HomeಮುಖಪುಟExplainer | ಒಂದು ದೇಶ, ಒಂದು ಚುನಾವಣೆ : ಕೇಂದ್ರದ ಮಸೂದೆಯಲ್ಲಿ ಏನಿದೆ?

Explainer | ಒಂದು ದೇಶ, ಒಂದು ಚುನಾವಣೆ : ಕೇಂದ್ರದ ಮಸೂದೆಯಲ್ಲಿ ಏನಿದೆ?

- Advertisement -
- Advertisement -

ದೇಶದಲ್ಲಿ ಪ್ರಸ್ತುತ ‘ಒಂದು ರಾಷ್ಟ್ರ ಒಂದು ಚುನಾವಣೆ‘ ಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಪ್ರತಿಪಕ್ಷಗಳು ಮತ್ತು ದೇಶದ ಬಹುಪಾಲು ಜನರ ತೀವ್ರ ವಿರೋಧದ ನಡುವೆಯೂ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಮಂಗಳವಾರ (ಡಿ.17) ವಿವಾದಿತ ಮಸೂದೆಗಳನ್ನು ಮಂಡಿಸಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಗೆ ಸಂಬಂಧಿಸಿದಂತೆ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಈ ಪೈಕಿ ಒಂದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ‘ಸಂವಿಧಾನ ಮಸೂದೆ-2024 ಅಥವಾ ಸಂವಿಧಾನದ 129ನೇ ತಿದ್ದುಪಡಿ ಮಸೂದೆ‘. ಇನ್ನೊಂದು ಸಂವಿಧಾನ ಮಸೂದೆಗೆ ಪೂರಕವಾಗಿ ‘ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ-2024‘.

ಸಂವಿಧಾನ ಮಸೂದೆ-2024 ಅಥವಾ ಸಂವಿಧಾನದ 129ನೇ ತಿದ್ದುಪಡಿ ಮಸೂದೆಯು ಪ್ರತಿ ಜನಗಣತಿಯ ನಂತರ ಸಂಸತ್ತಿನ ಸ್ಥಾನಗಳ ಮರು ವಿಂಗಡನೆಯ ಕುರಿತು ವಿವರಿಸುವ ಸಂವಿಧಾನದ 82ನೇ ವಿಧಿಯ ನಂತರ ’82ಎ’ ಎಂಬ ಹೊಸ ವಿಧಿಯನ್ನು ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಇದರ ಜೊತೆಗೆ ಸಂಸತ್ತಿನ ಸದನಗಳ ಅವಧಿಯ ಕುರಿತು ವಿವರಿಸುವ ಸಂವಿಧಾನದ 83ನೇ ವಿಧಿಯ ಪರಿಚ್ಚೇದ (2) ರ ನಂತರ ಹೊಸದಾಗಿ ಐದು ಪರಿಚ್ಚೇದಗಳನ್ನು (ಪರಿಚ್ಚೇದ (3), (4), (5), (6) ಮತ್ತು ( 7) ಸೇರಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್‌ಗಳ ಅವಧಿಯ ಕುರಿತು ವಿವರಿಸುವ ಸಂವಿಧಾನ 172ನೇ ವಿಧಿಯ ಪರಿಚ್ಚೇದ (1) ನಂತರ ಹೊಸದಾಗಿ ಪರಿಚ್ಛೇದ (1ಎ) ಮತ್ತು ಪರಿಚ್ಛೇದ (2) ರ ನಂತರ ಹೊಸದಾಗಿ ಮೂರು ಪರಿಚ್ಛೇದಗಳನ್ನು (ಪರಿಚ್ಚೇದ (3), (4) ಮತ್ತು (5) ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಶಾಸಕಾಂಗದ ಚುನಾವಣೆಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾಡಲು ಸಂಸತ್ತಿನ ಅಧಿಕಾರ ಕುರಿತು ವಿವರಿಸುವ ಸಂವಿಧಾನ 327ನೇ ವಿಧಿಗೆ ಸಣ್ಣ ತಿದ್ದುಪಡಿ ತಂದು ‘ಕ್ಷೇತ್ರಗಳ ಪುನರ್‌ವಿಂಗಡನೆ ಎಂಬ ಪದಗಳ ನಂತರ ಏಕಕಾಲಕ್ಕೆ ಚುನಾವಣೆ ನಡೆಸುವುದು’ ಎಂಬ ಪದಗಳನ್ನು ಸೇರಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಕೇಂದ್ರ ಸರ್ಕಾರ ಮಂಡಿಸಿರುವ ಮಸೂದೆಯಲ್ಲಿ ಪ್ರಸ್ತಾಪಿಸಿರುವ ಹೊಸ ವಿಧಿಗಳು ಮತ್ತು ಪರಿಚ್ಛೇದಗಳು ಏನು ಹೇಳುತ್ತದೆ ಎಂದು ವಿವರವಾಗಿ ನೋಡೋಣ…

