Homeಕರ್ನಾಟಕ'ಯುವಜನ ಆಯೋಗ' ಜಾರಿಗಾಗಿ ಸಂವಾದ-ಯುವ ಮುನ್ನಡೆ, ಕರ್ನಾಟಕ ವೇದಿಕೆಯಿಂದ ಅಭಿಯಾನ

‘ಯುವಜನ ಆಯೋಗ’ ಜಾರಿಗಾಗಿ ಸಂವಾದ-ಯುವ ಮುನ್ನಡೆ, ಕರ್ನಾಟಕ ವೇದಿಕೆಯಿಂದ ಅಭಿಯಾನ

- Advertisement -
- Advertisement -

ಯುವಜನರ ಘನತೆಯ ಬದುಕಿಗಾಗಿ, ಯುವಜನ ಆಯೋಗ ಜಾರಿಯಾಗಬೇಕು ಎಂದು ಸಂವಾದ ಮತ್ತು ಯುವಮುನ್ನಡೆ – ಕರ್ನಾಟಕ ಇವುಗಳ ಜಂಟಿ ಆಶ್ರಯದಲ್ಲಿ ಅಭಿಯಾನ ಆರಂಭಿಸಿವೆ.

ಈ ಕುರಿತು ಯುವ ಮುನ್ನಡೆ, ಕರ್ನಾಟಕ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ”ಯುವಜನರು ಇರುವ ಸ್ಥಳಗಳಲ್ಲಿ ಅವರ ಗೌರವಕ್ಕೆ ಧಕ್ಕೆ ಬಾರದಂತೆ, ಹಕ್ಕುಗಳಿಗೆ ಚ್ಯುತಿ ಬರದಂತೆ ಶೋಷಣೆ ಮುಕ್ತ ಯುವಸಮಾಜ ಕಟ್ಟಲು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಹಾಗೂ ಯುವಗೆಳೆಯ ಗೆಳತಿಯರ ಶಕ್ತಿಯ ಪಾಲ್ಗೊಳುವಿಕೆಯೊಂದಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಮತ್ತೊಮ್ಮೆ ‘ಯುವಜನ ಆಯೋಗ ಜಾರಿಯಾಗಬೇಕೆಂದು ಆಭಿಯಾನ’ ನಡೆಯುತ್ತಿದೆ” ಎಂದು ಹೇಳಿದೆ.

ಅಭಿಯಾನದ ಭಾಗವಾಗಿ ದಿನಾಂಕ 27/09/2023ರಂದು ರಾಜ್ಯ ಮಟ್ಟದ ಯುವಾಂದೋಲನ ಪ್ರಕ್ರಿಯೆಯ ಭಾಗವಾಗಿ ವಿಧಾನಸೌದಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಛೇರಿ ಹಾಗೂ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ, ಹಣಕಾಸು ಹಾಗೂ ಆರ್ಥಿಕ ಮುಖ್ಯ ಕಾರ್ಯದರ್ಶಿ ಕೆ ಎಲ್‌ ಆಸೀಖ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ, ಯವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ, ವಿಧಾನ ಸಭೆಯ ಸಭಾಧ್ಯಕ್ಷ ಯು ಟಿ ಖಾದರ್.ವಿಧಾನ ಪರಿಷತ್ ನ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಭೇಟಿ ಮಾಡಿ, ಯುವಜನ ಆಯೋಗ ಜಾರಿಗೆ ಒತ್ತಾಯಿಸಿದೆ.

ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು, ಸಂವಾದ, ಯುವ ಮುನ್ನಡೆ ಮತ್ತು ಹಲವು ಯುವ ಸಂಘಟನೆಗಳ ಬೇಡಿಕೆಯನ್ನು ಮನ್ನಿಸಿ, ಯುವಜನ ಆಯೋಗ ಸ್ಥಾಪಿಸುವುದು, “ಯುವನಿಧಿ ನಿರುದ್ಯೋಗ ಭತ್ಯೆ ನೀಡುವುದು ಹಾಗೂ 17 ಕಾರ್ಮಿಕರ ಹಿತಕಾಯುವುದನ್ನು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಯುವನಿಧಿ ಮತ್ತು ಗಿಗ್: ಕಾರ್ಮಿಕರ ಹಿತರಕ್ಷಣೆಯನ್ನು ಈಡೇರಿಸಿದ್ದಕ್ಕಾಗಿ ಯುವಮುನ್ನಡೆಯು ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ. ಅದರಂತೆ ‘ಯುವಜನ ಆಯೋಗ’ದ ಜಾರಿಗಾಗಿ ಮನವಿ ಪತ್ರಗಳನ್ನು ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಅಭಿಯಾನದಲ್ಲಿ ಸಂವಾದ-ಯುವಮುನ್ನಡೆ ಪ್ರತಿನಿಧಿಗಳಾದ ನೀಲಾ ಸೋಮಶೇಖರ್ (ಬೆಂಗಳೂರು), ಈರಮ್ಮ (ಬೆಂಗಳೂರು), ಮಧನ್‌ಕುಮಾರ್ (ಚಿತ್ರದುರ್ಗ), ಅರ್ಪಿತ (ಬೆಂಗಳೂರು), ಕೃತಿಕ್ (ಬೆಂಗಳೂರು) ಇನ್ನೂ ಅನೇಕರು ಭಾಗಿಯಾಗಿದ್ದರು.

