Homeಎಕಾನಮಿಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ....

ಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ….

- Advertisement -
- Advertisement -

ಏನಿಲ್ಲಾ, ಈ ನಮ್ಮ ಕರುನಾಡಿನ ಸಚಿವ ಸಂಪುಷ್ಟದ ಸನ್ಮಾನ್ಯ ಸದಸ್ಯರೆಲ್ಲಾ ʻNDRF NDRF’ ಅನ್ನಾಕ ಹತ್ಯಾರೆಲ್ಲಾ, ಏನದು?

ಅಷ್ಟ ಅಲ್ಲಾ, ಇದು ಒಂದಲ್ಲ. ಎರಡು. ಬದಲಾದ ರಾಜಕೀಯ ಪರಿಸ್ಥಿತಿಯೊಳಗ ಎಲ್ಲದಕ್ಕೂ ಎರಡೆರಡು ರೂಪ ಇರತಾವಲ್ಲಾ, ನಾಯಕರದು ರಾಜ್ಯಮಟ್ಟದೊಳಗ ಒಂದು, ತಮ್ಮ ಕ್ಷೇತ್ರದೊಳಗ ಇನ್ನೊಂದು ರೂಪ ಇರ್ತದಲ್ಲಾ, ಹಂಗ, ಇದರದೂ ಎರಡು ರೂಪ ಅದಾವು.

ದೇಶದ ಯಾವುದೇ ಮೂಲಿಯೊಳಗ ನೆರೆ, ಬರ, ಭೂಕಂಪ, ಸುಂಟರಗಾಳಿ ಅಥವಾ ಇತರ ಪ್ರಕೃತಿ ವಿಕೋಪಗಳು ಆದರ ಅಲ್ಲಿಗೆ ಸಹಾಯ ಮಾಡಲಿಕ್ಕೆ ಅಂತ ಇರೋದು ಭಾರತೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ. ಇದು ಕೇಂದ್ರ ಗೃಹ ಇಲಾಖೆಯ ಪ್ರಕೃತಿ ವಿಕೋಪ ವಿಭಾಗದ ಒಂದು ಭಾಗ. ಈ ಸಂಸ್ಥೆಯ ಕೆಳಗಡೆ ಇರೋವು ವಿವಿಧ ರಾಜ್ಯಗಳ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಗಳು. ಸನ್ 2005 ರಲ್ಲಿ ಜಾರಿಯಾದ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯ ಕೆಳಗ ಈ ಸಂಸ್ಥೆಗಳು ಆರಂಭವಾದವು.

ಇಂಥಾ ಎಜೆನ್ಸಿಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಕೃತಿ ವಿಕೋಪಗಳು ಎಲ್ಲೆಲ್ಲಿ ಆಗತಾವೋ ಅಲ್ಲಲ್ಲಿ ತನು ಮನ ಧನ ಸಹಾಯ ಮಾಡಬೇಕು ಅಥವಾ ಹಾಗೇಂತ ನಮ್ಮ ಆಶಾ ಇರಬಹುದೇನೋ.

ಈಗ ನಮ್ಮಲ್ಲೆ ತನುವಿಗೊಂದು ಎನ್‍ಡಿಆರ್‌ಎಫ್ ಹಾಗೂ ಧನಕ್ಕೆ ಇನ್ನೊಂದು ಎನ್‍ಡಿಆರ್‌ಎಫ್ ಅವ. ಆದರ ಮನಕ್ಕ ಅಂತ ಮಾತ್ರ ಪ್ರತ್ಯೇಕ ಸಂಸ್ಥೆ ಇಲ್ಲ. ಅದು ಕೇಂದ್ರ ಸರಕಾರದ ಮನದಲ್ಲಿ ಇರಬಹುದೇನೋ, ಹೋಗಲಿ ಬಿಡರಿ.

ಒಂದನೇ ಎನ್‍ಡಿಆರ್‌ಎಫ್ ಅಂದರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ದಳ. (NDRF national disaster response force) ದೆಹಲಿಯ ಮುಖ್ಯ ಕಚೇರಿ ಬಿಟ್ಟರ ಇದಕ್ಕ ಬ್ಯಾರೆ ಬ್ಯಾರೆ ರಾಜ್ಯದೊಳಗ 17 ಉಪವಿಭಾಗ ಅವ.

