Homeಕರ್ನಾಟಕಆರ್‌ಎಸ್‌ಎಸ್‌ ಅಜೆಂಡಾಗಳನ್ನು ಬಯಲುಗೊಳಿಸುವ ಕನ್ನಡ ಕೃತಿಗಳು

ಆರ್‌ಎಸ್‌ಎಸ್‌ ಅಜೆಂಡಾಗಳನ್ನು ಬಯಲುಗೊಳಿಸುವ ಕನ್ನಡ ಕೃತಿಗಳು

- Advertisement -
- Advertisement -

ನಾಡಿನ ಖ್ಯಾತ ಹಿರಿಯ ಸಾಹಿತಿ, ಸಾಕ್ಷಿಪ್ರಜ್ಞೆ ದೇವನೂರ ಮಹಾದೇವರ ನೂತನ ಪುಸ್ತಕ ಆರ್‌ಎಸ್‌ಎಸ್‌ ಆಳ ಮತ್ತು ಅಗಲ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಪ್ರಕಟಗೊಂಡ ಎರಡು ವಾರಗಳಲ್ಲಿಯೇ 86,000 ಪ್ರತಿಗಳು ಮಾರಾಟವಾಗಿವೆ. ಕನ್ನಡ ಪುಸ್ತಕ ಪ್ರಕಟಣೆಯ ಇತಿಹಾಸದಲ್ಲಿ ಇದೊಂದು ದಾಖಲೆಯೆ ಸರಿ. ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್‌ ಸಮಾಜದಲ್ಲಿ ಉಂಟು ಮಾಡುತ್ತಿರುವ ದುಷ್ಪರಿಣಾಮಗಳು ಮತ್ತು ಅದು ಸಾರುವ ವರ್ಣಾಶ್ರಮ ಸಿದ್ದಾಂತವನ್ನು ದೇವನೂರು ತಮ್ಮ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ರಾಜ್ಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಕುರಿತು ಪ್ರಕಟಗೊಂಡಿರುವ ಇತರ ಕೃತಿಗಳ ಕುರಿತು ತಿಳಿಯೋಣ.

ಆರ್‌ಎಸ್‌ಎಸ್‌ ಅಂತರಂಗ

ಆರ್‌ಎಸ್‌ಎಸ್‌ನ ಕಾರ್ಯಕರ್ತರು ಮತ್ತು ಕರ್ನಾಟಕ ಬಿಜೆಪಿಯ ಪ್ರಥಮ ರಾಜ್ಯಾಧ್ಯಕ್ಷರಾಗಿದ್ದ ಹಿರಿಯ ಹೋರಾಟಗಾರ ಎ.ಕೆ ಸುಬ್ಬಯ್ಯನವರು ಬರೆದಿರುವ ಆರ್‌ಎಸ್‌ಎಸ್‌ ಅಂತರಂಗ ಕೃತಿಯನ್ನು ಲಂಕೇಶ್ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 80 ರೂ ಇದ್ದು, ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಆರ್ ಎಸ್ ಎಸ್ ಬಚ್ಚಿಟ್ಟ ಸತ್ಯಗಳು

ಹಿರಿಯ ಸಂಶೋಧಕ ಡಾ.ಶಂಶುಲ್ ಇಸ್ಲಾಂರವರು ಆರ್‌ಎಸ್‌ಎಸ್‌ ಮುಚ್ಚಿಡುತ್ತಿರುವ ಸತ್ಯಗಳನ್ನು ಅನಾವರಣಗೊಳಿಸಿದ್ದಾರೆ. ಈ ಪುಸ್ತಕವನ್ನು ಮಾ ವರದರಾಜುರವರು ಕನ್ನಡಕರಿಸಿದ್ದು, ಸಮೈಕ್ಯ ಪ್ರಕಾಶನ ಪ್ರಕಟಿಸಿದೆ. ಬೆಲೆ 130 ರೂಗಳಾಗಿವೆ.

