Homeದಲಿತ್ ಫೈಲ್ಸ್ಗುಜರಾತ್: ದಲಿತ ಯುವಕನಿಗೆ ನಡುರಸ್ತೆಯಲ್ಲಿ ಮಾರಣಾಂತಿಕ ಥಳಿತ- ಐವರು ಸವರ್ಣೀಯರ ಬಂಧನ

ಗುಜರಾತ್: ದಲಿತ ಯುವಕನಿಗೆ ನಡುರಸ್ತೆಯಲ್ಲಿ ಮಾರಣಾಂತಿಕ ಥಳಿತ- ಐವರು ಸವರ್ಣೀಯರ ಬಂಧನ

- Advertisement -
- Advertisement -

ಹುಡುಗಿಯೊಂದಿಗೆ ಮಾತನಾಡುತ್ತಿದ್ದ ದಲಿತ ಯುವಕನಿಗೆ ನಡುರಸ್ತೆಯಲ್ಲಿ 7 ಜನ ಸವರ್ಣೀಯರು ಬೆಲ್ಟ್‌ಗಳಿಂದ ಮತ್ತು ಬಡಿಗೆಗಳಿಂದ ಮಾರಣಾಂತಿಕವಾಗಿ ಥಳಿಸಿರುವ ಅಮಾನುಷ ಘಟನೆ ಗುಜರಾತ್‌ನ ವಡೋದರದಲ್ಲಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಥಳಿಸುವ ವಿಡಿಯೋ ವೈರಲ್ ಆಗಿದ್ದು, ಅದರ ಆಧಾರದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಭಾಯ್ಲಿ ಗ್ರಾಮದ ನಿವಾಸಿ ಅಲ್ಪೇಶ್ ಪರ್ಮಾರ್ ಎಂಬ ದಲಿತ ಯುವಕ ವಡೋದರದ ಸೇವಾಸಿ ಕಾಲುವೆ ರಸ್ತೆಯಲ್ಲಿ ಹುಡುಗಿಯೊಂದಿಗೆ ಮಾತನಾಡುತ್ತಿದ್ದಾಗ ಏಳು ಜನರು ವಿನಾಕಾರಣ ಹಲ್ಲೆ ನಡೆಸಿದ್ದಾರೆ. ಜಾತಿನಿಂದನೆ ಮಾಡಿ, ಬೆಲ್ಟ್‌ಗಳಿಂದ ಮನಬಂದಂತೆ ತಳಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅದೇ ಗ್ರಾಮದ ಸವರ್ಣೀಯ ಹುಡುಗನೊಬ್ಬನ ಇನ್ಸ್ಟಗ್ರಾಂ ಖಾತೆಯಲ್ಲಿ ನಾನು ಕಮೆಂಟ್ ಮಾಡಿದ ಏಕೈಕ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಲ್ಲದೆ ಪೊಲೀಸ್ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಆ ವಿಡಿಯೋ ಎಲ್ಲೆಡೆ ವೈರಲ್ ಆದ ನಂತರ ನಮ್ಮ ಮನೆಯವರು ದೂರು ನೀಡಲು ಧೈರ್ಯ ತುಂಬಿದರು ಎಂದು ಸಂತ್ರಸ್ತ ಯುವಕ ಅಲ್ಪೇಶ್ ಪರ್ಮಾರ್ ತಿಳಿಸಿದ್ದಾರೆ.

