Homeಅಂಕಣಗಳುತ್ಸುನೆಸಾಬುರೋ ಮಕಿಗುಚಿಯವರ ಸೃಷ್ಟಿಶೀಲ ಬದುಕಿಗಾಗಿ ಶಿಕ್ಷಣ ಎಂದರೇನು?

ತ್ಸುನೆಸಾಬುರೋ ಮಕಿಗುಚಿಯವರ ಸೃಷ್ಟಿಶೀಲ ಬದುಕಿಗಾಗಿ ಶಿಕ್ಷಣ ಎಂದರೇನು?

ಮಕಿಗುಚಿ ಆಗಿನ ಜಪಾನಿನ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಖಂಡಿಸುವವರಾದರೂ, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈಗಲೂ ಅಂತಹ ದೋಷಗಳಿವೆ.

- Advertisement -
- Advertisement -

ಅಪ್ರಜ್ಞಾಪೂರ್ವಕವಾದ ಬದುಕನ್ನು ಪ್ರಜ್ಞೆಯ ಕಡೆಗೆ, ಮೌಲ್ಯರಹಿತ ಬದುಕನ್ನು ಮೌಲ್ಯದ ಕಡೆಗೆ ಮತ್ತು ವಿಚಾರಶೂನ್ಯತೆಯಿಂದ ವಿಚಾರದ ಕಡೆಗೆ ನಡೆಸುವುದೇ ಶಿಕ್ಷಣದ ಕಾರ್ಯ – ಸಮಾಜದಲ್ಲಿ ಇದನ್ನು ಸಾಕಾರಗೊಳಿಸಬಲ್ಲ ಮಾರ್ಗದರ್ಶಕರು ಮಾದರಿಯಾಗುವ ಶಿಕ್ಷಕರು ಎಂದು ಜಪಾನಿನ ತ್ಸುನೆಸಾಬುರೋ ಮಕಿಗುಚಿ ನಂಬಿದ್ದರು. ನೈತಿಕ ವ್ಯಕ್ತಿತ್ವವಾಗಲಿ, ಸರಿಯಾದ ಶೈಕ್ಷಣಿಕ ಹಿನ್ನೆಲೆಯಾಗಲಿ ಇರದಿದ್ದ ಶಿಕ್ಷಕರನ್ನು ಕಟುವಾಗಿ ಟೀಕಿಸುತ್ತಿದ್ದ ಮಕಿಗುಚಿಯ ಕೆಂಗಣ್ಣಿಗೆ ಅವನ ಕಾಲದ ಶಿಕ್ಷಣತಜ್ಞರು ಗುರಿಯಾಗಿದ್ದರು. 1931ರ ಆಸುಪಾಸಿನಲ್ಲಿ ಮಕಿಗುಚಿ ಶೈಕ್ಷಣಿಕ ಪದ್ಧತಿಗಳಲ್ಲಿರುವ ಸಮಸ್ಯೆಯ ಕುರಿತಾಗಿ ಎತ್ತಿರುವ ಪ್ರಶ್ನೆಗಳು ಈಗಲೂ ಹಾಗೆಯೇ ಇವೆ. ಹಾಗಾಗಿ ಮಕಿಗುಚಿಯ ವಿಚಾರಗಳು ಮತ್ತು ಯೋಜನೆಗಳ ಕುರಿತಾದ “ಸೃಷ್ಟಿಶೀಲ ಬದುಕಿಗಾಗಿ ಶಿಕ್ಷಣ” ಕೃತಿಯು ಈಗಲೂ ಪ್ರಸ್ತುತವಾಗುತ್ತದೆ. ಡೇಲ್ ಎಂ ಬೇಥೆಲ್ ಸಂಪಾದಿಸಿರುವ ಇದನ್ನು ಸುಮತೀಂದ್ರ ನಾಡಿಗ ಕನ್ನಡಕ್ಕೆ ಅನುವಾದ ಮಾಡಿದ್ದು, ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ್ದಾರೆ.

ತ್ಸುನೆಸಾಬುರೋ ಮಕಿಗುಚಿ ತಾವೇ ಶಿಕ್ಷಕರಾಗಿದ್ದು ಬೋಧನೆಯ ಕ್ರಮದಲ್ಲಿ ಮತ್ತು ಶಿಕ್ಷಣದ ಬಗ್ಗೆ ತಳೆಯಬೇಕಾದ ನಿಲುವುಗಳ ಬಗ್ಗೆ ಸುಧಾರಣೆ ಆಗಲೇಬೇಕೆಂಬುದನ್ನು ಮನಗಂಡು ಅನೇಕ ಟಿಪ್ಪಣಿಗಳ ರಾಶಿಯನ್ನು ಮಾಡಿಕೊಂಡಿದ್ದರು. ಮೌಲ್ಯ ಸೃಷ್ಟಿಸುವ ಶಿಕ್ಷಣಕ್ಕಾಗಿ ಅವರು ಆಹ್ವಾನ ನೀಡಿದ್ದರು.

