Homeಅಂಕಣಗಳುಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

ಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

- Advertisement -
- Advertisement -

‘ಭಾರತೀಯ ಚಿತ್ರರಂಗವನ್ನು ರಾಮಾಯಣ ಮತ್ತು ಮಹಾಭಾರತದ ಆಚೆಗೆ ನಿಂತು ನೋಡಲು ಸಾದ್ಯವಿಲ್ಲ’ ಎನ್ನುವ, ನಿರ್ದೇಶಕ ಮಣಿರತ್ನಂ ಅವರ ಮಾತು ಒಂದು ಮಟ್ಟಕ್ಕೆ ನಿಜ ಕೂಡ.

ನಮ್ಮಲ್ಲಿ ಮಹಾಭಾರತ ಮತ್ತು ರಾಮಾಯಣದ ಕಥೆ ಅಥವಾ ಆ ಕಾವ್ಯಗಳ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಬಂದ ಹಲವಾರು ಚಿತ್ರಗಳು ಯಶಸ್ವಿಯಾಗಿದೆ. ಕೆಲವು ಚಿತ್ರಗಳು ಈ ಕಥೆ/ಪಾತ್ರಗಳನ್ನು ಯಥಾವತ್ತಾಗಿ(ಪೌರಾಣಿಕವಾಗಿ) ಚಿತ್ರಿಸಿದ್ದರೆ, ಮತ್ತೆ ಕೆಲವು ಚಿತ್ರಗಳು ಅವುಗಳಿಂದ ಸ್ಪೂರ್ತಿ ಪಡೆದು, ಕಾಲಕ್ಕೆ ತಕ್ಕಂತೆ (ಆಧುನಿಕ)ವಿಶ್ಲೇಷಣಾತ್ಮಕವಾಗಿ ಚಿತ್ರಿಸಿವೆ.

ಮಹಾಭಾರತವನ್ನು ಆಧಾರವಾಗಿಟ್ಟುಕೊಂಡ ಸುಮಾರು 91 ಚಿತ್ರಗಳು, ರಾಮಾಯಣವನ್ನು ಆಧಾರವಾಗಿಟ್ಟುಕೊಂಡ ಸುಮಾರು 47 ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ, ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ.

ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಮತ್ತು ದುರಂತ ನಾಯಕ ಎನಿಸಿಕೊಂಡ ಕರ್ಣನ ಪಾತ್ರವು ಹಲವು ನಿರ್ದೇಶಕರುಗಳಿಗೆ ಸ್ಪೂರ್ತಿಯಾಗಿದೆ. ‘ಕರ್ಣರಸಾಯನಮಲ್ತೆ ಭಾರತಂ’ ಎನ್ನುವ ಕುಮಾರವ್ಯಾಸನ ಮಾತಿನಂತೆ, ಮಹಾಭಾರತವೆಂದರೆ ಕರ್ಣ-ಕರ್ಣನೆಂದರೆ ಮಹಾಭಾರತ ಎನ್ನಬಹುದೇನೋ?

ಕರ್ಣನ ಹುಟ್ಟು, ಬೆಳವಣಿಗೆ, ಬೆಳೆದ ಮನೆತನದ ಜಾತಿಯ ಕಾರಣದಿಂದ ಅನುಭವಿಸಿದ ಅವಮಾನ, ಆತನ ಸ್ನೇಹಪರತೆ, ದಾನ, ಸತ್ಯ, ಪ್ರಾಮಾಣಿಕತೆ, ಧೈರ್ಯ, ನೈತಿಕತೆ ಮುಂತಾದ ಗುಣಗಳೆಲ್ಲವೂ ಆ ಪಾತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಈ ಕಾರಣಕ್ಕಾಗಿಯೇ ಕರ್ಣನ ಪಾತ್ರವನ್ನಿಟ್ಟುಕೊಂಡು ಹಲವು ಚಿತ್ರಗಳು ಬಿಡುಗಡೆಯಾಗಿವೆ. ಇನ್ನೂ ಮತ್ತಷ್ಟು ಚಿತ್ರಗಳು ಸೆಟ್ಟೇರಿವೆ.

ಅವುಗಳಲ್ಲಿ, ತಮಿಳಿನ ಯಶಸ್ವಿ ಯುವ ನಿರ್ದೇಶಕರಲ್ಲಿ ಒಬ್ಬರಾದ ಮಾರಿ ಸೆಲ್ವರಾಜ್ ನಿರ್ದೇಶನದಲ್ಲಿ ಇನ್ನೂ ಚಿತ್ರೀಕರಣ ಹಂತದಲ್ಲಿರುವ ತಮಿಳು ಚಿತ್ರ “ಕರ್ಣನ್” ಸದ್ಯ ಹೆಚ್ಚು ಚರ್ಚಿಸಲ್ಪಡುತ್ತಿರುವ ಚಿತ್ರವಾಗಿದೆ.

ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಮಾರಿ ಸೆಲ್ವರಾಜ್ ಈ ಹಿಂದೆ ತಮ್ಮ ಚೊಚ್ಚಲ ಸಿನಿಮಾ ‘ಪರಿಯೇರುಂ ಪೆರುಮಾಳ್’ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದರಲ್ಲದೆ ಆ ಸಿನೆಮಾಗ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಸಬ್-ಆಲ್ಟರ್ನ್ ಪರಿದೃಷ್ಟಿಯಿಂದ ಜಾತಿವ್ಯವಸ್ಥೆ ಮತ್ತು ಅದರ ಕಬಂದ ಬಾಹುಗಳ ಸಮಸ್ಯೆ ಮತ್ತು ಪರಿಣಾಮಗಳನ್ನು ಸಂವೇದನಾಶೀಲವಾಗಿ ದಾಟಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದರು. ಮುಖ್ಯವಾಹಿನಿಯ ಚಿತ್ರದಂತೆಯೇ ಮನರಂಜನೆ ಮತ್ತು ಹಣಗಳಿಕೆಯ ದೃಷ್ಟಿಯಲ್ಲೂ ‘ಪರಿಯೇರುಂ ಪೆರುಮಾಳ್’ ಯಶಸ್ವಿಯಾಗಿತ್ತು.

ಎರಡನೆಯದಾಗಿ, ಈಗ ಸೆಟ್ಟೇರಿರುವ ಸಿನಿಮಾದ ನಾಯಕನಾಗಿ ಅಭಿನಯಿಸುತ್ತಿರುವ ಧನುಷ್ ಕೂಡ ಈ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಧನುಷ್ ಮುಖ್ಯಪಾತ್ರದಲ್ಲಿ ನಟಿಸಿದ್ದ ವೆಟ್ರಿಮಾರನ್ ನಿರ್ದೇಶನದ ’ಅಸುರನ್’ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ಅದೂ ಅಲ್ಲದೆ ಧನುಷ್ ಅವರ ‘ವಂಡರ್ ಬಾರ್’ ಬ್ಯಾನರ್ ಅಡಿಯಲ್ಲಿ ಅತ್ಯುತ್ತಮ ಚಿತ್ರಗಳ ನಿರ್ಮಾಣವಾಗುತ್ತಿದೆ. ಅವುಗಳೆಲ್ಲವೂ ಬಹುತೇಕ ಜಾತಿ ವ್ಯವಸ್ಥೆ ತಳಸಮುದಾಯಗಳನ್ನು ಶೋಷಿಸುವ ವಸ್ತು-ವಿಷಯಗಳನ್ನು ಹೊಂದಿರುವಂತವು.

ಕೆಲವು ದಿನಗಳ ಹಿಂದೆ ಈ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಮೇಕಿಂಗ್‍ನಲ್ಲಿ ಚಿತ್ರಕ್ಕಾಗಿ ಒಂದು ಹಳ್ಳಿಯನ್ನೇ ನಿರ್ಮಿಸುತ್ತಿರುವ ವಿಷಯ ಹೆಚ್ಚು ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಮೂರನೆಯದಾಗಿ, ಅದರ ಶೀರ್ಷಿಕೆಯಿಂದಲೇ ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದೆ. ಕರ್ಣನ ಪಾತ್ರವನ್ನು ಅಥವಾ ಅದರ ಸ್ಪೂರ್ತಿಯಿಂದ ಮೂಡಿರುವ ಪಾತ್ರವನ್ನು ತಮಿಳಿನ ದಿಗ್ಗಜ ನಟರುಗಳು ಈ ಹಿಂದೆ ಅಭಿನಯಿಸಿದ್ದಾರೆ. ಈಗ ಇದು ಧನುಷ್ ಅವರ ಸರದಿಗೆ ಬಂದಿದೆ.

