Homeಕರೋನಾ ತಲ್ಲಣಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಜೋಗ ಜಲಪಾತ, ಚಿಕ್ಕಮಗಳೂರಿನ ಬೆಟ್ಟಗಳ ಸಾಲು, ಕೊಡಗಿನ ಕಾಡು ಬೆಟ್ಟಗಳು ಎಲ್ಲೆಡೆ ಮಳೆಗಾಲದ ಜೂನ್, ಜುಲೈ ತಿಂಗಳಲ್ಲಿ ಪ್ರತಿ ವರ್ಷ ಪ್ರವಾಸಿಗರ ದಂಡು ನೆರೆದಿರುತ್ತಿತ್ತು.

- Advertisement -
- Advertisement -

ಬೆಳಗಾವಿಯಿಂದ ಕೊಡಗಿನ ತುದಿಯವರೆಗೆ ವಾರವಿಡಿ ಇನ್ನಿಲ್ಲದ ಮಳೆ. ಗುಡುಗು, ಸಿಡಿಲು, ಮಳೆ ಬಿಲ್ಲುಗಳ ಜೂಟಾಟ. ಘಟ್ಟದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ನದಿಗಳು ತುಂಬಿಹರಿಯುತ್ತಿವೆ. ಅಣೆಕಟ್ಟೆಗಳಿಗೆ ಒಳ ಹರಿವು ಹೆಚ್ಚಿದೆ. ಕೃಷ್ಣಾ ಕಾವೇರಿ ಕೊಳ್ಳದ ನದಿಗಳೆಲ್ಲ ಕೆಂಪು ಸಮುದ್ರದಂತೆ ರಭಸದಿಂದ ಭೋರ್ಗರೆಯತೊಡಗಿವೆ. ಆದರೆ, ಕೊರೊನಾ ಸಾಂಕ್ರಾಮಿಕದಿಂದ ಮಲೆನಾಡಿನ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ.

ಹೌದು, ರಾಜ್ಯದೆಲ್ಲೆಡೆ ರೈತರ ಮೊಗದಲ್ಲಿ ಸಂತಸ ಅರಳಿದೆ. ಹಳ್ಳಿ ಹಳ್ಲಿಯಲ್ಲೂ ಜನರು ಗೊಬ್ಬರ, ಭತ್ತ, ಟ್ರಿಲ್ಲರ್, ನಾಟಿಗಳ ಅವಸರದ ಓಡಾಟದಲ್ಲಿ ಮುಳುಗಿದ್ದಾರೆ. ಜೂನ್ ತಿಂಗಳು ಬಂದರೆ ಎಲ್ಲರಿಗೂ ಆತಂಕ, ಸಂತಸ, ಚಿಂತೆ ಪ್ರಾರಂಭವಾಗಿ ಬಿಡುತ್ತದೆ. ಸಮಯಕ್ಕೆ ಸರಿಯಾಗಿ ಮಳೆ ಬಂದರೆ ಸರಿ, ಬರದಿದ್ದರೆ ಏನು ಎತ್ತ ಎಂಬ ನಿರಾಶೆ, ಅನಿಶ್ಚಿತತೆ. ಮುಂಗಾರು ಕೈಕೊಟ್ಟರೆ ವರ್ಷದ ಕೂಳಿನ ಕತೆ ಏನೆಂಬ ಚಿಂತೆ..   ಈ ವರ್ಷ ಜನರಲ್ಲಿ ಯಾವುದೇ ಆತಂಕಗಳಿಲ್ಲ. ಏಕೆಂದರೆ ಮುಂಗಾರು ಸರಿಯಾದ ಸಮಯಕ್ಕೆ ಬಂದಿದೆ, ವರುಣ ಆರ್ಭಟಿಸೊಡಗಿದ್ದಾನೆ. ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಎತ್ತು ಕೋಣಗಳನ್ನು ಗದ್ದೆಗೆ ಹೊಡೆದುಕೊಂಡು ಜನರು ಪದಗಳನ್ನು ಹಾಡುತ್ತಿದ್ದಾರೆ.

