ಕಾಂಗ್ರೆಸ್ನ ಸರ್ವಸದಸ್ಯರ ಅಧಿವೇಶನಕ್ಕೂ ಮುನ್ನ ಸೋಮವಾರ (ಫೆ.20)ದಂದು ಛತ್ತೀಸ್ಗಢದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದೆ. ಈ ದಾಳಿಗಳ ಕುರಿತು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಡಿ ದಾಳಿ ಕುರಿತು ಟ್ವೀಟ್ ಮಾಡಿರುವ ಖರ್ಗೆ, ”ಕಳೆದ 9 ವರ್ಷಗಳಲ್ಲಿ 95 ಪ್ರತಿಶತದಷ್ಟು ದಾಳಿಗಳು ವಿರೋಧ ಪಕ್ಷದ ನಾಯಕರ ಮೇಲೆಯೇ ನಡೆದಿವೆ ಅದರಲ್ಲೂ ವಿಶೇಷವಾಗಿ ನಮ್ಮ ಪಕ್ಷದ ನಾಯಕರ ಮೇಲೆಯೇ ನಡೆದಿವೆ. ಇದು ಬಿಜೆಪಿಯ ಹೇಡಿತನವನ್ನು ತೋರಿಸುತ್ತದೆ ಆದರೆ ಕಾಂಗ್ರೆಸ್ ಈ ಕುತಂತ್ರಗಳಿಗೆ ಮಣಿಯುವುದಿಲ್ಲ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
पिछले 9 सालों में ED ने जो रेड की हैं उसमें 95% विपक्षी नेता हैं, और सबसे ज़्यादा कांग्रेस नेताओं के ख़िलाफ़ है।
रायपुर में कांग्रेस महाधिवेशन के पहले मोदी सरकार द्वारा ED का दुरपयोग कर छत्तीसगढ़ के हमारे कांग्रेस नेताओं पर छापा मारना, भाजपा की कायरता को दर्शाता है।
1/2
— Mallikarjun Kharge (@kharge) February 20, 2023
”ಈ ಹೇಡಿತನದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ”ಭಾರತ್ ಜೋಡೋ ಯಾತ್ರೆ”ಯ ಅಗಾಧ ಯಶಸ್ಸಿನಿಂದಾಗಿ ಬಿಜೆಪಿಯ ಅಶಾಂತಿ ಎದ್ದು ಕಾಣುತ್ತಿದೆ. ಮೋದಿಜಿಯವರಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆಯಿದ್ದರೆ, ನಿಮ್ಮ ಆತ್ಮೀಯ ಗೆಳೆಯನ ಮೆಗಾ ಹಗರಣಗಳ ಮೇಲೆ ದಾಳಿ ಮಾಡಿ, ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಈ ಪ್ರಯತ್ನವನ್ನು ನಾವು ದೃಢವಾಗಿ ಎದುರಿಸುತ್ತೇವೆ” ಎಂದು ಖರ್ಗೆ ಟ್ವೀಟ್ನಲ್ಲಿ ಹೇಳಿದ್ದಾರೆ.
हम इन कायराना धमकियों से डरने वाले नहीं हैं।
"भारत जोड़ो यात्रा" की अपार सफलता से भाजपा की बेचैनी दिखने लगी है।
मोदी जी में ज़रा भी ईमानदारी है तो अपने "परम मित्र" के महाघोटालों पर रेड करें।
लोकतंत्र को कुचलने के इस प्रयास का हम डट कर सामना करेंगे।
2/2
— Mallikarjun Kharge (@kharge) February 20, 2023
ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಗೆಹ್ಲೋಟ್, ”ಇದು ದುರದೃಷ್ಟಕರ ಸಂಗತಿಯಾಗಿದೆ, ಯಾವುದೇ ರಾಜ್ಯದಲ್ಲಿ ಚುನಾವಣೆಗಳು ಬಂದಾಗಲೂ ಇಡಿ ಮತ್ತು ಸಿಬಿಐ ದಾಳಿಗಳು ನಡೆಯುತ್ತಿವೆ. 2014 ರಿಂದ ನಿರಂತರವಾಗಿ ಇಡಿ, ಐಟಿ ಮತ್ತು ಸಿಬಿಐ ದುರ್ಬಳಕೆಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದಾಗಲೂ ಇಡಿ ಮತ್ತು ಸಿಬಿಐ ದಾಳಿಗಳು ನಡೆಯುತ್ತವೆ. ಕಾಂಗ್ರೆಸ್ನ ಸರ್ವಸದಸ್ಯರ ಅಧಿವೇಶನಕ್ಕೂ ಮುನ್ನ ಇಂತಹ ಕ್ರಮ ಖಂಡನೀಯ” ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಇಡಿ ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ: ರಾಹುಲ್ ಗಾಂಧಿ ವ್ಯಂಗ್ಯ
”ಇಡಿ ದಾಳಿಯಿಂದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇದು ಬಿಜೆಪಿಯ ನಾಟಕವಲ್ಲದೆ ಬೇರೇನೂ ಅಲ್ಲ ಎಂದು ದೇಶದ ಜನರು ಅರ್ಥಮಾಡಿಕೊಳ್ಳುತ್ತಿದ್ದಾರೆ” ಎಂದು ಗೆಹ್ಲೋಟ್ ಹೇಳಿದರು.