ವಿಧಿ 82ಎ : ಈ ವಿಧಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ವಿವರಿಸುತ್ತದೆ. ಇದು ಏಳು ಪರಿಚ್ಛೇದಗಳನ್ನು ಒಳಗೊಂಡಿದೆ.

ಪರಿಚ್ಛೇದ (1) : ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಯ ಮೊದಲ ಅಧಿವೇಶನದ ಆರಂಭದ ದಿನ ರಾಷ್ಟ್ರಪತಿ ಸಾರ್ವಜನಿಕ ಅಧಿಸೂಚನೆ ಹೊರಡಿಸುತ್ತಾರೆ. ಅಂದಿನಿಂದ ಈ ವಿಧಿಯ ನಿಯಮಗಳು ಜಾರಿಗೆ ಬರುತ್ತದೆ. ಅಧಿಸೂಚನೆ ಹೊರಡಿಸಿದ ದಿನವನ್ನು ‘ಅನುಷ್ಠಾನ ದಿನ’ ಎಂದು ಕರೆಯಲಾಗುತ್ತದೆ.

ಪರಿಚ್ಛೇದ (2) : ಅನುಷ್ಠಾನ ದಿನದ ನಂತರ ಮತ್ತು ಲೋಕಸಭೆಯ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನ ನಡೆದ ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬಂದ ಎಲ್ಲಾ ವಿಧಾನಸಭೆಗಳ ಅವಧಿಯು ಲೋಕಸಭೆಯ ಅವಧಿ ಪೂರ್ಣಗೊಳ್ಳುವಾಗ ಕೊನೆಯಾಗಲಿದೆ.

ಪರಿಚ್ಛೇದ (3) : ಲೋಕಸಭೆಯ ಅವಧಿ ಮುಕ್ತಾಯಗೊಳ್ಳುವ ಮೊದಲು ಭಾರತೀಯ ಚುನಾವಣಾ ಆಯೋಗ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 15ನೇ (XV) ಅಧ್ಯಾಯವನ್ನು ಈ ಚುನಾವಣೆಗೆ ಅನ್ವಯಿಸಬೇಕು. ಏನಾದರು ಬದಲಾವಣೆಗಳು ಅಗತ್ಯವಿದ್ದರೆ, ಆಯೋಗವು ನಿರ್ದಿಷ್ಟ ಆದೇಶವನ್ನು ಹೊರಡಿಸಬೇಕು.

ಪರಿಚ್ಛೇದ (4) : ವಿಧಿಯಲ್ಲಿ ಬರುವ ‘ಏಕಕಾಲಕ್ಕೆ ಚುನಾವಣೆ’ ಎಂದರೆ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳ ರಚನೆಗಾಗಿ ನಡೆಯುವ ‘ಸಾರ್ವತ್ರಿಕ ಚುನಾವಣೆ’ ಎಂದರ್ಥ.

