Homeಕರ್ನಾಟಕಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

ಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

- Advertisement -
- Advertisement -

ಜನವಾಹಿನಿಯ ನೆನಪುಗಳು: ಭಾಗ-5

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಕನ್ನಡ ಮುದ್ರಣದ ಹೊಸ ಶಕೆಯನ್ನು ಆರಂಭಿಸಿದ್ದು ಬಾಸೆಲ್ ಮಿಷನ್. ಕನ್ನಡ, ತುಳು ಭಾಷೆಗಳಲ್ಲಿ ಕ್ರೈಸ್ತ ಸ್ತೋತ್ರಗಳು, ಮೊದಲ ಪದಕೋಶಗಳು, ವ್ಯಾಕರಣ ಗ್ರಂಥಗಳು ಮತ್ತು ಮೊದಲ ಕನ್ನಡ ಪತ್ರಿಕೆ ’ಮಂಗಳೂರ ಸಮಾಚಾರ’ವನ್ನು ಪ್ರಕಟಿಸಿದ್ದು ಕೂಡಾ ಬಾಸೆಲ್ ಮಿಷನ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂತದ್ದು. ರೆವರೆಂಡ್ ಕಿಟ್ಟೆಲ್ ಅವರ ಕನ್ನಡ ನಿಘಂಟಿನ ಬಗ್ಗೆ ಗೊತ್ತಿಲ್ಲದವರು ಕಡಿಮೆ.

ಮಂಗಳೂರಿನ ಬಲ್ಮಠದಲ್ಲಿ ಅಶೋಕವರ್ಧನ ಅವರ ’ಅತ್ರಿ ಬುಕ್ ಸೆಂಟರ್’ ಇತ್ತು. ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಅದು ದೇವಾಲಯ. ಈಗದು ’ನವಕರ್ನಾಟಕ’ವಾಗಿದೆ. ಇದರ ಹಿಂಭಾಗದಲ್ಲಿ ಎತ್ತರದ ಕಟ್ಟಡಗಳ ಸಾಲುಗಳ ಹಿಂದೆ ಮೂರು ನಾಲ್ಕು ಕಡೆ ಪ್ರವೇಶ ಇರುವ ಒಂದು ಅತ್ಯಂತ ವಿಶಾಲವಾದ ಬಾಸೆಲ್ ಮಿಷನ್ ಕಂಪೌಂಡ್ ಇದೆ ಎಂದು ಅನೇಕರಿಗೆ ತಲೆಗೇ ಹೋಗದು. ಅನೇಕ ಶಿಕ್ಷಣ ಸಂಸ್ಥೆಗಳು ಅಲ್ಲಿ ಕಾರ್ಯಾಚರಿಸುತ್ತಿವೆ. ಕನ್ನಡದ ಮಟ್ಟಿಗೆ ಐತಿಹಾಸಿಕವಾದ ಕೆಲವು ಸಭಾಂಗಣಗಳಲ್ಲಿ ಒಂದರಲ್ಲಿ ’ಜನವಾಹಿನಿ’ಯ ಸಂದರ್ಶನ ಮತ್ತು ತರಬೇತಿ ಪ್ರಕ್ರಿಯೆ ನಡೆಯಿತೆಂಬುದು ವಿಶೇಷ.

