Homeಕರ್ನಾಟಕಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಎನ್‍ಡಿಎ: 223, ಯುಪಿಎ: 187, ಇತರೆ: 133. ಇದು ಪೊಲಿಟಿಷಿಯನ್ಸ್ ಪೋಲ್ ವಿಡಿಯೋ ನೋಡಿ

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ...

- Advertisement -
- Advertisement -

| ನಾನುಗೌರಿ ಡೆಸ್ಕ್ |

ರಾಜಕೀಯ ಚಿಂತಕ ಸುಜಿತ್ ನಾಯರ್ ಮತ್ತು ಅವರ ತಂಡ ವಿಭಿನ್ನ ರೀತಿಯಲ್ಲಿ ಚುನಾವಣಾ ಸಮೀಕ್ಷೆ ಮಾಡುತ್ತದೆ. ಅದು ರಾಜಕೀಯ ಕಾರ್ಯಕರ್ತರ ಜೊತೆ ವರ್ಷ ಕಾಲ ಸಂಪರ್ಕ ಇಟ್ಟುಕೊಂಡು ಗ್ರೌಂಡ್‍ಲೆವೆಲ್ ಮಾಹಿತಿ ಆಧರಿಸಿ ಸಮೀಕ್ಷೆ ಮಾಡುತ್ತದೆ. ಅದರ ಪ್ರಕಾರ, 187 ಸೀಟು ಪಡೆಯಲಿರುವ ಯುಪಿಎಗೆ ಹೆಚ್ಚಿನ ಅಡ್ವಾಂಟ್ವೇಜ್ ಇದೆ…

ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ, ಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ಮಾಡಲಿವೆ ಎಂದು ಈ ತಂಡ ಮೊದಲೇ ಹೇಳಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ ಎಂದು ಸಾಕಷ್ಟು ಮೊದಲೇ ಹೇಳಿತ್ತು.

ಸುಜಿತ್‍ರವರು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿರುವ ವಿಡಿಯೋದ ಸಾರಾಂಶ ಇಲ್ಲಿದೆ.
ಕಳೆದ ಒಂದು ವರ್ಷದಿಂದ ಹಿರಿಯ ರಾಜಕೀಯ ನಾಯಕರು, ಮಧ್ಯಮ ಹಂತದ ನಾಯಕರು, ಕಾರ್ಯಕರ್ತರ ಜೊತೆ ಸಂಪರ್ಕ, ಚುನಾವಣೆ ವೇಳೆ ಬೂತ್ ಏಜೆಂಟರೊಂದಿಗೆ ಸಂಪರ್ಕ ಇಟ್ಟುಕೊಂಡು ಈ ಸಮೀಕ್ಷೆ ಮಾಡಲಾಗಿದೆ.

ಎನ್‍ಡಿಎ, ಯುಪಿಎ ಮತ್ತು ಎನ್‍ಎಪಿ( ಯುಪಿಎ, ಎನ್‍ಡಿಎ ಹೊರತಾದ ಪಕ್ಷಗಳು) ಎಂದು ವಿಭಾಗಿಸಿ, ರಾಜ್ಯವಾರು ಯಾವುದಕ್ಕೆ ಎಷ್ಟು ಸೀಟು ಎಂದು ವಿವರಿಸಲಾಗಿದೆ. ರಾಜ್ಯದ ಹೆಸರಿನ ಪಕ್ಕದ ಬ್ರಾಕೆಟಿನಲ್ಲಿ ಒಟ್ಟು ಸೀಟುಗಳ ಸಂಖ್ಯೆಯಿದೆ.

ಅಂಡಮಾನ್ ನಿಕೋಬಾರ್ (1)
ಎನ್‍ಡಿಎ: 0 ಯುಪಿಎ: 1

ಆಂಧಪ್ರದೇಶ (25)
ಎನ್‍ಡಿಎ: 0 ಯುಪಿಎ:2 ಎನ್‍ಎಪಿ: ವೈಎಸ್‍ಆರ್‍ಸಿ: 15, ಟಿಡಿಪಿ: 8

ಅರುಣಾಚಲ ಪ್ರದೇಶ (2)
ಎನ್ಡಿಎ: 1, ಎನ್‍ಎಪಿ: 1

ಛತ್ತೀಸ್‍ಗಡ್ (11)
ಎನ್ಡಿಎ: 04 ಯುಪಿಎ:07

ದಾದ್ರಾ (1)
ಎನ್‍ಡಿಎ: 1 ಯುಪಿಎ: 0

ಚಂಡಿಗಡ್ (1)
ಎನ್‍ಡಿಎ: 0, ಯುಪಿಎ: 1

ಬಿಹಾರ್ (40)
ಎನ್ಡಿಎ: 20 (ಬಿಜೆಪಿ: 8, ಜೆಡಿಯು: 11, ಎಲ್‍ಜೆಪಿ: 1), ಯುಪಿಎ: 19 ( ಕಾಂಗ್ರೆಸ್ 06, ಆರ್‍ಜೆಡಿ: 13), ಇತರೆ: 1