ಇದರಾಗ ಭಾರತೀಯ ಪೊಲೀಸ್ ಸೇವೆ ಹಾಗೂ ಭಾರತೀಯ ಅರೆಸೇನಾ ದಳದ ಅಧಿಕಾರಿಗಳು ಮತ್ತ ಬ್ಯಾರೆ ಬ್ಯಾರೆ ಸಿಬ್ಬಂದಿ ಇದ್ದಾರ. ಈ ಹಿಂದಿನ 15 ವರ್ಷದೊಳಗ ಇವರೆಲ್ಲಾ ಕೂಡಿ ಸುಮಾರು 17 ಲಕ್ಷ ಜನರ ಜೀವಾ ಉಳಿಸ್ಯಾರ. ಇಂಥವರ ಕೆಲಸದ ಬಗ್ಗೆ ಯಾರಿಗೂ ತಕರಾರು ಇಲ್ಲ. ಇರಲಿಕ್ಕೆ ಸಾಧ್ಯನೂ ಇಲ್ಲ. ಇದರಾಗೇನು ರಾಜಕೀಯ ಇದ್ದಂತಿಲ್ಲ. ಹೋದವರ್ಷ ಮಹಾರಾಷ್ಟ್ರದ ಕೊಲ್ಹಾಪುರದ ಪ್ರವಾಹದಾಗ ಉಳದ ಹೆಣಮಗಳೊಬ್ಬಳು ಆ ಸಿಬ್ಬಂದಿ ಕಾಲಿಗೆ ಬಿದ್ದು ‘ನೀನೇ ನಮ್ಮ ಪಾಂಡುರಂಗೋ ಯಪ್ಪಾ’ ಅಂತ ಹೇಳಿದ್ದ ವಿಡಿಯೋ ನಿಮ್ಮ ಫೋನಿನ ವಾಟ್ಸಪ್ಪಿಗೆ ಬಂದಿತ್ತಲ್ಲ, ಅಕೀ ಭಾವನೆಯೇ ಉಳಿದೆ ಎಲ್ಲಾರ ಭಾವನೆ.

ಆದರ ಎಲ್ಲಾರ ತಕರಾರು ಇರುವುದು ಆ ಇನ್ನೊಂದು ಎನ್‍ಡಿಆರ್‌ಎಫ್‍ನ ಬಗ್ಗೆ. ಇದು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (NDRF national disaster response force).

ಇವರು ರಾಜ್ಯಗಳೊಳಗ ವಿಕೋಪ ನಡೆದಾಗ ಅವರಿಗೆ ದುಡ್ಡು ಕೊಡುವವರು. (ಕೇಂದ್ರಕ್ಕಂತೂ ಪ್ರಕೃತಿ ವಿಕೋಪ ಬರಂಗಿಲ್ಲಲ್ಲಾ. ಅಲ್ಲಿ ಬರೋ ವಿಕೋಪ ಅಂದರ ಬರೇ ಎಲೆಕ್ಷನ್ ಒಂದ)

ಇವರು ಯಾವಾಗ ಯಾರಿಗೆ ಏನು ಕೊಡುತ್ತಾರೆ ಅನ್ನೋದು ಮಾತ್ರ ಭಾರತೀಯ ಮತದಾರನ ಮನಸ್ಸಿಗಿಂತಾ ನಿಗೂಢ. ಯಾವಾಗರ ಹಿಂದೀ ಝೀ ಟಿವಿಯೊಳಗ ನಿಗೂಢ ರಹಸ್ಯ ಅಂತ ಇದರದ್ದೂ ಒಂದು ಎಪಿಸೋಡು ಬರಬಹುದು.

ಉದಾಹರಣೆಗೆ, ಈ ಸತೆ, ಕರ್ನಾಟಕಕ್ಕ 1,872 ಕೋಟಿ ಕೊಟ್ಟಾರ (ಕೇಂದ್ರ ಹಾಗೂ ರಾಜ್ಯ ನಿಧಿಗಳ ಲೆಕ್ಕದಲ್ಲಿ) ಮಹಾರಾಷ್ಟ್ರಕ್ಕ 3,150 ಕೋಟಿ, ಓಡಿಶಾಗೆ 3,666 ಕೋಟಿ . ರಾಜಸ್ತಾನಕ್ಕೆ 1,666 ಕೋಟಿ, ಆಂಧ್ರ 770 ಕೋಟಿ, ಮತ್ತ ಉತ್ತರ ಪ್ರದೇಶಕ್ಕೆ 541 ಕೋಟಿ . ಹಿಮಾಚಲ ಪ್ರದೇಶಕ್ಕೆ 434 ಕೋಟಿ, ಗೋವಾ ಮಿಜೋರಾಮಿಗೆ ಏನಿಲ್ಲಾ. ನಾಗಾಲ್ಯಾಂಡಿಗೆ 5 ಕೋಟಿ ಹಾಗೂ ಮಣಿಪುರಕ್ಕೆ 9.9 ಕೋಟಿ ಬಿಡುಗಡೆ ಆಗೇದ.

