Homeಮುಖಪುಟಬೆಳ್ಳಿಚುಕ್ಕಿ; ಸೀಳು ಆಕಾಶದ ಸೂರ್ಯಾಸ್ತ

ಬೆಳ್ಳಿಚುಕ್ಕಿ; ಸೀಳು ಆಕಾಶದ ಸೂರ್ಯಾಸ್ತ

- Advertisement -
- Advertisement -

“ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು” ಎಂಬ ದ ರಾ ಬೇಂದ್ರೆಯವರ ಸಾಲುಗಳನ್ನು ’ಬಂಗಾರ ನೀರ ಕಡಲಾಚೆ’ ಕವನ-ಹಾಡಿನಲ್ಲಿ ಕೇಳಿರಬೇಕು. ಇಲ್ಲಿ ಬೇಂದ್ರೆಯವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕಡಲು ಹೊಳೆಯುವುದನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆ ಅಲ್ಲವೇ! ಬೇಂದ್ರೆಯವರು ಚಿತ್ರಿಸಿದ ಹೊಳೆಯುವ ಕಡಲನ್ನು ಮೂಡಿಸಿದ ಸೂರ್ಯೋದಯ ಮತ್ತು ಸೂರ್ಯಾಸ್ತದ ಬಗ್ಗೆ ಕೆಲವು ವಿಜ್ಞಾನದ ಸಂಗತಿಗಳನ್ನು ಚರ್ಚಿಸೋಣ.

ಸೂರ್ಯ ಪೂರ್ವದಲ್ಲಿ ಹುಟ್ಟಿ ನೆತ್ತಿಯ ಮೇಲೆ ಸಾಗಿ, ಪಶ್ಚಿಮದಲ್ಲಿ ಪ್ರತಿ ದಿನ ಮುಳುಗುತ್ತಾನೆ ಎಂಬುದನ್ನು ಸಾಮಾನ್ಯವಾಗಿ ತಿಳಿದಿರುತ್ತೇವೆ. ಬಹುಶಃ ಎಲ್ಲರಿಗೂ, ಇದು ಸೂರ್ಯನ ನಿಜವಾದ ಚಲನೆಯಲ್ಲ, ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತನ್ನ ಅಕ್ಷದ ಸುತ್ತ ತಿರುಗುತ್ತಿರುವ ಕಾರಣದಿಂದ, ಎಲ್ಲಾ ಆಕಾಶಕಾಯಗಳು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವಂತೆ ನಾವು ಸಾಮಾನ್ಯವಾಗಿ ಗ್ರಹಿಸುತ್ತೇವೆ ಎಂಬುದು ಕೂಡ ತಿಳಿದ ವಿಚಾರವೇ.

PC : Uma Gopalakrishnan

ಈಗ ಈ ಫೋಟೋ ನೋಡಿ. ಇದೊಂದು ಸೂರ್ಯಾಸ್ತದ ಫೋಟೋ? ಫೋಟೋದಲ್ಲಿನ ವಿಶೇಷವೇನು ಎಂಬುದನ್ನು ಗಮನಿಸಿ. ಅರೆರೆ, ಯಾರೋ ಸೂರ್ಯಾಸ್ತದ ಎರಡು ಫೋಟೋ ತೆಗೆದು ಫೋಟೋಶಾಪ್ ಮೂಲಕ ಜೋಡಿಸಿದ್ದಾರೆ ಅನ್ನಿಸುತ್ತಿದೆಯೇ? ಇದೊಂದು ಚಮತ್ಕಾರದ ಗ್ರಾಫಿಕ್ಸ್ ಫೋಟೋ ಅಂದುಕೊಂಡಿರಾ? ಇಲ್ಲ. ಇದು, ಒಂದೇ ಬಾರಿಗೆ ತೆಗೆದಿರುವ ನಿಜವಾದ ಫೋಟೋನೇ ಹೊರತು ಎರಡು ಪೋಟೋ ಜೋಡಿಸಿರುವುದಲ್ಲ! ಇಂತಹ ಫೋಟೋಗಳನ್ನು ಪ್ರಪಂಚದಾದ್ಯಂತ ಅನೇಕರು ಸೆರೆ ಹಿಡಿದಿದ್ದಾರೆ. ಇದನ್ನು ಸೀಳು ಆಕಾಶದ ಸೂರ್ಯಾಸ್ತ (Split-sky Sunset/ Split Sunset/ Split-screen Sunset) ಎಂಬ ಹೆಸರಿನಿಂದ ಪ್ರಚಲಿತವಾಗಿದೆ.

