Homeಮುಖಪುಟವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

ವಾಕ್ ಸ್ವಾತಂತ್ರ್ಯದ ಮೇಲೆ ಯೋಗಿ ಮೇಷ್ಟ್ರ ಪಾಠ

- Advertisement -
- Advertisement -

| ಲೋಕೇಶ್ ಮಾಲ್ತಿ ಪ್ರಕಾಶ್ |
ಅನುವಾದ: ನಿಖಿಲ್ ಕೋಲ್ಪೆ

ಸತ್ತವರ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನೇ ಆಡುವುದು ನಮ್ಮ ದೇಶದ ಸಂಪ್ರದಾಯ. ನಾವು ದೈವಭಯ ಇರುವ ಜನರು ಮತ್ತು ನಮಗಿಂತ ಸತ್ತವರು ದೇವರಿಗೆ ಹೆಚ್ಚು ಹತ್ತಿರವಾದವರು ಎಂದು ನಂಬುವವರಾದುದರಿಂದ ನಾವು ಸತ್ತವರ ಬಗ್ಗೆ ಒಳ್ಳೆಯದನ್ನೇ ಮಾತನಾಡುತ್ತೇವೆ. ಸತ್ತವರು ನಮಗೆ ಭಾರತದ ನ್ಯಾಯಾಲಯದಲ್ಲಿಯ ಬೆಳಗ್ಗಿನ ದೇಖಾವೆಗೆ ಪಕ್ಕಾ ಟಿಕೆಟ್ ದೊರಕಿಸಿಕೊಡಬಲ್ಲ ಖಾನ್ ಮಾರ್ಕೆಟ್ ಗ್ಯಾಂಗ್ ಇದ್ದಂತೆ. ಕೆಲವೊಮ್ಮೆ ನಾವು ಹಿಟ್ಲರ್ ನಮ್ಮಲ್ಲಿ ಹುಟ್ಟಲಿಲ್ಲವಲ್ಲ ಎಂದು ಸ್ವಲ್ಪ ಸಮಾಧಾನಪಡುವುದುಂಟು! ಖಂಡಿತವಾಗಿಯೂ ಆತನಿಗೆ ಸ್ಪರ್ಧೆ ನೀಡಬಲ್ಲ ದೇಸಿ ತಳಿಗಳು ನಮ್ಮಲ್ಲಿವೆಯದರೂ….

ಆದುದರಿಂದ, ಮೊನ್ನೆ ಸುಪ್ರೀಂಕೋರ್ಟ್ ಸ್ವಾತಂತ್ರ್ಯವು ಪವಿತ್ರವಾದುದು, ಅದರಲ್ಲಿ ಚೌಕಾಸಿ ಮಾಡುವಂತಿಲ್ಲ ಎಂದಿತ್ಯಾದಿಯಾಗಿ ಮೂಲಭೂತ ಹಕ್ಕುಗಳ ಕುರಿತು ನಾಲ್ಕು ಒಳ್ಳೆಯ ಮಾತುಗಳನ್ನು ಆಡಿದಾಗ ನನಗೆ ಸ್ವಲ್ಪ ಗಲಿಬಿಲಿಯಾಯಿತು. ಹೌದೇ? ಇದು ನಿಜವೇ? “ಏ ಇಲ್ಲ! ಇದು ಹಸಿಸುಳ್ಳು” ಎಂದು ಗಟ್ಟಿಯಾಗಿ ಕಿರುಚಿಕೊಳ್ಳುವುದರಿಂದ ನಾನು ಸ್ವಲ್ಪ ಪ್ರಯತ್ನದ ಬಳಿಕವಷ್ಟೇ ತಡೆದುಕೊಂಡೆ! ಸ್ವಾತಂತ್ರ್ಯದ ಹಕ್ಕು ಸತ್ತಿದೆಯೇ? ಸಾವು ಮತ್ತು ವಂಚನೆಯ ಈ ಭವದಲ್ಲಿ ಬಿಟ್ಟು ಅದು ಸ್ವರ್ಗವಾಸಿಯಾಗಿದೆಯೆ? (ಅದಕ್ಕಾಗಿಯೇ ಹೊಗಳುತ್ತಿದ್ದಾರೆಯೆ?)