ಒಂದು ಬೆಳಿಗ್ಗೆ ಅಲ್ಲಿ ಕಾಲೇಜು ವಿದ್ಯಾರ್ಥಿಗಳಂತೆ ಕಾಣುವ ನೂರಾರು ವಿದ್ಯಾರ್ಥಿಗಳು ನೆರೆದಿದ್ದರು. ನಾವು ಸಂಪಾದಕೀಯ ಕೋರ್ ಗ್ರೂಪಿಗೆ ಸಂಭ್ರಮ! ನಮ್ಮದೇ ಪಾರುಪತ್ಯ. ನಮ್ಮದೇ ನಾಯಕತ್ವದಲ್ಲಿ ಪತ್ರಿಕಾ ರಂಗದಲ್ಲಿ ಹೊಸದೇನನ್ನಾದರೂ ಮಾಡಲು ಹೊರಟಿದ್ದ ಯುವ ಶಕ್ತಿ! ನಾವು ಅವರನ್ನು ಗಮನಿಸುತ್ತಾ, ಸಲಹೆ ಸೂಚನೆಗಳನ್ನು ಕೊಡುತ್ತಾ ಓಡಾಡುತ್ತಿದ್ದೆವು. ವಿದ್ವಾಂಸ ಮತ್ತು ಒಂದು ರೀತಿಯಲ್ಲಿ ಕ್ರಾಂತಿಕಾರಿ ಪಾದ್ರಿ ಎಂದೇ ಗುರುತಿಸಲಾಗುತ್ತಿದ್ದ ವಿಲಿಯಂ ದಸಿಲ್ವಾ ಅವರ ಗಂಭೀರ ವ್ಯಕ್ತಿತ್ವಕ್ಕೆ ನಾವೇ ಒಂದು ರೀತಿಯ ಗೌರವ ತುಂಬಿದ ಭಾವದಿಂದ ಇದ್ದೆವು. ಹೀಗಿರುವಾಗ ಈ ಯುವಜನರು ಭಯಾತಂಕದಿಂದ ಇದ್ದದ್ದರಲ್ಲಿ ಅಚ್ಚರಿಯೇನಿರಲಿಲ್ಲ.

ಒಳಗೆ ಅವರು, ಆಡಳಿತ ನಿರ್ದೇಶಕ ಸ್ಯಾಮ್ಯುಯೆಲ್ ಸಿಕ್ವೇರಾ ಮತ್ತು ಸಂಪಾದಕ ಬಾಲಕೃಷ್ಣ ಗಟ್ಟಿ ಇದ್ದರು. ಆಗ ಮೊದಲು ಒಳಗೆ ನಾವು ಹುರಿದುಂಬಿಸಿ ಕಳಿಸಿದ್ದು ಒಳ್ಳೆಯ ಕ್ರಿಕೆಟಿಗನಾಗಿದ್ದ, ಚಿಕ್ಕ ದೇಹದ ಹುಡುಗ ಗಿರೀಶ್ ಬಜ್ಪೆಯನ್ನು- ಅದೂ ಓಪನಿಂಗ್ ಬ್ಯಾಟ್ಸ್‌ಮನ್ ಎಂದು ಛೇಡಿಸಿ!

ಮೂಲತಃ ಈ ಹುಡುಗ ಪಳಗಿದ್ದುದು ಡಿಟಿಪಿಯಲ್ಲಿ. ಹಿಂದೆ ನಾನು ಕೆಲಸ ಮಾಡುತ್ತಿದ್ದ ’ಕರಾವಳಿ ಅಲೆ’ ಸಂಜೆ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸ್ವಲ್ಪ ಇದ್ದವರು. ಸ್ವಲ್ಪ ಹೊತ್ತಿನಲ್ಲಿ ಅವರು ಹೊರಗೆ ಬಂದು ಬಾಯಗಲ ನಗುತ್ತಾ ಹೆಬ್ಬೆರಳು ಮೇಲೆತ್ತಿದಾಗ ನಮ್ಮಗೆಲ್ಲಾ ಖುಶಿ- ಸಂಪಾದಕೀಯ ವಿಭಾಗದ ಎರಡನೇ ತಂಡದ ಮೊದಲ ಆಯ್ಕೆ ನಡೆದಿತ್ತು. ಕೆಲವರು ಏನಾಯಿತು, ಏನು ಕೇಳಿದರು ಎಂದು ಉಳಿದವರು ವಿಚಾರಿಸುತ್ತಿದ್ದರು.

