ವರದಕ್ಷಿಣೆ ನೀಡದ ಹೊರತು ಮದುವೆ ಆಗುವುದಿಲ್ಲ ಎಂದು ವರ ಬೆದರಿಕೆ ಹಾಕುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಿಹಾರದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ವರನು ಹಣ ಮತ್ತು ಆಭರಣಗಳಿಗೆ ಬೇಡಿಕೆಯಿಡುವುದನ್ನು ಕೇಳಬಹುದಾಗಿದೆ.
ಇದನ್ನು ನ್ಯೂಸ್18 ಕನ್ನಡ ವರದಿ ಮಾಡಿದ್ದು, “ನಾನು ಸರ್ಕಾರಿ ಉದ್ಯೋಗಿಯಾಗಿದ್ದರಿಂದ ನನ್ನ ಡಿಮ್ಯಾಂಡ್ ಗಳು ಇವತ್ತೇ ಈಡೇರಬೇಕೆಂದು ವರ ಹೇಳಿದ್ದಾನೆ. ಇಲ್ಲವಾದ್ರೆ ನಾವು ವಾಪಸ್ ಹೋಗುತ್ತೇವೆ. ವರದಕ್ಷಿಣೆ ನೀಡಲು ಆಗದಿದ್ರೆ, ನಿಮ್ಮ ಯೋಗ್ಯತೆಗೆ ಹೊಂದುವ ಜನರ ಜೊತೆ ಸಂಬಂಧ ಬೆಳೆಸಬೇಕು ಎಂದು ಸೊಕ್ಕಿನ ಮಾತುಗಳನ್ನು ಆಡಿದ್ದಾನೆ” ತನ್ನ ವೆಬ್ಸೈಟ್ನಲ್ಲಿ ವರದಿ ಮಾಡಿದೆ.
https://t.co/GkNcKJuDBm
ನಾನು ಸರ್ಕಾರಿ ಉದ್ಯೋಗಿಯಾಗಿದ್ದರಿಂದ ನನ್ನ ಡಿಮ್ಯಾಂಡ್ ಗಳು ಇವತ್ತೇ ಈಡೇರಬೇಕೆಂದು ವರ ಹೇಳಿದ್ದಾನೆ. ಇಲ್ಲವಾದ್ರೆ ನಾವು ವಾಪಸ್ ಹೋಗುತ್ತೇವೆ. ವರದಕ್ಷಿಣೆ ನೀಡಲು ಆಗದಿದ್ರೆ, ನಿಮ್ಮ ಯೋಗ್ಯತೆಗೆ ಹೊಂದುವ ಜನರ ಜೊತೆ ಸಂಬಂಧ ಬೆಳೆಸಬೇಕು ಎಂದು ಸೊಕ್ಕಿನ ಮಾತುಗಳನ್ನು ಆಡಿದ್ದಾನೆ.#Dowry #ViralVideo #Groom— News18 Kannada (@News18Kannada) March 8, 2022
ನ್ಯೂಸ್ 18 ಕನ್ನಡದ ಟ್ವಿಟರ್ ಮತ್ತು ಲೇಖನದ ಆರ್ಕೈವ್ ಲಿಂಕ್ಅನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
दहेज
इस कालू के कान के नीचे 10 तमाचा मारो pic.twitter.com/DPF2fm02Xl— हम लोग We The People (@humlogindia) March 6, 2022
ವಿಡಿಯೊದಲ್ಲಿ ಮಾತನಾಡಿರುವ ವರನೂ, “ನನಗೆ ಇದುವರೆಗೂ ಕ್ಯಾಶ್ ಸಿಕ್ಕಿಲ್ಲ. ಮಾತುಕತೆಯಂತೆ ತೀರ್ಮಾನಿಸಿದ್ದ ಯಾವ ವಸ್ತುಗಳು ಇನ್ನು ನಮಗೆ ಸೇರಿಲ್ಲ. ಒಂದು ಚೈನ್ ಸಹ ಕೊಡ್ತೀವಿ ಅಂತ ಹೇಳಿದ್ದರು. ಅದನ್ನು ಸಹ ಕೊಟ್ಟಿಲ್ಲ. ಕೊಟ್ಟ ಮಾತನ್ನು ತಪ್ಪಿದ್ದಾರೆ” ಎಂದು ಹೇಳಿದ್ದಾರೆ.