ಪರಿಚ್ಛೇದ (5) : ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ವೇಳೆ ಯಾವುದಾದರು ವಿಧಾನಸಭೆಗೆ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಕಂಡು ಬಂದರೆ, ಆ ವಿಧಾನಸಭೆಗೆ ಬೇರೊಂದು ದಿನ ಚುನಾವಣೆ ನಡೆಸುವ ಸಂಬಂಧ ಆದೇಶ ಹೊರಡಿಸುವಂತೆ ರಾಷ್ಟ್ರಪತಿಗೆ ಚುನಾವಣಾ ಆಯೋಗ ಶಿಫಾರಸು ಮಾಡಬಹುದು.

ಪರಿಚ್ಛೇದ (6) : ಪರಿಚ್ಛೇದ (5) ರ ಅಡಿಯಲ್ಲಿ ವಿಧಾನಸಭೆ ಚುನಾವಣೆ ಮುಂದೂಡಿಕೆಯಾಗಿ ನಂತರ ಅಲ್ಲಿ ಅಸ್ತಿತ್ವಕ್ಕೆ ಬರುವ ಹೊಸ ವಿಧಾನಸಭೆಯ ಅವಧಿಯು ಸಾರ್ವತ್ರಿಕ ಚುನಾವಣೆಯ ನಂತರ ರಚನೆಯಾದ ಲೋಕಸಭೆಯ ಅವಧಿ ಪೂರ್ಣಗೊಂಡ ದಿನದಂದೇ ಕೊನೆಗೊಳ್ಳುತ್ತದೆ.

ಪರಿಚ್ಛೇದ (7) : ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಿಸುವಾಗಲೇ ಅದರ ಅವಧಿ ಯಾವಾಗ ಮುಕ್ತಾಯವಾಗುತ್ತದೆ ಎಂದು ಘೋಷಿಸಬೇಕು.

83ನೇ ವಿಧಿಗೆ ತಿದ್ದುಪಡಿ : ಕೇಂದ್ರ ಸರ್ಕಾರದ ಮಸೂದೆಯಲ್ಲಿ ಸಂವಿಧಾನದ 83ನೇ ವಿಧಿಯ ಪರಿಚ್ಛೇದ 2ರ ನಂತರ ನಾಲ್ಕು ಹೊಸ ಪರಿಚ್ಛೇದಗಳ ಸೇರ್ಪಡೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಅವುಗಳ ಬಗ್ಗೆ ನೋಡೋಣ…

ಪರಿಚ್ಚೇದ (3) : ಸಾರ್ವತ್ರಿಕ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದ ಲೋಕಸಭೆಯ ಮೊದಲ ಅಧಿವೇಶನದ ಮೊದಲ ದಿನದಿಂದ ಮುಂದಿನ ಐದು ವರ್ಷಗಳವರೆಗಿನ ಅವಧಿಯನ್ನು ಲೋಕಸಭೆಯ ‘ಪೂರ್ಣ ಅವಧಿ’ ಎಂದು ಪರಿಗಣಿಸಬೇಕು.

ಪರಿಚ್ಛೇದ (4) : ಪೂರ್ಣಾವಧಿಗೂ ಮೊದಲೇ ಲೋಕಸಭೆ ವಿಸರ್ಜನೆಯಾದರೆ, ವಿಸರ್ಜನೆಯಾದ ದಿನದಿಂದ ಲೋಕಸಭೆಯ ಕೊನೆಯ ದಿನದವರೆಗಿನ ಅವಧಿಯನ್ನು ಆ ಲೋಕಸಭೆಯ ‘ಬಾಕಿ ಉಳಿದಿರುವ’ ಅವಧಿ ಎಂದು ಕರೆಯಬೇಕು.

