Homeಕರ್ನಾಟಕಇದು ಶಿಕ್ಷಣ ಇಲಾಖೆಯೋ, ತುಘಲಕ್ ಮಾದರಿ ಆಡಳಿತವೋ?: ಡಾ.ವಿ.ಪಿ.ನಿರಂಜನಾರಾಧ್ಯ

ಇದು ಶಿಕ್ಷಣ ಇಲಾಖೆಯೋ, ತುಘಲಕ್ ಮಾದರಿ ಆಡಳಿತವೋ?: ಡಾ.ವಿ.ಪಿ.ನಿರಂಜನಾರಾಧ್ಯ

- Advertisement -
- Advertisement -

“ಶಿಕ್ಷಣ ಇಲಾಖೆಯು ತನ್ನ ಗೊಂದಲದ ನಿರ್ಧಾರಗಳಿಂದ ಹೊರಬರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇದು ಶಿಕ್ಷಣ ಇಲಾಖೆಯೋ ಅಥವಾ ತುಘಲಕ್ ಮಾದರಿ ಆಡಳಿತವೋ ತಿಳಿಯುತ್ತಿಲ್ಲ” ಎಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸಂಸ್ಥಾಪಕ ಮಹಾಪೋಷಕರಾದ ಡಾ.ವಿ.ಪಿ.ನಿರಂಜನಾರಾಧ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಠ್ಯದಿಂದ ಹೊರಗಿಡಲಾಗಿದ್ದ ಪಾಠ, ಪದ್ಯಗಳನ್ನು ಮತ್ತೆ ಸೇರಿಸಲು ಸುತ್ತೋಲೆ ಹೊರಡಿಸಿರುವುದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಮಕ್ಕಳ ಪ್ರವೇಶ ವಯಸ್ಸು, 5 ಹಾಗೂ 8ನೇ ತರಗಳಿಗೆ ಪಬ್ಲಿಕ್ ಪರೀಕ್ಷೆ, ಉಚಿತ ಕಡ್ಡಾಯ ಶಿಕ್ಷಣಕ್ಕೆ ಸಂವಿಧಾನ ಬಾಹಿರವಾಗಿ ಪಾಲಕರಿಂದ ಶುಲ್ಕ, ಇತ್ಯಾದಿ ಮಕ್ಕಳ ಹಾಗೂ ಪಾಲಕ ವಿರೋಧಿ ತೀರ್ಮಾನಗಳಿಗೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆಯಲಾಗಿತ್ತು. ಇದು ಮಕ್ಕಳು ಹಾಗೂ ಪಾಲಕರ ಮನಸ್ಸಿನಲ್ಲಿ ಇನ್ನು ಹಸಿಯಾಗಿರುವ ಬೆನ್ನಲ್ಲೇ ಮತ್ತೊಂದು ಹೊಸ ವಿವಾದಿತ ಸುತ್ತೋಲೆಯನ್ನು ಇಲಾಖೆ ಹೊರಡಿಸಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಹೊಸ ಸುತ್ತೋಲೆ ಅನ್ವಯ ಈ ಹಿಂದೆ ಮೌಲ್ಯಮಾಪನದಿಂದ ಕೈಬಿಟ್ಟಿದ್ದ ಪಾಠಗಳನ್ನು ಮತ್ತೆ ಸೇರಿಸುವ ಮೂಲಕ ಮಕ್ಕಳು ಪಾಲಕರಲ್ಲಿ ಗೊಂದಲ ಸೃಷ್ಟಿಸಿದೆ. ಈ ಹಿಂದೆ 10ನೇ ತರಗತಿ ಮತ್ತು ಇತರ ಕೆಲವು ತರಗತಿಗಳ ಕನ್ನಡ ಪಠ್ಯಗಳ ಕೆಲವು ಪಾಠಗಳನ್ನು, ಲೇಖಕರು ಪಠ್ಯ ಪರಿಷ್ಕರಣಾ ವಿವಾದದ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಸ್ವಾಮ್ಯವನ್ನು ಹಿಂತೆಗೆದುಕೊಂಡಿದ್ದರು. ಆದ ಕಾರಣ ಪಠ್ಯದಿಂದ ಕೈಬಿಟ್ಟು ಕಲಿಕೆ ಹಾಗೂ ಮೌಲ್ಯಮಾಪನಕ್ಕೆ
ಪರಿಗಣಿಸಬಾರದೆಂದು ಸುತ್ತೋಲೆ ಹೊರಡಿಸಲಾಗಿತ್ತು. ಅದರಂತೆ ಆ ಪಾಠಗಳನ್ನು ಶಿಕ್ಷಕರು ಕಲಿಕೆ ಮತ್ತು ಮೌಲ್ಯಮಾಪನ ಪರಿಧಿಯಿಂದ ಹೊರಗಿಟ್ಟಿದ್ದರು. ಈಗ ಸರ್ಕಾರ ಮತ್ತೊಮ್ಮೆ ಸುತ್ತೋಲೆಯನ್ನು ಹೊರಡಿಸಿ ಈ ಹಿಂದೆ ಕೈ ಬಿಟ್ಟ ಪಾಠಗಳನ್ನು ಮತ್ತೆ 2022-23ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಬೋಧನೆ ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಹೇಳಿದೆ. ಈ ಪಾಠಗಳನ್ನು ಮತ್ತೆ ಬೋಧನೆ ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಹೊರಡಿಸಿರುವ ಈ ಸುತ್ತೋಲೆ ಮಕ್ಕಳಲ್ಲಿ, ಪೋಷಕರಲ್ಲಿ ಹಾಗೂ ಶಿಕ್ಷಕರಲ್ಲಿ ಗೊಂದಲ ಉಂಟುಮಾಡಿದೆ. ಇದು ಶಿಕ್ಷಣ ಇಲಾಖೆಯೋ ಅಥವಾ ತುಘಲಕ್ ಮಾದರಿ ಆಡಳಿತವೋ ತಿಳಿಯುತ್ತಿಲ್ಲ” ಎಂದು ಟೀಕಿಸಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಈಗಾಗಲೇ ಕನ್ನಡ ಕಲಿಯುವ ಮಕ್ಕಳಲ್ಲಿ ಕನ್ನಡದ ಪಾಠಗಳು ನಿರಾಸಕ್ತಿಯನ್ನು ಉಂಟು ಮಾಡಿದ್ದು, ‘ಹೆಚ್ಚು ಪಾಠಗಳಿರುವ ಭಾಷೆ ಕನ್ನಡ ಎಂತಲೂʼ, ಈ ಪಾಠಗಳನ್ನು ಶಿಕ್ಷಕರು ಒಂದು ಶೈಕ್ಷಣಿಕ ಅವಧಿಯಲ್ಲಿ ಕಲಿಸಲು ಅಸಾಧ್ಯವೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