ಹಕ್ಕೊತ್ತಾಯ:

  • ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪನೆಯಾಗಲಿ
  • ಕರ್ನಾಟಕ ಯುವನೀತಿ ಪರಿಷ್ಕರಣೆಯಾಗಲಿ
  • ಸರ್ಕಾರಿ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳಿಗೂ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಮಧ್ಯಾಹ್ನದ ಪೌಷ್ಠಿಕ ಆಹಾರ ಸಿಗಲಿ
  • ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದೆ ಉಳಿಸಲ್ಪಟ್ಟ ಎಲ್ಲರಿಗೂ ಶಿಕ್ಷಣ ಸಿಗಲಿ, ಯಾವುದೇ ವಿದ್ಯಾರ್ಥಿ ವೇತನ ಮೊಟಕುಗೊಳಿಸದೆ ಸರಿಯಾದ ಸಮಯಕ್ಕೆ ತಲುಪಲಿ.
  •  ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ಬರಲಿ, ಪೀಕ್ ಅವರ್‌ಗಳಲ್ಲಿ ಹೆಚ್ಚಿನ ಬಸ್‌ಗಳ ವ್ಯವಸ್ಥೆಯಾಗಬೇಕು.

ಈ ಅಭಿಯಾನದ ಚಟುವಟಿಕೆಗಾಗಿ ಬೆಂಗಳೂರು ನಗರ ಮತ್ತು ಚಿತ್ರದುರ್ಗ, ಮಂಗಳೂರು, ಕೋಲಾರಕುರ್ಗಿ ಜಿಲ್ಲೆಗಳ ಕಾಲೇಜುಗಳಲ್ಲಿ ಮತ್ತು ಹಳ್ಳಿಗಳಲ್ಲಿ ಯುವಜನರ ಸಶಕ್ತತೆಗಾಗಿ ಅರಿವು ಹಾಗೂ ಯುವಜನ ಆಯೋಗದ ಜಾರಿಗಾಗಿ ರಾಜ್ಯಮಟ್ಟದ ಯುವಾಂದೋಲನವು ಈಗಾಗಲೇ ನಡೆಸುತ್ತಿದ್ದೇವೆ ಎಂದು ಸಂವಾದ – ಯುವ ಮುನ್ನಡ, ಕರ್ನಾಟಕ ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಯುವಜನ ಆಯೋಗ ಎಂದರೇನು? ಯುವಜನರ ಹಕ್ಕುಗಳ ರಕ್ಷಣೆಗಾಗಿ ಮತ್ತು ಯುವಜನರ ಶಿಕ್ಷಣ ಮತ್ತು ಸುಲೀಕರಣ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದೇ ಯುವಜನ ಆಯೋಗದ ಗುರಿ ಉದ್ದೇಶ.

ಆಯೋಗದ ಸ್ಥಾಪನೆ ಹೇಗೆ?

ರಾಜ್ಯ ಯುವಜನ ಆಯೋಗವನ್ನು ಸ್ಥಾಪಿಸಬೇಕಾದರೆ ಸರಕಾರವು ”ಯುವಜನ ಆಯೋಗ ಕಾಯಿದೆ” ಕರಡು ರೂಪಿಸಿ ಅದನ್ನು ಉಭಯ ಸದನಗಳಲ್ಲಿ ಮಂಡಿಸಬೇಕು. ವಿಧಾನಸಭೆ ಮತ್ತು ವಿಧಾನ ಪರಿಷತ್‌ ಎರಡರಲ್ಲಿಯೂ ಮೂರನೇ ಎರಡು ಬಹುಮತ ಸಿಕ್ಕು, ರಾಜ್ಯಪಾಲರಿಂದ ಅಂಕಿತಗೊಂಡರೆ ಕಾಯಿದೆಯಾಗಿ ರೂಪು ಪಡೆಯುತ್ತದೆ. ನಂತರ ಸೂಕ್ತ ನಿಯಮಗಳನ್ನು ರೂಪಿಸಿ ಅದನ್ನು ಜಾರಿಗೆ ತರಬಹುದಾಗಿದೆ.

ಇದನ್ನೂ ಓದಿ: ನಾಳೆ ಕರ್ನಾಟಕ ಬಂದ್: ಜನಜೀವನ ಅಸ್ತವ್ಯಸ್ತ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...