Homeನ್ಯಾಯ ಪಥಎಚ್.ಎಸ್ ದೊರೆಸ್ವಾಮಿ: ಆದರ್ಶ ನಾಗರಿಕನೊಬ್ಬನ ರೂಪಕ ಮತ್ತು ಪ್ರೀತಿಯ ಬೆಂಗಳೂರಿಗ

ಎಚ್.ಎಸ್ ದೊರೆಸ್ವಾಮಿ: ಆದರ್ಶ ನಾಗರಿಕನೊಬ್ಬನ ರೂಪಕ ಮತ್ತು ಪ್ರೀತಿಯ ಬೆಂಗಳೂರಿಗ

- Advertisement -
- Advertisement -

ಮೇ2017ರ ಅವಧಿಯಲ್ಲಿ, ಬೆಂಗಳೂರಿನ ಕೆರೆಗಳನ್ನು ಉಳಿಸಲು ’ನಮ್ಮ ಬೆಂಗಳೂರು’ ಪ್ರತಿಷ್ಠಾನದ ಪ್ರಯತ್ನಗಳಿಗೆ ಎಚ್.ಎಸ್ ದೊರೆಸ್ವಾಮಿ ಸೇರಿಕೊಂಡರು. ಫೌಂಡೇಶನ್ ಬಿಜೆಪಿಯ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರ ಉಪಕ್ರಮ ಎಂದು ಅವರಿಗೆ ಗೊತ್ತಿತ್ತು. ರಾಜೀವ್ ಚಂದ್ರಶೇಖರ್ ಅವರ ಬಿಜೆಪಿ ಪಕ್ಷದ ಸಿದ್ಧಾಂತವನ್ನು ಅವರು ತೀವ್ರವಾಗಿ ವಿರೋಧಿಸುತ್ತ ಬಂದಿದ್ದರು. ಆದರೆ, ಜನ ಸಮುದಾಯದ ಸಾಮೂಹಿಕ ಆಸ್ತಿಪಾಸ್ತಿ ಮತ್ತು ಮುಂದಿನ ಪೀಳಿಗೆಗೆ ಸಿಗಬೇಕಾದ ಸಾಮುದಾಯಿಕ ಆಸ್ತಿಗಳ ಹಕ್ಕುಗಳನ್ನು ಹಾಗೂ ಜನರನ್ನು ಕಾಪಾಡಲು ಜೀವನವನ್ನು ಸವೆಸಿದ್ದ ದೊರೆಸ್ವಾಮಿ ಅವರಿಗೆ, ಬೆಂಗಳೂರಿನ ಕೆರೆಗಳ ದುಸ್ಥಿತಿಯನ್ನು ಕಂಡು ಅವುಗಳ ರಕ್ಷಣೆಗಾಗಿ ರಾಜೀವ್ ಚಂದ್ರಶೇಖರ್ ಅವರೊಂದಿಗೂ ಜತೆಗೂಡಿ ಕೆಲಸ ಮಾಡುವಂತೆ ಮಾಡಿತ್ತು. ಆದರೆ ಅವರು ಉಳಿದೆಲ್ಲಾ ವೇದಿಕೆಯಲ್ಲಿ ಬಿಜೆಪಿಗಳ ಧರ್ಮಾಂಧತೆಯನ್ನು ಬಹಿರಂಗಗೊಳಿಸುವ ಮತ್ತು ಆ ಸಿದ್ಧಾಂತದ ಮೇಲೆ ಆಕ್ರಮಣ ಮಾಡುವುದನ್ನು ಬಿಡಲಿಲ್ಲ.