ಗೋವಾ (2)
ಎನ್‍ಡಿಎ: 1, ಯುಪಿಎ: 1

ಗುಜರಾತ್ (26)
ಎನ್‍ಡಿಎ: 19, ಯುಪಿಎ: 07

ದಾಮನ್-ಡಿಯು( 1)
ಎನ್‍ಡಿಎ : 1

ದೆಹಲಿ (7)
ಎನ್‍ಡಿಎ: 3, ಯುಪಿಎ: 1, ಇತರೆ (ಆಪ್): 3

ಜಮ್ಮು-ಕಾಶ್ಮೀರ (6)
ಎನ್‍ಡಿಎ: 02, ಯುಪಿಎ: 03, ಇತರೆ: 01

ಜಾರ್ಖಂಡ್( 14)
ಎನ್‍ಡಿಎ :04, ಯುಪಿಎ: 10 (ಕಾಂಗ್ರೆಸ್ :04, ಜೆಎಂಎಂ: 06)

ಹರ್ಯಾಣ (10)
ಎನ್‍ಡಿಎ: 03, ಯುಪಿಎ:À 06 ಇತರೆ: 01

ಹಿಮಾಚಲ ಪ್ರದೇಶ (4)
ಎನ್‍ಡಿಎ: 03, ಯುಪಿಎ: 01

ಲಕ್ಷದ್ವೀಪ (1)
ಎನ್ಡಿಎ: 0. ಯುಪಿಎ: 1

ಮಹಾರಾಷ್ಟ್ರ ( 48)
ಎನ್‍ಡಿಎ: 28 (ಬಿಜೆಪಿ: 16, ಶಿವಸೇನಾ: 12), ಯುಪಿಎ: 18 (ಕಾಂಗ್ರೆಸ್: 09, ಎನ್‍ಸಿಪಿ: 09),
ಇತರೆ: 02

ಕರ್ನಾಟಕ (28)
ಎನ್ಡಿಎ: 18, ಯುಪಿಎ: 10 (ಕಾಂಗ್ರೆಸ್ 07, ಜೆಡಿಎಸ್: 03)

ಕೇರಳ (20)
ಎನ್‍ಡಿಎ: 01, ಯುಪಿಎ: 13, ಇತರೆ( ಸಿಪಿಐ/ಸಿಪಿಎಂ): 06

ಮಿಜೊರಾಂ (1)
ಇತರೆ: 01

ಮಧ್ಯಪ್ರದೇಶ (29)
ಎನ್‍ಡಿಎ: 19, ಯುಪಿಎ: 10

ಮಣಿಪುರ (2)
ಯುಪಿಎ: 02

ಮೇಘಾಲಯ (2)
ಯುಪಿಎ: 02

ಪುದುಚೇರಿ (1)
ಯುಪಿಎ: 01

ಪಂಜಾಬ್ (13)
ಎನ್‍ಡಿಎ: 03, ಯುಪಿಎ: 09, ಇತರೆ(ಆಪ್): 01

ಒರಿಸ್ಸಾ (21)
ಎನ್‍ಡಿಎ: 06, ಯುಪಿಎ: 01, ಇತರೆ (ಬಿಜೆಡಿ): 14

ರಾಜಸ್ತಾನ್ ( 25)
ಎನ್‍ಡಿಎ: 16, ಯುಪಿಎ:09

ತಮಿಳುನಾಡು (39)
ಎನ್‍ಡಿಎ: 07 (ಬಿಜೆಪಿ: 1. ಎಐಎಡಿಎಂಕೆ: 6), ಯುಪಿಎ: 29 (ಡಿಎಂಕೆ: 25, ಕಾಂಗ್ರೆಸ್: 04),
ಇತರೆ: 01

ತೆಲಂಗಾಣ(17)
ಎನ್‍ಡಿಎ: 01, ಯುಪಿಎ: 02, ಇತರೆ: 13( ಟಿಆರ್‍ಎಸ್: 12, ಎಐಎಂಎಂ: 01)

ಸಿಕ್ಕಿಂ(1)
ಇತರೆ: 01

ಉತ್ತರಪ್ರದೇಶ(80)
ಎನ್‍ಡಿಎ: 40, ಯುಪಿಎ: 05, ಇತರೆ: 35 (ಬಿಎಸ್‍ಪಿ: 20, ಕಾಂಗ್ರೆಸ್: 15)

ಉತ್ತರಾಖಂಡ(5)
ಎನ್‍ಡಿಎ: 03, ಯುಪಿಎ: 02

ತ್ರಿಪುರ(2)
ಎನ್‍ಡಿಎ: 01, ಯುಪಿಎ: 01

ಪಶ್ಚಿಮ ಬಂಗಾಳ(42)
ಎನ್‍ಡಿಎ: 13, ಯುಪಿಎ:02, ಇತರೆ( ಟಿಎಂಸಿ): 27

ಯಾವ ಕೂಟಕ್ಕೆ ಎಷ್ಟು? ಎನ್‍ಡಿಎ:

