Homeಅಂಕಣಗಳುಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

ಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

- Advertisement -
- Advertisement -

‘ಭಾರತೀಯ ಚಿತ್ರರಂಗವನ್ನು ರಾಮಾಯಣ ಮತ್ತು ಮಹಾಭಾರತದ ಆಚೆಗೆ ನಿಂತು ನೋಡಲು ಸಾದ್ಯವಿಲ್ಲ’ ಎನ್ನುವ, ನಿರ್ದೇಶಕ ಮಣಿರತ್ನಂ ಅವರ ಮಾತು ಒಂದು ಮಟ್ಟಕ್ಕೆ ನಿಜ ಕೂಡ.

ನಮ್ಮಲ್ಲಿ ಮಹಾಭಾರತ ಮತ್ತು ರಾಮಾಯಣದ ಕಥೆ ಅಥವಾ ಆ ಕಾವ್ಯಗಳ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಬಂದ ಹಲವಾರು ಚಿತ್ರಗಳು ಯಶಸ್ವಿಯಾಗಿದೆ. ಕೆಲವು ಚಿತ್ರಗಳು ಈ ಕಥೆ/ಪಾತ್ರಗಳನ್ನು ಯಥಾವತ್ತಾಗಿ(ಪೌರಾಣಿಕವಾಗಿ) ಚಿತ್ರಿಸಿದ್ದರೆ, ಮತ್ತೆ ಕೆಲವು ಚಿತ್ರಗಳು ಅವುಗಳಿಂದ ಸ್ಪೂರ್ತಿ ಪಡೆದು, ಕಾಲಕ್ಕೆ ತಕ್ಕಂತೆ (ಆಧುನಿಕ)ವಿಶ್ಲೇಷಣಾತ್ಮಕವಾಗಿ ಚಿತ್ರಿಸಿವೆ.

ಮಹಾಭಾರತವನ್ನು ಆಧಾರವಾಗಿಟ್ಟುಕೊಂಡ ಸುಮಾರು 91 ಚಿತ್ರಗಳು, ರಾಮಾಯಣವನ್ನು ಆಧಾರವಾಗಿಟ್ಟುಕೊಂಡ ಸುಮಾರು 47 ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ, ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ.

ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಮತ್ತು ದುರಂತ ನಾಯಕ ಎನಿಸಿಕೊಂಡ ಕರ್ಣನ ಪಾತ್ರವು ಹಲವು ನಿರ್ದೇಶಕರುಗಳಿಗೆ ಸ್ಪೂರ್ತಿಯಾಗಿದೆ. ‘ಕರ್ಣರಸಾಯನಮಲ್ತೆ ಭಾರತಂ’ ಎನ್ನುವ ಕುಮಾರವ್ಯಾಸನ ಮಾತಿನಂತೆ, ಮಹಾಭಾರತವೆಂದರೆ ಕರ್ಣ-ಕರ್ಣನೆಂದರೆ ಮಹಾಭಾರತ ಎನ್ನಬಹುದೇನೋ?

ಕರ್ಣನ ಹುಟ್ಟು, ಬೆಳವಣಿಗೆ, ಬೆಳೆದ ಮನೆತನದ ಜಾತಿಯ ಕಾರಣದಿಂದ ಅನುಭವಿಸಿದ ಅವಮಾನ, ಆತನ ಸ್ನೇಹಪರತೆ, ದಾನ, ಸತ್ಯ, ಪ್ರಾಮಾಣಿಕತೆ, ಧೈರ್ಯ, ನೈತಿಕತೆ ಮುಂತಾದ ಗುಣಗಳೆಲ್ಲವೂ ಆ ಪಾತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಈ ಕಾರಣಕ್ಕಾಗಿಯೇ ಕರ್ಣನ ಪಾತ್ರವನ್ನಿಟ್ಟುಕೊಂಡು ಹಲವು ಚಿತ್ರಗಳು ಬಿಡುಗಡೆಯಾಗಿವೆ. ಇನ್ನೂ ಮತ್ತಷ್ಟು ಚಿತ್ರಗಳು ಸೆಟ್ಟೇರಿವೆ.