ಉಭಯಪಕ್ಷೀಯತೆಯು ಪ್ರಜಾಪ್ರಭುತ್ವದ ಸುದೀರ್ಘ ನಡಿಗೆಯಲ್ಲಿ ಮಧ್ಯಮದ ಹೆಜ್ಜೆಯಾಗಿದೆ ಎಂದು ದೊರೆಸ್ವಾಮಿಯವರು ನಂಬಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಹೋರಾಟ ಮಾಡುವ ತಮ್ಮ ಸಾಮರ್ಥ್ಯದ ಹೊರತಾಗಿಯೂ, ಅವರು ತಮ್ಮ ರಾಜಕೀಯ ಧೋರಣೆಯನ್ನು ಸಂವಹನ ಮಾಡುವ ಸ್ಪಷ್ಟತೆಯು ಅವರ ವಿಶೇಷವಾಗಿತ್ತು.

ಅದು ಅಕ್ಯಾಡೆಮಿಕ್ ಬುದ್ಧಿವಂತಿಕೆಯ ಪ್ರದರ್ಶನವಾಗಿರಲಿಲ್ಲ. ಅವರು ತುಂಬಾ ಅಪರೂಪದ ಸರಳತೆಯೊಂದಿಗೆ ಸಂವಹನ ನಡೆಸುವವರಾಗಿದ್ದರು ಹಾಗೂ ಸಂಕೀರ್ಣ ವಿಷಯಗಳು ಕೂಡ ಎಲ್ಲರಿಗೂ
ಅರ್ಥವಾಗುವಂತೆ ತಿಳಿಸುತ್ತಿದ್ದರು. ಈ ರೀತಿಯಾಗಿ ಅವರ ಸಂದೇಶದ ಸ್ಪಷ್ಟತೆ ಮತ್ತು ಆಳವು ಯುವಕರು, ಹಿರಿಯರು, ಸರಳ ಚಿಂತಕರು ಮತ್ತು ಬುದ್ಧಿಜೀವಿಗಳ ಮನಸ್ಸಿನಲ್ಲಿ ಒಂದೇ ರೀತಿಯಲ್ಲಿ ಉಳಿದುಕೊಳ್ಳುತ್ತಿತ್ತು.

ದೊರೆಸ್ವಾಮಿಯವರು ಬೆಂಬಲಿಸದ ಬೆಂಗಳೂರಿನ ಯಾವುದೇ ನ್ಯಾಯ ಮತ್ತು ಪರಿಸರ ಹೋರಾಟ ಇಲ್ಲ. ಅದು ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯಾಗಿರಲಿ, ಕೆರೆಗಳನ್ನು ರಕ್ಷಿಸುವ ಹೋರಾಟವಿರಲಿ, ಸಾಮೂಹಿಕ ಒಡೆತನದ ಭೂಮಿಯ ಒತ್ತುವರಿ ವಿರುದ್ಧದ ಪ್ರತಿಭಟನೆಯಿರಲಿ, ನಗರದ ಬಡವರ ಸ್ಥಳಾಂತರದ ವಿರುದ್ಧದ ಹೋರಾಟವಾಗಿರಲಿ, ಅನುಪಯುಕ್ತ ಮೂಲಸೌಕರ್ಯಗಳನ್ನು ಒತ್ತಾಯಪೂರ್ವಕವಾಗಿ ಹೇರುವುದನ್ನು ಪ್ರಶ್ನಿಸುವ ಸಂದರ್ಭವಿರಲಿ (ಎಲಿವೇಟೆಡ್ ಕಾರಿಡಾರ್‌ಗಳನ್ನು ನೆನಪಿಸಿಕೊಳ್ಳಿ) ಅಲ್ಲೆಲ್ಲ ದೊರೆಸ್ವಾಮಿ ಮುಂಚೂಣಿಯಲ್ಲಿ ಇರುತ್ತಿದ್ದರು. ಅನಿಯಂತ್ರಿತ ಮತ್ತು ಪ್ರಜಾಸತ್ತಾತ್ಮಕವಲ್ಲದ ಅಭಿವೃದ್ಧಿಗೆ ಅವರ ಪ್ರತಿರೋಧ ಸ್ಪಷ್ಟವಾಗಿತ್ತು. ಎಲ್ಲರಿಗೂ ಮೂಲಭೂತ ಸ್ವಾತಂತ್ರ್ಯಗಳ ಭರವಸೆಯು ಸಂವಿಧಾನದಿಂದಲೇ ಶುರುವಾಗುತ್ತದೆ ಮತ್ತು ಅಂತಹ ಸ್ವಾತಂತ್ರ್ಯಗಳನ್ನು ನಾಗರಿಕರ, ನಾಗರಿಕರಿಂದ ನಡೆಯುವ ನಿರಂತರ ಹೋರಾಟಗಳಿಂದ ಮಾತ್ರ ಸಾಕಾರಗೊಳಿಸಬಹುದು ಎಂದು ಅವರು ಪ್ರತಿಪಾದಿಸುತ್ತಿದ್ದರು. ಆದ್ದರಿಂದ, ಎಲ್ಲ ಜನರನ್ನು ಒಳಗೊಳ್ಳುವ ಆಕಾಂಕ್ಷೆಗಳನ್ನು ಹೊಂದಿರದ ಮತ್ತು ಆಳವಾದ ಪ್ರಜಾಸತ್ತಾತ್ಮಕ ನಿರ್ಧಾರ ಪ್ರಕ್ರಿಯೆಯ ಮೂಲಕ ವಿಕಸನಗೊಂಡಿರದ ಯಾವುದೇ ಅಭಿವೃದ್ಧಿ ಸಮಸ್ಯಾತ್ಮಕವಾಗಿರುತ್ತದೆ ಎಂದು ಅವರು ತಿಳಿದಿದ್ದರು.