ಕೃಷಿಯ ಕತೆ ಹಾಗಾದರೆ ಮಳೆಗಾಲದಲ್ಲಿ ಮಲೆನಾಡಿನ ಚಿತ್ರವೇ ಬೇರೆ. ದಿನವಿಡೀ ಬಿಡುವಿರದೇ  ಸುರಿಯುವ ಜಡಿ ಮಳೆ. ಬೇಸಿಗೆಯ ಬಿರು ಬಿಸಿಲಿಗೆ  ಬತ್ತಿ ಬಸವಳಿದು ಒಣಗಿದ್ದ ಹಳ್ಳ ಕೊಳ್ಲಗಳೆಲ್ಲ ಮರು ಹುಟ್ಟು ಪಡೆದು ಧುಮ್ಮಿಕ್ಕುವ ಕಲರವ. ಪ್ರಕೃತಿ ಹಚ್ಚ ಹಸಿರಾಗಿ ನಳ ನಳಿಸುವ ಸಂಭೃಮ. ನಡುವೆ ಮಾರು ಮಾರಿಗೆ ಬೆಟ್ಟದಿಂದ ಧುಮ್ಮಿಕ್ಕುವ ಝರಿಗಳು. ರಭಸದಿಂದ ಭೋರ್ಗರೆಯುವ ಜಲಪಾತಗಳು. ಮಲೆನಾಡಿನ ಮಳೆಗಾಲವೇ ಹಾಗೆ..! ದೇಶದ ಮೂಲೆ ಮೂಲೆಯಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಜಿಟಿ ಜಿಟಿ ಮಳೆಯ ನಡುವೆ ಆ ಬೆಟ್ಟದಿಂದ ಈ ಗುಡ್ಡದಿಂದ ಇಳಿಯುವ ಜಲಧಾರೆಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಪ್ರವಾಸಿಗರ ದಂಡು ಮುಗಿ ಬೀಳುತ್ತದೆ. ಮಲೆನಾಡಿನ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಲ್ಲಿ ಹೊಟೇಲು, ಲಾಡ್ಜು, ಟೀ, ತಿಂಡಿ ತಿನಿಸು ಮಾರುವವರು, ಬಾಡಿಗೆ ವಾಹನ ನಡೆಸುವವರು ಎಲ್ಲರ ಬದುಕು ಈ ಮಳೆಗಾಲದ ಮೇಲೆಯೇ ನಿಂತಿದೆ.

ಇದನ್ನೂ ಓದಿ : ಪಶ್ಚಿಮ ಘಟ್ಟದಲ್ಲಿ ಮುಂದುವರೆದ ಮಳೆ : ಮುಳುಗಡೆ ಭೀತಿಯಲ್ಲಿ ಬೆಳಗಾವಿ ಜಿಲ್ಲೆಯ ಗ್ರಾಮಗಳು

