನ್ನೋದು ಮಾತ್ರ ಭಾರತೀಯ ಮತದಾರನ ಮನಸ್ಸಿಗಿಂತಾ ನಿಗೂಢ. ಯಾವಾಗರ ಹಿಂದೀ ಝೀ ಟಿವಿಯೊಳಗ ನಿಗೂಢ ರಹಸ್ಯ ಅಂತ ಇದರದ್ದೂ ಒಂದು ಎಪಿಸೋಡು ಬರಬಹುದು.

ಉದಾಹರಣೆಗೆ, ಈ ಸತೆ, ಕರ್ನಾಟಕಕ್ಕ 1,872 ಕೋಟಿ ಕೊಟ್ಟಾರ (ಕೇಂದ್ರ ಹಾಗೂ ರಾಜ್ಯ ನಿಧಿಗಳ ಲೆಕ್ಕದಲ್ಲಿ) ಮಹಾರಾಷ್ಟ್ರಕ್ಕ 3,150 ಕೋಟಿ, ಓಡಿಶಾಗೆ 3,666 ಕೋಟಿ . ರಾಜಸ್ತಾನಕ್ಕೆ 1,666 ಕೋಟಿ, ಆಂಧ್ರ 770 ಕೋಟಿ, ಮತ್ತ ಉತ್ತರ ಪ್ರದೇಶಕ್ಕೆ 541 ಕೋಟಿ . ಹಿಮಾಚಲ ಪ್ರದೇಶಕ್ಕೆ 434 ಕೋಟಿ, ಗೋವಾ ಮಿಜೋರಾಮಿಗೆ ಏನಿಲ್ಲಾ. ನಾಗಾಲ್ಯಾಂಡಿಗೆ 5 ಕೋಟಿ ಹಾಗೂ ಮಣಿಪುರಕ್ಕೆ 9.9 ಕೋಟಿ ಬಿಡುಗಡೆ ಆಗೇದ.

ಇದಲ್ಲಾಗಿಂತ ಮಜಾ ಏನೆಂದರ ನಾವು ಆರಿಸಿ ಕಳಿಸಿದ ಘನ ಸರಕಾರದವರು ನಾವು ಕಟ್ಟಿದ ಸುಂಕದ ರೊಕ್ಕದಾಗ ಈ ಸಂಸ್ಥಾದ ತಿಜೋರಿಯೊಳಗ ಒಂದು ವರ್ಷಕ್ಕೆ ಇಟ್ಟಿರೋದು ಬರೇ 23,465 ಕೋಟಿ ರೂಪಾಯಿ.

ಕರ್ನಾಟಕದ ಜನಾ ಒಂದು ವರ್ಷಕ್ಕ ಸುಮಾರು 29,000 ಕೋಟಿ ರೂಪಾಯಿ ಬರೇ ಜಿಎಸ್‍ಟಿ ಅಂದರ ಗಬ್ಬರ ಸಿಂಗ್ ಟ್ಯಾಕ್ಸ ಕಟ್ಟತಾರ. ಬ್ಯಾರೆ ಟ್ಯಾಕ್ಸಿನ ಲೆಕ್ಕಾ ಬ್ಯಾರೆ ಮತ್ತ. ಇದರಿಂದ ಸೆಂಟರಿನವರ ಹಾರ್ಟು ಎಷ್ಟು ದೊಡ್ಡದು ಅಂತ ತಿಳಕೋಬಹುದು.

ಅದರಾಗೂನು, ಎಲ್ಲಾ ರಾಜ್ಯಗಳ ಎಲ್ಲಾ ಥರದ ವಿಕೋಪಗಳಿಗೆ ಅವರು ಬಿಡುಗಡೆ ಮಾಡಿರುವುದು ಬರೇ 6,614 ಕೋಟಿ. ಅವರ ತಿಜೋರಿಯೊಳಗ ಇನ್ನೂ 51 ಶೇಕಡಾ ಹಣದ ಶಿಲ್ಕು ಹಂಗ ಬಾಕಿ ಉಳಿದದ.

ನಮ್ ಸೀಎಮ್ ಬಿ.ಎಸ್ ಯಡಿಯೂರಪ್ಪನವರು ಮನ್ನೆ ನೆರೆ ಪರಿಹಾರಕ್ಕೆ 38,000 ಕೋಟಿ ರೂಪಾಯಿ ಕೇಳಿದಾಗ ಮ್ಯಾಲಿನವರು ನಿಮ್ಮ ನಷ್ಟದ ಅಂದಾಜೇ ಸರಿ ಇಲ್ಲ ಎಂದು ಬೈದು ಕಳಿಸಿದ್ದು ಯಾಕ ಅಂತ ಗೊತ್ತಾತಲ್ಲಾ ? ನೋಡ್ರಿ, ಹೆಂಗದ ಮಜಾ!

ಹೆಚ್ಚಿನ ವಿವರಗಳಿಗೆ –

www.ndrf.gov.in

https://www.ndmindia.nic.in/images/allocation.PDF

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...

ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ತರೀಕೆರೆಯಲ್ಲಿ ಶಾಸಕ G.H ಶ್ರೀನಿವಾಸ್ ಅಭಿಮತ

ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್ (SIR) ವಿರೋಧಿ ಜನಜಾಗೃತಿ ಜಾಥಾದ ನಾಲ್ಕನೇ ದಿನದ ಪಯಣ ಇಂದು ತರೀಕೆರೆಗೆ ತಲುಪಿತು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಜಾಥಾವನ್ನು, ತರೀಕೆರೆಯ ಜಾಗೃತ...

ಬೆಳಗಾವಿಯ ವಿವಿದೆಡೆ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬೆಳಗಾವಿಯ ವಿವಿಧ ಭಾಗಗಳಲ್ಲಿ ಸೋಮವಾರ (ಜೂ.15) ಜನಜಾಗೃತಿ ಜಾಥಾ ನಡೆಯಿತು. ಬಾಗಲಕೋಟೆಯಿಂದ ಆಗಮಿಸಿದ ಜಾಥಾ ತಂಡವನ್ನು ಯರಗಟ್ಟಿ ಪಟ್ಟಣದಲ್ಲಿ...

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾದ ಎಸ್‌ಐಆರ್ ವಿರೋಧಿ ಜಾಥಾ; ಜನಪರ ಸಂಘಟನೆಗಳ ಬೆಂಬಲ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಥಾ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಜಾಥಾದ ಮೂರನೇ ದಿನವಾದ ಇಂದು ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಿಂದ ಆರಂಭವಾದ...

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ: ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಆಕ್ರೋಶ

ಕೇಂದ್ರದ ಬಿಜೆಪಿ ಸರ್ಕಾರವು ‘SIR’ ಜಾರಿಯ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ. ಲಿಂಗಯ್ಯ ತೀವ್ರ ಆಕ್ರೋಶ...

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...