ಅವುಗಳಲ್ಲಿ, ತಮಿಳಿನ ಯಶಸ್ವಿ ಯುವ ನಿರ್ದೇಶಕರಲ್ಲಿ ಒಬ್ಬರಾದ ಮಾರಿ ಸೆಲ್ವರಾಜ್ ನಿರ್ದೇಶನದಲ್ಲಿ ಇನ್ನೂ ಚಿತ್ರೀಕರಣ ಹಂತದಲ್ಲಿರುವ ತಮಿಳು ಚಿತ್ರ “ಕರ್ಣನ್” ಸದ್ಯ ಹೆಚ್ಚು ಚರ್ಚಿಸಲ್ಪಡುತ್ತಿರುವ ಚಿತ್ರವಾಗಿದೆ.

ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಮಾರಿ ಸೆಲ್ವರಾಜ್ ಈ ಹಿಂದೆ ತಮ್ಮ ಚೊಚ್ಚಲ ಸಿನಿಮಾ ‘ಪರಿಯೇರುಂ ಪೆರುಮಾಳ್’ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದರಲ್ಲದೆ ಆ ಸಿನೆಮಾಗ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಸಬ್-ಆಲ್ಟರ್ನ್ ಪರಿದೃಷ್ಟಿಯಿಂದ ಜಾತಿವ್ಯವಸ್ಥೆ ಮತ್ತು ಅದರ ಕಬಂದ ಬಾಹುಗಳ ಸಮಸ್ಯೆ ಮತ್ತು ಪರಿಣಾಮಗಳನ್ನು ಸಂವೇದನಾಶೀಲವಾಗಿ ದಾಟಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದರು. ಮುಖ್ಯವಾಹಿನಿಯ ಚಿತ್ರದಂತೆಯೇ ಮನರಂಜನೆ ಮತ್ತು ಹಣಗಳಿಕೆಯ ದೃಷ್ಟಿಯಲ್ಲೂ ‘ಪರಿಯೇರುಂ ಪೆರುಮಾಳ್’ ಯಶಸ್ವಿಯಾಗಿತ್ತು.

ಎರಡನೆಯದಾಗಿ, ಈಗ ಸೆಟ್ಟೇರಿರುವ ಸಿನಿಮಾದ ನಾಯಕನಾಗಿ ಅಭಿನಯಿಸುತ್ತಿರುವ ಧನುಷ್ ಕೂಡ ಈ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಧನುಷ್ ಮುಖ್ಯಪಾತ್ರದಲ್ಲಿ ನಟಿಸಿದ್ದ ವೆಟ್ರಿಮಾರನ್ ನಿರ್ದೇಶನದ ’ಅಸುರನ್’ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ಅದೂ ಅಲ್ಲದೆ ಧನುಷ್ ಅವರ ‘ವಂಡರ್ ಬಾರ್’ ಬ್ಯಾನರ್ ಅಡಿಯಲ್ಲಿ ಅತ್ಯುತ್ತಮ ಚಿತ್ರಗಳ ನಿರ್ಮಾಣವಾಗುತ್ತಿದೆ. ಅವುಗಳೆಲ್ಲವೂ ಬಹುತೇಕ ಜಾತಿ ವ್ಯವಸ್ಥೆ ತಳಸಮುದಾಯಗಳನ್ನು ಶೋಷಿಸುವ ವಸ್ತು-ವಿಷಯಗಳನ್ನು ಹೊಂದಿರುವಂತವು.

