Homeಕರ್ನಾಟಕವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ...

ವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ…

- Advertisement -
- Advertisement -

ನೆರೆಮನೆಯ ಶಾಂತಮ್ಮ, ಎದುರು ಮನೆ ಅಣ್ಣು ಅಣ್ಣ, ಹಿಂಬದಿ ಮನೆ ಪೊರ್ಬುಲೇ… ನಮಸ್ಕಾರ…

ಮುಸಲ್ಮಾನರೆಂಬ ಏಕೈಕ ಕಾರಣಕ್ಕಾಗಿ ನಮ್ಮನ್ನು ದೇಶದಿಂದ ಹೊರ ಹಾಕುವ ಅಥವಾ ಡಿಟೆನ್ಷನ್ ಸೆಂಟರ್ ಗೆ ಹಾಕುವ ಹುನ್ನಾರ ನಡೀತಾ ಇರುವ ಬಗ್ಗೆ ನಿಮಗೆ ತಿಳಿದಿರಬಹುದು. ಇದರಿಂದ ಮುಸಲ್ಮಾನರಿಗೆ, ಹಿಂದುಗಳಿಗೆ ಏನೂ ಆಗುವುದಿಲ್ಲವೆಂದು ನಿಮ್ಮನ್ನು ನಂಬಿಸಿರಬಹುದು. ನೀವು ನೋಟ್ ಬ್ಯಾನ್, ಜಿಎಸ್ಟಿ, ಕಪ್ಪು ಹಣದಂತೆ ಇದನ್ನು ನಂಬಿರಲೂ ಬಹುದು. ಪರವಾಗಿಲ್ಲ ನಾನು ಹೋಗಲು ಸಿದ್ದನಿದ್ದೇನೆ. ಆದರೆ ನೀವು ನನ್ನನ್ನು ಹೋಗು ಎಂದರೆ ಮಾತ್ರ ಮರು ಮಾತಿಲ್ಲದೆ ನಿಮಗೆ ನಾನಿಲ್ಲದೆ ಸಂತೋಷ ,ನೆಮ್ಮದಿ ಮತ್ತಷ್ಟು ಹೆಚ್ಚು ಸಿಗುವುದಾದರೆ ಹೋಗಲು ಸಿದ್ದ. ಇದುವರೆಗೂ ಒಂದೇ ತಂದೆ ತಾಯಿಯ ಮಕ್ಕಳಂತೆ ಬದುಕಿದ್ದೇವೆ. ಸುಖ ದುಃಖ ಸಂತೋಷ ಸಂಭ್ರಮ ಹಂಚಿದ್ದೇವೆ. ನನ್ನ ನಿರ್ಗಮನದಿಂದ ನಿಮಗೆ ಮತ್ತಷ್ಟು ಸಂತೋಷ ಸಂಭ್ರಮ ಸಿಗುವುದಾದರೆ ಅದಕ್ಕಿಂತ ದೊಡ್ಡ ಪುಣ್ಯ ಮತ್ತೇನಿದೆ.

ಆದರೆ ಕುರ್ಚಿಗಾಗಿ, ಅಧಿಕಾರಕ್ಕಾಗಿ, ರಾಜಕೀಯದವರು ನನ್ನನ್ನು ಹೋಗಲು ಹೇಳಿದರೆ ಅದನ್ನು ಸ್ವೀಕರಿಸಲು ತಯಾರಿಲ್ಲ. ದೇಶದಲ್ಲಿ ಬದುಕಲು ಬಿಡದಿದ್ದರೂ ಸತ್ತು ದೇಶದ ಋಣ ತೀರಿಸುವೆ.
ನಿಮ್ಮೊಂದಿಗೆ ದ್ವೇಷ ಮಾಡಿ, ಪರಸ್ಪರ ನಾವು ವಿಭಜನೆಗೊಂಡು ಹೋಗಲು ನಾನು ಬಿಲ್ಕುಲ್ ಒಪ್ಪಲಾರೆ….