“ಅಲ್ಲದೆ 2021-22ನೇ ಸಾಇನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಆರು ವಿಷಯಗಳ ಪ್ರಗತಿ ನೋಡಿದಾಗ, ಪ್ರಥಮ ಭಾಷೆ ಕನ್ನಡದ ಫಲಿತಾಂಶ 4ನೇ ಸ್ಥಾನಕ್ಕೆ ಕುಸಿದಿದೆ. ಮಕ್ಕಳು ಮತ್ತು ಪೋಷಕರು ಪ್ರಥಮ ಭಾಷೆ ಕನ್ನಡ ಆಯ್ಕೆಯಿಂದ ವಿಮುಖರಾಗಿ ಭಾಷೆಗಳನ್ನು ಅಂಕಗಳಿಕೆ ದೃಷ್ಟಿಯಿಂದ ಇತರ ಭಾಷೆಗಳಾದ ಸಂಸ್ಕೃತ , ಇಂಗ್ಲಿಷ್, ಹಿಂದಿ ಆಯ್ಕೆ ಮಾಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಸುತ್ತೋಲೆ ಹೊರಡಿಸಿ ವಾಪಸ್‌ ಪಡೆಯುವ ಸರ್ಕಾರ: ಒಂದೇ ತಿಂಗಳಲ್ಲಿ ಮೂರು ಪ್ರಕರಣ

‘ಕನಿಷ್ಠ ಪಠ್ಯ ಗರಿಷ್ಠ ಕಲಿಕೆ’ ಎಂಬ ತತ್ವದ ಆಧಾರದಲ್ಲಿ ಮಕ್ಕಳಲ್ಲಿ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿರುವ ಈ ಸಂದರ್ಭದಲ್ಲಿ ಮತ್ತೆ ಕೈಬಿಟ್ಟ ಪಾಠಗಳನ್ನು ಕಲಿಯಿರಿ ಎಂದು ಹೊರಡಿಸಿರುವ ಈ ಸುತ್ತೋಲೆ ಮಕ್ಕಳು ಹಾಗು ಪಾಲಕರಲ್ಲಿ ಆತಂಕ ಮೂಡಿಸಿದೆ. ಜೊತೆಗೆ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಇಂಥಹ ತೀರ್ಮಾನ ಸ್ವಾಭಾವಿಕವಾಗಿ ಮಕ್ಕಳು ಹಾಗು ಪಾಲಕರಲ್ಲಿ ಆತಂಕ ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಈ ರೀತಿ ಮಕ್ಕಳ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಈ ಕೂಡಲೇ ಹಿಂದಿನ ತೀರ್ಮಾನಕ್ಕೆ ಬದ್ಧವಾಗಿ ಮೌಲ್ಯಮಾಪನ/ಪರೀಕ್ಷೆ ಸರಳಗೊಳಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದೆ. ಈಗಾಗಲೇ ಪಠ್ಯದಿಂದ ಕೈಬಿಟ್ಟ ಪಠ್ಯಗಳನ್ನು ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬಾರದೆಂದು ಹೊರಡಿಸಿದ್ದ ಸುತ್ತೋಲೆಯನ್ನು ಮಾನ್ಯಗೊಳಿಸಿ ಮಕ್ಕಳ ಆತಂಕವನ್ನು ದೂರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...