ಇದೇ ವೇಳೆ ವಿಡಿಯೋ ಮಾಡುತ್ತಿರುವ ವ್ಯಕ್ತಿ, “ನೀವೆಲ್ಲ ಓದಿದವರು. ಹೀಗೆ ಬಹಿರಂಗವಾಗಿ ವರದಕ್ಷಿಣೆ ಕೇಳೋದು ಎಷ್ಟು ಸರಿ” ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ವರ ಮಾತ್ರ ತಾನು ಸರ್ಕಾರಿ ಉದ್ಯೋಗಿ ಎಂದು ಹೇಳುತ್ತಾನೆ. ಅದಕ್ಕೆ, ನಿಮಗೆ ಹಣ ಬೇಕಿದ್ರೆ ಇಲ್ಲಿಗೆ ಯಾಕೆ ಬರಬೇಕಿತ್ತು ಎಂದು ವ್ಯಕ್ತಿ ಪ್ರಶ್ನೆ ಮಾಡುತ್ತಾರೆ. ಈ ವೇಳೆ ವರನೂ ಫೋನ್ ಮಾಡಿದಾಗ ಎಲ್ಲವೂ ರೆಡಿ ಇದೆ ಬನ್ನಿ ಅಂತ ಹೇಳಿದ್ದಾರೆ. ಆದ್ರೆ ಈಗ ಇಲ್ಲ ಅಂತ ಹೇಳುತ್ತಿದ್ದಾರೆ” ಎಂದು ಹೇಳಿದ್ದಾರೆ.
ಮನವೊಲಿಸಲು ಮುಂದಾದ ವಧು
ಈ ವೇಳೆ ಪಕ್ಕದಲ್ಲಿ ನಿಂತಿದ್ದ ವಧು, ನಿಮಗೆ ಒಂದು ಲಕ್ಷ ನಗದು ಮತ್ತು ಚಿನ್ನ ಸಹ ಸಿಗುತ್ತೆ ಎಂದು ಮನವೊಲಿಸಲು ಪ್ರಯತ್ನ ಮಾಡೋದನ್ನು ಕಾಣಬಹುದು. ಕೊನೆಗೆ ವರ ನಾನು ನಮ್ಮ ತಂದೆ ಜೊತೆ ಮಾತನಾಡಬೇಕು ಎಂದು ವೇದಿಕೆಯಿಂದ ಕೆಳಗೆ ಇಳಿಯುತ್ತಾನೆ.
इन्हे "लज्जा" क्यों नहीं आती..? pic.twitter.com/IarAkFQCRv
— Dayanand Kamble (@dayakamPR) March 6, 2022
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಕೂಡ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಸುದ್ದಿಯನ್ನು ಹಲವು ಮುಖ್ಯವಾಹಿನಿಯ ಮಾಧ್ಯಮಗಳೂ ಕೂಡ ವೀಡಿಯೊ ಬಗ್ಗೆ ವರದಿಗಳನ್ನು ಪ್ರಕಟಿಸಿವೆ.
ತಾನು ಕೇಳಿದ್ದಕಿಂತ ಕಡಿಮೆ ವರದಕ್ಷಿಣೆ ನೀಡಿದ ಕಾರಣಕ್ಕೆ ವರನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಪ್ರತಿಪಾದಿಸಿ The Indian Express, Zee News, NDTV, DNA India, Times of India, Lokmat, India.com, IBC 24, News18 Kannada ಕೂಡ ವೀಡಿಯೊ ಬಗ್ಗೆ ವರದಿ ಮಾಡಿವೆ.