ಪರಿಚ್ಛೇದ (5) : ಲೋಕಸಭೆಯನ್ನು ಅವಧಿಗೂ ಮುನ್ನ ವಿಸರ್ಜನೆ ಮಾಡಿದ ಸಂದರ್ಭದಲ್ಲಿ ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ ಹೊಸ ಲೋಕಸಭೆಯು ಹಿಂದಿನ ಲೋಕಸಭೆಯ ಬಾಕಿ ಉಳಿದಿರುವ ಕಾರ್ಯನಿರ್ವಹಿಸುತ್ತದೆ. ಈ ಅವಧಿ ಮುಕ್ತಾಯವಾದರೆ ಸದನವು ವಿಸರ್ಜನೆಯಾದಂತೆ.

ಪರಿಚ್ಛೇದ (6) : ಪರಿಚ್ಛೇದ (5) ಅಡಿ ರಚನೆಯಾದ ಲೋಕಸಭೆಯ ಹಿಂದಿನ ಲೋಕಸಭೆಯ ಮುಂದುವರಿಕೆಯಲ್ಲ. ಪರಿಚ್ಛೇದ (4) ರಲ್ಲಿ ವಿವರಿಸಲಾದ ಸದನ ವಿಸರ್ಜನೆಗೆ ಸಂಬಂಧಿಸಿದ ಪ್ರಕ್ರಿಯೆಗೆ ಅನ್ವಯಿಸುತ್ತದೆ.

ಪರಿಚ್ಛೇದ (7) : ಬಾಕಿ ಉಳಿದಿರುವ ಅವಧಿಗಾಗಿ ಲೋಕಸಭೆ ರಚಿಸಲು ನಡೆಸಲಾಗುವ ಚುನಾವಣೆಯನ್ನು ‘ಮಧ್ಯಂತರ ಚುನಾವಣೆ’ ಎಂದು ಕರೆಯಬೇಕು. ಪೂರ್ಣಾವಧಿ ಕೊನೆಗೊಂಡ ನಂತರ ನಡೆಸುವ ಚುನಾವಣೆಯನ್ನು ‘ಸಾರ್ವತ್ರಿಕ ಚುನಾವಣೆ’ ಎಂದು ಕರೆಯಬೇಕು.

172ನೇ ವಿಧಿಯ ತಿದ್ದುಪಡಿ : ಕೇಂದ್ರದ ಮಸೂದೆಯು ಸಂವಿಧಾನ ವಿಧಿ 172ರ ಪರಿಚ್ಛೇದ (1) ನಂತರ (1ಎ) ಮತ್ತು ಪರಿಚ್ಛೇದ (2) ರ ನಂತರ ಮೂರು ಹೊಸ ಪರಿಚ್ಛೇದಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾಪಿಸುತ್ತದೆ.

ಪರಿಚ್ಛೇದ (1ಎ) : ರಾಜ್ಯ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದಿಂದ ಮುಂದಿನ ಐದು ವರ್ಷಗಳನ್ನು ರಾಜ್ಯ ವಿಧಾನಸಭೆಯ ಪೂರ್ಣಾವಧಿ ಎಂದು ಕರೆಯಲಾಗುತ್ತದೆ.

ಪರಿಚ್ಛೇದ (3) : ಪೂರ್ಣಾವಧಿಗೂ ಮುನ್ನ ರಾಜ್ಯ ವಿಧಾನಸಭೆ ವಿಸರ್ಜನೆಯಾದರೆ, ವಿಸರ್ಜನೆಯಾದ ದಿನದಿಂದ ಆ ವಿಧಾನಸಭೆಯ ಕೊನೆಯ ದಿನದವರೆಗಿನ ಅವಧಿಯನ್ನು ‘ಬಾಕಿ ಉಳಿದಿರುವ ಅವಧಿ’ ಎಂದು ಕರೆಯಬೇಕು.