ಭಾರತದ ಅಭಿವೃದ್ಧಿಯ ಹಾದಿಯು ಸಂವಿಧಾನದ 39ನೇ ಪರಿಚ್ಛೇದದಲ್ಲಿ ಬಯಸಿದಂತೆ ನಡೆಯುತ್ತಿಲ್ಲ ಎಂಬ ವಿಷಯದಲ್ಲಿ ದೊರೆಸ್ವಾಮಿಯವರು ಸ್ಪಷ್ಟವಾಗಿದ್ದರು. ಅಂಬೇಡ್ಕರ್ ವಾದಿಸಿದಂತೆ, ದೊರೆಸ್ವಾಮಿ ಕೂಡ, ಬಹುಸಂಖ್ಯಾತರ ಶ್ರಮ ಮತ್ತು ಕಷ್ಟಗಳನ್ನು ಬಳಸಿಕೊಂಡು ಕೆಲವರಷ್ಟೇ ಸಂಪತ್ತನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸುವುದಕ್ಕೆ ಅವಕಾಶ ಕಲ್ಪಿಸುವ ಭಾರತ ಸರ್ಕಾರದ ನಡೆಗಳು ರಾಷ್ಟ್ರ ವಿರೋಧಿ ಕಾರ್ಯಸೂಚಿ ಎಂದು ವ್ಯಾಖ್ಯಾನಿಸುತ್ತಿದ್ದರು. ಆ ಅರ್ಥದಲ್ಲಿ ಯುಪಿಎ ಅಥವಾ ಎನ್‌ಡಿಎ ವಿರುದ್ಧ ಅವರ ವಾದವೆಂದರೆ ಆ ಸರ್ಕಾರಗಳ ನೀತಿಗಳು ಸಾಂವಿಧಾನಿಕ ಆದೇಶಕ್ಕೆ ವಿರುದ್ಧವಾಗಿವೆಯೆಂದು.

ಈ ರೀತಿಯ ಚಿಂತನೆಯೇ ದೊರೆಸ್ವಾಮಿಯವರನ್ನು ಕಾಲಕ್ರಮೇಣ ಅನೇಕ ಹೋರಾಟಗಳಿಗೆ ಕರೆತಂದಿತು. ಅವರು ದೊಡ್ಡ ಅಣೆಕಟ್ಟುಗಳನ್ನು ವಿರೋಧಿಸಿದರು, ಹಾಗೆಯೇ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಸಮಸ್ಯಾತ್ಮಕ ಗಣಿಗಾರಿಕೆ ಮತ್ತು ಲೂಟಿಗೆ ವಿರುದ್ಧವಾಗಿದ್ದರು. ಕೈಗಾದಲ್ಲಿನ ಪರಮಾಣು ವಿದ್ಯುತ್ ಸ್ಥಾವರ ವಿರುದ್ಧದ ಹೋರಾಟದಲ್ಲಿ ಅವರು ಶಿವರಾಮ ಕಾರಂತರೊಂದಿಗೆ ಭಾಗವಹಿಸಿದರು.