ಅಂತರಾಷ್ಟ್ರೀಯ ಮಹಿಳಾ ದಿನದ ದಿನದಂದು The Times of India ಕೂಡ ವರದಿಯನ್ನು ಮಾಡಿದ್ದು, “ನೀವು ಅವರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೀರಾ” ಎಂಬ ಪ್ರಶ್ನೆಯನ್ನು ಹಾಕಿದೆ. “ತನ್ನ ಮದುವೆಗಾಗಿ ಅಲಂಕೃತಗೊಂಡ ವರನ ಪಕ್ಕದಲ್ಲಿ ಕುಳಿತು ಹಸನ್ಮುಖಿಯಾಗಿ ಕಂಗೊಳಿಸಬೇಕಿದ್ದ ಅವಳು, ವರದಕ್ಷಿಣೆಯ ಸಾಧನವಾಗಿದ್ದಾಳೆ. ಹಾಗಾಗಿ ಅವನು ಅವಳನ್ನು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಆತ ತಾನು ಗಂಡು ಎನ್ನುವ ಅಹಂನಿಂದಾಗಿ ದರ್ಪ ತೋರಿಸುತ್ತಿದ್ದಾನೆ. ಇದು 2022 ರಲ್ಲಿ ಭಾರತದ ಕೆಲವು ಮಹಿಳೆಯರ ಸ್ಥಿತಿಯಾಗಿದೆ. ಇದನ್ನು ನೀವು ಸಮ್ಮತಿಸುವಿರಾ?” ಎಂದು ವರದಿ ಮಾಡಿದೆ.
ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿರುವ ಕಾರಣ ಮತ್ತುಸುದ್ದಿ ಮಾಧ್ಯಮಗಳು ವರದಿ ಮಾಡಿವೆ, ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ವರದಿಯಲ್ಲಿ ಹೇಳಿಲ್ಲ. ಈ ಹಿನ್ನಲೆಯಲ್ಲಿ ಇದರ ಸತ್ಯಾಸತ್ಯೆಗಳನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಕೀ ವರ್ಡ್ ಸಹಾಯದ ಮೂಲಕ ಸುದ್ದಿಯ ವಿವರಗಳನ್ನು ಸರ್ಚ್ ಮಾಡಲಾಗಿದ್ದು, ಈ ವೀಡಿಯೊವನ್ನು ಫೆಬ್ರವರಿ 25 ರಂದು ‘ದಿವ್ಯ ವಿಕ್ರಮ್‘ ಎಂಬ ಫೇಸ್ಬುಕ್ ಪುಟದಿಂದ ಪೋಸ್ಟ್ ಮಾಡಲಾಗಿದೆ ಮತ್ತು 70 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ . ಈ ಫೇಸ್ಬುಕ್ ಅಕೌಂಟ್ನಿಂದ ಇಂತಹ ಅನೇಕ ವೀಡಿಯೊಗಳನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ.
‘ವಿಕ್ರಮ್ ಮಿಶ್ರಾ’ ಎಂಬ ವ್ಯಕ್ತಿಯು ಈ ವಿಡಿಯೊವನ್ನು ಕ್ರಿಯೇಟ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕ ನಂತರ ಅವರನ್ನು ಸಂಪರ್ಕಿಸಲಾಗಿದ್ದು, ಅವರು ತಮ್ಮ ತಂಡದೊಂದಿಗೆ ‘ಜೈ ಮಿಥಿಲಾ’ ಎಂಬ ಚಾನಲ್ ಅನ್ನು ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮದುವೆಯ ವಿಡಿಯೋದಲ್ಲಿ ಕಾಣುತ್ತಿರುವ ವಧು ಮತ್ತು ವರ ಇಬ್ಬರೂ ಕಲಾವಿದರು (ನಟರು). ಅವರ ಹೆಸರು ಅಮಿತ್ ಮತ್ತು ರಾಣಿ ಎಂದು ತಿಳಿಸಿದ್ದಾರೆ.