ಪರಿಚ್ಛೇದ (4): ವಿಧಾನಸಭೆಯನ್ನು ಅವಧಿಗೂ ಮುನ್ನ ವಿಸರ್ಜನೆ ಮಾಡಿದ ಸಂದರ್ಭದಲ್ಲಿ, ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ ಹೊಸ ವಿಧಾನಸಭೆಯು ಹಿಂದಿನ ವಿಧಾನಸಭೆಯ ಬಾಕಿ ಉಳಿದಿರುವ ಅವಧಿಗೆ ಕಾರ್ಯನಿರ್ವಹಿಸುತ್ತದೆ. ಈ ಅವಧಿಯು ಮುಕ್ತಾಯವಾದಾಗ ಹೊಸ ವಿಧಾನಸಭೆಯು ವಿಸರ್ಜನೆಯಾಯಿತು ಎಂದು ಪರಿಗಣಿಸಬೇಕು.

ಪರಿಚ್ಛೇದ (5) : ಪರಿಚ್ಛೇದ (4) ರ ಅಡಿ ರಚನೆಯಾದ ರಾಜ್ಯ ವಿಧಾನಸಭೆಯು ಹಿಂದಿನ ರಾಜ್ಯ ವಿಧಾನಸಭೆಯ ಮುಂದುವರಿಕೆಯಲ್ಲ. ಪರಿಚ್ಛೇದ (3)ರಲ್ಲಿ ಉಲ್ಲೇಖಿಸಲಾಗಿರುವ ಸದನದ ವಿಸರ್ಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳು ಈ ವಿಧಾನಸಭೆಗೆ ಅನ್ವಯಿಸುತ್ತದೆ.

ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ-2024

ಸಂವಿಧಾನ ತಿದ್ದುಪಡಿ ಮಸೂದೆಗೆ ಪೂರಕವಾಗಿ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ-2024 ಅನ್ನು ಕೇಂದ್ರ ಸರ್ಕಾರ ಮಂಗಳವಾರ (ಡಿ.17) ಮಂಡಿಸಿದೆ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಈ ಮಸೂದೆಯು 1963ರ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ, ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶಗಳ ಸರ್ಕಾರ ಕಾಯ್ದೆ-1991 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಕಾಯ್ದೆ-2019ಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿಸುತ್ತದೆ.

ಮಸೂದೆ ಮಂಡನೆ ಆಯ್ತು ಮುಂದೇನು?

ಲೋಕಸಭೆಯಲ್ಲಿ ಮಂಗಳವಾರ (ಡಿ.17) ಮಸೂದೆಗಳ ಮಂಡನೆ ಬಳಿಕ, ಅದಕ್ಕೆ ಒಪ್ಪಿಗೆ ಪಡೆಯಲು ಮತಯಂತ್ರದ ಮೂಲಕ ನಡೆದ ಮತ ಚಲಾವಣೆ ಪ್ರಕ್ರಿಯೆಯಲ್ಲಿ 269 ಸದಸ್ಯರು ಮಸೂದೆಯ ಪರವಾಗಿ ಹಾಗೂ 198 ಸದಸ್ಯರು ವಿರೋಧವಾಗಿ ಮತ ಹಾಕಿದ್ದಾರೆ.

ಮಸೂದೆಗಳ ಮಂಡನೆಯ ನಂತರ, ಅವುಗಳ ಕುರಿತು ವಿಸ್ಕೃತ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲು ಕೇಂದ್ರ ಸರ್ಕಾರ ಸ್ಪೀಕರ್‌ಗೆ ಮನವಿ ಮಾಡಿದೆ.

ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಜೆಪಿಸಿ ರಚನೆಯ ಬಗ್ಗೆ ಪ್ರಕಟಿಸಲಿದ್ದಾರೆ. ನಿಯಮಗಳ ಪ್ರಕಾರ, ಸಂಸತ್ತಿನ ಉಭಯ ಸದನಗಳ ಸದಸ್ಯರು ಸೇರಿ ಜೆಪಿಸಿಯಲ್ಲಿ ಗರಿಷ್ಠ 31 ಜನರು ಇರುತ್ತಾರೆ. ಈ ಪೈಕಿ ಲೋಕಸಭೆಯ 21 ಮತ್ತು ರಾಜ್ಯಸಭೆಯ 10 ಸದಸ್ಯರು ಇರಲಿದ್ದಾರೆ.