ಹಾಗಾದರೆ ಏನು, ಆಕಾಶ ಎರಡು ಭಾಗವಾಗಿದೆಯಾ? ಅಥವಾ ಒಂದು ಬದಿಯಿಂದ ರಾತ್ರಿಯಾಗುತ್ತಿರುವುದನ್ನು ನೋಡುತ್ತಿದ್ದೇವೆಯೇ? ಇದು ಯಾವ ಯಾವ ಪ್ರದೇಶದಲ್ಲಿ ಹೀಗೆ ಕಾಣುತ್ತೆ? ಈ ತರಹದ ಸೂರ್ಯಾಸ್ತ ಸಾಮಾನ್ಯವೇ ಎಂಬಿತ್ಯಾದಿಯಾಗಿ ಯೋಚಿಸುತ್ತಿದ್ದೀರಾ?

ಸೌರಮಂಡಲದ ಇತರ ಗ್ರಹಗಳಿಗೆ ಹೋಲಿಕೆ ಮಾಡಿದರೆ, ಭೂಮಿಯಲ್ಲಿ ಮಾತ್ರ ಜೀವಿಗಳ ಉಗಮಕ್ಕೆ ಮತ್ತು ಪೋಷಣೆಗೆ ಸೂಕ್ತವಾದ ವಾತಾವರಣವಿರುವುದು. ಈ ವಾತಾವರಣದಲ್ಲಿ ಹೆಚ್ಚಾಗಿ ಆಕ್ಸಿಜನ್ ಮತ್ತು ನೈಟ್ರೋಜನ್ ಇದೆ. ಸೂರ್ಯನ ತೀವ್ರ ನೇರಳಾತೀತ (UV Rays) ಕಿರಣಗಳಿಂದ ಜೀವರಾಶಿಯನ್ನು ರಕ್ಷಿಸಲು ಓಜೋನ್ ಪದರವು ವಾತಾವರಣದಲ್ಲಿದೆ. ಪ್ರತಿ ದಿನ ವಾತಾವರಣದ ಅನಿಲಗಳು, ಧೂಳು ಮತ್ತು ಮೋಡಗಳ ಮೂಲಕ ಹಾದು ಬರುವ ಸೂರ್ಯನ ಬೆಳಕು ಆಕಾಶದಲ್ಲಿ ರಂಗುರಂಗಿನ ಚಿತ್ತಾರವನ್ನೇ ಮೂಡಿಸುತ್ತೆ.

ಸಾಮಾನ್ಯವಾಗಿ ನೀವು ಆಕಾಶವನ್ನು ನೋಡಿದರೆ, ನೀಲಿ ಬಣ್ಣ ಕಾಣುತ್ತದೆ ಅಲ್ಲವೇ? ಏಕೆ ನೀಲಿ ಬಣ್ಣ ಎಂದು ಪ್ರಶ್ನಿಸಿದರೆ: ಸೂರ್ಯನ ಬೆಳಕು ಭೂಮಿಯ ವಾತಾವರಣದಲ್ಲಿ ಹಾದುಹೋಗುವಾಗ, ವಾತಾವರಣದಲ್ಲಿನ ಅನಿಲಗಳು, ಮೋಡಗಳು, ಧೂಳಿನ ಕಣಗಳು ಬೆಳಕನ್ನು ಚದುರಿಸುತ್ತವೆ (Scattering). (ಬಿಳಿ ಬಣ್ಣ ಏಳು VIBGYOR ಬಣ್ಣಗಳಾಗಿ ಚದುರುವುದು). ವಾತಾವರಣದಲ್ಲಿ ಆಕ್ಸಿಜನ್ ಮತ್ತು ನೈಟ್ರೋಜನ್ ಹೆಚ್ಚಾಗಿರುವುದರಿಂದ, ಈ ಅನಿಲದ ಅಣುಗಳು ಬಿಳಿ ಬೆಳಕಿನ ಏಳು ಬಣ್ಣಗಳಲ್ಲಿ ನೀಲಿ ಬಣ್ಣವನ್ನು ಹೆಚ್ಚು ಚದುರಿಸುತ್ತದೆ. ಈ ಕಾರಣದಿಂದ ಆಕಾಶವು ನೀಲಿ ಬಣ್ಣದಲ್ಲಿ ಕಾಣುತ್ತದೆ. ಸೂರ್ಯೋದಯದ ನಂತರದಿಂದ ಸೂರ್ಯಾಸ್ತದವರೆಗೂ ಆಕಾಶ ನೀಲಿ ಬಣ್ಣವಾಗಿ ಕಾಣುವುದನ್ನು ಗಮನಿಸಿರಬಹುದು. ಆದರೆ, ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿ ಯಾವ ಬಣ್ಣ ಕಾಣುತ್ತದೆ?

