Homeಕರ್ನಾಟಕಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

ಯುವ ಜನವಾಹಿನಿಯ ಸಮ್ಮಿಲನ! : ನಿಖಿಲ್ ಕೋಲ್ಪೆಯವರ ಜನವಾಹಿನಿಯ ನೆನಪುಗಳು..

- Advertisement -
- Advertisement -

ಜನವಾಹಿನಿಯ ನೆನಪುಗಳು: ಭಾಗ-5

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಕನ್ನಡ ಮುದ್ರಣದ ಹೊಸ ಶಕೆಯನ್ನು ಆರಂಭಿಸಿದ್ದು ಬಾಸೆಲ್ ಮಿಷನ್. ಕನ್ನಡ, ತುಳು ಭಾಷೆಗಳಲ್ಲಿ ಕ್ರೈಸ್ತ ಸ್ತೋತ್ರಗಳು, ಮೊದಲ ಪದಕೋಶಗಳು, ವ್ಯಾಕರಣ ಗ್ರಂಥಗಳು ಮತ್ತು ಮೊದಲ ಕನ್ನಡ ಪತ್ರಿಕೆ ’ಮಂಗಳೂರ ಸಮಾಚಾರ’ವನ್ನು ಪ್ರಕಟಿಸಿದ್ದು ಕೂಡಾ ಬಾಸೆಲ್ ಮಿಷನ್ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂತದ್ದು. ರೆವರೆಂಡ್ ಕಿಟ್ಟೆಲ್ ಅವರ ಕನ್ನಡ ನಿಘಂಟಿನ ಬಗ್ಗೆ ಗೊತ್ತಿಲ್ಲದವರು ಕಡಿಮೆ.

ಮಂಗಳೂರಿನ ಬಲ್ಮಠದಲ್ಲಿ ಅಶೋಕವರ್ಧನ ಅವರ ’ಅತ್ರಿ ಬುಕ್ ಸೆಂಟರ್’ ಇತ್ತು. ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಅದು ದೇವಾಲಯ. ಈಗದು ’ನವಕರ್ನಾಟಕ’ವಾಗಿದೆ. ಇದರ ಹಿಂಭಾಗದಲ್ಲಿ ಎತ್ತರದ ಕಟ್ಟಡಗಳ ಸಾಲುಗಳ ಹಿಂದೆ ಮೂರು ನಾಲ್ಕು ಕಡೆ ಪ್ರವೇಶ ಇರುವ ಒಂದು ಅತ್ಯಂತ ವಿಶಾಲವಾದ ಬಾಸೆಲ್ ಮಿಷನ್ ಕಂಪೌಂಡ್ ಇದೆ ಎಂದು ಅನೇಕರಿಗೆ ತಲೆಗೇ ಹೋಗದು. ಅನೇಕ ಶಿಕ್ಷಣ ಸಂಸ್ಥೆಗಳು ಅಲ್ಲಿ ಕಾರ್ಯಾಚರಿಸುತ್ತಿವೆ. ಕನ್ನಡದ ಮಟ್ಟಿಗೆ ಐತಿಹಾಸಿಕವಾದ ಕೆಲವು ಸಭಾಂಗಣಗಳಲ್ಲಿ ಒಂದರಲ್ಲಿ ’ಜನವಾಹಿನಿ’ಯ ಸಂದರ್ಶನ ಮತ್ತು ತರಬೇತಿ ಪ್ರಕ್ರಿಯೆ ನಡೆಯಿತೆಂಬುದು ವಿಶೇಷ.