1964 ರಲ್ಲಿ ಬಿಡುಗಡೆಯಾಗಿದ್ದ ತಮಿಳು ಪೌರಾಣಿಕ ಚಿತ್ರ ‘ಕರ್ಣನ್’ ಭಾರತೀಯ ಮತ್ತು ತಮಿಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಿತ್ತು. ಈ ಚಿತ್ರದ ನಾಯಕ ಶಿವಾಜಿ ಗಣೇಶನ್ ಅವರ ನಟನೆ ತಮಿಳಯನಾಡಿನ ಜನರಲ್ಲಿ ಇಂದಿಗೂ ನೆನಪಿನಲ್ಲುಳಿದಿದೆ. ಬಿ ಆರ್ ಪಂತುಲು ನಿರ್ದೇಶಿಸಿದ್ದ ಈ ಚಿತ್ರ, 11ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ಮೂರನೇ ಅತ್ಯುತ್ತಮ ಚಿತ್ರ) ಪಡೆದುಕೊಂಡಿತ್ತು. ಇಷ್ಟೇ ಅಲ್ಲದೇ ಎನ್. ಟಿ. ರಾಮಾರಾವ್ ಅವರಿಂದ ಹಿಡಿದು ಸಾವಿತ್ರಿ, ಮುತ್ತುರಾಮನ್, ಎಂ. ವಿ. ರಾಜಮ್ಮ ಮುಂತಾದವರ ದೊಡ್ಡ ತಾರಾಬಳಗವೇ ಇತ್ತು. ಕರ್ಣನ ಪಾತ್ರವನ್ನು ತಮ್ಮ ಅದ್ಭುತ ಅಭಿನಯದ ಮೂಲಕ ಶಿವಾಜಿ ಗಣೇಶನ್ ಕಟ್ಟಿಕೊಟ್ಟಿದ್ದರು.

1991ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಬಿಡುಗಡೆಯಾದ ಮತ್ತೊಂದು ಯಶಸ್ವಿ ತಮಿಳು ಚಿತ್ರ ‘ದಳಪತಿ’. ಮಹಾಭಾರತವನ್ನು ಅಳವಡಿಸಿಕೊಂಡಿದ್ದ ಈ ಸಮಕಾಲೀನ ಕಥೆಯಲ್ಲಿ ರಜನಿಕಾಂತ್ ಕರ್ಣನಿಂದ ಸ್ಪೂರ್ತಿ ಪಡೆದ ಪಾತ್ರವನ್ನು ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ನಿರ್ದೇಶಕ ಕರ್ಣನ ಪಾತ್ರವನ್ನು ಈ ಚಿತ್ರದಲ್ಲಿ ಹೆಚ್ಚು ಸಮಕಾಲೀನಗೊಳಿಸಿದ್ದಾರೆ.

ಹುಟ್ಟಿದಾಗಲೇ ತಾಯಿಂದ ಬೇರೆಯಾಗುವ ಮಗು(ಸೂರ್ಯ/ಕರ್ಣ) ಬೆಳೆಯುತ್ತಾ ದೇವರಾಜ್ (ದುರ್ಯೋಧನ) ಎನ್ನುವ ರೌಡಿಯ ಸ್ನೇಹವನ್ನು ಮಾಡುತ್ತಾನೆ. ಸುಬ್ಬಲಕ್ಷ್ಮಿ ಎನ್ನುವ ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸಿ, ತನ್ನ ಹುಟ್ಟಿನ ಕಾರಣಕ್ಕೆ, ಸ್ನೇಹದ ಕಾರಣಕ್ಕೆ ಆಕೆಯ ತಂದೆಯಿಂದಲೇ ಅವಮಾನಿತನಾಗುತ್ತಾನೆ. ಅದೇ ಊರಿಗೆ ಡಿ.ಸಿಯಾಗಿ ಬರುವ ತನ್ನ ತಮ್ಮ ಅರವಿಂದಸಾಮಿ (ಅರ್ಜುನ) ಸೂರ್ಯ ಮತ್ತು ದೇವರಾಜ್‌ನನ್ನು ಮಟ್ಟಹಾಕಲು ಯತ್ನಿಸುತ್ತಾನೆ. ಇದರ ನಡುವೆ ತಾಯಿ (ಕುಂತಿ) ಪ್ರೀತಿಯ ಸಂಘರ್ಷವನ್ನೂ ಸಿನೆಮಾ ಒಳಗೊಂಡಿದೆ.

ಹೀಗೆ ಮಹಾಭಾರತದ ಕಥೆಯ ಹಿನ್ನಲೆಯಲ್ಲಿ ಕರ್ಣನ ಪಾತ್ರದಿಂದ ಸ್ಪೂರ್ತಿಗೊಂಡ ಈ ಚಿತ್ರ ರಜನಿಕಾಂತ್, ಮಣಿರತ್ನಂ ಮತ್ತು ತಮಿಳು ಚಿತ್ರರಂಗಕ್ಕೆ ಒಂದು ಮೈಲಿಗಲ್ಲಾಯಿತು.