ಸುಪ್ರಸಿದ್ದ ಜೋಗ ಜಲಪಾತ, ಚಿಕ್ಕಮಗಳೂರಿನ ಬೆಟ್ಟಗಳ ಸಾಲು, ಕೊಡಗಿನ ಕಾಡು ಬೆಟ್ಟಗಳು ಎಲ್ಲೆಡೆ ಮಳೆಗಾಲದ ಜೂನ್ ಜುಲೈ ತಿಂಗಳಲ್ಲಿ ಪ್ರತಿ ವರ್ಷ ಪ್ರವಾಸಿಗರ ಜನ ಜಾತ್ರೆ ನೆರೆಯುತ್ತಿತ್ತು. ಆದರೆ ಈ ವರ್ಷ ಕೊರೊನಾ ಕಾರಣದಿಂದ ಮಲೆನಾಡಿನ ಯಾವ ಪ್ರವಾಸಿ ತಾಣಗಳೂ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿಲ್ಲ. ಎಲ್ಲೆಡೆ ಸಂಚಾರ ನಿರ್ಬಂಧವಿದೆ. ವಾರಾಂತ್ಯದ ರಜೆ ಕಳೆಯಲು ಬರುತ್ತಿದ್ದ ಐಟಿ ಉದ್ಯೋಗಿಗಳೂ ಈ ವರ್ಷ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಮಲೆನಾಡಿನ ಪ್ರವಾಸಿ ತಾಣಗಳು ಜನರಿಲ್ಲದೇ ಬಣಗುಡುವಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಫಾಲ್ಸ್, ತೀರ್ಥಕೆರೆ ಫಾಲ್ಸ್, ಸಗೀರ್ ಫಾಲ್ಸ್‌, ಸಿರಿಮನೆ ಫಾಲ್ಸ್, ಕಲ್ಲತ್ತಿಗರಿ ಫಾಲ್ಸ್, ಶಂಕರ್ ಫಾಲ್ಸ್ ಸೇರಿದಂತೆ ಜಿಲ್ಲೆಯ ದಶದಿಕ್ಕುಗಳಲ್ಲೂ ಜಲಪಾತಗಳು ಮೈದುಂಬಿ ಧುಮುಕುತ್ತಿವೆ. ಚಿಕ್ಕಮಗಳೂರು-ಮಂಗಳೂರು ಮಾರ್ಗದ ಚಾರ್ಮಡಿ ಘಾಟಿಯ ಫಾಲ್ಸ್‌ಗಳು ನೋಡುಗರ ಕಣ್ಣು ಕೋರೈಸುವಂತೆ ಧುಮ್ಮಿಕ್ಕುತ್ತಿವೆ. ಯಾವಾಗಲೂ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ಚಾರ್ಮಾಡಿಯ ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿದೆ.

ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಬದಿಯ ಜಲಪಾತ

ಉತ್ತರ ಕನ್ನಡ, ಶಿವಮೊಗ್ಗ, ಕೊಡಗಿನಲ್ಲೂ ಇದೇ ಕತೆ.  ಸಸ್ಯ ಸಂಪದ್ಭರಿತವಾದ ಉತ್ತರ ಕನ್ನಡ ಜಿಲ್ಲೆ ತನ್ನ ಕಾಡಿನ ಗರ್ಭದಲ್ಲಿ ನೂರಾರು ಪ್ರಾಕೃತಿಕ ಕೌತುಕವನ್ನು ಅಡಗಿಸಿಟ್ಟುಕೊಂಡಿದೆ. ಇಲ್ಲಿನ ಕಾಡು ಕಣಿವೆಗಳಲ್ಲಿ ಪ್ರತಿ ವರ್ಷವೂ ಒಂದೊಂದು ಹೊಸ ಜಲಪಾತ ಸಂಶೋಧನೆಯಾಗುತ್ತದೆ. ಜನಾಕರ್ಷಣೆಯ ತಾಣವಾಗಿ ಮಾರ್ಪಡುತ್ತಿದೆ. ಮಾಗೋಡ್ ಫಾಲ್ಸ್‌, ಉಂಚಳ್ಳಿ ಫಾಲ್ಸ್, ಶಿರ್ಲೆ ಫಾಲ್ಸ್, ಸಾತೊಡ್ಡಿ ಫಾಲ್ಸ್, ಶಿವಗಂಗಾ ಫಾಲ್ಸ್, ವಾಗಳ್ಳಿ ಫಾಲ್ಸ್ ಹೀಗೆ ಹಲವು ಫಾಲ್ಸ್‌ಗಳಿವೆ. ಪಕ್ಕದಲ್ಲಿ ಜೋಗ, ಕಾಳಿ ಅಘನಾಶಿನಿ, ಬೇಡ್ತಿ, ಶರಾವತಿಯ ಕಣಿವೆಯಲ್ಲಿ ಹೇಳ ಹೆಸರಿಲ್ಲದ ಮಳೆಗಾಲದಲ್ಲಿ ಮಾತ್ರ ಕಾಣುವ ಅಪರೂಪದ ಇನ್ನೆಷ್ಟೊ ಅದ್ಭುತ ಜಲಪಾತಗಳು. ಇವನ್ನೆಲ್ಲ ನೋಡಲು ಸದ್ಯ ಯಾವ ಪ್ರವಾಸಿಗರಿಗೂ ಅವಕಾಶವಿಲ್ಲ.

