Homeಮುಖಪುಟಹರ್ಬಲ್ ಲೈಫ್ ಪ್ರಾಡಕ್ಟ್‌ಗಳು ಔಷಧಿಗಳೇ...?

ಹರ್ಬಲ್ ಲೈಫ್ ಪ್ರಾಡಕ್ಟ್‌ಗಳು ಔಷಧಿಗಳೇ…?

ಹರ್ಬಲ್‌‌ಲೈಫ್‌‌ ಪ್ರವರ್ತಕರಲ್ಲಿ "ಮಧುಮೇಹದ ಔಷಧಿ ಬಿಟ್ಟು ಇದನ್ನೇ ಸೇವಿಸಿದರೆ ಸಾಕೇ "ಎಂದು ಪ್ರಶ್ನಿಸಿದರೆ, "ಇಲ್ಲ ಇಲ್ಲ, ಔಷಧಿಯ ಜೊತೆ ಜೊತೆಗೇ ಇದನ್ನೂ ಸೇವಿಸಿ" ಎನ್ನುತ್ತಾರೆ. ಹಾಗಾದರೆ ರೋಗಿಯೇಕೆ ಎರಡೆರಡಕ್ಕೆ ದುಡ್ಡು ವ್ಯಯಿಸಬೇಕು?

- Advertisement -
- Advertisement -

ಭಾರತದಲ್ಲಿ ಅಲೋಪತಿ, ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಮತ್ತು ನ್ಯಾಚುರೋಪತಿ ಇವಿಷ್ಟು ಔಷಧೀಯ ಪದ್ಧತಿಗಳನ್ನು ಅಂಗೀಕರಿಸಲಾಗಿದೆ. ಹಾಗೆ ನೂರಾರು ವಿಧದ ಹೊಸ ಹೊಸ ಪದ್ಧತಿಗಳು ಬಂದಿವೆಯಾದರೂ ಅವ್ಯಾವುವೂ ಮಾನ್ಯತೆ ಪಡೆದಿಲ್ಲ. ಹರ್ಬಲ್ ಲೈಫ್ ಎಂಬ ಒಂದು ಔಷಧೀಯ ಪದ್ಧತಿಯೂ ಇಲ್ಲ. ಹರ್ಬಲ್ ಲೈಫ್ ಕಂಪೆನಿಯೂ ಎಲ್ಲೂ ತನ್ನ ಪ್ರಾಡಕ್ಟ್‌ಗಳನ್ನು ನೇರವಾಗಿ ಪರ್ಯಾಯ ಔಷಧಿಗಳೆಂದು ಹೇಳಿಕೊಳ್ಳುವುದೂ ಇಲ್ಲ. ಬದಲಾಗಿ ಅದು ತನ್ನ ಪ್ರಾಡಕ್ಟ್‌ಗಳನ್ನು “ನ್ಯೂಟ್ರಿಶನ್ ಸಪ್ಲಿಮೆಂಟ್ಸ್” ಎಂದೇ ಅಧಿಕೃತವಾಗಿ ಘೋಷಿಸಿಕೊಂಡಿದೆ ಮತ್ತು ಅದು ಭಾರತ ಸರಕಾರದ ಆಹಾರ ಇಲಾಖೆಯಿಂದ ಹಾಗೆಂದೇ ಮಾನ್ಯತೆ ಪಡೆದುಕೊಂಡಿದೆ. ಬದಲಾಗಿ ಹರ್ಬಲ್ ಲೈಫ್, ಔಷಧ ನಿಯಂತ್ರಣ ಇಲಾಖೆಯಿಂದಲೋ, ಪರ್ಯಾಯ ಔಷಧೀಯ ಪದ್ಧತಿಗಳಿಗೆ ಮಾನ್ಯತೆ ನೀಡಲ್ಪಡುವ ಇನ್ಯಾವುದೋ ಔಷಧೀಯ ಇಲಾಖೆಯಿಂದಲೋ ಅನುಮತಿ ಪಡೆದಿಲ್ಲ ಮತ್ತು ಹಾಗೆ ಪಡೆದುಕೊಳ್ಳುವ ಅಗತ್ಯವೂ ಅದಕ್ಕಿಲ್ಲ.

