Homeಮುಖಪುಟರಕ್ಷಣಾ ದಳಗಳನ್ನೇಕೆ ಕೊಲ್ಲುತ್ತೀರಿ? ಬದಲಿಗೆ ಭ್ರಷ್ಟರನ್ನು ಕೊಲ್ಲಿ: ಉಗ್ರರಿಗೆ ಸಲಹೆ ನೀಡಿದ ರಾಜ್ಯಪಾಲ

ರಕ್ಷಣಾ ದಳಗಳನ್ನೇಕೆ ಕೊಲ್ಲುತ್ತೀರಿ? ಬದಲಿಗೆ ಭ್ರಷ್ಟರನ್ನು ಕೊಲ್ಲಿ: ಉಗ್ರರಿಗೆ ಸಲಹೆ ನೀಡಿದ ರಾಜ್ಯಪಾಲ

- Advertisement -
- Advertisement -

ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲ್ಲಿಕ್ “ನಿಮ್ಮ ಕಾಶ್ಮೀರವನ್ನು ಲೂಟಿ ಮಾಡಿದ ಭ್ರಷ್ಟರನ್ನು ಕೊಲ್ಲುವುದನ್ನು ಬಿಟ್ಟು ರಕ್ಷಣಾ ದಳಗಳನ್ನೇಕೆ ಕೊಲ್ಲುತ್ತೀರಿ?” ಎಂದು ಉಗ್ರರಿಗೆ ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ಇವರ ಈ ಹೇಳಿಕೆಗೆ ಭಾರೀ ಪ್ರತಿರೋಧ ವ್ಯಕ್ತವಾಗಿದೆ.

“ಮೇಲ್ನೋಟಕ್ಕೆ ಜವಾಬ್ದಾರಿಯುತನಂತೆ ಕಾಣುವ, ಸಾಂವಿಧಾನಿಕ ಸ್ಥಾನವನ್ನು ಹೊಂದಿರುವ ಈ ವ್ಯಕ್ತಿ, ಭ್ರಷ್ಟರೆಂದು ಭಾವಿಸಲಾದ ರಾಜಕಾರಣಿಗಳನ್ನು ಕೊಲ್ಲಲು ಉಗ್ರರಿಗೆ ಹೇಳುತ್ತಾನೆ. ಈತನು ಈ ಕಾನೂನುಬಾಹಿರ ಹತ್ಯೆಗಳು ಮತ್ತು ಕಾಂಗರೂ ನ್ಯಾಯವನ್ನು ಕೊಡುವ ಮೊದಲು, ಈ ದಿನಗಳಲ್ಲಿ ದೆಹಲಿಯಲ್ಲಿ ತನಗಿರುವ ಸ್ವಂತ ಖ್ಯಾತಿಯ ಬಗ್ಗೆ ಈ ಮನುಷ್ಯ ತಿಳಿದುಕೊಳ್ಳಬೇಕು” ಎಂದು ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಓಮರ್ ಅಬ್ದುಲ್ಲಾ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಗಿಲ್ ನಲ್ಲಿ ಪ್ರವಾಸೋಧ್ಯಮವನ್ನು ಪ್ರಚುರಪಡಿಸುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಜ್ಯಪಾಲರು “ಏಕೆ ಅಮಾಯಕರನ್ನು ಕೊಲ್ಲುತ್ತೀರಿ? ಎಂದು ಹೇಳಿದ್ದಾರೆ. ಈ ಯುವಕರ ಕೈಯಲ್ಲಿ ಗನ್ ಗಳಿವೆ. ಅದರಿಂದ ರಕ್ಷಣಾ ದಳಗಳನ್ನೇಕೆ ಕೊಲ್ಲುತ್ತೀರಿ? ಕಾಶ್ಮೀರವನ್ನು ಲೂಟಿ ಮಾಡಿದವರನ್ನು ಕೊಲ್ಲಿ. ಯಾಕೆ ಇದುವರೆಗೂ ಲೂಟಿ ಮಾಡಿದವರನ್ನು ಕೊಂದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮುಖ್ಯವಾಹಿನಿ ರಾಜಕಾರಣಿಗಳು ಇಲ್ಲೊಂದು ಹೇಳುತ್ತಾರೆ, ದೆಹಲಿಯಲ್ಲೊಂದು ಹೇಳುತ್ತಾರೆ ಅವರನ್ನೇ ಕೊಲ್ಲಬೇಕೆಂದು ಪರೋಕ್ಷವಾಗಿ ರಾಜ್ಯಪಾಲರು ಕಿಡಿಕಾರಿದ್ದಾರೆ.

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...