ಒಂದು ಬೆಳಿಗ್ಗೆ ಅಲ್ಲಿ ಕಾಲೇಜು ವಿದ್ಯಾರ್ಥಿಗಳಂತೆ ಕಾಣುವ ನೂರಾರು ವಿದ್ಯಾರ್ಥಿಗಳು ನೆರೆದಿದ್ದರು. ನಾವು ಸಂಪಾದಕೀಯ ಕೋರ್ ಗ್ರೂಪಿಗೆ ಸಂಭ್ರಮ! ನಮ್ಮದೇ ಪಾರುಪತ್ಯ. ನಮ್ಮದೇ ನಾಯಕತ್ವದಲ್ಲಿ ಪತ್ರಿಕಾ ರಂಗದಲ್ಲಿ ಹೊಸದೇನನ್ನಾದರೂ ಮಾಡಲು ಹೊರಟಿದ್ದ ಯುವ ಶಕ್ತಿ! ನಾವು ಅವರನ್ನು ಗಮನಿಸುತ್ತಾ, ಸಲಹೆ ಸೂಚನೆಗಳನ್ನು ಕೊಡುತ್ತಾ ಓಡಾಡುತ್ತಿದ್ದೆವು. ವಿದ್ವಾಂಸ ಮತ್ತು ಒಂದು ರೀತಿಯಲ್ಲಿ ಕ್ರಾಂತಿಕಾರಿ ಪಾದ್ರಿ ಎಂದೇ ಗುರುತಿಸಲಾಗುತ್ತಿದ್ದ ವಿಲಿಯಂ ದಸಿಲ್ವಾ ಅವರ ಗಂಭೀರ ವ್ಯಕ್ತಿತ್ವಕ್ಕೆ ನಾವೇ ಒಂದು ರೀತಿಯ ಗೌರವ ತುಂಬಿದ ಭಾವದಿಂದ ಇದ್ದೆವು. ಹೀಗಿರುವಾಗ ಈ ಯುವಜನರು ಭಯಾತಂಕದಿಂದ ಇದ್ದದ್ದರಲ್ಲಿ ಅಚ್ಚರಿಯೇನಿರಲಿಲ್ಲ.

ಒಳಗೆ ಅವರು, ಆಡಳಿತ ನಿರ್ದೇಶಕ ಸ್ಯಾಮ್ಯುಯೆಲ್ ಸಿಕ್ವೇರಾ ಮತ್ತು ಸಂಪಾದಕ ಬಾಲಕೃಷ್ಣ ಗಟ್ಟಿ ಇದ್ದರು. ಆಗ ಮೊದಲು ಒಳಗೆ ನಾವು ಹುರಿದುಂಬಿಸಿ ಕಳಿಸಿದ್ದು ಒಳ್ಳೆಯ ಕ್ರಿಕೆಟಿಗನಾಗಿದ್ದ, ಚಿಕ್ಕ ದೇಹದ ಹುಡುಗ ಗಿರೀಶ್ ಬಜ್ಪೆಯನ್ನು- ಅದೂ ಓಪನಿಂಗ್ ಬ್ಯಾಟ್ಸ್‌ಮನ್ ಎಂದು ಛೇಡಿಸಿ!

ಮೂಲತಃ ಈ ಹುಡುಗ ಪಳಗಿದ್ದುದು ಡಿಟಿಪಿಯಲ್ಲಿ. ಹಿಂದೆ ನಾನು ಕೆಲಸ ಮಾಡುತ್ತಿದ್ದ ’ಕರಾವಳಿ ಅಲೆ’ ಸಂಜೆ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸ್ವಲ್ಪ ಇದ್ದವರು. ಸ್ವಲ್ಪ ಹೊತ್ತಿನಲ್ಲಿ ಅವರು ಹೊರಗೆ ಬಂದು ಬಾಯಗಲ ನಗುತ್ತಾ ಹೆಬ್ಬೆರಳು ಮೇಲೆತ್ತಿದಾಗ ನಮ್ಮಗೆಲ್ಲಾ ಖುಶಿ- ಸಂಪಾದಕೀಯ ವಿಭಾಗದ ಎರಡನೇ ತಂಡದ ಮೊದಲ ಆಯ್ಕೆ ನಡೆದಿತ್ತು. ಕೆಲವರು ಏನಾಯಿತು, ಏನು ಕೇಳಿದರು ಎಂದು ಉಳಿದವರು ವಿಚಾರಿಸುತ್ತಿದ್ದರು.