ಈ ದೇಶದಲ್ಲಿ ಮೂಲಭೂತ ಹಕ್ಕುಗಳು ಸತ್ತು ಬಹಳ ಕಾಲವಾಗಿಹೋಗಿದೆ ಎಂದು ಟೀಕಾಕಾರರು ಖಂಡಿತಾ ಹೇಳಬಹುದು. ಇವರಲ್ಲಿ ಕಟು ಟೀಕಾಕಾರರು, ಇಲ್ಲಪ್ಪಾ, ಅದು ಇನ್ನೂ ಹುಟ್ಟಿಯೇ ಇಲ್ಲವಾದುದರಿಂದ ಸಾಯುವ ಪ್ರಶ್ನೆ ಶುದ್ಧ ಸುಳ್ಳೆಂದು ತಗಾದೆ ಎತ್ತಬಹುದು.

ಈ ವಿಷಯಕ್ಕೆ ಬಂದಾಗ, ನಾನೊಬ್ಬ ದೇಶಭಕ್ತ ಮತ್ತು ಈ ತಳಿಯ ಇತರ ಪ್ರಭೇದಗಳಂತೆ. ಮತ್ತು ಅವರಷ್ಟೇ ನಾನು ಕೂಡಾ ವಾಕ್ ಸ್ವಾತಂತ್ರ್ಯದ ಸಂಪೂರ್ಣ ಬೆಂಬಲಿಗ ಎಂದು ಮೊದಲಿಗೇ ಹೇಳಿಬಿಡುತ್ತೇನೆ. ನಮ್ಮ ಸರಕಾರಗಳು ಸಂವಿಧಾನವನ್ನು ಅಕ್ಷರಶಃ ಅನುಸರಿಸುತ್ತವೆ. ಮತ್ತು ಸರಕಾರವೂ ದೇಶಭಕ್ತವಾಗಿದ್ದಲ್ಲಿ ಸಂವಿಧಾನದ ಕುರಿತು ಅದರ ನಿಷ್ಟೆಯನ್ನು ಯಾರೂ ಸಂಶಯಿಸಬಾರದು. ಮೊನ್ನೆಯಷ್ಟೇ ಮೋದೀಜಿ ಸಂವಿಧಾನಕ್ಕೆ ಹೇಗೆ ಕೈಮುಗಿದು ತಲೆಬಾಗಿದರೆಂದು ನೀವು ನೋಡಿಲ್ಲವೆ? ಸಂವಿಧಾನ ಮತ್ತು ಕಾನೂನು ಯಾವತ್ತೂ ಇದಕ್ಕಿಂತ ಸುರಕ್ಷಿತ ಕೈಗಳಲ್ಲಿ ಇರಲಿಲ್ಲ; ಇರುವುದು ಸಾಧ್ಯವೂ ಇಲ್ಲ.

ಹೀಗಿದ್ದರೂ, ಈ ಖಾನ್ ಮಾರ್ಕೆಟ್ ಗ್ಯಾಂಗ್ ಒಂದು ದೇಶಭಕ್ತ ಸರಕಾರ ಮತ್ತದರ ವೀರ ಪೊಲೀಸರನ್ನು ಮೇಲೆ ಕೆಸರೆರಚುವ ಕಿಂಚಿತ್ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಬಗೆಗಿನ ಕೆಲವು ಜುಜುಬಿ ವಿಷಯಗಳ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿಯೋ, ಅದಾವುದೋ ನ್ಯೂಸ್ ಚಾನೆಲಿನಲ್ಲಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿಯೋ ಕೆಲವು ಪತ್ರಕರ್ತರನ್ನು ಬಂಧಿಸಿದ ಚಿಕ್ಕ ವಿಷಯದ ಬಗ್ಗೆ ಸುಮ್ಮಸುಮ್ಮನೆ ಗದ್ದಲ ಎಬ್ಬಿಸಲಾಗುತ್ತಿದೆ. ಅವರು ಮಾಧ್ಯಮ ವೃತ್ತಿಯ ಮರ್ಯಾದೆಯನ್ನು ಮೀರಿದ್ದಾರೆ. ಅವರಿಗೆ ಟ್ವೀಟ್ ಮಾಡಲು ಬೇರೆಷ್ಟೋ ವಿಷಯಗಳಿದ್ದವು. ಅವರು ಬೇಕಾದರೆ ಯೋಗಿ ಸರಕಾರ ಮತ್ತೆ ಜೀವನೀಡುತ್ತಿರುವ ಏಂಟಿರೋಮಿಯೋ ಸ್ಕ್ವಾಡ್ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದು ಬೇಡವೆಂದರೆ ಬೆಂಕಿಹಚ್ಚುವ ಭಾಷಣಗಳ ಬಗ್ಗೆ ಟ್ವೀಟ್ ಮಾಡಬಹುದಿತ್ತು. ಅದೂ ಬೇಡ ಎಂದಾದರೆ, ಹದಗೆಡುತ್ತಿರುವ ಸಾರ್ವಜನಿಕ ಆರೋಗ್ಯ ಸೇವೆಗಳು, ಸರಕಾರಿ ಶಾಲಾ ಸೌಲಭ್ಯಗಳ ಬಗ್ಗೆ, ನಿರುದ್ಯೋಗದ ಬಗ್ಗೆ, ಗೋರಕ್ಷಕ ಗ್ಯಾಂಗುಗಳ ಬಗ್ಗೆ ಇತ್ಯಾದಿ ಇತ್ಯಾದಿಗಳ ಬಗ್ಗೆ ಮಾತಾಡಬಹುದಿತ್ತು. ಮಾತಾಡಲು ಮತ್ತು ಟ್ವೀಟ್ ಮಾಡಲು ಎಷ್ಟೊಂದು ವಿಷಯಗಳಿವೆ! ಇಷ್ಟಿದ್ದರೂ ಅವರು ಸುಮ್ಮಸುಮ್ಮನೇ ಗಾಸಿಪ್‌ಗಳ ಹಿಂದೆಬಿದ್ದರು! ಯೋಗಿ ಸಾರ್ವಜನಿಕ ನೈತಿಕತೆಯ ಟೇಕೇದಾರನಾಗಿರುವುದರಿಂದ ಕ್ರಮ ಕೈಗೊಳ್ಳಲೇಬೇಕಾಗಿತ್ತು, ಅವರಿಗೆಲ್ಲಾ ಒಂದು ಪಾಠ ಕಲಿಸಲೇಬೇಕಾಗಿತ್ತು.. ಅವರ ಪೊಲೀಸರು ಆ ಕೆಲಸ ಮಾಡಿದರು ಅಷ್ಟೇ.