ವಾಸ್ತವಿಕವಾಗಿ ಒಳಗಿನ ಸಂದರ್ಶನ ಮನಃಶಾಸ್ತ್ರೀಯವಾಗಿ ನಡೆಯುತ್ತಿತ್ತೆಂದು ನಮಗೆ ಗೊತ್ತಿತ್ತು. ಅತ್ಯಂತ ಮೇಲ್ಮಟ್ಟದ ಬುದ್ಧಿವಂತಿಕೆಯ ಸಂದರ್ಶಕರು ಒಣಜ್ಞಾನಕ್ಕಿಂತ, ವಿದ್ಯಾರ್ಹತೆಗಿಂತ, ಅಭ್ಯರ್ಥಿಗಳ ವೈಚಾರಿಕ ನಿಲುವು, ಆಸಕ್ತಿ, ಮನೋಭಾವ, ವೃತ್ತಿನಿಷ್ಟೆ, ಕಲಿಯುವ ಗುಣ ಇತ್ಯಾದಿಗಳನ್ನು ಅಳೆಯುತ್ತಿದ್ದರು. ಬಹುಶಃ ಹೆಚ್ಚಿನ ನಿರ್ಧಾರ ಅಗುತ್ತಿದ್ದುದು ನೀವು ಇತ್ತೀಚೆಗೆ ಓದಿದ ಪುಸ್ತಕಗಳು ಯಾವುವು ಎಂಬ ಪ್ರಶ್ನೆಯಲ್ಲಿ! ಸಿಕ್ವೇರಾ ಮತ್ತು ದಸಿಲ್ವಾ ಇಬ್ಬರೂ ಮಹಾನ್ ಪುಸ್ತಕಗಳ ಸಂಗ್ರಹವನ್ನೇ ಇಟ್ಟುಕೊಂಡಿದ್ದರು. ಈ ಕುರಿತು ಮುಂದೆ ಪ್ರತ್ಯೇಕವಾಗಿ ಬರೆಯುತ್ತೇನೆ.

ಆ ದಿನವೇ ಎಲ್ಲರ ಸಂದರ್ಶನ ಮುಗಿಯಿತು. ಮೊದಲೇ ಒಂದು ರೀತಿಯ ಸೋಸುವಿಕೆ ನಡೆದಿದ್ದುದರಿಂದ ಬಹುತೇಕ ಎಲ್ಲರೂ ಆಯ್ಕೆಯಾಗಿದ್ದರು. ಇವರೆಲ್ಲರೂ ಮುಂದೆ ಹೇಗೆ ಬೆಳೆದರು, ಹೇಗೆ ಕಲಿತರು, ಮುಂದೆ ಏನಾದರು ಇತ್ಯಾದಿಗಳ ಕುರಿತೇ ಮುಂದೆ ಬರೆಯುವೆ.

ಸಂದರ್ಶನ ನಡೆದ ತಕ್ಷಣದಿಂದಲೇ ಪ್ರಾಥಮಿಕ ತರಬೇತಿ ಆರಂಭವಾಯಿತು. ಇದಕ್ಕೇ ಓರಿಯೆಂಟೇಶನ್ ಕ್ಯಾಂಪ್ ಎಂದೇ ಕರೆಯಬಹುದೇನೋ?! ’ಜನವಾಹಿನಿ’ ಅತ್ಯಂತ ಹೆಚ್ಚು ಮಹತ್ವ ಕೊಟ್ಟದ್ದು ಜಾತ್ಯತೀತ, ಪ್ರಜಾಪ್ರಭುತ್ವವಾದಿ ಸಂವಿಧಾನ ಬದ್ಧತೆ, ಜನಸಂಸ್ಕೃತಿಗೆ. ಈ ಕುರಿತು ಪತ್ರಕರ್ತರ ನಿಲುವು ಮತ್ತು ವಿಚಾರಗಳಲ್ಲಿ ಸ್ಪಷ್ಟತೆ ಇರಬೇಕು ಎಂಬುದೇ ಈ ತರಬೇತಿಯ ಉದ್ದೇಶ. ವಿಲಿಯಂ ದಸಿಲ್ವ ಮತ್ತು ಸಿಕ್ವೇರಾ ಅವರ ಜೊತೆಗೆ, ನಾವು ಕೋರ್ ಗ್ರೂಪಿನವರು ಸೇರಿಕೊಂಡು, ಹೊಸದಾಗಿ ಸೇರಿಕೊಂಡವರ ಕುರಿತು ಚರ್ಚೆ ನಡೆಸುವುದು, ಪ್ರಶ್ನೆಗಳನ್ನು ಎತ್ತುವುದು, ಸಂಶಯಗಳನ್ನು ನಿವಾರಿಸುವುದು ಇತ್ಯಾದಿಗಳ ಮೂಲಕ ಕಲಿಯುವುದು. ಇದೇ ತರಬೇತಿ ವಿಧಾನ. ಆಗ ನಾವು ಮುಟ್ಟದ ವಿಷಯಗಳಿಲ್ಲ. ರಾಜಕೀಯ ತತ್ವಗಳು, ಜಾತ್ಯತೀತತೆ, ಸಾಮಾಜಿಕ ಅಸಮಾನತೆ, ಧಾರ್ಮಿಕತೆ, ನಂಬಿಕೆ ಮತ್ತು ಮೂಢನಂಬಿಕೆ, ಸಾಮಾಜಿಕ ಆರೋಗ್ಯ ಮತ್ತು ಅನಾರೋಗ್ಯ, ಸರಕಾರಿ ಆಡಳಿತ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ, ಜನರ ಸಮಸ್ಯೆಗಳು…ಹೀಗೆ ನಮ್ಮ ಚರ್ಚೆ ಸಾಗುತ್ತಿತ್ತು! ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿಷಯಗಳನ್ನು ಹೀರಿಕೊಂಡರು. ಬಹುಶಃ ಹೀಗೊಂದು ರೀತಿಯ ವಿಶಾಲ ಮತ್ತು ದೀರ್ಘ ತರಬೇತಿ ಕನ್ನಡದ ಯಾವೊಂದು ಪತ್ರಿಕೆಯ ಆರಂಭಕ್ಕೆ ಮುನ್ನ ನಡೆದಿರಲಾರದೇನೋ! ಈ ಕಲಿಯುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಿತು.