ವಾಸ್ತವಿಕವಾಗಿ ಒಳಗಿನ ಸಂದರ್ಶನ ಮನಃಶಾಸ್ತ್ರೀಯವಾಗಿ ನಡೆಯುತ್ತಿತ್ತೆಂದು ನಮಗೆ ಗೊತ್ತಿತ್ತು. ಅತ್ಯಂತ ಮೇಲ್ಮಟ್ಟದ ಬುದ್ಧಿವಂತಿಕೆಯ ಸಂದರ್ಶಕರು ಒಣಜ್ಞಾನಕ್ಕಿಂತ, ವಿದ್ಯಾರ್ಹತೆಗಿಂತ, ಅಭ್ಯರ್ಥಿಗಳ ವೈಚಾರಿಕ ನಿಲುವು, ಆಸಕ್ತಿ, ಮನೋಭಾವ, ವೃತ್ತಿನಿಷ್ಟೆ, ಕಲಿಯುವ ಗುಣ ಇತ್ಯಾದಿಗಳನ್ನು ಅಳೆಯುತ್ತಿದ್ದರು. ಬಹುಶಃ ಹೆಚ್ಚಿನ ನಿರ್ಧಾರ ಅಗುತ್ತಿದ್ದುದು ನೀವು ಇತ್ತೀಚೆಗೆ ಓದಿದ ಪುಸ್ತಕಗಳು ಯಾವುವು ಎಂಬ ಪ್ರಶ್ನೆಯಲ್ಲಿ! ಸಿಕ್ವೇರಾ ಮತ್ತು ದಸಿಲ್ವಾ ಇಬ್ಬರೂ ಮಹಾನ್ ಪುಸ್ತಕಗಳ ಸಂಗ್ರಹವನ್ನೇ ಇಟ್ಟುಕೊಂಡಿದ್ದರು. ಈ ಕುರಿತು ಮುಂದೆ ಪ್ರತ್ಯೇಕವಾಗಿ ಬರೆಯುತ್ತೇನೆ.

ಆ ದಿನವೇ ಎಲ್ಲರ ಸಂದರ್ಶನ ಮುಗಿಯಿತು. ಮೊದಲೇ ಒಂದು ರೀತಿಯ ಸೋಸುವಿಕೆ ನಡೆದಿದ್ದುದರಿಂದ ಬಹುತೇಕ ಎಲ್ಲರೂ ಆಯ್ಕೆಯಾಗಿದ್ದರು. ಇವರೆಲ್ಲರೂ ಮುಂದೆ ಹೇಗೆ ಬೆಳೆದರು, ಹೇಗೆ ಕಲಿತರು, ಮುಂದೆ ಏನಾದರು ಇತ್ಯಾದಿಗಳ ಕುರಿತೇ ಮುಂದೆ ಬರೆಯುವೆ.

ಸಂದರ್ಶನ ನಡೆದ ತಕ್ಷಣದಿಂದಲೇ ಪ್ರಾಥಮಿಕ ತರಬೇತಿ ಆರಂಭವಾಯಿತು. ಇದಕ್ಕೇ ಓರಿಯೆಂಟೇಶನ್ ಕ್ಯಾಂಪ್ ಎಂದೇ ಕರೆಯಬಹುದೇನೋ?! ’ಜನವಾಹಿನಿ’ ಅತ್ಯಂತ ಹೆಚ್ಚು ಮಹತ್ವ ಕೊಟ್ಟದ್ದು ಜಾತ್ಯತೀತ, ಪ್ರಜಾಪ್ರಭುತ್ವವಾದಿ ಸಂವಿಧಾನ ಬದ್ಧತೆ, ಜನಸಂಸ್ಕೃತಿಗೆ. ಈ ಕುರಿತು ಪತ್ರಕರ್ತರ ನಿಲುವು ಮತ್ತು ವಿಚಾರಗಳಲ್ಲಿ ಸ್ಪಷ್ಟತೆ ಇರಬೇಕು ಎಂಬುದೇ ಈ ತರಬೇತಿಯ ಉದ್ದೇಶ. ವಿಲಿಯಂ ದಸಿಲ್ವ ಮತ್ತು ಸಿಕ್ವೇರಾ ಅವರ ಜೊತೆಗೆ, ನಾವು ಕೋರ್ ಗ್ರೂಪಿನವರು ಸೇರಿಕೊಂಡು, ಹೊಸದಾಗಿ ಸೇರಿಕೊಂಡವರ ಕುರಿತು ಚರ್ಚೆ ನಡೆಸುವುದು, ಪ್ರಶ್ನೆಗಳನ್ನು ಎತ್ತುವುದು, ಸಂಶಯಗಳನ್ನು ನಿವಾರಿಸುವುದು ಇತ್ಯಾದಿಗಳ ಮೂಲಕ ಕಲಿಯುವುದು. ಇದೇ ತರಬೇತಿ ವಿಧಾನ. ಆಗ ನಾವು ಮುಟ್ಟದ ವಿಷಯಗಳಿಲ್ಲ. ರಾಜಕೀಯ ತತ್ವಗಳು, ಜಾತ್ಯತೀತತೆ, ಸಾಮಾಜಿಕ ಅಸಮಾನತೆ, ಧಾರ್ಮಿಕತೆ, ನಂಬಿಕೆ ಮತ್ತು ಮೂಢನಂಬಿಕೆ, ಸಾಮಾಜಿಕ ಆರೋಗ್ಯ ಮತ್ತು ಅನಾರೋಗ್ಯ, ಸರಕಾರಿ ಆಡಳಿತ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣ, ಜನರ ಸಮಸ್ಯೆಗಳು…ಹೀಗೆ ನಮ್ಮ ಚರ್ಚೆ ಸಾಗುತ್ತಿತ್ತು! ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿಷಯಗಳನ್ನು ಹೀರಿಕೊಂಡರು. ಬಹುಶಃ ಹೀಗೊಂದು ರೀತಿಯ ವಿಶಾಲ ಮತ್ತು ದೀರ್ಘ ತರಬೇತಿ ಕನ್ನಡದ ಯಾವೊಂದು ಪತ್ರಿಕೆಯ ಆರಂಭಕ್ಕೆ ಮುನ್ನ ನಡೆದಿರಲಾರದೇನೋ! ಈ ಕಲಿಯುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಿತು.