ಕೊರೊನಾ ಸಾಂಕ್ರಾಮಿಕ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕುತ್ತಿರುವ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಜನರ ಪರಿಸ್ಥಿತಿಯನ್ನು ಕೇಳುವವರೂ ಯಾರೂ ಇಲ್ಲ. ಭೋರ್ಗರೆಯುವ ಜಲಪಾತಗಳ ಮುಂದಿನ ಖಾಲಿತನದಲ್ಲಿ ಇವರೆಲ್ಲರ ಹಸಿವು ಸಂಕಟ ಮಡುಗಟ್ಟುತ್ತಿದೆ.

ವಿಶ್ವ ವಿಖ್ಯಾತ ಜೋಗ ಜಲಪಾತದ ಸುತ್ತಮುತ್ತ ಪ್ರವಾಸಿಗರನ್ನೇ ನಂಬಿ ಸರಿಸುಮಾರು 500 ಕುಟುಂಬಗಳು ಜೀವನ ನಡೆಸುತ್ತಿವೆ. ಜೀವನೋಪಾಯಕ್ಕಾಗಿ,  ಹೋಮ್‌ ಸ್ಟೇ, ಲಾಡ್ಜು, ಟೀ ಅಂಗಡಿ, ಹೊಟೇಲ್, ಜೀಪು ಕಾರು ಬಾಡಿಗೆ, ಫೊಟೋಗ್ರಫಿ, ಅಡ್ವೆಂಚರ್ ಟೂರಿಸ್ಟ್ ಗೈಡ್‌, ಟ್ರಕ್ಕಿಂಗ್‌ ಪಾರ್ಟನರ್‌ ಹೀಗೆ ಇಲ್ಲಿನ ಜನರು  ಬೆಂಗಳೂರಿನಿಂದ ಬರುವ ಪ್ರವಾಸಿಗರನ್ನೇ ನಂಬಿ ಕುಳಿತಿದ್ದಾರೆ.

ಮುಂಗಾರಿಗೆ ಜೀವಪಡೆದ ರೈಲು ಮಾರ್ಗದ ಪಕ್ಕದ ಸಾಲು ಸಾಲು ಜಲಪಾತಗಳು

ಈ ವರ್ಷ ಮುಂಗಾರು ಕೈಹಿಡಿದಿದೆ. ಆದರೆ ಕೊರೊನಾ ಕೈಕೊಟ್ಟಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್, ಶಿವಮೊಗ್ಗದ ಆಗುಂಬೆ, ಕೊಡಚಾದ್ರಿ, ಸಕಲೇಶಪುರ, ಮಡಿಕೇರಿ, ವಿರಾಜಪೇಟೆ, ಸುಬ್ರಹ್ಮಣ್ಯದ ಸುತ್ತ ಮುತ್ತದ  ಜಲಪಾತಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಪ್ರವಾಸಿಗರು ಮಾತ್ರ ಎಲ್ಲಿಗೂ ಹೋಗುವಂತಿಲ್ಲ. ಒಟ್ಟಿನಲ್ಲಿ ಸಾಂಕ್ರಾಮಿಕದಿಂದಾಗಿ ಈ ವರ್ಷ ಮಲೆನಾಡಿನಲ್ಲಿ ಮುಂಗಾರಿನ ಕಲರವವಿಲ್ಲ. ಪ್ರತಿವರ್ಷದಂತೆ ಮುಂಗಾರು ಈ ವರ್ಷವೂ ಮಲೆನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಮೆರಗು ನೀಡಿದೆ. ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು ನಗರಗಳು ಪ್ರವಾಸಿಗರಿಲ್ಲದೇ ನೀರವ ಮೌನದಲ್ಲಿ ಮುಳುಗಿವೆ.


ಇದನ್ನೂ ಓದಿ : ತಮಿಳುನಾಡಿನಲ್ಲಿ ಮಹಿಳೆಯರು, ಬ್ರಾಹ್ಮಣೇತರಿಗೆ ಅರ್ಚಕ ಹುದ್ದೆ, ರಾಜ್ಯದಲ್ಲಿಯೂ ಚರ್ಚೆ ಆರಂಭ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...