ಸಮಾಜದ ಎಲ್ಲಾ ವರ್ಗದವರಿಗೂ ದೊರಕುವ ಶಿಕ್ಷಣದ ಗುಣಮಟ್ಟವು ಉತ್ತಮವಾಗಿರಬೇಕೆಂಬ ದೃಷ್ಟಿಯಿಂದ ಮಿತವ್ಯಯ ಮತ್ತು ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣವನ್ನು ಕ್ರಮಬದ್ಧಗೊಳಿಸಬೇಕಾದ ಅಗತ್ಯವಿದೆ. ಹಾಗೆಯೇ ಮನಸ್ಸಿಗೆ ತೋಚಿದಂತೆ ಅನುಸರಿಸುವ ಕುರುಡು ಶಿಕ್ಷಣ ವಿಧಾನಗಳನ್ನು ಬಿಟ್ಟು ಸ್ಪಷ್ಟ ವಿಚಾರಗಳ, ಸುಯೋಜಿತ, ಸುವ್ಯವಸ್ಥಿತ ಮತ್ತು ಸುಸಂಸ್ಕೃತವಾದ ಶಿಕ್ಷಣ ಸಾಧ್ಯವಾಗುವಂತೆ ಶಿಕ್ಷಣ ಸಂಸ್ಥೆಗಳನ್ನು ಮತ್ತು ಆಡಳಿತವನ್ನೂ ಸುಗಮಗೊಳಿಸಬೇಕು. ಶಿಕ್ಷಣವನ್ನು ಸತತವಾಗಿ ಉತ್ಪಾದಕವಾಗಿ ಮತ್ತು ಸೃಷ್ಟಿಶೀಲವಾಗಿಡುವುದಕ್ಕೆ ಶಿಕ್ಷಣ ವ್ಯವಸ್ಥೆಯನ್ನು ಮತ್ತು ಬೋಧನಾ ಕ್ರಮಗಳನ್ನು ಅವಾಸ್ತವಿಕವಾಗಿ ಯೋಚಿಸುವ ಶಿಕ್ಷಣತಜ್ಞರ ಕೈಯಿಂದ ಬಿಡಿಸಬೇಕು. ಬಹಳ ಮುಖ್ಯವಾಗಿ ಸಮಾಜದ ದೃಷ್ಟಿಯಿಂದ ಶಾಲೆಗಳು ನೈತಿಕ ಶಿಕ್ಷಣದ ಕೇಂದ್ರಸ್ಥಾನವಾಗಬೇಕು ಹಾಗೆಯೇ ಸಮಾಜದ ಸಂರಚನೆಯ ಪ್ರಕ್ರಿಯೆಯಲ್ಲಿ ಮಕ್ಕಳ ಸಹಭಾಗಿತ್ವ ಇರುವ ಹಾಗೆ ನೋಡಿಕೊಳ್ಳಬೇಕು. ಇವು ಮಕಿಗುಚಿಯ ಒತ್ತಾಯಗಳು. ಅದಕ್ಕಾಗಿ ತಳೆಯಬೇಕಾದ ತಾತ್ವಿಕ ನಿಲುವುಗಳನ್ನು, ಅನುಸರಿಸಬೇಕಾದ ಕ್ರಮಗಳನ್ನು ಮತ್ತು ಕಲಿಕೆಯ ವಿಧಾನಗಳನ್ನು ಸ್ಪಷ್ಟವಾಗಿ ಸೂಚಿಸುತ್ತಾ ಹೋಗುತ್ತಾರೆ.