ವಿಚಾರಗಳನ್ನು ಹೊಂದುವುದು ಒಂದು ವಿಷಯ. ಅದನ್ನು ಪತ್ರಿಕೆಗೆ ಇಳಿಸುವುದು ಮತ್ತು ಪತ್ರಿಕೆಯನ್ನು ನಡೆಸುವುದು ಬೇರೆಯೇ ವಿಷಯ. ಅದಕ್ಕೆ ತಾಂತ್ರಿಕ ತರಬೇತಿ ಮತ್ತು ಅಪಾರ ಶಿಸ್ತು ಮತ್ತು ಕಾರ್ಯವಿಧಾನಗಳ ತಿಳುವಳಿಕೆ ಬೇಕು. ಅದಕ್ಕಾಗಿ ಪತ್ರಿಕೆಯ ನೂತನ ಕಚೇರಿಗೆ ಬರುವಂತೆ ಎಲ್ಲರಿಗೂ ಹೇಳಲಾಯಿತು. ಪತ್ರಿಕೆ ಹೊರಬರುವ ಮೊದಲೇ ಎಲ್ಲರೂ ಸಂಬಳದ ಪಟ್ಟಿಯಲ್ಲಿ ಸೇರಿದ್ದರು. ಆ ಕುತೂಹಲಕಾರಿ ವಿವರಗಳನ್ನು ಮುಂದೆ ಹೇಳುವೆ!
*****

‘ಜನವಾಹಿನಿ’ ಮತ್ತು ಪುಸ್ತಕ ಪ್ರೇಮ

’ಜನವಾಹಿನಿ’ಯಲ್ಲಿದ್ದ ಅನೇಕರು ಪುಸ್ತಕ ಪ್ರೇಮಿಗಳು. ಅದಕ್ಕಾಗಿಯೇ ಒಂದು ಲೈಬ್ರರಿ ಸ್ಥಾಪಿಸಲಾಯಿತು. ಎನ್.ಎ.ಎಂ. ಇಸ್ಮಾಯಿಲ್ ಅಂತೂ ಆಗ ಅರ್ಧ ಸಂಬಳವನ್ನೇ ವೈಯಕ್ತಿಕವಾಗಿ ಪುಸ್ತಕ ಖರೀದಿಗೇ ಬಳಸುತ್ತಿದ್ದರು. ಎಲ್ಲಾ ಪತ್ರಿಕೆಗಳು ಬರುತ್ತಿದ್ದವು- ಮಂಗಳೂರಿನ ಕಾರ್‌ಸ್ಟ್ರೀಟ್‌ನ ಅಂಗಡಿಯಲ್ಲಿ ಮಾತ್ರ ಸಿಗುತ್ತಿದ್ದ ಟೆಲಿಗ್ರಾಫ್, ಸ್ಟೇಟ್ಸ್‌ಮನ್ ಮುಂತಾದ ಪತ್ರಿಕೆಗಳು ಕೂಡ.