ವಿಚಾರಗಳನ್ನು ಹೊಂದುವುದು ಒಂದು ವಿಷಯ. ಅದನ್ನು ಪತ್ರಿಕೆಗೆ ಇಳಿಸುವುದು ಮತ್ತು ಪತ್ರಿಕೆಯನ್ನು ನಡೆಸುವುದು ಬೇರೆಯೇ ವಿಷಯ. ಅದಕ್ಕೆ ತಾಂತ್ರಿಕ ತರಬೇತಿ ಮತ್ತು ಅಪಾರ ಶಿಸ್ತು ಮತ್ತು ಕಾರ್ಯವಿಧಾನಗಳ ತಿಳುವಳಿಕೆ ಬೇಕು. ಅದಕ್ಕಾಗಿ ಪತ್ರಿಕೆಯ ನೂತನ ಕಚೇರಿಗೆ ಬರುವಂತೆ ಎಲ್ಲರಿಗೂ ಹೇಳಲಾಯಿತು. ಪತ್ರಿಕೆ ಹೊರಬರುವ ಮೊದಲೇ ಎಲ್ಲರೂ ಸಂಬಳದ ಪಟ್ಟಿಯಲ್ಲಿ ಸೇರಿದ್ದರು. ಆ ಕುತೂಹಲಕಾರಿ ವಿವರಗಳನ್ನು ಮುಂದೆ ಹೇಳುವೆ!
*****

‘ಜನವಾಹಿನಿ’ ಮತ್ತು ಪುಸ್ತಕ ಪ್ರೇಮ

’ಜನವಾಹಿನಿ’ಯಲ್ಲಿದ್ದ ಅನೇಕರು ಪುಸ್ತಕ ಪ್ರೇಮಿಗಳು. ಅದಕ್ಕಾಗಿಯೇ ಒಂದು ಲೈಬ್ರರಿ ಸ್ಥಾಪಿಸಲಾಯಿತು. ಎನ್.ಎ.ಎಂ. ಇಸ್ಮಾಯಿಲ್ ಅಂತೂ ಆಗ ಅರ್ಧ ಸಂಬಳವನ್ನೇ ವೈಯಕ್ತಿಕವಾಗಿ ಪುಸ್ತಕ ಖರೀದಿಗೇ ಬಳಸುತ್ತಿದ್ದರು. ಎಲ್ಲಾ ಪತ್ರಿಕೆಗಳು ಬರುತ್ತಿದ್ದವು- ಮಂಗಳೂರಿನ ಕಾರ್‌ಸ್ಟ್ರೀಟ್‌ನ ಅಂಗಡಿಯಲ್ಲಿ ಮಾತ್ರ ಸಿಗುತ್ತಿದ್ದ ಟೆಲಿಗ್ರಾಫ್, ಸ್ಟೇಟ್ಸ್‌ಮನ್ ಮುಂತಾದ ಪತ್ರಿಕೆಗಳು ಕೂಡ.