ವಿಕ್ರಮ್ ಮಿಶ್ರಾ ಅವರ ಸಹಾಯದಿಂದ ಅಮಿತ್ ಮತ್ತು ರಾಣಿ ಅವರನ್ನು ಸಂಪರ್ಕಿಸಿದಾಗ, ತಾವು ನಟರಾಗಿದ್ದು, ಅಂತಹ ಅನೇಕ ವೀಡಿಯೊಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದೇವೆ ಎಂದು ದೃಢಪಡಿಸಿದ್ದಾರೆ.
ಈ ವಿಡಿಯೋವನ್ನು ಕೇವಲ ತಮ್ಮ ನಟನೆಯ ಸಾಮರ್ಥ್ಯವನ್ನು ನಿರೂಪಿಸಲು ತಾವೇ ಸ್ವತಃ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಅವರ ವೀಡಿಯೊವನ್ನು ನೈಜ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ನಿಜವಲ್ಲ. ಅಮಿತ್ ಮತ್ತು ರಾಣಿ ಪರಸ್ಪರ ಮದುವೆಯಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಆಲ್ಟ್ ನ್ಯೂಸ್ ತನ್ನ ವರದಿಯಲ್ಲಿ ಹೇಳಿದೆ.
ವಿಡಿಯೊವನ್ನುಮಾಡಿದ್ದು ನಟನೆಗಾಗಿ
ಮಾರ್ಚ್ 8 ರಂದು ‘ದಿವ್ಯ ವಿಕ್ರಮ್’ ಫೇಸ್ಬುಕ್ ಅಕೌಂಟ್ನಿಂದ ಅಮಿತ್ ಮತ್ತು ರಾಣಿಯ ಎರಡು ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಮೊದಲ ವೀಡಿಯೊದಲ್ಲಿ, ವರನು ಮದುವೆ ಮಂಟಪಕ್ಕೆ ಕುಡಿದ ಅಮಲಿನಲ್ಲಿ ಬರುತ್ತಾನೆ ಆಗ ವಧು ಮದುವೆಯಾಗಲು ನಿರಾಕರಿಸುತ್ತಾಳೆ. ಎರಡನೇ ವಿಡಿಯೊದಲ್ಲಿ ವಧು ಮತ್ತು ವರ ಪರಸ್ಪರ ಸಂತೋಷದಿಂದ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆ ಆಗುವುದನ್ನು ಕಾಣಬಹುದು. ಇದೊಂದು ನಟನೆಯ ವಿಡಿಯೊ ಆಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕೇವಲ ತಮ್ಮ ನಟನೆಯ ಹವ್ಯಾಸಕ್ಕಾಗಿ ಮಾಡಲಾದ ವಿಡಿಯೊವನ್ನು ಸಾಮಾಜಿಕ ಮಾದ್ಯಗಳಲ್ಲಿ ವೈರಲ್ ಮಾಡುವ ಮೂಲಕ ನೈಜ ಘಟನೆ ಎಂದು ಬಿಂಬಿಸಲಾಗಿದೆ. ಅದೂ ಸಾಲದು ಎಂಬಂತೆ ಇದನ್ನು ನ್ಯೂಸ್18 ಕನ್ನಡದಂತಹ ಮುಖ್ಯವಾಹಿನಿಗಳು ಕೂಡ ಗಂಭೀರ ಸ್ವರೂಪದ ಸುದ್ದಿ ಎಂಬಂತೆ ವರದಿ ಮಾಡಿವೆ. ಆದರೆ ಇದು ಸತ್ಯ ಘಟನೆಯಲ್ಲ ಇದೊಂದು ನಟನೆಯ ವಿಡಿಯೊ ಆಗಿದೆ.