ಈ ಮೇಲಿನ ಪೀಠಿಕೆಯನ್ನು ಓದಿಕೊಂಡು ನಾನು ಹರ್ಬಲ್ ಲೈಫ್ ಪರ ವಾದ ಮಂಡಿಸುತ್ತಿದ್ದೇನೆಂದು ಭಾವಿಸದಿರಿ. ಈಗ ವಿಷಯಕ್ಕೆ ಬರುತ್ತೇನೆ. ನನ್ನ ಪಾಲಿಕ್ಲಿನಿಕಿಗೆ ಪರೀಕ್ಷೆಗೆ ಮತ್ತು ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಅನೇಕ ಹರ್ಬಲ್ ಲೈಫ್ ತೆಗೆದುಕೊಳ್ಳುವವರು ನನ್ನಲ್ಲಿ ಅದರ ಬಗ್ಗೆ ಅಭಿಪ್ರಾಯ ಕೇಳುತ್ತಾರೆ. ಇನ್ನು ಹಲವರು ಅದನ್ನು ತೆಗೆದುಕೊಳ್ಳಬಹುದೇ ಎಂದು ಸಲಹೆ ಕೇಳುತ್ತಾರೆ. ನಾನವರಿಗೆ ನೀಡುವ ಉತ್ತರ, “ಮೊದಲನೆಯದಾಗಿ ನಾನದರ ಎಕ್ಸ್‌ಪರ್ಟ್ ಅಲ್ಲ. ಎರಡನೆಯದಾಗಿ‌ ಔಷಧಿಗಳನ್ನು ವೈದ್ಯ ಸೂಚಿಸಬೇಕೇ ಹೊರತು ಯಾವುದೋ ಕಂಪೆನಿಯ ಜಾಹೀರಾತು ನೋಡಿ ತೆಗೆದುಕೊಳ್ಳಲಿಕ್ಕಿರುವುದಲ್ಲ. ಕೊನೆಯದಾಗಿ ಯಾವುದಕ್ಕೂ ನೀವು ನಿಮ್ಮ ವೈದ್ಯರ ಸಲಹೆ ಪಡ್ಕೊಳ್ಳಿ..”

ಇದನ್ನೂ ಓದಿರಿ: ಸಾವು, ಉದ್ಯೋಗ ನಷ್ಟ, ಆತಂಕ: ಖಿನ್ನತೆ ಶಮನಕಾರಿ ಔಷಧಿಗಳ ಮಾರಾಟ ಶೇ. 23 ರಷ್ಟು ಏರಿಕೆ

ನಾನೀಗಾಗಲೇ ಬರೆದಂತೆ ಹರ್ಬಲ್ ಲೈಫ್ ಕಂಪೆನಿಯು ಎಲ್ಲೂ ಕೂಡಾ ತನ್ನ ಪ್ರಾಡಕ್ಟನ್ನು ಅಧಿಕೃತವಾಗಿ ಔಷಧಿಯೆಂದು ಘೋಷಿಸಿಲ್ಲ. ಆದರೆ ಅದರ ಫ್ರಾಂಚೈಸಿ ಹೋಲ್ಡರ್ಸ್ ಮತ್ತು ಪ್ರವರ್ತಕರು ಅದನ್ನು ಮೌಖಿಕವಾಗಿ ಔಷಧಿಯೇಂದೇ ಪ್ರಚಾರ ಮಾಡಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾರೆ. ನಿಜವಾದ ಸಮಸ್ಯೆಯಿರುವುದೇ ಇಲ್ಲಿ. ಜನರು ಬಲಿ ಬೀಳುವುದೇ ಇಲ್ಲಿ.

ಅನೇಕ ಫುಡ್ ಪ್ರಾಡಕ್ಟ್‌ಗಳ ಪೊಟ್ಟಣಗಳಲ್ಲಿ ಬರೆದಿರುವಂತೆಯೇ ಇದರ ಪೊಟ್ಟಣದ ಮೇಲೂ “ಮಧುಮೇಹ ನಿಯಂತ್ರಣಕ್ಕೆ, ರಕ್ತದೊತ್ತಡ ಕಡಿತಗೊಳಿಸಲು, ತೂಕ ಇಳಿಸಲು, ಬೊಜ್ಜು ಕರಗಿಸಲು ಇತ್ಯಾದಿ ಇತ್ಯಾದಿಗಳಿಗೆ ಸಹಕಾರಿ” ಎಂದಷ್ಟೇ ನಮೂದಿಸಿರುತ್ತಾರೆ. ಹಾಗೆ ನಮೂದಿಸುವುದರಿಂದ ಕಂಪೆನಿಗೆ ಎರಡು ವಿಧದ ಪ್ರಯೋಜನವಿದೆ. ಒಂದನೆಯದಾಗಿ ನೇರವಾಗಿ ಬರೆಯದೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು, ಎರಡನೆಯದಾಗಿ ಪರೋಕ್ಷವಾಗಿ ಇದು ಈ ಎಲ್ಲಾ ಖಾಯಿಲೆಗಳಿಗೆ ಔಷಧಿಯೆಂದು ಪ್ರಚಾರವನ್ನೂ ಮಾಡಬಹುದು.