ನೈತಿಕ ಶಿಕ್ಷಣಕ್ಕೆ ಹೊರತಾಗಿ ಯುಪಿ ಪೊಲೀಸರು ಕಾನೂನು ಮತ್ತು ಶಿಸ್ತು ಅಥವಾ ನಿಖರವಾಗಿ ಹೇಳಬೇಕೆಂದರೆ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವ ಕೆಲಸವನ್ನು ಕೈಗೆತ್ತಿಕೊಂಡರು. ಪೊಲೀಸರು ಏನು ಮಾಡಬೇಕೋ ಯುಪಿ ಪೊಲೀಸರು ಅದನ್ನೇ ಮಾಡಿದರು. ಕೆಲ ಸಮಯದ ಹಿಂದೆ ಬಂಗಾಳದಲ್ಲಿ, ಕರ್ನಾಟಕದಲ್ಲಿ, ಮತ್ತೇ ಅನೇಕ ಕಡೆಗಳಲ್ಲಿ ಮಾಡಿದ್ದನ್ನೇ ಅವರು ಮಾಡಿದ್ದು. ಪೋಲೀಸರು ಇಲ್ಲದಿದ್ದರೆ, ಈ ದೇಶದಲ್ಲಿ ಕಾನೂನು ಮತ್ತು ಶಿಸ್ತು ಎಂಬುದೊಂದು ಇದೆ ಎಂದು ಈ ಜನಸಾಮಾನ್ಯರು ಮರೆತೇಬಿಡುತ್ತಾರೆ. ಇದರಿಂದ ವಿನಾಯಿತಿ ಇರುವುದು ನೀರವ್ ಮೋದಿಯಂತಹ ಜನರಿಗೆ ಮಾತ್ರ. ಅದನ್ನು ಇತರರಿಗೆ ನೀಡುವಂತಿಲ್ಲ. ಅದೂ ಕೂಡಾ ರಾಮರಾಜ್ಯ ಇನ್ನೇನು ಹತ್ತಿರದಲ್ಲೇ ಇದೆ ಎನ್ನುವಾಗ ಅದನ್ನು ಕೊಡಲಾದೀತೆ? ಪೊಲೀಸರ ತ್ವರಿತ ಕ್ರಮಕ್ಕಾಗಿ ಅವರಿಗೆ ಶಹಬ್ಬಾಷ್‌ಗಿರಿ ನೀಡಬೇಕಾದಲ್ಲಿ ಈ ಖಾನ್ ಮಾರ್ಕೆಟ್ ಗ್ಯಾಂಗ್ ಪೊಲೀಸರ ಮಾನಹಾನಿ ಮಾಡಿ ಅವರ ನೈತಿಕ ಸ್ಥೈರ್ಯವನ್ನು ಕೆಡಿಸಲು ಎದ್ದುನಿಂತಿದೆ.