ತನ್ನ ಮೇಲೆ ಹಲ್ಲೆ ನಡೆಸಿದ ವಿಡಿಯೋವನ್ನು “ನಮ್ಮ ಲೈವ್‌ನಲ್ಲಿ ನೆಗೆಟಿವ್ ಕಮೆಂಟ್ ಮಾಡುವವರಿಗೆ ಇದೇ ಗತಿ” ಎಂಬ ಎಚ್ಚರಿಕೆಯೊಂದಿಗೆ ಆರೋಪಿಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕೊನೆಯಲ್ಲಿ ‘ಜೈ ರಜಪೂತಾನ’ ಎಂದು ತಮ್ಮ ಜಾತಿಸೂಚಕವನ್ನು ಉಲ್ಲೇಖಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾವು ಏಳು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದೇವೆ. ಅವರಲ್ಲಿ ಇಬ್ಬರು ರಜಪೂತರು ಮತ್ತು ಇಬ್ಬರು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರು. ದಾಳಿಯ ಹಿಂದಿನ ನಿಖರವಾದ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ಆರೋಪಿಗಳ ವಿರುದ್ಧ ಹಲವು IPC ಸೆಕ್ಷನ್‌ಗಳ ಅಡಿಯಲ್ಲಿ ಗಲಭೆ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಸಕ ಜಿಗ್ನೇಶ್ ಮೇವಾನಿ ಖಂಡನೆ

ದಲಿತ ಯುವಕನ ಮೇಲಿನ ಅಮಾನುಷ ಹಲ್ಲೆಯನ್ನು ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಖಂಡಿಸಿದ್ದಾರೆ. “ಉನಾ ಘಟನೆಯ ಸಮಯದಲ್ಲಿ, “ನೀವು ಕೊಲ್ಲಲು ಬಯಸಿದರೆ, ನನ್ನನ್ನು ಕೊಲ್ಲಿ, ನನ್ನ ದಲಿತ ಸಹೋದರರನ್ನಲ್ಲ” ಎಂದು ಮೋದಿಜಿ ಹೇಳಿದ್ದರು. ಆದರೆ ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ತಡೆಯಲು ಸರ್ಕಾರ ಮುಂದಾಗಲಿಲ್ಲ. ಅದರ ಫಲಿತಾಂಶವಾಗಿ ನಿನ್ನೆ ವಡೋದರಾ ಜಿಲ್ಲೆಯಲ್ಲಿ ದಲಿತ ಯುವಕನನ್ನು ಸಾರ್ವಜನಿಕವಾಗಿ ಹತ್ಯೆ ಮಾಡುವ ಪ್ರಯತ್ನ ನಡೆದಿದೆ. ಗುಜರಾತಿನಲ್ಲಿ ಗೂಂಡಾರಾಜ್ ಆಳ್ವಿಕೆ ನಡೆಯುತ್ತಿದೆ” ಎಂದು ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ದಲಿತ ವ್ಯಕ್ತಿಯ ಶವಸಂಸ್ಕಾರ ತಡೆದ ಸವರ್ಣೀಯರು – ರಸ್ತೆಯಲ್ಲಿ ಶವ ಇಟ್ಟು 5 ಗಂಟೆ ಕಾದ ದಲಿತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈ ಜಾತಿ ರೋಗಿಷ್ಟ ನಾಯಿಗಳಿಗೆ, ಆ ಪಡಪಾಯಿಗೆ ಹಲ್ಲೆ ಮಾಡಿದ ರೀತಿಯಲ್ಲೇ ಸಾರ್ವಜನಿಕವಾಗಿ ದಲಿತರು ಒಗ್ಗೂಡಿ ಮಾಡಬೇಕು,ಆಗಲೇ ಈ ರೋಗಪೀಡಿತ ಜಾತಿವಾದಿ ನಾಯಿಗಳಿಗೆ ಅರಿವಾಗೋದು.

  2. RSS AND BHAJARANGADAL ORGANIZATIONS WERE ONLY A SPECTATOR THEY SHOUT WHEN EVER THEY FACE TROUBLE FROM OTHER RELIGION THEY CAME TO S.C. PEOPLE FOR PROTEST THE INCIDENT S.C.S ARE HINDUS WHY HINDUS ARE THEMSELVES BEATEN TO DEATH IT IS THE BIRTH PLACE OF MAHATMA GANDHIS&SARDAR VALLABHBHAI PATEL AND ALSO PRESENT PRIME MINISTER OF THIS COUNTRY,ARE THEY NOT ABLE TO PROTECT THE LIFE OF DALITHS BY PUTTING PRESSURE ON LAW AND ORDER PROTECTORS IF NOT WHAT IS USE OF KEEPING SUCH AUTHORITY IN THE STATE LIKE GUJARAT

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...