ಪ್ರಸ್ತುತ ಧನುಷ್ ಈಗ ಕರ್ಣನಾಗಲಿದ್ದಾರೆ. ಆದರೆ ಇದು ಪೌರಾಣಿಕ ಚಿತ್ರವಲ್ಲ. ಬದಲಿಗೆ ನಿರ್ದೇಶಕರ ಹಿನ್ನೆಲೆಯಿಂದ ನೋಡುವುದಾದರೆ, ಪಕ್ಕಾ ತಳಸಮುದಾಯದ ಪರವಾದ ದನಿಯಿರುವ ಚಿತ್ರ ಇದು ಎನ್ನುವುದರಲ್ಲಿ ಅನುಮಾನವಿಲ್ಲ.

ನಿರ್ದೇಶಕನ ಮಾತುಗಳಲ್ಲೇ ಹೇಳುವುದಾದರೆ ”ಇದು ನನ್ನ ಎರಡನೇ ಚಿತ್ರ. ವಾಸ್ತವದಲ್ಲಿ ಇದೇ ಮೊದಲ ಚಿತ್ರವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ‘ಪರಿಯೇರುಂ ಪೆರುಮಾಳ್’ ಚಿತ್ರ ಮೊದಲು ಬರಬೇಕಾಯಿತು. ನನ್ನ ಸಿದ್ಧಾಂತವನ್ನು ಈ ಚಿತ್ರದಲ್ಲಿಯೇ ವ್ಯಕ್ತಪಡಿಸಿದ್ದೆ. ಇದರಲ್ಲಿ ನಾಯಕ ತಾನಾಯಿತು ತನ್ನ ಪಾಡಾಯಿತು ಎಂದು ಬದುಕುತ್ತಿರುತ್ತಾನೆ. ಆದರೂ ಆತನನ್ನು ಬಿಡದೇ ಕಾಡುವ ಜಾತಿ ವ್ಯವಸ್ಥೆಯ ಅನಿಷ್ಟಗಳನ್ನು ಸೂಕ್ಷ್ಮವಾಗಿ ತೊರಿಸುವಲ್ಲಿ ಯಶಸ್ವಿಯಾಗಿದ್ದೆ ಎಂದು ನಂಬಿದ್ದೇನೆ.

ಆದರೆ ‘ಕರ್ಣನ್’ ಚಿತ್ರದಲ್ಲಿ ನಾಯಕ ಅನ್ಯಾಯವನ್ನು ಸಹಿಸದ, ತನ್ನ(ತಳಸಮುದಾಯದ) ಜನಗಳಿಗಾಗಿ, ನ್ಯಾಯಕ್ಕಾಗಿ ಏನನ್ನು ಬೇಕಾದರೂ ಮಾಡುವ ಛಲವುಳ್ಳವನಾಗಿರುತ್ತಾನೆ. ಮಹಾಭಾರತದ ಕರ್ಣನ ತ್ಯಾಗ ಮತ್ತು ಧೈರ್ಯವನ್ನು ಈ ಚಿತ್ರದ ನಾಯಕನಲ್ಲಿ ಕಾಣಬಹುದು. ಪೌರಾಣಿಕ ಕರ್ಣನಿಗಿಂತ ವಿಭಿನ್ನವಾಗಿ ಹೋರಾಟ ಮಾಡಿ ತನ್ನ ಹಕ್ಕನ್ನು ಪಡೆಯುತ್ತಾನೆ’’ ಎನ್ನುತ್ತಾರೆ ಮಾರಿ ಸೆಲ್ವರಾಜ್.

ಶಿವಾಜಿ ಗಣೇಶನ್ ಮತ್ತು ರಜನಿಕಾಂತ್ ಕರ್ಣನಾಗಿ ನಟಿಸಿದ್ದ ಚಿತ್ರಗಳು ಉಂಟುಮಾಡಿದ ಸಂಚಲನವನ್ನು ಈ ಚಿತ್ರವು ಇನ್ನೂ ವಿಭಿನ್ನವಾಗಿ ಉಂಟುಮಾಡಬಹುದೆಂಬ ನಿರೀಕ್ಷೆಯನ್ನು ಚಿತ್ರಪ್ರೇಮಿಗಳಿಗೆ ಹುಟ್ಟಿಸಿದೆ. ತುದಿಗಾಲಿನಲ್ಲಿ ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ.

– ಪ್ರತಾಪ್ ಹುಣಸೂರು


ಇದನ್ನು ಓದಿ: ಕೀಲಾರ ಟೆಂಟ್ ಹೌಸ್-4: ಮನುಷ್ಯನ ಆಳದ ಮಾನವೀಯ ತಂತುಗಳನ್ನು ಶೋಧಿಸುವ ಕೀಸ್ಲೋಸ್ಕಿ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...