ಕೆಲವು ದಿನಗಳ ಹಿಂದೆ ಈ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಮೇಕಿಂಗ್‍ನಲ್ಲಿ ಚಿತ್ರಕ್ಕಾಗಿ ಒಂದು ಹಳ್ಳಿಯನ್ನೇ ನಿರ್ಮಿಸುತ್ತಿರುವ ವಿಷಯ ಹೆಚ್ಚು ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಮೂರನೆಯದಾಗಿ, ಅದರ ಶೀರ್ಷಿಕೆಯಿಂದಲೇ ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದೆ. ಕರ್ಣನ ಪಾತ್ರವನ್ನು ಅಥವಾ ಅದರ ಸ್ಪೂರ್ತಿಯಿಂದ ಮೂಡಿರುವ ಪಾತ್ರವನ್ನು ತಮಿಳಿನ ದಿಗ್ಗಜ ನಟರುಗಳು ಈ ಹಿಂದೆ ಅಭಿನಯಿಸಿದ್ದಾರೆ. ಈಗ ಇದು ಧನುಷ್ ಅವರ ಸರದಿಗೆ ಬಂದಿದೆ.

1964 ರಲ್ಲಿ ಬಿಡುಗಡೆಯಾಗಿದ್ದ ತಮಿಳು ಪೌರಾಣಿಕ ಚಿತ್ರ ‘ಕರ್ಣನ್’ ಭಾರತೀಯ ಮತ್ತು ತಮಿಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಿತ್ತು. ಈ ಚಿತ್ರದ ನಾಯಕ ಶಿವಾಜಿ ಗಣೇಶನ್ ಅವರ ನಟನೆ ತಮಿಳಯನಾಡಿನ ಜನರಲ್ಲಿ ಇಂದಿಗೂ ನೆನಪಿನಲ್ಲುಳಿದಿದೆ. ಬಿ ಆರ್ ಪಂತುಲು ನಿರ್ದೇಶಿಸಿದ್ದ ಈ ಚಿತ್ರ, 11ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ಮೂರನೇ ಅತ್ಯುತ್ತಮ ಚಿತ್ರ) ಪಡೆದುಕೊಂಡಿತ್ತು. ಇಷ್ಟೇ ಅಲ್ಲದೇ ಎನ್. ಟಿ. ರಾಮಾರಾವ್ ಅವರಿಂದ ಹಿಡಿದು ಸಾವಿತ್ರಿ, ಮುತ್ತುರಾಮನ್, ಎಂ. ವಿ. ರಾಜಮ್ಮ ಮುಂತಾದವರ ದೊಡ್ಡ ತಾರಾಬಳಗವೇ ಇತ್ತು. ಕರ್ಣನ ಪಾತ್ರವನ್ನು ತಮ್ಮ ಅದ್ಭುತ ಅಭಿನಯದ ಮೂಲಕ ಶಿವಾಜಿ ಗಣೇಶನ್ ಕಟ್ಟಿಕೊಟ್ಟಿದ್ದರು.

1991ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಬಿಡುಗಡೆಯಾದ ಮತ್ತೊಂದು ಯಶಸ್ವಿ ತಮಿಳು ಚಿತ್ರ ‘ದಳಪತಿ’. ಮಹಾಭಾರತವನ್ನು ಅಳವಡಿಸಿಕೊಂಡಿದ್ದ ಈ ಸಮಕಾಲೀನ ಕಥೆಯಲ್ಲಿ ರಜನಿಕಾಂತ್ ಕರ್ಣನಿಂದ ಸ್ಪೂರ್ತಿ ಪಡೆದ ಪಾತ್ರವನ್ನು ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ನಿರ್ದೇಶಕ ಕರ್ಣನ ಪಾತ್ರವನ್ನು ಈ ಚಿತ್ರದಲ್ಲಿ ಹೆಚ್ಚು ಸಮಕಾಲೀನಗೊಳಿಸಿದ್ದಾರೆ.