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಬೆಳಕು ಭೂಮಿಯ ವಾತಾವರಣದಲ್ಲಿ ಹೆಚ್ಚು ದೂರ ಚಲಿಸುವುದರಿಂದ, ನೀಲಿ ಬೆಳಕು ಅಷ್ಟು ದೂರ ಕ್ರಮಿಸುವುದರಲ್ಲಿ ಚದುರಿಹೋಗಿ, VIBGYORನಲ್ಲಿ ಉಳಿಯುವ ಕೊನೆಯ ಬಣ್ಣದ ಕೆಂಪು ಬೆಳಕು ನಮ್ಮ ಕಣ್ಣುಗಳನ್ನು ತಲುಪುತ್ತದೆ. ಆ ಕಾರಣದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಆಕಾಶವು ಕೆಂಪಾಗಿ ಹೊಳೆಯುವುದು. ಹೆಚ್ಚಿನ ಕವಿಗಳಿಗಂತೂ ಈ ಕೆಂಪು ಬಣ್ಣದ ಆಕಾಶವು ಅವರ ಕವಿತೆಗಳಿಗೆ ರಾಗವಾಗಿ ನುಡಿದಿದೆ. “ಸಂಜೆಯ ರಾಗಕೆ ಬಾನು ಕೆಂಪೇರಿದೆ?” ಎನ್ನುವ ಸುಬ್ರಾಯ ಚೊಕ್ಕಾಡಿಯವರ ಕವಿತೆ-ಹಾಡನ್ನು ನೀವು ಕೇಳಿರಬಹುದು.

ಇರಲಿ, ಆದರೆ ಈ ಸೀಳಾಕಾಶದ ಸೂರ್ಯಾಸ್ತ ಮೂಡುವುದು ಹೇಗೆ ಅನ್ನುವುದನ್ನು ನೋಡೋಣ.

ಈ ಚಿತ್ರದಲ್ಲಿ ನೋಡಿ, ಸೂರ್ಯಾಸ್ತದ ಸಮಯದಲ್ಲಿ, ಆಕಾಶದ ಒಂದು ಭಾಗದಲ್ಲಿ ಒಂದು ದೊಡ್ಡ ಮೋಡ, ಸಣ್ಣ ಸಣ್ಣ ಮೋಡಗಳಿಗೆ ಸೂರ್ಯನ ಬೆಳಕು ನೇರವಾಗಿ ಬೀಳುವುದನ್ನು ಮರೆಮಾಚುತ್ತಿದೆ. ಹೀಗೆ ಮರೆಮಾಚುವಿಕೆ ನಡೆದಾಗ, ದೊಡ್ಡ ಮೋಡದ ನೆರಳಿನಲ್ಲಿರುವ ಮೋಡಗಳಿಗೆ ಸೂರ್ಯನ ನೇರವಾದ ಬೆಳಕು ಬೀಳದೆ, ಚದುರಿಹೋದ ನೀಲಿ ಬೆಳಕಿನ ಕಿರಣಗಳು ಮಾತ್ರ ಬೀಳುತ್ತವೆ. ಹಾಗಾಗಿ, ಈ ಭಾಗ ನೀಲಿ ಬಣ್ಣದಲ್ಲಿ ಹೊಳೆಯುತ್ತಿದ್ದರೆ, ದೊಡ್ಡ ಮೋಡವಿರದ ಭಾಗದಲ್ಲಿ ಕೆಂಪಾದ ಆಕಾಶವೇ ಕಾಣುತ್ತದೆ. ಈ ಕಾರಣದಿಂದ, ಆಕಾಶವು ಎರಡು ಭಾಗವಾಗಿರುವಂತೆ ಕಂಡು ಒಂದು ಕಡೆ ನೀಲಿ ಬಣ್ಣ ಇನ್ನೊಂದು ಕಡೆ ಕೆಂಪು ಬಣ್ಣದಲ್ಲಿ
ಗೋಚರಿಸುತ್ತದೆ.

