- Advertisement -
- Advertisement -
ಸಲಗವೊಂದು ಗ್ರಾಮಕ್ಕೆ ನುಗ್ಗಿ ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿರುವ ಘಟನೆ ತುಮಕೂರಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ವಿಡಿಯೋ ನೋಡಿ
ಸಲಗವೊಂದು ಗ್ರಾಮಕ್ಕೆ ನುಗ್ಗಿ ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿರುವ ಘಟನೆ ತುಮಕೂರಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.. ವ್ಯಕ್ತಿಯೊರ್ವನ ಮೊಬೈಲ್ ನಲ್ಲಿ ಸೆರೆಯಾಗಿದೆ..ಮೃತ ವ್ಯಕ್ತಿಯನ್ನು ತುಮಕೂರು ತಾಲೂಕು ಕೋಳಿಹಳ್ಳಿ ಗ್ರಾಮದ 75 ವರ್ಷದ ಮೂರ್ತಪ್ಪ ಎಂದು ಗುರುತಿಸಲಾಗಿದೆ..
Posted by Naanu Gauri on Sunday, March 8, 2020
ಮೃತ ವ್ಯಕ್ತಿಯನ್ನು ತುಮಕೂರು ತಾಲೂಕು ಕೋಳಿಹಳ್ಳಿ ಗ್ರಾಮದ 75 ವರ್ಷದ ಮೂರ್ತಪ್ಪ ಎಂದು ಗುರುತಿಸಲಾಗಿದೆ.
ಮನೆಯ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ನುಗ್ಗಿ ಬಂದ ಒಂಟಿ ಸಲಗ ವೃದ್ದನನ್ನು ಚಂಡಾಟವಾಡಿದಂತೆ ಮಾಡಿ ಕೊಂದುಹಾಕಿದೆ.
ಇಂದು ಬೆಳಿಗ್ಗೆ 6:30ರ ಸಮಯದಲ್ಲಿ ಜರುಗಿದ್ದು, ಹೀರೇಹಳ್ಳಿ ಬಳಿಯ ಕೋಳಿಹಳ್ಳಿಯಲ್ಲಿ ಘಟನೆ ಸಂಭವಿಸಿದ್ದು, ತುಮಕೂರಿನಲ್ಲಿ ಆನೆ ತುಳಿತಕ್ಕೆ ಇದು ನಾಲ್ಕನೆಯ ಬಲಿಯಾಗಿದೆ.