ಹುಟ್ಟಿದಾಗಲೇ ತಾಯಿಂದ ಬೇರೆಯಾಗುವ ಮಗು(ಸೂರ್ಯ/ಕರ್ಣ) ಬೆಳೆಯುತ್ತಾ ದೇವರಾಜ್ (ದುರ್ಯೋಧನ) ಎನ್ನುವ ರೌಡಿಯ ಸ್ನೇಹವನ್ನು ಮಾಡುತ್ತಾನೆ. ಸುಬ್ಬಲಕ್ಷ್ಮಿ ಎನ್ನುವ ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸಿ, ತನ್ನ ಹುಟ್ಟಿನ ಕಾರಣಕ್ಕೆ, ಸ್ನೇಹದ ಕಾರಣಕ್ಕೆ ಆಕೆಯ ತಂದೆಯಿಂದಲೇ ಅವಮಾನಿತನಾಗುತ್ತಾನೆ. ಅದೇ ಊರಿಗೆ ಡಿ.ಸಿಯಾಗಿ ಬರುವ ತನ್ನ ತಮ್ಮ ಅರವಿಂದಸಾಮಿ (ಅರ್ಜುನ) ಸೂರ್ಯ ಮತ್ತು ದೇವರಾಜ್‌ನನ್ನು ಮಟ್ಟಹಾಕಲು ಯತ್ನಿಸುತ್ತಾನೆ. ಇದರ ನಡುವೆ ತಾಯಿ (ಕುಂತಿ) ಪ್ರೀತಿಯ ಸಂಘರ್ಷವನ್ನೂ ಸಿನೆಮಾ ಒಳಗೊಂಡಿದೆ.

ಹೀಗೆ ಮಹಾಭಾರತದ ಕಥೆಯ ಹಿನ್ನಲೆಯಲ್ಲಿ ಕರ್ಣನ ಪಾತ್ರದಿಂದ ಸ್ಪೂರ್ತಿಗೊಂಡ ಈ ಚಿತ್ರ ರಜನಿಕಾಂತ್, ಮಣಿರತ್ನಂ ಮತ್ತು ತಮಿಳು ಚಿತ್ರರಂಗಕ್ಕೆ ಒಂದು ಮೈಲಿಗಲ್ಲಾಯಿತು.

ಪ್ರಸ್ತುತ ಧನುಷ್ ಈಗ ಕರ್ಣನಾಗಲಿದ್ದಾರೆ. ಆದರೆ ಇದು ಪೌರಾಣಿಕ ಚಿತ್ರವಲ್ಲ. ಬದಲಿಗೆ ನಿರ್ದೇಶಕರ ಹಿನ್ನೆಲೆಯಿಂದ ನೋಡುವುದಾದರೆ, ಪಕ್ಕಾ ತಳಸಮುದಾಯದ ಪರವಾದ ದನಿಯಿರುವ ಚಿತ್ರ ಇದು ಎನ್ನುವುದರಲ್ಲಿ ಅನುಮಾನವಿಲ್ಲ.

ನಿರ್ದೇಶಕನ ಮಾತುಗಳಲ್ಲೇ ಹೇಳುವುದಾದರೆ ”ಇದು ನನ್ನ ಎರಡನೇ ಚಿತ್ರ. ವಾಸ್ತವದಲ್ಲಿ ಇದೇ ಮೊದಲ ಚಿತ್ರವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ‘ಪರಿಯೇರುಂ ಪೆರುಮಾಳ್’ ಚಿತ್ರ ಮೊದಲು ಬರಬೇಕಾಯಿತು. ನನ್ನ ಸಿದ್ಧಾಂತವನ್ನು ಈ ಚಿತ್ರದಲ್ಲಿಯೇ ವ್ಯಕ್ತಪಡಿಸಿದ್ದೆ. ಇದರಲ್ಲಿ ನಾಯಕ ತಾನಾಯಿತು ತನ್ನ ಪಾಡಾಯಿತು ಎಂದು ಬದುಕುತ್ತಿರುತ್ತಾನೆ. ಆದರೂ ಆತನನ್ನು ಬಿಡದೇ ಕಾಡುವ ಜಾತಿ ವ್ಯವಸ್ಥೆಯ ಅನಿಷ್ಟಗಳನ್ನು ಸೂಕ್ಷ್ಮವಾಗಿ ತೊರಿಸುವಲ್ಲಿ ಯಶಸ್ವಿಯಾಗಿದ್ದೆ ಎಂದು ನಂಬಿದ್ದೇನೆ.