ಯಾವುದೇ ವಿಷಯವಿರಲಿ ಪ್ರಭುತ್ವದ ಯಜಮಾನಿಕೆಯನ್ನು ಅವರು ಪ್ರಶ್ನಿಸಿದರು. 2012ರಲ್ಲಿ ಮಹಿಳಾ ಸಮಖ್ಯಾ ಪ್ರಾರಂಭಿಸಿದ ಪಂಚಾಯತ್ ರಾಜ್ ಹೋರಾಟಕ್ಕೆ ಸೇರ್ಪಡೆಗೊಂಡ ದೊರೆಸ್ವಾಮಿ ಅವರು ಆ ಕಾಲದ ಸರ್ಕಾರವನ್ನು ಟೀಕಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನಾವು ಅಸೆಂಬ್ಲಿಯಲ್ಲಿ ಪ್ರತಿನಿಧಿಗಳನ್ನು ಸುಮ್ಮನೆ ಲಾಕ್ ಮಾಡಬಹುದು. ಅವರು ಅಲ್ಲಿ ಪರಸ್ಪರ ಕೆಸೆರೆರೆಚಾಟದಲ್ಲಿ ತೊಡಗಿಕೊಂಡಿದ್ದಾರೆ ಅಷ್ಟೇ, ಬೇರೇನು ಮಾಡುತ್ತಿಲ್ಲ” ಎಂಬುದು ಆ ಸಂದರ್ಭದಲ್ಲಿ ಅವರ ಅಭಿಪ್ರಾಯವಾಗಿತ್ತು.

ಗೌರಿ ಲಂಕೇಶ್ ಅವರ ಹತ್ಯೆ ದೊರೆಸ್ವಾಮಿಯನ್ನು ದಿಗ್ಭ್ರಮೆಗೊಳಿಸಿತು ಮತ್ತು ಆಘಾತಗೊಳಿಸಿತು. ಆಕೆಗೆ ಗೌರವ ಸಲ್ಲಿಸಲು ಮುಂದಾದ ಅಪಾರ ಸಂಖ್ಯೆಯ ಜನರನ್ನು ನೋಡಿದಾಗ, ಗೌರಿ ಅವರಲ್ಲಿದ್ದ ಹೋರಾಟದ ಮನೋಭಾವದಿಂದ ನೀವೆಲ್ಲ ಜೀವನವನ್ನು ನಡೆಸಲು ಸಂಕಲ್ಪಿಸಬೇಕೆಂದು ಅವರು ಜನರನ್ನು ಕೋರಿದರು ಮತ್ತು ಗೌರಿಯ ನ್ಯಾಯಯುತ ಮಾರ್ಗವನ್ನು ಅನುಸರಿಸಿ ಎಂದು ಮನವಿ ಮಾಡಿದರು.