ಬಾಲಿವುಡ್ ಚಿತ್ರಗಳಲ್ಲಿ ಕೂಡ ಸಮಯಕ್ಕೆ ಸರಿಯಾಗಿ ತಲುಪಿ ಅಪರಾಧವನ್ನು ತಡೆಗಟ್ಟಲಾಗದ ಪೋಲಿಸರು ನಿಜ ಜೀವನದಲ್ಲಿ ಹಿಂದೆಂದೂ ಕಾಣದ ತ್ವರಿತತೆಯಿಂದ ಕ್ರಮ ಕೈಗೊಂಡಿದ್ದಾರೆ. ಇದು ಅತ್ಯಂತ ಜನಭರಿತ ರಾಜ್ಯವನ್ನು ಭಾರೀ ಕಾನೂನು ಮತ್ತು ಶಿಸ್ತಿನ ಮಹಾ ಬಿಕ್ಕಟ್ಟಿನಿಂದ ಬಚಾವು ಮಾಡಿದೆ. ಅದು ಸಾರ್ವಜನಿಕ ಶಾಂತಿಯನ್ನು ಯಾರಾದರೂ ಕದಡುವ ಮುನ್ನವೇ ಕಾಪಾಡಿದೆ. ಇದು ಮಹಾ ಗಟ್ಟಿಗ ನಾಯಕನ ನಾಯಕತ್ವದಲ್ಲಿ ಮಾತ್ರ ಸಾಧ್ಯ. ಅವರ ಕಾರ್ಯದಕ್ಷತೆಯನ್ನು ಕೊಂಡಾಡುವ ಬದಲು ಟೀಕಾಕಾರರು ಪೊಲೀಸರು ಮತ್ತು ಯೋಗಿಯ ಮೇಲೆ ಎಗರಿಬಿದ್ದಿದ್ದಾರೆ

ಒಬ್ಬ ಮಹಿಳೆ ಮುಖ್ಯಮಂತ್ರಿ ಯೋಗಿಯ ಮೇಲೆ (ಪರಸ್ಪರ) ಪ್ರೇಮ ತೋರುವ ವಿಡಿಯೊ ಯೋಗಿ ಭಕ್ತರನ್ನು ರೊಚ್ಚಿಗೆಬ್ಬಿಸುತ್ತದೆ ಎಂದು ಯುಪಿಯ ಪೊಲೀಸ್‌ವಾಲರಿಗೆ ಗೊತ್ತು. ಭಾವನೆ ಘಾಸಿಗೊಂಡ ಭಕ್ತರು ಸಾಮೂಹಿಕ ವಿನಾಶದ ಅಸ್ತ್ರಗಳಿಗಿಂತಲೂ ಅಪಾಯಕಾರಿ ಎಂಬುದೂ ಅವರಿಗೆ ಗೊತ್ತು.

ಆದುದರಿಂದ, ಸಾರ್ವಜನಿಕ ಶಾಂತಿಗೆ ಭಾರೀ ಬಿಕ್ಕಟ್ಟು ಕವಿದಿರುವುದನ್ನು ಪೊಲೀಸರು ಸರಿಯಾಗಿಯೇ ಗ್ರಹಿಸಿದ್ದಾರೆ. ತ್ವರಿತ ಕಾರ್ಯಾಚರಣೆಯ ಮೂಲಕ ಇಂತಹ ಒಂದು ಸ್ಫೋಟಕ ಮಾಹಿತಿಯನ್ನು ಪ್ರಸಾರ ಮಾಡಿದ ಜನರನ್ನು ಬಂಧಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಮ್ಮ ನೆಚ್ಚಿನ ಸ್ವಾತಂತ್ರ್ಯದ ಹಕ್ಕಿಗೆ ಏನಾದರೂ ಆದರೆ, ಯಾರು ತಾನೇ ಲೆಕ್ಕಿಸುತ್ತಾರೆ! ಬಹುಶಃ ಅದು ಬಹಳ ಹಿಂದೆಯೇ ಸತ್ತಿದೆ. ಬಹುಶಃ ನಾವೀಗ ಕೊನೆಯ ಸುತ್ತಿನ ಶ್ರದ್ಧಾಂಜಲಿಯನ್ನು ಓದುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
- Advertisment -

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....