ಇದಲ್ಲಾಗಿಂತ ಮಜಾ ಏನೆಂದರ ನಾವು ಆರಿಸಿ ಕಳಿಸಿದ ಘನ ಸರಕಾರದವರು ನಾವು ಕಟ್ಟಿದ ಸುಂಕದ ರೊಕ್ಕದಾಗ ಈ ಸಂಸ್ಥಾದ ತಿಜೋರಿಯೊಳಗ ಒಂದು ವರ್ಷಕ್ಕೆ ಇಟ್ಟಿರೋದು ಬರೇ 23,465 ಕೋಟಿ ರೂಪಾಯಿ.

ಕರ್ನಾಟಕದ ಜನಾ ಒಂದು ವರ್ಷಕ್ಕ ಸುಮಾರು 29,000 ಕೋಟಿ ರೂಪಾಯಿ ಬರೇ ಜಿಎಸ್‍ಟಿ ಅಂದರ ಗಬ್ಬರ ಸಿಂಗ್ ಟ್ಯಾಕ್ಸ ಕಟ್ಟತಾರ. ಬ್ಯಾರೆ ಟ್ಯಾಕ್ಸಿನ ಲೆಕ್ಕಾ ಬ್ಯಾರೆ ಮತ್ತ. ಇದರಿಂದ ಸೆಂಟರಿನವರ ಹಾರ್ಟು ಎಷ್ಟು ದೊಡ್ಡದು ಅಂತ ತಿಳಕೋಬಹುದು.

ಅದರಾಗೂನು, ಎಲ್ಲಾ ರಾಜ್ಯಗಳ ಎಲ್ಲಾ ಥರದ ವಿಕೋಪಗಳಿಗೆ ಅವರು ಬಿಡುಗಡೆ ಮಾಡಿರುವುದು ಬರೇ 6,614 ಕೋಟಿ. ಅವರ ತಿಜೋರಿಯೊಳಗ ಇನ್ನೂ 51 ಶೇಕಡಾ ಹಣದ ಶಿಲ್ಕು ಹಂಗ ಬಾಕಿ ಉಳಿದದ.

ನಮ್ ಸೀಎಮ್ ಬಿ.ಎಸ್ ಯಡಿಯೂರಪ್ಪನವರು ಮನ್ನೆ ನೆರೆ ಪರಿಹಾರಕ್ಕೆ 38,000 ಕೋಟಿ ರೂಪಾಯಿ ಕೇಳಿದಾಗ ಮ್ಯಾಲಿನವರು ನಿಮ್ಮ ನಷ್ಟದ ಅಂದಾಜೇ ಸರಿ ಇಲ್ಲ ಎಂದು ಬೈದು ಕಳಿಸಿದ್ದು ಯಾಕ ಅಂತ ಗೊತ್ತಾತಲ್ಲಾ ? ನೋಡ್ರಿ, ಹೆಂಗದ ಮಜಾ!

ಹೆಚ್ಚಿನ ವಿವರಗಳಿಗೆ –

www.ndrf.gov.in

https://www.ndmindia.nic.in/images/allocation.PDF

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...

ತೆಲಂಗಾಣ| ಅಂತರ್ಜಾತಿ ವಿವಾಹಕ್ಕೆ ಯುವತಿ ಕುಟುಂಬದ ವಿರೋಧ; ದಲಿತ ಯುವಕನ ಮನೆ ಧ್ವಂಸ

ಹೈದರಾಬಾದ್ ಸಮೀಪದ ಗದ್ವಾಲ್ ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ದಲಿತ ಯುವಕನ ಮನೆಯನ್ನು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತ ಬಹುಜನ ಫ್ರಂಟ್, ಹ್ಯೂಮನ್...

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...