Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ಒಮ್ಮೆಲೇ 15 ಚಿತ್ರ ಬಿಡಿಸಿ ಗಿನ್ನೀಸ್ ದಾಖಲೆ ಬರೆದದ್ದು ನಿಜವೇ?

ಫ್ಯಾಕ್ಟ್‌ಚೆಕ್: ಒಮ್ಮೆಲೇ 15 ಚಿತ್ರ ಬಿಡಿಸಿ ಗಿನ್ನೀಸ್ ದಾಖಲೆ ಬರೆದದ್ದು ನಿಜವೇ?

- Advertisement -
- Advertisement -

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೊವನ್ನು ವೀಕ್ಷಿಸಿದವರು ಇದು ಸಾಧ್ಯವೇ ಎಂದು ಬೆರಗಿನಿಂದ ನೋಡುತ್ತಿದ್ದಾರೆ. ವಿಡಿಯೊದಲ್ಲಿರುವ ದೃಶ್ಯಾವಳಿಯು ನೋಡಿದ ಪ್ರತಿಯೊಬ್ಬರನ್ನೂ ಬೆರಗುಗೊಳಿಸುವಂತೆಯೇ ಇದೆ.

ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಸುಭಾಷ್ ಚಂದ್ರ ಬೋಸ್ ಸೇರಿದಂತೆ ರಾಷ್ಟ್ರನಾಯಕರ 15 ಭಾವಚಿತ್ರಗಳನ್ನು ಏಕಕಾಲದಲ್ಲಿ ರಚಿಸುವ ವಿಡಿಯೊ ಇದಾಗಿದೆ ಎಂದು ಪ್ರತಿಪಾದಿಸಲಾಗಿದೆ. ಸದ್ಯ ಈ ವಿಡಿಯೊ  ವೈರಲ್ ಆಗಿದ್ದು, ಓದುಗರ ಕೋರಿಕೆಯನ್ನು ಪರಿಗಣಿಸಿ ‘ಏನ್‌ಸುದ್ದಿ.ಕಾಂ’ ಫ್ಯಾಕ್ಟ್‌ಚೆಕ್ ಮಾಡಿದೆ.

15 ಬೇರೆ ಬೇರೆ ಚಿತ್ರಗಳನ್ನು ಏಕಕಾಲಕ್ಕೆ ರಚಿಸಲು ಸಾಧ್ಯವೆ?  ವೈರಲ್ ವಿಡಿಯೊದಲ್ಲಿರುವ ದೃಶ್ಯಾವಳಿಗಳು ಸತ್ಯವೇ ಎಂದು ‘ಏನ್‌ಸುದ್ದಿ.ಕಾಂ’ ಪರಿಶೀಲಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಸಾಮಾನ್ಯವಾಗಿ ಒಂದು ನಿಗದಿತ ಸಮಯದಲ್ಲಿ ಒಂದು ವಿಷಯದ ಬಗ್ಗೆ ಗಮನಹರಿಸುವುದೇ ಕಷ್ಟವಾಗಿರುವಾಗ, ಒಮ್ಮೆಲೇ 15 ವಿಭಿನ್ನ ಚಿತ್ರಗಳನ್ನು ರಚಿಸುತ್ತಾರೆ ಎಂಬುವುದನ್ನು ನಂಬುವುದು ಕಷ್ಟ.

ವಿಡಿಯೊವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಇಂಡಿಯನ್ ಎಕ್ಸ್‌ಪ್ರೆಸ್, ಮಿಂಟ್, ಟೈಮ್ಸ್‌ನೌ  ಸುದ್ದಿ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿವೆ. ಮಹೀಂದ್ರಾ ಗ್ರೂಪ್‌ನ ಚೇರ್‌ಮೆನ್ ಆಗಿರುವ ಆನಂದ್ ಮಹೀಂದ್ರಾರವರು ಟ್ವೀಟ್ ಮಾಡಿದ್ದು, “ಇದು ಹೇಗೆ ಸಾಧ್ಯ? ನಿಜವಾಗಿಯೂ ಆಕೆ ಪ್ರತಿಭಾವಂತ ಕಲಾವಿದೆ. ಆದರೆ ಒಂದೇ ಬಾರಿಗೆ 15 ಭಾವಚಿತ್ರಗಳನ್ನು ರಚಿಸುವುದು ಕಲೆಗಿಂತ ಹೆಚ್ಚು – ಇದು ಒಂದು ಪವಾಡ! ಆಕೆಯ ಬಳಿ ಸಮೀಪದ ಯಾರಾದರೂ ಈ ಸಾಧನೆಯನ್ನು ದೃಢೀಕರಿಸಬಹುದೇ? ನಿಜವಾಗಿದ್ದರೆ, ಆಕೆಯನ್ನು ಪ್ರೋತ್ಸಾಹಿಸಬೇಕು ಮತ್ತು ವಿದ್ಯಾರ್ಥಿವೇತನ, ಇತರ ರೀತಿಯ ಬೆಂಬಲವನ್ನು ಒದಗಿಸಲು ನಾನು ಸಂತೋಷಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಈ ರೀತಿ ಚಿತ್ರಗಳನ್ನು ರಚಿಸಲು ಗಣಕಯಂತ್ರಕ್ಕೆ ಮತ್ತು ಪ್ರೋಗ್ರಾಮ್ ಮಾಡಬಹುದಾದ ರೋಬಾಟ್‌ಗೆ ಮಾತ್ರ ಸಾಧ್ಯ ಎಂದು ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಗಿನ್ನೀಸ್‌ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೂರ್ ಜಹಾನ್ ತನ್ನ ಸ್ಥಾನವನ್ನು ಪಡೆದುಕೊಂಡಿದ್ದಾಳೆ ಎಂದು ವಿಡಿಯೊಗಳಲ್ಲಿನ ಹೇಳಿಕೆಗಳು ಪ್ರತಿಪಾದಿಸುತ್ತಿವೆ. ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. “ನಾನು ಗಿನ್ನೀಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಈ ಹೆಸರನ್ನು ಕ್ರಾಸ್-ಚೆಕ್ ಮಾಡಿದ್ದೇನೆ. ಆದರೆ ಅಂತಹ ಹೆಸರು ಕಂಡುಬಂದಿಲ್ಲ” ಎಂದು ಯೂಟ್ಯೂಬ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಕಲಾವಿದರು ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸುವ ವಿಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಜನರಿದ್ದಾರೆ. ಹಾಗೆಯೇ ಇದು ನಿಜವೆಂದು ನಂಬುವ ಜನರ ಸಂಖ್ಯೆ ಇನ್ನು ಹೆಚ್ಚಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ವಾಹ್ ವಾಟ್ ಎ ಎಡಿಟಿಂಗ್” ಎಂದು ಮತ್ತೊಬ್ಬರು ಕುಟುಕಿದ್ದಾರೆ.