”ಈ ರೀತಿ ದಾಳಿ ನಡೆಸುವುದರಿಂದ ಕಾಂಗ್ರೆಸ್ ಹೆದರುತ್ತದೆ ಎಂದು ಅವರು ಭಾವಿಸುತ್ತಾರೆ? ಕಾಂಗ್ರೆಸ್ ಪಕ್ಷವು ಬ್ರಿಟಿಷರ ವಿರುದ್ಧ ಹೋರಾಡಿದ ಪಕ್ಷ ಮತ್ತು ನಮ್ಮ ಅನೇಕ ನಾಯಕರು ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ ಜೈಲಿಗೆ ಹೋಗಿದ್ದಾರೆ. ಇದೀಗ ಬಿಜೆಪಿಯವರು ನಮ್ಮ ಮೇಲಿನ ದ್ವೇಷದಿಂದ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ, ನಾವು ಈಗಲೂ ಇದರ ವಿರುದ್ಧ ಹೋರಾಡುತ್ತೇವೆ” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಇಡಿ ದಾಳಿ ಬಗ್ಗೆ ಮಾತನಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ”ಬಿಜೆಪಿಯು ‘ಫೇರ್ ಅಂಡ್ ಲವ್ಲಿ’ ಯೋಜನೆಯನ್ನು ನಡೆಸುತ್ತಿದೆ. ಏಕೆಂದರೆ, ಹಿಮಂತ ಬಿಸ್ವ ಶರ್ಮಾ ಅಥವಾ ಸುವೇಂದು ಅಧಿಕಾರಿ ಅಥವಾ ಇತರರು ಬಿಜೆಪಿ ಸೇರಿದರು. ಈಗ ಇದ್ದಕ್ಕಿದ್ದಂತೆ ಅವರೆಲ್ಲಾ ಪ್ರಾಮಾಣಿಕರಾಗಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ತನಿಖೆಯೂ ನಡೆಯುವುದಿಲ್ಲ, ಯಾವ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಪ್ರಧಾನಿ ಮೋದಿ ಅವರು ಅಗತ್ಯವಿರುವ ಕಡೆಯಲ್ಲಿ ದಾಳಿಗಳನ್ನು ನಡೆಸಲು ಬಿಡುವುದಿಲ್ಲ. ಈ ಹಿಂದೆ ಯಾರ ವಿರುದ್ಧ ಇಡಿ ದಾಳಿ ನಡೆಸಿತ್ತೋ, ಅವರು ಈಗ ಬಿಜೆಪಿ ಸೇರಿದ ನಂತರ ನಿರಪರಾಧಿಗಳಾಗಿದ್ದಾರೆ” ಎಂದು ಜೈರಾಮ್ ರಮೇಶ್ ಆರೋಪಿಸಿದರು.
”ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿಯನ್ನು ತೊಳೆಯುವ ಯಂತ್ರ” ಎಂದು ಖರ್ಗೆಯವರನ್ನು ಜೈರಾಮ್ ರಮೇಶ್ ಹೊಗಳಿದ್ದಾರೆ.
ಕಾಂಗ್ರೆಸ್ನ ಸರ್ವಸದಸ್ಯರ ಅಧಿವೇಶನಕ್ಕೂ ಮೂರು ದಿನಗಳ ಮುಂಚಿತವಾಗಿ, ಕಲ್ಲಿದ್ದಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ಗಢದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಮುಂಜಾನೆ ಶೋಧ ನಡೆಸಿತು. ವಿವಿಧ ಕಾಂಗ್ರೆಸ್ ಮುಖಂಡರ ಮನೆ ಮತ್ತು ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದರು.
ಛತ್ತೀಸ್ಗಢದ ಕಾಂಗ್ರೆಸ್ ಖಜಾಂಚಿ ರಾಮಗೋಪಾಲ್ ಅಗರ್ವಾಲ್ ಅವರ ಮನೆಯಲ್ಲಿ ಶೋಧ ನಡೆಸಲಾಗಿದೆ. ಭಿಲಾಯಿ ಶಾಸಕ ದೇವೇಂದ್ರ ಯಾದವ್, ಗಿರೀಶ್ ದೇವಾಂಗನ್, ಆರ್ ಪಿ ಸಿಂಗ್, ವಿನೋದ್ ತಿವಾರಿ, ಸನ್ನಿ ಅಗರ್ವಾಲ್ ಮೇಲೆಯೂ ಇಡಿ ದಾಳಿ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸೂರ್ಯಕಾಂತ್ ತಿವಾರಿಯಿಂದ ರಾಮ್ಗೋಪಾಲ್ ಅಗರ್ವಾಲ್ 52 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನುವ ಬಗ್ಗೆ ಜಾರಿ ನಿರ್ದೇಶನಾಲಯದ ಬಳಿ ಬಲವಾದ ಸಾಕ್ಷ್ಯವನ್ನು ಇವೆ ಎಂದು ಹೇಳಲಾಗುತ್ತಿದೆ.