ಸಂವಿಧಾನ ತಿದ್ದುಪಡಿ ಮಸೂದೆಯ ಜೆಪಿಸಿಯ ಅಧ್ಯಕ್ಷ ಸ್ಥಾನ ಬಿಜೆಪಿಗೆ ಸಿಗುವ ಸಾಧ್ಯತೆ ಇದೆ. ಬಹುಮತದ ಆಧಾರದ ಮೇಲೆ ಬಿಜೆಪಿಗೆ ಜೆಪಿಸಿಯಲ್ಲಿ ಹೆಚ್ಚಿನ ಸ್ಥಾನವೂ ಸಿಗಲಿದೆ.

ಮಸೂದೆಯು ಜೆಪಿಸಿಗೆ ಹೋದ ಬಳಿಕ, ಅಲ್ಲಿ ವಿಸ್ಕೃತ ಚರ್ಚೆ ನಡೆಯಲಿದೆ. ಅಲ್ಲದೆ, ದೇಶದ ರಾಜಕೀಯ ಪಕ್ಷಗಳ ಸದಸ್ಯರು, ಮಾಜಿ ನ್ಯಾಯಾಧೀಶರು, ಹಿರಿಯ ವಕೀಲರು, ಮಾಜಿ ಅಥವಾ ಪ್ರಸ್ತುತ ಚುನಾವಣಾ ಆಯುಕ್ತರು, ರಾಜ್ಯ ವಿಧಾನಸಭೆಗಳ ಸ್ಪೀಕರ್‌ಗಳು, ರಾಜ್ಯ ಚುನಾವಣಾ ಆಯುಕ್ತರು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ.

ಜೆಪಿಸಿಯಲ್ಲಿ ವಿಸ್ಕೃತ ಚರ್ಚೆಯ ನಂತರ ಮಸೂದೆಗೆ ತಿದ್ದುಪಡಿಗಳನ್ನು ಮಾಡಿ, ಅದನ್ನು ಲೋಕಸಭೆಯ ಸ್ಪೀಕರ್‌ಗೆ ಸಲ್ಲಿಸಲಿದ್ದಾರೆ. ಬಳಿಕ ಅದನ್ನು ಸಂಸತ್ತಿನಲ್ಲಿ ಮಂಡಿಸಲು ಸಮಯ ನಿಗದಿ ಮಾಡಲಾಗುತ್ತದೆ. ನಿಯಮದ ಪ್ರಕಾರ, ಲೋಕಸಭೆ ಸ್ಪೀಕರ್ ಜೆಪಿಸಿ ತನ್ನ ವರದಿಯನ್ನು ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಮಿತಿಯನ್ನು ನಿಗದಿಪಡಿಸಬಹುದು.

ಕೇಂದ್ರ ಸರ್ಕಾರ ಮಂಡಿಸಿರುವ ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024ರ ಪ್ರತಿಯನ್ನು ಲೋಕಸಭೆಯ ಎಲ್ಲಾಸಂಸದರಿಗೆ ನೀಡಲಾಗಿದೆ. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಮಸೂದೆಯಲ್ಲಿ ಪ್ರಸ್ತಾಪಿಸಿರುವ ಐದು ತಿದ್ದುಪಡಿಗಳ ಅನುಮೋದನೆಗೆ ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ.

ಕೃಪೆ : ಪ್ರಜಾವಾಣಿ, indiatoday.in

ಇದನ್ನೂ ಓದಿ : Explainer | ಹೈಕೋರ್ಟ್‌ ನ್ಯಾಯಾಧೀಶರನ್ನು ಹುದ್ದೆಯಿಂದ ಕೆಳಗಿಳಿಸುವುದು ಸಾಧ್ಯನಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...