ಇದನ್ನೇ ಇಟ್ಟುಕೊಂಡು ಫ್ರಾಂಚೈಸಿಗಳು ಮತ್ತು ಪ್ರವರ್ತಕರು ಗ್ರಾಹಕರ ಬ್ರೈನ್ ವಾಶ್ ಮಾಡುತ್ತಾರೆ. ಅವರು ಗ್ರಾಹಕರ ತಲೆ ತಿಕ್ಕಲು ಬಳಸುವ ಇನ್ನೊಂದು ಮುಖ್ಯ ಅಸ್ತ್ರ “ಅಲೋಪತಿ ಔಷಧಿಗಳ ಅಡ್ಡ ಪರಿಣಾಮಗಳು.” ಹಾಗೆ ನೋಡ ಹೋದರೆ ಅಡ್ಡ ಪರಿಣಾಮಗಳು ಎಲ್ಲಾ ಪದ್ದತಿಯ ಔಷಧಿಗಳಲ್ಲೂ ಇವೆ. ಹರ್ಬಲ್ ಲೈಫ್ ಎಂಬ ಫುಡ್ ಪ್ರಾಡಕ್ಟನ್ನು ಔಷಧಿ ಎಂದು ಪರೋಕ್ಷವಾಗಿಯಷ್ಟೇ ಬಿಂಬಿಸುತ್ತಾರಷ್ಟೇ.

PC: Indian Express

ಹರ್ಬಲ್ ಲೈಫ್ ಪ್ರಾಡಕ್ಟ್‌ಗಳಲ್ಲಿ ಅಡ್ಡ ಪರಿಣಾಮಗಳಿಲ್ವಾ ಎಂದು ನೀವು ಮರು ಪ್ರಶ್ನೆ ಹಾಕಿದರೆ “ಇದು ಔಷಧಿಯಲ್ಲ, ಇದು ನ್ಯೂಟ್ರಿಶನ್ ಸಪ್ಲಿಮೆಂಟ್ಸ್” ಎಂದು ಅವರೇ ಹೇಳುತ್ತಾರೆ. ನ್ಯೂಟ್ರಿಶನ್ ಸಪ್ಲಿಮೆಂಟ್ಸ್ ಎಂದ ಮೇಲೆ ನಿಮ್ಮ ಅಡ್ಡ ಪರಿಣಾಮದ ಪ್ರಶ್ನೆ ಮುಗಿಯುತ್ತದೆ. ಸಾಮಾನ್ಯವಾಗಿ ಇಂತಹ ಯಾವುದೇ ನ್ಯೂಟ್ರಿಶನ್ ಸಪ್ಲಿಮೆಂಟ್ಸ್ ಗ್ರಾಹಕರನ್ನು ಹಿಡಿಯಲು ಸದಾ ಬಳಸುವುದು ಜೀವನಶೈಲಿಯಾಧಾರಿತ ಖಾಯಿಲೆಗಳಾದ “ಮಧುಮೇಹ, ರಕ್ತದೊತ್ತಡ, ಅತೀ ಬೊಜ್ಜು, ಕಿಡ್ನಿ ಖಾಯಿಲೆ” ಇತ್ಯಾದಿಗಳನ್ನೇ ಆಗಿದೆ. ಏಕೆಂದರೆ ಈ ಖಾಯಿಲೆಗಳಿಗೆ ಜೀವನ ಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಜೀವನಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುವುದರಿಂದ ಅಡ್ಡ ಪರಿಣಾಮದ ಭಯ ಎಲ್ಲರಲ್ಲೂ ಇದ್ದೇ ಇರುತ್ತದೆ.