ದಸಿಲ್ವಾ ಅವರು ಆಗ ಮಂಗಳೂರಿನ ಅರ್ಯಸಮಾಜ ರಸ್ತೆಯಲ್ಲಿ ಒಂದು ಫ್ಲ್ಯಾಟ್ ಹೊಂದಿದ್ದರು. ಅಪರೂಪದ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ನೀವು ಯಾವ ಹೊತ್ತಿಗೆ ಬೇಕಾದರೂ ಅಲ್ಲಿಗೆ ಬಂದು ಓದಬಹುದು ಎಂದು ಹೇಳಿದ್ದರು. ಅವರು ಜರ್ಮನಿಗೆ ಹೋದರೂ, ಅವರ ಪುಸ್ತಕಗಳನ್ನು ಓದುವ ಭಾಗ್ಯ ನಮಗೆ ಇರುತ್ತಿತ್ತು.

ಸ್ಯಾಮುಯೆಲ್ ಸಿಕ್ವೇರಾ ಅವರಂತೂ ಹೊಸಹೊಸ ಪುಸ್ತಕಗಳನ್ನು ತಂದು, ಓದಿ ಎಂದು ಅವರಾಗಿಯೇ ನಮ್ಮ ಕೈಗೆ ಕೊಡುತ್ತಿದ್ದರು. ಎಡ್ವರ್ಡ್ ಸೈದ್ ಅವರ ‘ಮೆನ್ಯುಫ್ಯಾಕ್ಚರಿಂಗ್ ಕನ್ಸೆಂಟ್’, ಸ್ಯಾಮುಯೆಲ್ ಪಿ. ಹಂಟಿಂಗ್ಟನ್ ಅವರ ‘ಕ್ಲ್ಯಾಷ್ ಆಫ್ ಸಿವಿಲೈಸೇಷನ್ಸ್’ ಮುಂತಾದ ಮಹತ್ವದ ಪುಸ್ತಕಗಳನ್ನು ನಾನು ಓದಿದ್ದು ‘ಜನವಾಹಿನಿ’ಯಲ್ಲಿರುವಾಗಲೇ!

ಒಂದು ದಿನ ನಾನು ಜೆಫ್ರಿ ಅರ್ಚರ್ ಅವರ ‘ದಿ ಫೋರ್ತ್ ಎಸ್ಟೇಟ್’ ಎಂಬ ಕಾದಂಬರಿಯನ್ನು ಅತ್ರಿ ಬುಕ್ ಸೆಂಟರಿನಲ್ಲಿ ಕೊಂಡಿದ್ದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕತೆಯದು. ಅದು ನನ್ನ ಕೈಯಲ್ಲಿದ್ದಾಗ ಸಿಕ್ವೇರಾ ಅವರ ಕಣ್ಣಿಗೆ ಬಿತ್ತು. ಎಲ್ಲಿಂದ. ಕೊಂಡದ್ದು ಎಂದೆ! ಈ ಸಂಬಳದಲ್ಲಿ ಯಾಕೆ ನೀವೇ ಹಣಕೊಟ್ಟು ಪುಸ್ತಕ ಕೊಳ್ಳುತ್ತೀರಿ?! ಒಳ್ಳೆಯ ಪುಸ್ತಕ ಇದ್ದರೆ ಕೊಂಡು ಬಿಲ್ ಕೊಡಿ. ಪುಸ್ತಕ ಲೈಬ್ರರಿಯಲ್ಲಿ ಇಡಿ. ಬೇರೆಯವರೂ ಓದಲಿ ಎಂದರು. ಸಂಸ್ಥೆಯಿಂದ ನನಗೆ ಹಣ ಪಾವತಿ ಆಯಿತು!

ಓದುವುದಕ್ಕೆ ನಮಗೆ ಸಿಗುತ್ತಿದ್ದ ಪ್ರೋತ್ಸಾಹಕ್ಕೆ ಇದೊಂದು ಉದಾಹರಣೆ. ನಮಗೆ ಅದೊಂದು ಕಾಲೇಜಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...