ಆದರೆ ‘ಕರ್ಣನ್’ ಚಿತ್ರದಲ್ಲಿ ನಾಯಕ ಅನ್ಯಾಯವನ್ನು ಸಹಿಸದ, ತನ್ನ(ತಳಸಮುದಾಯದ) ಜನಗಳಿಗಾಗಿ, ನ್ಯಾಯಕ್ಕಾಗಿ ಏನನ್ನು ಬೇಕಾದರೂ ಮಾಡುವ ಛಲವುಳ್ಳವನಾಗಿರುತ್ತಾನೆ. ಮಹಾಭಾರತದ ಕರ್ಣನ ತ್ಯಾಗ ಮತ್ತು ಧೈರ್ಯವನ್ನು ಈ ಚಿತ್ರದ ನಾಯಕನಲ್ಲಿ ಕಾಣಬಹುದು. ಪೌರಾಣಿಕ ಕರ್ಣನಿಗಿಂತ ವಿಭಿನ್ನವಾಗಿ ಹೋರಾಟ ಮಾಡಿ ತನ್ನ ಹಕ್ಕನ್ನು ಪಡೆಯುತ್ತಾನೆ’’ ಎನ್ನುತ್ತಾರೆ ಮಾರಿ ಸೆಲ್ವರಾಜ್.

ಶಿವಾಜಿ ಗಣೇಶನ್ ಮತ್ತು ರಜನಿಕಾಂತ್ ಕರ್ಣನಾಗಿ ನಟಿಸಿದ್ದ ಚಿತ್ರಗಳು ಉಂಟುಮಾಡಿದ ಸಂಚಲನವನ್ನು ಈ ಚಿತ್ರವು ಇನ್ನೂ ವಿಭಿನ್ನವಾಗಿ ಉಂಟುಮಾಡಬಹುದೆಂಬ ನಿರೀಕ್ಷೆಯನ್ನು ಚಿತ್ರಪ್ರೇಮಿಗಳಿಗೆ ಹುಟ್ಟಿಸಿದೆ. ತುದಿಗಾಲಿನಲ್ಲಿ ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ.

– ಪ್ರತಾಪ್ ಹುಣಸೂರು


ಇದನ್ನು ಓದಿ: ಕೀಲಾರ ಟೆಂಟ್ ಹೌಸ್-4: ಮನುಷ್ಯನ ಆಳದ ಮಾನವೀಯ ತಂತುಗಳನ್ನು ಶೋಧಿಸುವ ಕೀಸ್ಲೋಸ್ಕಿ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: BLO ಮನೆ-ಮನೆ ಭೇಟಿ ಗಡುವು ಆಗಸ್ಟ್‌ 17ರವರೆಗೆ ವಿಸ್ತರಣೆ!

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು (ECI) ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ-ಮನೆ ಗಣತಿ ಪ್ರಕ್ರಿಯೆಯ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದ್ದು,...

ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲ್ಲ: ತಮಿಳುನಾಡು ಸಿಎಂ ವಿಜಯ್

ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ಕಾವು ಏರುತ್ತಿರುವ ಬೆನ್ನಲ್ಲೇ, ಈ ಕುರಿತು ತಕ್ಷಣವೇ ಸರ್ವಪಕ್ಷಗಳ ಸಭೆಯನ್ನು ಆಯೋಜಿಸುವ ಯಾವುದೇ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ....