ಇದನ್ನೂ ಓದಿರಿ: ಇನ್ಸುಲಿನ್ ಎಂಬ ಹಾರ್ಮೋನ್‌ನ ಆವಿಷ್ಕಾರಕ್ಕೆ 100 ವರ್ಷ

ಹೊಸದಾಗಿ ಮಧುಮೇಹ ಪೀಡಿತರಾದವರು ಜೀವನಪೂರ್ತಿ ಔಷಧಿ ತೆಗೆದುಕೊಳ್ಳುವುದರಿಂದ ಕಿಡ್ನಿಗೆ ಸಮಸ್ಯೆಯಾಗುವುದಿಲ್ವಾ ಎಂದು ನನ್ನಲ್ಲಿ‌ ಪ್ರಶ್ನಿಸುತ್ತಾರೆ. ವಾಸ್ತವ ಏನೆಂದರೆ ಮಧುಮೇಹ ಔಷಧಿಯನ್ನು ಸಮರ್ಪಕವಾಗಿ ಬಳಸುವುದರಿಂದ ಕಿಡ್ನಿಗೆ ಸಮಸ್ಯೆಯಾಗುವುದಿಲ್ಲ. ಸರಿಯಾಗಿ ಔಷಧಿ ಸೇವಿಸದೇ ರಕ್ತದ ಸಕ್ಕರೆ ಅಂಶವು ನಿಯಂತ್ರಣ ತಪ್ಪಿ ಕಿಡ್ನಿಗೆ ಸಮಸ್ಯೆಯಾಗುತ್ತದೆ. ಮತ್ತು ಅಡ್ಡಾ ದಿಡ್ಡಿ ನೋವು ನಿವಾರಕಗಳ ಬಳಕೆಯಿಂದಲೂ ಕಿಡ್ನಿ ಖಾಯಿಲೆ ಬರಬಹುದು.

ಈ ಹರ್ಬಲ್ ಲೈಫ್‌ನ ಒಂದೇ ಪ್ರಾಡಕ್ಟ್ ಹಲವು ಖಾಯಿಲೆಗಳಿಗೆ ಔಷಧಿಯಾದರೆ ಒಬ್ಬಾತನಿಗೆ ನಿಜಕ್ಕೂ ಇರುವ ಖಾಯಿಲೆಗೆ ಮಾತ್ರ ಔಷಧಿಯಾಗಬೇಕೇ ಹೊರತು ಇಲ್ಲದ ಖಾಯಿಲೆಗಳಿಗಲ್ಲ. ಉದಾಹರಣೆಗೆ ಕೇವಲ ಮಧುಮೇಹ ಇರುವ ರೋಗಿ ಇದನ್ನು ತೆಗೆದುಕೊಂಡರೆ ಅದು ಮಧುಮೇಹಕ್ಕೆ ಔಷಧಿಯೆಂದೇ ತರ್ಕಕ್ಕೆ ಒಪ್ಪಿಕೊಳ್ಳೋಣ. ಆದರೆ ಅದರಲ್ಲಿ ಸೂಚಿಸಿರುವ ಪ್ರಕಾರ ಇತರ ಖಾಯಿಲೆಗಳಾದ ಬೊಜ್ಜು, ರಕ್ತದೊತ್ತಡವನ್ನೂ ಅದು ನಿಯಂತ್ರಿಸುತ್ತದಲ್ವಾ? ರಕ್ತದೊತ್ತಡ ಇಲ್ಲದವ ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಂಡರೆ ಆತನ ರಕ್ತದೊತ್ತಡ ಕುಸಿದು ಆತನಿಗೆ ಅದು ತೊಂದರೆ ಕೊಡಲೇಬೇಕಲ್ಲವೇ? ಹಾಗೊಂದು ವೇಳೆ ರಕ್ತದೊತ್ತಡ ಇಲ್ಲದವನ ಮೇಲೆ ಅದು ಯಾವ ಪರಿಣಾಮವನ್ನೂ ಬೀರದಿದ್ದರೆ ಅದು ಹೇಗೆ ರಕ್ತದೊತ್ತಡ ಇದ್ದವನ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ? ಒಂದು ವೇಳೆ ರಕ್ತದೊತ್ತಡ ಇಲ್ಲದವ ಸೇವಿಸಿ ಏನಾದರೂ ಆದರೆ ಅದೂ ಅಡ್ಡಪರಿಣಾಮ ತಾನೆ?

ಇದರ ಪ್ರವರ್ತಕರಲ್ಲಿ “ಮಧುಮೇಹದ ಔಷಧಿ ಬಿಟ್ಟು ಇದನ್ನೇ ಸೇವಿಸಿದರೆ ಸಾಕೇ “ಎಂದು ಪ್ರಶ್ನಿಸಿದರೆ, “ಇಲ್ಲ ಇಲ್ಲ, ಔಷಧಿಯ ಜೊತೆ ಜೊತೆಗೇ ಇದನ್ನೂ ಸೇವಿಸಿ” ಎನ್ನುತ್ತಾರೆ. ಹಾಗಾದರೆ ರೋಗಿಯೇಕೆ ಎರಡೆರಡಕ್ಕೆ ದುಡ್ಡು ವ್ಯಯಿಸಬೇಕು?