ಮಕಿಗುಚಿ ಆಗಿನ ಜಪಾನಿನ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಖಂಡಿಸುವವರಾದರೂ, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈಗಲೂ ಅಂತಹ ದೋಷಗಳಿವೆ. ವ್ಯಕ್ತಿ ಮತ್ತು ಸಮಾಜದ ಅನೇಕಾನೇಕ ವೈಪರೀತ್ಯಗಳ ದುರಂತಗಳಿಗೆ ಕಾರಣ ಅವೈಚಾರಿಕ ಮತ್ತು ಅವೈಜ್ಞಾನಿಕ ಶಿಕ್ಷಣದ ಪದ್ಧತಿಯೇ ಕಾರಣವಾಗಿದೆ. ಪರೋಕ್ಷ ಮತ್ತು ಪ್ರತ್ಯಕ್ಷ ಹಾಗೂ ಔಪಚಾರಿಕ ಮತ್ತು ಅನೌಪಚಾರಿಕ; ಎಲ್ಲಾ ಬಗೆಯ ಶಿಕ್ಷಣಗಳೂ ಇದರಲ್ಲಿ ಸೇರಿವೆ.
ಮಕಿಗುಚಿಯ ಗಮನಿಸುವಂತೆ ಶಿಕ್ಷಣದ ಉದ್ದೇಶ ’ಆನಂದ’. ವ್ಯಕ್ತಿಯೊಬ್ಬನಿಗೆ ಈ ಆನಂದ ಸಾಮಾಜಿಕ ಪ್ರಜ್ಞೆಯ ಮೂಲಕ ಸಿಗುತ್ತದೆ ಎಂಬುದು ಅವರ ವಾದ. ತಾವೇ ಶಿಕ್ಷಕರಾಗಿದ್ದ ಮಕಿಗುಚಿ ತಮ್ಮ ಶಿಕ್ಷಣ ಕ್ಷೇತ್ರದ ಅನುಭವ ಮತ್ತು ವಿಚಾರಗಳನ್ನು ಟಿಪ್ಪಣಿ ಮಾಡುತ್ತಿದ್ದರು. ಇದರಿಂದಾಗಿ ಸಂಪ್ರದಾಯಸ್ಥರೊಡನೆ ಮತ್ತು ಸರ್ಕಾರದ ವ್ಯವಸ್ಥೆಯೊಡನೆ ಅರಿಗೆ ನಿರಂತರ ಸಂಘರ್ಷವಿತ್ತು. ಇದೇ ಕಾರಣದಿಂದಾಗಿ ಅವರು ಬಂಧನಕ್ಕೆ ಒಳಗಾಗಿದ್ದರು. 1944ರಲ್ಲಿ ಅವರು ಜೈಲಿನಲ್ಲಿಯೇ ಮರಣಿಸಿದರು.

ಯಾವ ಸಾಮಾಜಿಕ ಪರಿಸರದಲ್ಲಿ ಶೈಕ್ಷಣಿಕ ಮನಸ್ಸಾಕ್ಷಿಯು ಜೀವಂತವಾಗಿರುವುದಿಲ್ಲವೋ ಅಲ್ಲಿ ಶಿಕ್ಷಣ ವ್ಯವಸ್ಥೆಯು ಸಂಪ್ರದಾಯವಾದಿಗಳ ಮತ್ತು ವಾಣಿಜ್ಯ ಲಾಭಬಡುಕರ ಅನುಕೂಲಕ್ಕೆ ತಕ್ಕಂತೆ ಜನರನ್ನು ರೂಪಿಸುತ್ತಾ ಹೋಗುತ್ತದೆ. ಇದರ ಸ್ಪಷ್ಟತೆಯಲ್ಲಿಯೇ ಮಕಿಗುಚಿ ವಿದ್ಯಾರ್ಥಿಗಳನ್ನು ಬಾಧಿಸುವ ಆಲೋಚನಾ ಕ್ರಮದಿಂದ ಬಿಡಿಸುವುದು ಮಾತ್ರವಲ್ಲದೇ ಅವರನ್ನು ಪರೀಕ್ಷೆ ಎಂಬ ನರಕ ಹಾಗೂ ಮತ್ತಿತರ ಮಾನಸಿಕ ರೋಗಗಳಿಂದಲೂ ಬಿಡಿಸಬೇಕೆಂದು ಹೆಣಗಾಡಿದರು.