ದೊರೆಸ್ವಾಮಿ 103 ವರ್ಷಗಳ ಕಾಲ ಉತ್ಸಾಹ ಮತ್ತು ಪರಿವರ್ತನೆಯ ಬಯಕೆಯೊಂದಿಗೆ ಬದುಕಿದ್ದರು. ಸಿನಿಕತೆ ಮತ್ತು ಅನುಮಾನಗಳಿಂದ ತುಂಬಿದ ಜಗತ್ತಿನಲ್ಲಿ ಇದು ಅಪರೂಪ. ಅವರ ತಿಳಿವಳಿಕೆ ಮತ್ತು ಮನಸ್ಸು ಸ್ಪಷ್ಟವಾಗಿತ್ತು ಹಾಗು ಅವರು ತಾವೇ ಕಡೆದ ಹಾದಿಯಲ್ಲಿ ತಲೆ ಎತ್ತಿ ನಡೆದರು. ಅವರ ನಿರೀಕ್ಷೆಗಳಿಗೆ ಯಾರೂ ಸಮನಾಗದಿರುವುದು ಇದಕ್ಕೆ ಕಾರಣವೇ? ಅವರು ಮಹಾತ್ಮ ಗಾಂಧಿಯವರ ಕಾಲದಿಂದ ಹಿಡಿದು ನರೇಂದ್ರ ಮೋದಿಯವರ ಪ್ರಾಬಲ್ಯದವರೆಗೆ ಬದುಕಿದ್ದರು. ದೇಶವನ್ನು ಒಗ್ಗೂಡಿಸುವ ವಲ್ಲಭಾಯ್ ಪಟೇಲ್ ಅವರ ಧೀಮಂತಿಕೆಯನ್ನೂ, ಒಡೆದು ಆಳುವ ತಂತ್ರದ ಮುಂದಾಳು ಅಮಿತ್ ಷಾರನ್ನೂ ಅವರು ನೋಡಿದ್ದರು. ಈ ಗ್ರಹದ ಯಾವುದೇ ವ್ಯಕ್ತಿಯು ದೊರೆಸ್ವಾಮಿಯಂತಹ ಅನುಭವ ಮತ್ತು ಗ್ರಹಿಕೆಯ ಆಳವನ್ನು ಪಡೆಯಲು ಸಾಧ್ಯವಿಲ್ಲ. ಮತ್ತದು ನಿಷ್ಕ್ರಿಯತೆಯದ್ದಲ್ಲ, ಬದುಕಿನುದ್ದಕ್ಕೂ ನಿರಂತರ ಭಾಗವಹಿಸುವಿಕೆಯಿಂದ, ಸಕ್ರಿಯ ಹೋರಾಟದಿಂದ ಕೂಡಿದ್ದು.