ಕೆಲವು ರೋಗಿಗಳು ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆಂದು ಮುಗ್ಧವಾಗಿ ನಂಬಿ ಔಷಧಿಯನ್ನು ಕಡಿಮೆಗೊಳಿಸುತ್ತಾರೆ ಅಥವಾ ಬಿಡುತ್ತಾರೆ. ಇದರಿಂದ ಔಷಧಿ ಸೇವನೆಯೂ ಅಸಮರ್ಪಕವಾಗಿ ಮಧುಮೇಹ ನಿಯಂತ್ರಣ ತಪ್ಪಿ ಕಿಡ್ನಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಹರ್ಬಲ್ ಲೈಫ್‌ ಪ್ರಾಡಕ್ಟ್‌‌ನ ಸೇವನೆಯಿಂದ ಕಿಡ್ನಿ ಸಮಸ್ಯೆ ಬಂತೆಂದು ವಾದಿಸಲು ನಮ್ಮಲ್ಲಿ ಸಕಾರಣಗಳಿಲ್ಲದಿದ್ದರೂ, ಇದನ್ನು ನಂಬಿ ಔಷಧಿ ತ್ಯಜಿಸಿ ಮಧುಮೇಹ ನಿಯಂತ್ರಣ ತಪ್ಪಿ‌ ಕಿಡ್ನಿ ಖಾಯಿಲೆ ಬಂತೆಂದು ಹೇಳಲು ಬೇರೆ ಕಾರಣಗಳು ಬೇಕಿಲ್ಲ.

ಇ‌ಂತಹ ಪ್ರಾಡಕ್ಟ್‌ಗಳಿಗೆ ಅತೀ ಹೆಚ್ಚು ಮಾರುಹೋಗುವುದು ವಿದ್ಯಾವಂತ ಮಧ್ಯಮ ವರ್ಗ. ಅವರು ಸ್ವಯಂವೈದ್ಯರಲ್ಲ, ಸೂಪರ್ ವೈದ್ಯರಾಗಲು ಹೋಗುವುದೇ ಹೆಚ್ಚು. ಅಂತರ್ಜಾಲದಲ್ಲಿ ಜಾಲಾಡಿ ಖಾಯಿಲೆ, ಔಷಧಿ ಮತ್ತು ಅಡ್ಡಪರಿಣಾಮದ ಬಗ್ಗೆ ಅವರು ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂಥವರು ವೈದ್ಯರಿಗಿಂತ ಅಂತರ್ಜಾಲವನ್ನೇ ಹೆಚ್ಚು ನಂಬುತ್ತಾರೆ. ಅವರು ಸದಾ ಪರ್ಯಾಯ ಔಷಧಿಗಳ ಹುಡುಕಾಟದಲ್ಲೇ ಇರುತ್ತಾರೆ.
ಅಂತರ್ಜಾಲದಲ್ಲಿ ಇಂತಹ ವಿಷಯಗಳನ್ನು ಅಪ್ಲೋಡ್ ಮಾಡುವವರು ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರಾಗಿರುವುದಿಲ್ಲ ಎಂಬ ಸತ್ಯವನ್ನು ನಾವೆಲ್ಲಾ ಅರಿತುಕೊಳ್ಳಬೇಕು.

ನಾಳೆ ಹರ್ಬಲ್ ಲೈಫ್ ತೆಗೆದುಕೊಂಡವನಿಗೆ ಕಿಡ್ನಿ ಖಾಯಿಲೆ ಬಂತೆಂದು ಹರ್ಬಲ್ ಲೈಫನ್ನು ದೂರಲಾಗುವುದಿಲ್ಲ. ಒಂದು ವೇಳೆ ಹರ್ಬಲ್ ಲೈಫ್‌ನಿಂದಾಗಿಯೇ ಕಿಡ್ನಿ ಖಾಯಿಲೆ ಬಂದರೂ ಕಂಪೆನಿಗೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅವರು ಮೊದಲೇ ಕೊರೆದಿಟ್ಟ ಕಳ್ಳ ಕಿಂಡಿಗಳಿರುತ್ತವೆ.
ನಮ್ಮ ಆರೋಗ್ಯದ ಕಾಳಜಿ ನಮ್ಮದಾಗಿರಬೇಕೇ ಹೊರತು ಅದನ್ನು ಯಾವುದೋ ಕಂಪೆನಿಯ ಮೇಲೆ ಹೊರಿಸಲಾಗದು.

ಇದನ್ನೂ ಓದಿರಿ: ಕಾಲೇಜ್‌‌ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ‘ಗೂಂಡಾ ಸಂಘಟನೆ’ಗಳಿಗೆ ಹಕ್ಕಿಲ್ಲ: ಅಲೋಶಿಯಸ್‌‌ ಬೆಂಬಲಕ್ಕೆ ನಿಂತ ಜನಪರ ಸಂಘಟನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...