1913ರ ಆಸುಪಾಸಿನ ನವ ಜಪಾನಿನಲ್ಲಿ ಸಂಪ್ರದಾಯಸ್ಥರು ಮತ್ತು ಕನ್‌ಫ್ಯೂಶಿಯಸ್ ಪಂಥದವರು ನಿಷ್ಟೆ ಮತ್ತು ವಿಧೇಯತೆಯನ್ನು ಕಲಿಸಿ ಒಳ್ಳೆಯ ಪ್ರಜೆಗಳನ್ನು ರೂಪಿಸಬೇಕೆಂದು ವಾದಿಸುತ್ತಿದ್ದರು. ಮತ್ತೊಂದು ಬಣವು ಪ್ರಜೆಗಳಿಗೆ ಸ್ವತಂತ್ರವಾದ ಮನಸ್ಸನ್ನು ಬೆಳೆಸುವುದರಿಂದ ಶಿಕ್ಷಣ ಭವಿಷ್ಯಕ್ಕೆ ಸಹಾಯವಾಗುತ್ತದೆ ಎಂದು ವಾದಿಸುತ್ತಿತ್ತು. ಆದರೆ ರಾಷ್ಟ್ರೀಯತೆ ಮತ್ತು ಸೈನ್ಯ ವಿಸ್ತರಣೆಯನ್ನು ಮುಂದಿಟ್ಟುಕೊಂಡಿದ್ದ ಸಂಪ್ರದಾಯವಾದಿಗಳೇ ಪ್ರಭಾವಶಾಲಿಗಳಾಗಿದ್ದರು. ಮಕಿಗುಚಿಯ ಬದುಕು ಮತ್ತು ಅವರ ಕೆಲಸಗಳೆರಡೂ ಶಿಕ್ಷಣ ಮತ್ತು ಧರ್ಮದ ಎರಡೂ ಕ್ಷೇತ್ರಗಳಲ್ಲಿ ಸಂಪ್ರದಾಯಸ್ಥರನ್ನು ನೇರವಾಗಿ ವಿರೋಧಿಸಿದವು. ಕಟ್ಟುವುದು ಎಂದರೆ ಮೊದಲು ಕೆಡಹುವುದು ಅವಶ್ಯವಾಗುತ್ತದೆ ಎಂದ ಮಕಿಗುಚಿಯ ಪ್ರಹಾರಗಳಿಂದ ವಿಚಲಿತವಾದ ಸಂಪ್ರದಾಯವಾದಿಗಳು ವಿಶ್ವವಿದ್ಯಾಲಯದ ಶಿಕ್ಷಣವಿಲ್ಲವೆಂದು ಅವರನ್ನು ಹೊರಗುಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅವರ ವಿಚಾರಗಳಿಗೆ ಪ್ರವೇಶವನ್ನೇ ಕೊಡಲಿಲ್ಲ. ಅವರ ಕಟುವಾದ ವಿಮರ್ಶೆ ಮತ್ತು ವಿರೋಧಗಳಿಂದಾಗಿ ಅವರ ಬೆಂಬಲಿಗರ ಸಂಖ್ಯೆ ಕಡಿಮೆ ಇತ್ತು ಮತ್ತು ಶತ್ರುಗಳೇ ಹೆಚ್ಚಿನ ಪಾಲಿದ್ದರು. ಶಿಕ್ಷಣ ವಿಷಯದಲ್ಲಿ ಭ್ರಮನಿರಸನಗೊಂಡ ಮಕಿಗುಚಿ ಧಾರ್ಮಿಕ ಸುಧಾರಣೆಯ ಕಡೆಗೂ ಹೊರಳಿದರು. ಬೌದ್ಧ ಧರ್ಮಕ್ಕೆ ಪರಿವರ್ತನೆಯಾಗಿ ಆಗಿನ ಸಂಪ್ರದಾಯಸ್ಥ ಶಿಂಟೋ ಧರ್ಮವನ್ನು ಕಟುವಾಗಿ ಟೀಕಿಸಿದ ನೆಪಕ್ಕೇ ಅವರನ್ನು ಜೈಲಿನಲ್ಲಿ ಕೊಳೆಹಾಕಿದರು. ಹದಿನೇಳು ತಿಂಗಳ ಜೈಲುವಾಸದಲ್ಲಿ ಸರಿಯಾದ ಆಹಾರ ಪೋಷಣೆ ದೊರಕದೇ ಕೊನೆಗೆ ಅಲ್ಲಿಯೇ ಸತ್ತರು.

ಎಲ್ಲಿಯವರೆಗೂ ಶಾಲೆಗಳು ಸಮಾಜದ ನೈತಿಕ ರೋಗಗಳ ಬಗ್ಗೆ ಪರಿಹಾರವನ್ನು ಹುಡುಕುವುದಿಲ್ಲವೋ, ಅಲ್ಲಿಯವರೆಗೂ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತದೆ ಎನ್ನುವ ಮಕಿಗುಚಿಯ ಮಾತುಗಳು ಎಲ್ಲಾ ದೇಶದ ಸಮಾಜಗಳಿಗೂ ಅನ್ವಯಿಸುತ್ತದೆ.

