ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್ “ನಿಮ್ಮ ಕಾಶ್ಮೀರವನ್ನು ಲೂಟಿ ಮಾಡಿದ ಭ್ರಷ್ಟರನ್ನು ಕೊಲ್ಲುವುದನ್ನು ಬಿಟ್ಟು ರಕ್ಷಣಾ ದಳಗಳನ್ನೇಕೆ ಕೊಲ್ಲುತ್ತೀರಿ?” ಎಂದು ಉಗ್ರರಿಗೆ ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ಇವರ ಈ ಹೇಳಿಕೆಗೆ ಭಾರೀ ಪ್ರತಿರೋಧ ವ್ಯಕ್ತವಾಗಿದೆ.
“ಮೇಲ್ನೋಟಕ್ಕೆ ಜವಾಬ್ದಾರಿಯುತನಂತೆ ಕಾಣುವ, ಸಾಂವಿಧಾನಿಕ ಸ್ಥಾನವನ್ನು ಹೊಂದಿರುವ ಈ ವ್ಯಕ್ತಿ, ಭ್ರಷ್ಟರೆಂದು ಭಾವಿಸಲಾದ ರಾಜಕಾರಣಿಗಳನ್ನು ಕೊಲ್ಲಲು ಉಗ್ರರಿಗೆ ಹೇಳುತ್ತಾನೆ. ಈತನು ಈ ಕಾನೂನುಬಾಹಿರ ಹತ್ಯೆಗಳು ಮತ್ತು ಕಾಂಗರೂ ನ್ಯಾಯವನ್ನು ಕೊಡುವ ಮೊದಲು, ಈ ದಿನಗಳಲ್ಲಿ ದೆಹಲಿಯಲ್ಲಿ ತನಗಿರುವ ಸ್ವಂತ ಖ್ಯಾತಿಯ ಬಗ್ಗೆ ಈ ಮನುಷ್ಯ ತಿಳಿದುಕೊಳ್ಳಬೇಕು” ಎಂದು ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಓಮರ್ ಅಬ್ದುಲ್ಲಾ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
This man, ostensibly a responsible man occupying a constitutional position, tells militants to kill politicians perceived to be corrupt. Perhaps the man should find out about his own reputation in Delhi these days before sanctioning unlawful killings & kangaroo courts. https://t.co/bsa9khBjkC
— Omar Abdullah (@OmarAbdullah) July 21, 2019
ಕಾರ್ಗಿಲ್ ನಲ್ಲಿ ಪ್ರವಾಸೋಧ್ಯಮವನ್ನು ಪ್ರಚುರಪಡಿಸುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಜ್ಯಪಾಲರು “ಏಕೆ ಅಮಾಯಕರನ್ನು ಕೊಲ್ಲುತ್ತೀರಿ? ಎಂದು ಹೇಳಿದ್ದಾರೆ. ಈ ಯುವಕರ ಕೈಯಲ್ಲಿ ಗನ್ ಗಳಿವೆ. ಅದರಿಂದ ರಕ್ಷಣಾ ದಳಗಳನ್ನೇಕೆ ಕೊಲ್ಲುತ್ತೀರಿ? ಕಾಶ್ಮೀರವನ್ನು ಲೂಟಿ ಮಾಡಿದವರನ್ನು ಕೊಲ್ಲಿ. ಯಾಕೆ ಇದುವರೆಗೂ ಲೂಟಿ ಮಾಡಿದವರನ್ನು ಕೊಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮುಖ್ಯವಾಹಿನಿ ರಾಜಕಾರಣಿಗಳು ಇಲ್ಲೊಂದು ಹೇಳುತ್ತಾರೆ, ದೆಹಲಿಯಲ್ಲೊಂದು ಹೇಳುತ್ತಾರೆ ಅವರನ್ನೇ ಕೊಲ್ಲಬೇಕೆಂದು ಪರೋಕ್ಷವಾಗಿ ರಾಜ್ಯಪಾಲರು ಕಿಡಿಕಾರಿದ್ದಾರೆ.