“ಇದು ಪ್ರತಿಭೆ ಅಲ್ಲ. ಇದು ವಂಚನೆ. ಭೌತಿಕವಾಗಿ ಸಾಧ್ಯವಿಲ್ಲದ್ದನ್ನು ಯಾರಿಂದಲೂ ಸಾಧಿಸಲು ಸಾಧ್ಯವಿಲ್ಲ. ಈಗಾಗಲೇ ರಚಿತವಾಗಿರುವ ಅತ್ಯುತ್ತಮವಾದ ಚಿತ್ರಗಳನ್ನು ತಾನೇ ರಚಿಸಿರುವಂತೆ ವಿಡಿಯೊ ಮಾಡಿ ಬಹಿರಂಗಪಡಿಸುತ್ತಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಕನ್ನಡದ ಹಿರಿಯ ಪತ್ರಕರ್ತರು, ಚಿಂತಕರು ಆಗಿರುವ ರಾಜಾರಾಮ್ ತಲ್ಲೂರ್ ಅವರು ವೈರಲ್ ವಿಡಿಯೊ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. “ಇಲ್ಲಿ ವಿಡಿಯೊದಲ್ಲಿ ಹುಡುಗಿಯೊಬ್ಬಾಕೆ ಬೆತ್ತದ ಚೌಕಟ್ಟಿಗೆ ಲಂಬವಾಗಿ ಬಾಲ್ ಪಾಯಿಂಟ್ ಪೆನ್‌ಗಳನ್ನು ಕಟ್ಟಿ, ಅದರಲ್ಲಿ ಏಕಕಾಲಕ್ಕೆ ಹದಿನೈದು ವಿಭಿನ್ನ ಚಿತ್ರಗಳನ್ನು ರಚಿಸಿದ್ದಾಳೆ ಎಂದು ಕ್ಲೇಮ್ ಮಾಡಲಾಗಿದೆ, ಜೊತೆಗೆ ಇದಕ್ಕೆ ಅದೇನೋ ಗಿನ್ನೀಸ್ ರೆಕಾರ್ಡ್ ಕೂಡ ಆಗಿದೆ ಅಂತೆ! ಕಿಲೋಮೀಟರ್ ಗಟ್ಟಲೆ ಪೆನ್ನಲ್ಲಿ ಬರೆದಿರುವ ಸುಶಿಕ್ಷಿತರಿಗೆ, ಹೀಗೆ ಪೆನ್ನುಗಳನ್ನು ಕಟ್ಟಿಕೊಂಡಾಗ ಅಬ್ಬಬ್ಬಾ ಎಂದರೆ ಒಂದೇ ಚಿತ್ರವನ್ನು (ಅದೂ ಕೂಡ ಹಗ್ಗದಲ್ಲಿ ಕಟ್ಟಿದರೆ ಅಸಂಭವ!) ಹದಿನೈದು ಪ್ರತಿ ಮಾಡಬಹುದೇ ಹೊರತು ಹದಿನೈದು ಬೇರೆ ಬೇರೆ ಚಿತ್ರಗಳನ್ನಲ್ಲ ಎಂಬುದು ಯಾಕೆ ತಲೆಗೆ ಹೋಗಲಿಲ್ಲ? ಬಾಲ್ ಪಾಯಿಂಟ್ ಪೆನ್ನಿನ ಮೊನೋಟೋನಿನಲ್ಲಿ ಶೇಡ್ ಗಳನ್ನು ರಚಿಸಲು ಸಾಧ್ಯವಿಲ್ಲ ಎಂದು ಯಾಕೆ ಅರ್ಥ ಆಗಲಿಲ್ಲ? ಈಗ ವಿಡಿಯೊ ಎಡಿಟಿಂಗ್‌ಗಳು ಸಾಧ್ಯ ಇರುವಾಗ ಇಂತಹ ಕಣ್ಕಟ್ಟು ಏನು ಬೇಕಾದರೂ ಮಾಡಬಹುದು ಎಂಬ ಸಾಧ್ಯತೆ ಯಾಕೆ ತಲೆಗೆ ಹೊಳೆಯಲಿಲ್ಲ?” ಎಂದು  ವೈರಲ್ ವಿಡಿಯೊ ಕುರಿತಾಗಿ ರಾಜಾರಾಮ್‌ ತಲ್ಲೂರು ಪ್ರಶ್ನೆಯನ್ನು ಎತ್ತಿದ್ದಾರೆ.

ವೈರಲ್ ವಿಡಿಯೊದ ಕೊನೆಯಲ್ಲಿ ಮೊಬೈಲ್ ಸಂಖ್ಯೆಯೊಂದನ್ನು ನೀಡಲಾಗಿದ್ದು, ‘ಏನ್‌ಸುದ್ದಿ.ಕಾಂ’ ಈ ಸಂಖ್ಯೆಗೆ ಸಂಪರ್ಕಿಸಿದೆ. ಕರೆಯನ್ನು ಸ್ವೀಕರಿಸಿದ ಮಹಿಳೆ, “ನಾನು ಆಕೆಯ ಸಹೋದರಿ. ನೂರ್‌ಜಹಾನ್ ಸಂಪರ್ಕಿಸಲು ಸಂಜೆಗೆ ಕರೆ ಮಾಡಿ” ಎಂದು ತಿಳಿಸಿದ್ದರು. ಪುನಃ 27 ಅಕ್ಟೋಬರ್ 2022ರ ಸಂಜೆ ಮತ್ತೆ ಸಂಪರ್ಕಿಸಿ ವಿಡಿಯೊ ವೈರಲ್ ಆಗುತ್ತಿರುವ ಬಗ್ಗೆ ವಿಚಾರಿಸಿ ಮಾಹಿತಿ ಕೇಳಿದಾಗ, “ನೂರ್‌ಜಹಾನ್ ವಿಡಿಯೊ ನಿಜ”ವೆಂದು ತಿಳಿಸಿದ್ದಾರೆ.

“ಆದರೆ ಹಲವರು ಈ ವಿಡಿಯೊ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಒಮ್ಮೆಲೇ 15 ಬೇರೆ ಬೇರೆ ಚಿತ್ರಗಳನ್ನು ಬಿಡಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದಾಗ, “ನಿರಂತರ ಅಭ್ಯಾಸದಿಂದ ಈ ರೀತಿ ಚಿತ್ರ ಬಿಡಿಸಲು ಸಾಧ್ಯವಾಗಿದೆ. ಈ ವಿಡಿಯೊ ಫೇಕ್ ಅಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ. ಮುಂದುವರಿದು, “ಒಂದು ಲೈವ್ ಮೂಲಕ ಇದೇ ಚಿತ್ರವನ್ನು ರಚಿಸಲು ಸಾಧ್ಯವೇ?” ಎಂದು ಕೋರಿದಾಗ ನೂರ್‌ಜಹಾನ್, “ಲೈವ್ ವಿಡಿಯೊ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ” ಎಂದು ತಿಳಿಸಿದ್ದಾರೆ. ಹಾಗಾಗಿ ಈ ವಿಡಿಯೊದ ದೃಶ್ಯಾವಳಿಗಳು ನಂಬಲು ವಿಶ್ವಾಸಾರ್ಹವಲ್ಲ.