ಈ ಪ್ರಕ್ರಿಯೆ ನಡೆಯುವುದು ಬೆಳಕಿನ ಚದುರುವಿಕೆಯ ಕಾರಣದಿಂದ. ಇದನ್ನು ಪ್ರಚಲಿತದಲ್ಲಿ Split Sunset, Split-sky Sunset ಅಂತ ಕರೆಯುತ್ತಾರೆ. ಕನ್ನಡದಲ್ಲಿ ಸೀಳು ಆಕಾಶದ ಸೂರ್ಯಾಸ್ತ ಎಂದು ಕರೆಯಬಹುದೇನೊ! ಇಂತಹ ದೃಶ್ಯ ಸೂರ್ಯಸ್ತದ ಸಮಯದಲ್ಲಿ ಮೂಡಲು ಮೋಡಗಳು ಚಿತ್ರದಲ್ಲಿ ತೋರಿಸಿದಂತೆ ವ್ಯವಸ್ಥೆಗೊಂಡರೆ ಮಾತ್ರ ಸಾಧ್ಯ ಮತ್ತು ಮೋಡ ಮತ್ತು ಸೂರ್ಯನ ನಿರಂತರ ಚಲನೆಯಿಂದ ಈ ತರಹ ವ್ಯವಸ್ಥೆಯು ಹೆಚ್ಚು ಸಮಯ ಕೂಡ ಉಳಿದುಕೊಂಡಿರಲಾರದು. ಆದಕಾರಣ ಈ ಸೀಳಾಕಾಶದ ಸೂರ್ಯಾಸ್ತ ಸಾಮಾನ್ಯವಾಗಿ ಹೆಚ್ಚು ಸಮಯ ಗೋಚರಿಸುವುದಿಲ್ಲ. ಕೆಲವೊಮ್ಮೆ ಅಸ್ಪಷ್ಟವಾಗಿ ಈ ತರಹದ ವಿದ್ಯಮಾನವನ್ನು ನೀವು ನೋಡಿರಬಹುದು, ಆದರೆ, ಸ್ಪಷ್ಟವಾಗಿ ಗೆರೆ ಎಳೆದಂತೆ ಸೀಳಾಕಾಶವಾಗಿ ಕಾಣುವುದು ಅತಿ ಅಪರೂಪ. ಆದರೂ ಇದು ಅಸಾಧ್ಯವಾದುದಲ್ಲ. ಹಾಗಾಗಿ, ಸೂರ್ಯಾಸ್ತವನ್ನು ನೀವೂ ಕೂಡ ಒಂದಲ್ಲಾ ಒಂದು ದಿನ ವೀಕ್ಷಿಸಬಹುದು. ಅಂದಹಾಗೆ ಇಂತಹ ವಿದ್ಯಮಾನ ಸೂರ್ಯೋದಯದ ಸಮಯದಲ್ಲೂ ಸಂಭವಿಸಬಹುದಾದರೂ, ಹೆಚ್ಚಾಗಿ ಎಲ್ಲರೂ ಸೂರ್ಯಾಸ್ತದಲ್ಲಿಯೇ ಇದನ್ನು ಕಂಡಿದ್ದಾರೆ.


ಇದನ್ನೂ ಓದಿ: ಬೆಳ್ಳಿಚುಕ್ಕಿ; 2030ಕ್ಕೆ ಪ್ರಳಯವಂತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...