ದಸಿಲ್ವಾ ಅವರು ಆಗ ಮಂಗಳೂರಿನ ಅರ್ಯಸಮಾಜ ರಸ್ತೆಯಲ್ಲಿ ಒಂದು ಫ್ಲ್ಯಾಟ್ ಹೊಂದಿದ್ದರು. ಅಪರೂಪದ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ನೀವು ಯಾವ ಹೊತ್ತಿಗೆ ಬೇಕಾದರೂ ಅಲ್ಲಿಗೆ ಬಂದು ಓದಬಹುದು ಎಂದು ಹೇಳಿದ್ದರು. ಅವರು ಜರ್ಮನಿಗೆ ಹೋದರೂ, ಅವರ ಪುಸ್ತಕಗಳನ್ನು ಓದುವ ಭಾಗ್ಯ ನಮಗೆ ಇರುತ್ತಿತ್ತು.

ಸ್ಯಾಮುಯೆಲ್ ಸಿಕ್ವೇರಾ ಅವರಂತೂ ಹೊಸಹೊಸ ಪುಸ್ತಕಗಳನ್ನು ತಂದು, ಓದಿ ಎಂದು ಅವರಾಗಿಯೇ ನಮ್ಮ ಕೈಗೆ ಕೊಡುತ್ತಿದ್ದರು. ಎಡ್ವರ್ಡ್ ಸೈದ್ ಅವರ ‘ಮೆನ್ಯುಫ್ಯಾಕ್ಚರಿಂಗ್ ಕನ್ಸೆಂಟ್’, ಸ್ಯಾಮುಯೆಲ್ ಪಿ. ಹಂಟಿಂಗ್ಟನ್ ಅವರ ‘ಕ್ಲ್ಯಾಷ್ ಆಫ್ ಸಿವಿಲೈಸೇಷನ್ಸ್’ ಮುಂತಾದ ಮಹತ್ವದ ಪುಸ್ತಕಗಳನ್ನು ನಾನು ಓದಿದ್ದು ‘ಜನವಾಹಿನಿ’ಯಲ್ಲಿರುವಾಗಲೇ!

ಒಂದು ದಿನ ನಾನು ಜೆಫ್ರಿ ಅರ್ಚರ್ ಅವರ ‘ದಿ ಫೋರ್ತ್ ಎಸ್ಟೇಟ್’ ಎಂಬ ಕಾದಂಬರಿಯನ್ನು ಅತ್ರಿ ಬುಕ್ ಸೆಂಟರಿನಲ್ಲಿ ಕೊಂಡಿದ್ದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕತೆಯದು. ಅದು ನನ್ನ ಕೈಯಲ್ಲಿದ್ದಾಗ ಸಿಕ್ವೇರಾ ಅವರ ಕಣ್ಣಿಗೆ ಬಿತ್ತು. ಎಲ್ಲಿಂದ. ಕೊಂಡದ್ದು ಎಂದೆ! ಈ ಸಂಬಳದಲ್ಲಿ ಯಾಕೆ ನೀವೇ ಹಣಕೊಟ್ಟು ಪುಸ್ತಕ ಕೊಳ್ಳುತ್ತೀರಿ?! ಒಳ್ಳೆಯ ಪುಸ್ತಕ ಇದ್ದರೆ ಕೊಂಡು ಬಿಲ್ ಕೊಡಿ. ಪುಸ್ತಕ ಲೈಬ್ರರಿಯಲ್ಲಿ ಇಡಿ. ಬೇರೆಯವರೂ ಓದಲಿ ಎಂದರು. ಸಂಸ್ಥೆಯಿಂದ ನನಗೆ ಹಣ ಪಾವತಿ ಆಯಿತು!

ಓದುವುದಕ್ಕೆ ನಮಗೆ ಸಿಗುತ್ತಿದ್ದ ಪ್ರೋತ್ಸಾಹಕ್ಕೆ ಇದೊಂದು ಉದಾಹರಣೆ. ನಮಗೆ ಅದೊಂದು ಕಾಲೇಜಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...