ವೈಯಕ್ತಿಕವಾಗಿ ನನಗೆ ಹೆಚ್ಚು ಕಾಡಿದ್ದು, ಸ್ಥಳೀಯ ಕಾಳಜಿಗಾಗಿ ಕೆರೆಗಳ ಉಳಿವಿಗೆ ಹೋರಾಟ ಮಾಡಬಲ್ಲವರಾಗಿದ್ದ ಅವರು, ’ಮೋದಿ ವರ್ಸಸ್ ಕರ್ನಾಟಕ’ದಂತಹ, ಧರ್ಮಾಂಧತೆಯ ವಿರುದ್ಧದ ವಿಶಾಲ ಅಭಿಯಾನವನ್ನೂ ಅಷ್ಟೇ ಉತ್ಸಾಹದಿಂದ ನಡೆಸಬಲ್ಲವರಾಗಿದ್ದರು ಎಂಬುದು. ಇದು ಅವರ ರಾಜಕೀಯ ಅಧ್ಯಯನವನ್ನು ನಿರೂಪಿಸುತ್ತದೆ. ಅವರ ದೃಷ್ಟಿಯಲ್ಲಿ ಇವೆಲ್ಲಾ ವಿನಾಶದ ವಿಭಿನ್ನ ಛಾಯೆಗಳಾಗಿದ್ದು, ಅವು ಪರಿಸರ ಸಮತೋಲನ ಮತ್ತು ಮಾನವೀಯತೆಯ ಎಳೆಗಳೊಂದಿಗೆ ಹೆಣೆದುಕೊಂಡಿರುವ ಏಕತೆಯ ಬಟ್ಟೆಯನ್ನು ಹರಿದವು ಎಂದು ಅವರು ನಂಬಿದ್ದರು. ಅವರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ದ್ವೇಷಕ್ಕೆ ಸ್ಥಳವಿರಲಿಲ್ಲ; ದ್ವೇಷದ ರಾಜಕೀಯವನ್ನು ಮಾಡುವವರಿಗೆ ಅವರು ಖಂಡತುಂಡವಾಗಿದ್ದರು. ಅದಕ್ಕಾಗಿಯೇ ಬಿಜೆಪಿಯ ಬಸನಗೌಡ ಯತ್ನಾಳ್ ವಿಷವನ್ನು ಹೊರಹಾಕಿದಾಗ ಮತ್ತು ಸ್ವಾತಂತ್ರ್ಯ ಹೋರಾಟಗಾರನಾಗಿ ದೊರೆಸ್ವಾಮಿಯವರ ರುಜುವಾತುಗಳನ್ನು ಪ್ರಶ್ನಿಸಿದಾಗ, ಯಾವುದೇ ಪ್ರತಿಕ್ರಿಯೆ ಸಿಕ್ಕಲಿಲ್ಲ. ಬಿಜೆಪಿಯ ಹಿರಿಯ ಮುಖಂಡ ಯಡಿಯೂರಪ್ಪ ಅವರು ತಮ್ಮ ಕಿರಿಯ ಸಹೋದ್ಯೋಗಿಗೆ ಸೂಕ್ತವಾದ ಸಾಮಾಜಿಕ ನಡವಳಿಕೆಯನ್ನು ರೂಪಿಸಿಕೊಳ್ಳುವ ಬಗ್ಗೆ ಸಲಹೆ ನೀಡುತ್ತಾರೆ ಎಂದು ದೊರೆಸ್ವಾಮಿ ನಂಬಿದ್ದರು. ಅವರು ಯತ್ನಾಳರ ಮೂರ್ಖತನವನ್ನು ನೋಡಿ ಮುಗುಳ್ನಕ್ಕರು ಎಂದು ನನಗೆ ಖಾತ್ರಿಯಿದೆ.

ಈ ಮಹಾನ್ ವ್ಯಕ್ತಿಯನ್ನು ತಿಳಿದುಕೊಳ್ಳುವ ಭಾಗ್ಯವನ್ನು ಹೊಂದಿರುವ ನಾವು, ಅವರ ಸರಳತೆಯನ್ನು ಯಾವಾಗಲೂ ನೆನಪಿನಲ್ಲಿಡಬೇಕು. ಅದು, ಎಲ್ಲರಿಗೂ ಮೂಲಭೂತವಾದ ಸ್ವಾತಂತ್ರ್ಯ ಸಿಗಬೇಕು, ಆಳವಾದ ಪ್ರಜಾಸತ್ತಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ನೆಲಸಬೇಕು, ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಕಾಪಾಡಲು, ಆಡಳಿತದಲ್ಲಿ ಪಾರದರ್ಶಕತೆಯನ್ನು ಒತ್ತಾಯಿಸಲು ಮತ್ತು ಪ್ರಗತಿಪರ ಮಾನವೀಯ ಮೌಲ್ಯಗಳಿಗೆ ಪ್ರಭುತ್ವ ಯಾವಾಗಲು ತಲೆಬಾಗುವಂತೆ ನೋಡಿಕೊಳ್ಳಲು ನಾಗರಿಕರು ಸದಾ ಎಚ್ಚರಿಕೆಯಿಂದಿರಬೇಕು ಎಂಬ ದೊರೆಸ್ವಾಮಿ ಅವರ ಸಂದೇಶಗಳನ್ನು ನೆನಪಿಸುತ್ತಿರುತ್ತದೆ.

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಪರಿಸರ ಸಂರಕ್ಷಕ ಕಾರ್ಯಕರ್ತರು ಹಾಗೂ ’ಭಾರತದಲ್ಲಿ ಪರಿಸರಕ್ಕಾಗಿ ನ್ಯಾಯ’ ಮೈತ್ರಿ ಬಳಗದ ಭಾಗವಾಗಿದ್ದಾರೆ.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...