ನೂರ್‌ಜಹಾನ್ ಅವರ ಹೆಸರಿನಲ್ಲಿ ಯಾವುದೇ ಗಿನ್ನೀಸ್‌ ದಾಖಲೆ ಇಲ್ಲ. ವೈರಲ್ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಜಯ್ ಮೀನಾ ಎಂಬ ಯೂಟ್ಯೂಬರ್‌‌ ಇದು ಸಾಧ್ಯ ಎಂದಿದ್ದಾರೆ. ಈ ಹೆಸರಲ್ಲಿ ಯಾವುದೇ ಗಿನ್ನೀಸ್‌ ವಿಶ್ವ ದಾಖಲೆ ಇಲ್ಲ ಎಂದು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ FACTLY  ಸ್ಪಷ್ಟಪಡಿಸಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಪ್ರಧಾನಿ ಮೋದಿ ಟಾಯ್ಲೆಟ್‌‌ಗೆ ಕೂಡಾ ಕ್ಯಾಮರಾಮ್ಯಾನನ್ನು ಕರೆದುಕೊಂಡು ಹೋದರೆ?

ಆದರೆ ನೂರ್‌ಜಹಾನ್ ನಿಜವಾಗಿಯೂ ಒಂದೇ ಕೈಯಿಂದ 15 ಭಾವಚಿತ್ರಗಳನ್ನು ಏಕಕಾಲದಲ್ಲಿ ಚಿತ್ರಿಸಿದ್ದಾರೆ ಎಂದು ಹೇಳುವ ಅಜಯ್ ಮೀನಾ, ಇದು ಒಂದು ದಿನದಲ್ಲಿ ರಚಿಸಿದ ಚಿತ್ರವಲ್ಲ ಎಂದಿದ್ದಾರೆ. ಆದರೆ ನೂರ್ ಜಹಾನ್ ಪ್ರತಿನಿತ್ಯ ಕೆಲವು ಗಂಟೆಗಳ ಕಾಲ ಚಿತ್ರ ರಚನೆ ಮಾಡುವ ಮೂಲಕ ಒಂದು ತಿಂಗಳ ಅವಧಿಯಲ್ಲಿ ಭಾವಚಿತ್ರಗಳನ್ನು ಬಿಡಿಸಿದ್ದಾರೆ ಎಂದಿದ್ದಾರೆ.

ಆದರೆ, ಇಂತಹ ಸಾಧನೆಯ ಸಾಧ್ಯತೆಯ ಬಗ್ಗೆ ಅನುಮಾನಗಳಿವೆ ಮತ್ತು ವಾಸ್ತವವಾಗಿ ವಿಡಿಯೊದ ದೃಢೀಕರಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆಕೆಯ ಹೆಸರಿನಲ್ಲಿ ಯಾವುದೇ ಗಿನ್ನೀಸ್‌ ವಿಶ್ವ ದಾಖಲೆ ಇಲ್ಲದ ಕಾರಣ, ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದು ಫ್ಯಾಕ್ಟ್‌ಲಿ ವರದಿ ಸ್ಪಷ್ಟಪಡಿಸಿದೆ.

ಇದು ಹಂತಹಂತವಾಗಿ ಬಿಡಿಸಿದ ಚಿತ್ರವನ್ನು ಎಡಿಟ್ ಮಾಡಿ ಹರಿಯಬಿಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ ಫೇಸ್‌ಬುಕ್ ಲೈವ್ ಮೂಲಕ ವಿಡಿಯೊ ಮಾಡಲು ನೂರ್ ಜಹಾನ್ ನಿರಾಕರಿಸಿದ್ದಾರೆ. ಹಾಗಾಗಿ ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸಿರುವುದಕ್ಕೆ ದಾಖಲೆಗಳಿಲ್ಲ ಎಂದು ಹೇಳಬಹುದಾಗಿದೆ.

ವರದಿ ಕೃಪೆ: ಏನ್‌ಸುದ್ದಿ.ಕಾಂ (ಕನ್ನಡದ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...