ಶಿಕ್ಷಣದ ಉದ್ದೇಶವನ್ನು ರೂಪಿಸಿಕೊಳ್ಳದೇ ಹೋದರೆ ಜನಸಮೂಹದ ಮನಸ್ಥಿತಿಗಳು ಅವಾಸ್ತವದ ಭ್ರಮೆಗಳಲ್ಲಿಯೇ ಕೊಳೆಯುತ್ತಾ ಇಡೀ ಸಮಾಜವೇ ರೋಗಗ್ರಸ್ತವಾಗಿರುತ್ತದೆ. ಮುಂಬರುವ ಪೀಳಿಗೆಗಳು ಬಹುಪಾಲು ಅನೈತಿಕತೆಯನ್ನೇ ಸಹಜ ವ್ಯವಸ್ಥೆಯೆಂದು ಒಪ್ಪಿಕೊಂಡುಬಿಡುತ್ತವೆ. ಹಾಗಾಗಿ ಮಕಿಗುಚಿಯ ಪ್ರಕಾರ ಶಿಕ್ಷಣ ಸುಧಾರಣೆಯ ಮೊದಲ ಅರ್ಥಪೂರ್ಣ ಹೆಜ್ಜೆಯೆಂದರೆ, ಜನರ ನಿತ್ಯಜೀವನ ಮತ್ತು ಅವಶ್ಯಕತೆಗಳಿಂದ ಶಿಕ್ಷಣದ ಉದ್ದೇಶ ಹೊರಹೊಮ್ಮಬೇಕು ಎನ್ನುವ ಅರಿವಿನ ವಿಕಾಸ. ಅವರು ಶಿಕ್ಷಣದ ಉದ್ದೇಶ ಆನಂದವೆಂದಾಗ, ಆನಂದಕ್ಕೆ ಮೂಲವಾಗಿರುವುದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಪ್ರಜ್ಞೆಯ ಬೆಳವಣಿಗೆ.

ಮಕಿಗುಚಿಯ ಪ್ರಕಾರ ಆಧುನಿಕ ಜಪಾನಿನಲ್ಲಿ (ಎರಡನೇ ವಿಶ್ವಯುದ್ಧದ ಸಂದರ್ಭ) ಶಿಕ್ಷಣದ ದುರಂತವೆಂದರೆ, ಅದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಲಿಲ್ಲ ಎಂಬುದು. ಇದನ್ನು ಮನಗಂಡೇ ಮಕಿಗುಚಿ ಮನುಷ್ಯರು ಹುಟ್ಟಿನಿಂದಲೇ ಸೃಷ್ಟಿಶೀಲರಾಗಿರುತ್ತಾರೆ. ಅವನ್ನು ನಾಶ ಮಾಡದೇ ಇದ್ದರೆ, ಅದು ತನ್ನ ವರ್ತನೆಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತವೆ ಎಂದು ಅದಕ್ಕೆ ತಳಹದಿಯಾಗಿ ನೈತಿಕ ಮೌಲ್ಯವನ್ನೇ ಗುರುತಿಸಿದರು.

ಕಲಿಕೆಯೆಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಶೈಕ್ಷಣಿಕ ವಿಜ್ಞಾನವು ಕಾಲದಿಂದ ಕಾಲಕ್ಕೆ ವಿಕಾಸಗೊಳ್ಳುತ್ತಾ ತನ್ನ ನೈತಿಕ ನಡೆಗಳನ್ನು ಸ್ಪಷ್ಟಗೊಳಿಸಿಕೊಳ್ಳದೇ ಹೋದಲ್ಲಿ ಸಮಾಜವು ಕೂಪಮಂಡೂಕವಾಗಿದ್ದುಕೊಂಡು ತನ್ನದೇ ಹೊಂಡದಲ್ಲಿ ಮುಳುಗುತ್ತದೆ ಎಂಬುದೇ ತ್ಸುನೆಸಾಬುರೋ ಮಕಿಗುಚಿಯ ಆತಂಕವಾಗಿತ್ತು. ಆ ಆತಂಕದಿಂದ ಜಪಾನು ಈಗ ಹೊರತಾಗಿದೆಯೋ ಇಲ್ಲವೋ, ಆದರೆ ಭಾರತದಲ್ಲಂತೂ ಅದು ಜೀವಂತವಾಗಿರುವ ಆತಂಕವೇ ಆಗಿದೆ.


ಇದನ್ನೂ ಓದಿ: ಬ್ರಾಹ್ಮಣ ವಿರೋಧಿ ಪಠ್ಯಪುಸ್ತಕ ವಿವಾದ: ಸಿಎಂ ವಿರುದ್ದ ಆಕ್ರೋಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...