ಬೆಂಗಳೂರಿನ ಜಕ್ಕೂರಿನಲ್ಲಿ 22-23 ವರ್ಷದ ಇಬ್ಬರು ನೇಪಾಳಿ ಯುವತಿಯರ ಶವಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಜಕ್ಕೂರು ಮುಖ್ಯ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಸೀರೆಯಿಂದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನೇಪಾಳ...

NEET Paper Leak: ಒಂದೇ ಒಂದು CCTV ಇರಲಿಲ್ಲ, ಚೆಕಿಂಗ್ ಇರಲಿಲ್ಲ! ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದು ಹೇಗೆ? CBI ವರದಿ ಇಲ್ಲಿದೆ

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA)...

ಉತ್ತರಾಖಂಡ : ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ SIR ನೋಟಿಸ್

ಉತ್ತರಾಖಂಡದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನೆ ಬಾಗಿಲಿಗೆ ತಲುಪಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ),...

SIR: ಗಣತಿ ನಮೂನೆ ವಾಪಸ್‌ಗೆ ನಾಳೆಯೇ ಅಂತಿಮ ಗಡುವು, 1.10 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯಾದ್ಯಂತ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ನಾಳೆ (ಆಗಸ್ಟ್ 8) ಕೊನೆಯ ದಿನವಾಗಿದೆ. ಈ ನಡುವೆ...

ಕರ್ನಾಟಕ ಎಸ್ಐಆರ್: ಬೆಂಗಳೂರಿನ ಅರ್ಧದಷ್ಟು ಮತದಾರರು ‘ಹೊರಕ್ಕೆ’: ರಾಜ್ಯದಲ್ಲಿ 1.11 ಕೋಟಿ ಜನರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ

ಕರ್ನಾಟಕದಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ರಾಜ್ಯದ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ. ಪ್ರಜಾಪ್ರಭುತ್ವ...

ಎರಡು ನ್ಯೂಸ್ ಚಾನೆಲ್‌ಗಳಿಗೆ ಉದಯನಿಧಿ ಲೀಗಲ್ ನೋಟಿಸ್ : ಸಾರ್ವಜನಿಕ ಕ್ಷಮೆಯಾಚನೆ, 100 ಕೋಟಿ ಪರಿಹಾರಕ್ಕೆ ಆಗ್ರಹ-ವರದಿ

ತಮಿಳುನಾಡಿನ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಇತ್ತೀಚಿನ ಹೇಳಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾನನಷ್ಟ ಆರೋಪ ಮಾಡಿ ಎರಡು ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ...

CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ರಚನೆ: ಅಭಿಜೀತ್ ದೀಪ್ಕೆಗೆ ‘ರಾಷ್ಟ್ರೀಯ ಸಂಚಾಲಕ’

ದೇಶಾದ್ಯಂತ ವಿದ್ಯಾರ್ಥಿ ಮತ್ತು ಯುವಜನರ ಬೃಹತ್ ಹೋರಾಟದ ಮೂಲಕ ಗಮನಸೆಳೆದಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಅಧಿಕೃತವಾಗಿ ತನ್ನ ಮೊದಲ 14 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (National Working Committee) ಪ್ರಕಟಿಸಿದೆ....

ಕ್ಷೇತ್ರ ಪುನರ್ ವಿಂಗಡಣೆಗೆ ಡಿಎಂಕೆ ವಿರೋಧ: ‘ಮೃದು ಧೋರಣೆ’ ವದಂತಿಗೆ ಉದಯನಿಧಿ ಸ್ಟಾಲಿನ್ ಬ್ರೇಕ್

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸಲು ಮುಂದಾಗಿರುವುದು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಸರತ್ತಿಗೆ ಕಾರಣವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಡಿಎಂಕೆ (DMK) ತನ್ನ ಕಠಿಣ ನಿಲುವನ್ನು ಮೃದುಗೊಳಿಸಿದೆ ಎಂಬ...