ನೀವು ಪ್ರೀತಿ ಪೂರ್ವಕ ಹೋಗು ಎಂದರೆ ಆ ಕ್ಷಣದಿಂದ ನಾನು ನಿಮ್ಮಿಂದ ದೂರ ಕಾಣದೂರಿಗೆ ಹೋಗಲು ತಯಾರಿದ್ದೇನೆ. ಜತೆ ಜತೆಯಲ್ಲಿ ಆಡಿ, ಹಾಡಿ ಬೆಳೆದ ನಾನು ಇಷ್ಟಾದರೂ ತ್ಯಾಗ ಮಾಡದಿದ್ದರೆ ನಾನು ಒಬ್ಬ ಮನುಷ್ಯನಾ?..

ಇನ್ನು ಪೌರತ್ವ ಕಾಯಿದೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಪದೇ ಪದೇ ಮನವರಿಕೆ ಮಾಡಿಯಾರು. ಆದರೆ ದೇವರ ಮೇಲೆ ಆಣೆ ಹಾಕಿ ಹೇಳುತ್ತೇನೆ ಇದರಿಂದ ನಮ್ಮ ನಡುವಿನ ಪ್ರೀತಿ, ವಾತ್ಸಲ್ಯ, ಸೌಹಾರ್ದ ಹಾಳಾಗುವುದಂತೂ ಖಂಡಿತಾ. ರಾಜಕೀಯ ಪಕ್ಷದವರಿಗೆ ಬೇಕಾದದ್ದು ಕೂಡ ಇದೆ. ಕಳೆದ ಹಲವು ದಶಕಗಳಿಂದ ನಾವು ಅನುಭವಿಸುತ್ತಾ ಬಂದಿದ್ದೇವೆ. ನಿಜ ತಾನೇ..

ಹುಟ್ಟಿದ ಮೇಲೆ ಸಾಯುವುದು ಶತಸಿದ್ದ. ಆದರೆ ಎಲ್ಲಿ ಹುಟ್ಟಬೇಕು, ಯಾವ ತಾಯಿಯ ಗರ್ಭದಲ್ಲಿ ಹುಟ್ಟಬೇಕು, ಯಾವ ಧರ್ಮದಲ್ಲಿ ಹುಟ್ಟಬೇಕು ಹಾಗೆಯೇ ಎಲ್ಲಿ ಸಾಯಬೇಕು, ಯಾವಾಗ ಸಾಯಬೇಕು ನಾವು ತೀರ್ಮಾನಿಸಲಿಲ್ಲ. ತೀರ್ಮಾನಿಸುವ ಹಕ್ಕು ನಮಗಿಲ್ಲ. ಅದು ದೇವನ ಇಚ್ಚೆ. ಅವನ ತೀರ್ಮಾನ. ಧರ್ಮಗಳು ಯಾವುದೇ ಇರಲಿ ಮನುಷ್ಯ ಧರ್ಮ ಮೊದಲು. ಆದರೆ ಬರಬರುತ್ತಾ ಸ್ವಾರ್ಥ ರಾಜಕಾರಣಿಗಳ ಮಂಕು ಮರಳು ಮಾತಿಗೆ ಬಲಿಯಾದೆವು. ಹರಕೆಯ ಕುರಿಯಾದೆವು. ನೂರಾರು ಘಟನೆಗಳು ಪುನರಾವರ್ತಿಸಿಯೂ ನಾವು ಮರಳಿ ಮನುಷ್ಯ ಧರ್ಮದತ್ತ, ಮನುಜ ಮತದತ್ತ ಮರಳಲಿಲ್ಲ. ಮರಳಲಾರದಷ್ಟು ದೂರ ನಾವು ಸಾಗಿ ಆಗಿದೆ.. ಏನೇ ಇರಲಿ ನಿಮ್ಮ ಪ್ರೀತಿ, ಸಹಕಾರ, ಆರ್ಥಿಕ ಸಹಾಯ, ನಿಮ್ಮ ಮಮತೆ ಎಂದೂ ಮರೆಯಲಾಗದು.