223, ಯುಪಿಎ: 187, ಎನ್‍ಎಪಿ( ಇತರೆ): 133

ಎನ್‍ಡಿಎಗೆ ಸರಳ ಬಹುಮತಕ್ಕೆ 49 ಸೀಟು ಕೊರತೆ. ಅದು ಯಾರ ಬೆಂಬಲ ಪಡೆಯಬಹುದು?
ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಆಶ್ಚರ್ಯಕರವಾಗಿ ಬಿಎಸ್‍ಪಿ(20), ಇದೆಲ್ಲ ಸೇರಿದರೆ 62 ಸೀಟು.
ಆಗ ಎನ್ಡಿಎ: 223 + 62= 285 ( ಮಾಯಾವತಿಗೆ ಉಪ ಪ್ರಧಾನಿ ಪಟ್ಟ ಕೊಡಬಹುದು)

ಯುಪಿಎಗೆ ಸರಳ ಬಹುಮತಕ್ಕೆ 85 ಸೀಟುಗಳ ಕೊರತೆ. ಅದಕ್ಕೆ ಯಾರ್ಯಾರು ಬೆಂಬಲ ಕೊಡಬಹದು?
ಟಿಎಂಸಿ(27),ಟಿಡಿಪಿ(08), ಆಪ್(04), ಬಿಎಸ್‍ಪಿ(20), ಎಸ್‍ಪಿ(15), ಬಿಜೆಡಿ(14), ಟಿಆರ್‍ಎಸ್(13), ವೈಎಸ್‍ಆರ್‍ಸಿ(15), ಇದೆಲ್ಲ ಸೇರಿದರೆ 116.
ಆಗ ಯುಪಿಎ: 187 + 116= 303,  ಅಡ್ವಂಟೇಜ್ ಎಂದರೆ, ಕಾಂಗ್ರೆಸ್ ಪಕ್ಷ ಪ್ರಧಾನಿ ಹುದ್ದೆಯನ್ನು ಇತರರಿಗೆ ಬಿಟ್ಟು ಕೊಡಲು ರೆಡಿ ಇರುವುದು. ಎನ್‍ಡಿಎದಲ್ಲಿ ಸದ್ಯಕ್ಕೆ ಇದು ಅಸಾಧ್ಯ.

ಇನ್ನು ಥರ್ಡ್ ಫ್ರಂಟ್ ವಿಚಾರ. ಈ ಸಲ ಇದು ಅಸಾಧ್ಯ ಅನಿಸುತ್ತದೆ. ಯುಪಿಎ ಮತ್ತು ಎನ್‍ಡಿಎಗಳಿಂದ ಸಮಾನ ದೂರ ಕಾಯ್ದುಕೊಂಡ ಈ ಗುಂಪಿಗೆ 133 ಸೀಟು ಸಿಗಲಿವೆ. ಯುಪಿಎ ಬಾಹ್ಯ ಬೆಂಬಲ ಪಡೆಯುವ ಸಾಧ್ಯತೆಯೂ ಅಷ್ಟಾಗಿಲ್ಲ. ಯುಪಿಎ ಮತ್ತು ಎನ್‍ಡಿಎನಲ್ಲಿರುವ ಮಿತ್ರಪಕ್ಷಗಳನ್ನು ಸೆಳೆಯುವುದೂ ಕಷ್ಟ…

ಒಟ್ಟಿನಲ್ಲಿ ಮೇ 23ರ ರಾತ್ರಿ ಆಟದ ಅಂತಿಮ ಹಂತ ನಡೆಯಲಿದೆ. ಈಗ ಇದು ಯಾರ ಆಟವೂ ಅಲ್ಲ. ಕೊನೆ ಕ್ಷಣದಲ್ಲಷ್ಟೇ ಅಂತಿಮ ಸತ್ಯ ಸಿಗಲಿದೆ. ಮೊದಲಿಗೆ ರಾಷ್ಟ್ರಪತಿ ಎನ್‍ಡಿಎಗೆ ಆಹ್ವಾನಿಸುವುದಂತೂ ಖಚಿತ…
ಮೇ 23ಕ್ಕೆ ಕಾಯೋಣ…

ರಾಜಕಾರಣಿಗಳ ಎಕ್ಸಿಟ್ ಪೋಲ್: ಎನ್.ಡಿ.ಎ ಗೆ 223. ಇದೇ ಸತ್ಯಕ್ಕೆ ಹತ್ತಿರವಾ?

ಅವರೇನು ಹೇಳುತ್ತಾರೆ ನೋಡೋಣ. ವಿಡಿಯೋ ನೋಡಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...