ಅದರ ಋಣ ತೀರಿಸಲೂ ಆಗದು. ನೀವು ಜಾತಿ ಧರ್ಮವನ್ನು ನೋಡದೆ ಜತೆ ಜತೆಯಾಗಿ ಒಂದೇ ಮನೆಯ ಕುಟುಂಬವಾಗಿ ಬದುಕಿದ ದಿನಗಳು ಮುಂದೆ ಮರೀಚಿಕೆಯಷ್ಟೇ. ಮತ್ತೊಮ್ಮೆ ನೀನು ಇಲ್ಲಿಂದ ಹೋಗು ಎಂದರೆ ಮಾತನಾಡದೇ ಉಟ್ಟ ಉಡುಗೆಯಲ್ಲಿ ಹೋಗಲು ನಾನು ತಯಾರು… ಆದರೆ ಸ್ವಾರ್ಥ ರಾಜಕಾರಣಿಗಳು ಹೇಳಿದರೆ ಬದುಕಲಾಗದಿದ್ದರೆ ಸಾಯಲು ನಾನು ತಯಾರು. ಬೀತಿಯಿಲ್ಲ,ಭಯವಿಲ್ಲ, ದೇಶವೇನು ಒಂದು ದಿನ ದೇಹವನ್ನೇ ಬಿಟ್ಟು ಹೋಗುವವರು…

ಅಂದು ನಾವು ನೆಟ್ಟು ಪೋಷಿಸಿದ ಸೌಹಾರ್ದ ಗಿಡ ಇಂದು ಮರವಾಗಿದೆ. ಇಂದು ಕಟುಕರು ಮರದ ಬುಡವ ಕತ್ತರಿಸಲು ಬಂದಿದ್ದಾರೆ. ಹೃದಯ ತುಂಡಾಗಿದೆ. ಮನಸ್ಸು ಮಲಿನಲಾಗಿದೆ..

ಸಂಜೆ ಆದಾಗ ಕಡಲಲ್ಲಿ ರವಿ ಮರೆಯಾದಂತೆ ನಿಮಗಾಗಿ ನಿಮ್ಮ ನೆನಪಲ್ಲಿ ನಾನೂ ಮರೆಯಾಗುತ್ತೇನೆ. ಕಡಲ ತೆರೆ ಶಾಂತವಾಗಿ ಸದಾ ನರ್ತಿಸುತ್ತಿರಲಿ. ಕೋಮುವಾದದ ಸುನಾಮಿಯಲ್ಲಿ ದೇಶ ಬರ್ಬಾದ್ ಆಗದಿರಲಿ. ಇದೇ ನನ್ನ ಪ್ರಾರ್ಥನೆ, ಇದೇ ನನ್ನ ಹಾರೈಕೆ. ಕೊನೆಗೂ ಒಂದು ವಿನಂತಿ…. ನನ್ನದು ಎನ್ನುವ ದೇಶದಲ್ಲಿ ನನ್ನ ಪುಟ್ಟ ಅರಮನೆಯೊಂದಿದೆ. ನಿಮಗೆ ಅಗತ್ಯವಿಲ್ಲದಿದ್ದರೆ ಅದನ್ನು ಬಡಬಗ್ಗರಿಗೆ, ಅಲೆಮಾರಿಗಳಿಗೆ, ರೋಡ್ ಸೈಡಲ್ಲಿ ಮಲಗುವವರಿಗೆ, ದರಿದ್ರರಿಗೆ ನೀಡಿಬಿಡಿ.

ಪ್ರೀತಿ ಸದಾ ಇರಲಿ.
ಜಲೀಲ್ ಮುಕ್ರಿ.

(ಜಲೀಲ್‌ ಮುಕ್ರಿಯವರ ಫೇಸ್‌ಬುಕ್‌ ಗೋಡೆಯಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...