ನರಕದ ಗರ್ಭಗುಡಿಯೊಳಗೆ

ಆರ್‌ಎಸ್‌ಎಸ್‌ನಲ್ಲಿದ್ದು ಬೇಸೆತ್ತು ಹೊರಗೆ ಬಂದಿದ್ದ ಸುಧೀಶ್ ಮಿನ್ನಿಯವರು ಬರೆದಿರುವ ನರಕದ ಗರ್ಭ ಗುಡಿಯೊಳಗೆ ಪುಸ್ತಕವನ್ನು ಪಿ.ಕೆ.ಇ ಕೃಷ್ಣನ್‌ರವರ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕ್ರಿಯಾ ಪ್ರಕಾಶನ ಮುದ್ರಿಸಿದೆ. ಬೆಲೆ 120 ರೂಗಳು.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ

ಹಲವಾರು ಕಡೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬೇರೆ ಬೇರೆ ಎಂದು ಅದರ ಮುಖಂಡರು ಹೇಳುತ್ತಾರೆ. ಆದರೆ ಒಟ್ಟಿಗೆ ಕೆಲಸ ಮಾಡುತ್ತಾರೆ. ಈ ಕುರಿತು ಎ.ಜೆ ನೂರಾನಿಯವರು ಸವಿಸ್ತಾರವಾಗಿ ಬರೆದಿರುವ ಪುಸ್ತಕ ಆರ್‌ಎಸ್‌ಎಸ್‌ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ. ಸುರೇಶ್ ಭಟ್ ಭಾಕ್ರಬೈಲುರವರು ಕನ್ನಡಕ್ಕೆ ಅನುವಾದ ಮಾಡಿದ್ದು, ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 150 ರೂಗಳು.

ಹಿಂದುತ್ವ ಮತ್ತು ದಲಿತರು

ಖ್ಯಾತ ಅಂಬೇಡ್ಕರ್‌ವಾದಿ ಚಿಂತಕ ಡಾ. ಆನಂದ್ ತೇಲ್ತುಂಬ್ಡೆಯವರು ರಚಿಸಿರುವ ಹಿಂದುತ್ವ ಮತ್ತು ದಲಿತರು ಪುಸ್ತಕವನ್ನು ಪ್ರೊ.ಬಿ.ಗಂಗಾಧರ ಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ದಲಿತರನ್ನು ಆರ್‌ಎಸ್‌ಎಸ್ ಹೇಗೆ ಪರಿಭಾವಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 160 ರೂಗಳು.

ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ

ಆನಂದ್‌ ತೆಲ್ತುಂಬ್ಡೆಯವರ ಮತ್ತೊಂದು ಮಹತ್ವದ ಪುಸ್ತಕವಿದೆ. ಕೋಮುವಾದದ ಮೂಲಕ ಅಧಿಕಾರ ಹಿಡಿಯುವ ಆರ್‌ಎಸ್‌ಎಸ್‌ ಬಿಜೆಪಿಗೆ ದಲಿತ ಹೋರಾಟ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಪ್ರೊ.ಬಿ.ಗಂಗಾಧರ ಮೂರ್ತಿ ಮತ್ತು ಶಿವಸುಂದರ್‌ರವರು ಅನುವಾದಿಸಿದ್ದಾರೆ. ಪುಸ್ತಕದ ಬೆಲೆ 140 ರೂಗಳು.

ಹಿಂದೂಗಳ ಬೇರೊಂದು ಚರಿತ್ರೆ

ಖ್ಯಾತ ಲೇಖಕ ವೆಂಡಿ ಡೊನಿಗರ್‌ರವರ ಈ ಮಹತ್ವದ ಪುಸ್ತಕವನ್ನು ಡಾ. ಬಂಜಗೆರೆ ಜಯಪ್ರಕಾಶ್‌ರವರು ಕನ್ನಡೀಕರಿಸಿದ್ದಾರೆ. ಸಿರಿವರ ಪ್ರಕಾಶನ ಪ್ರಕಟಿಸಿದ್ದು, ಪುಸ್ತಕದ ಬೆಲೆ 500 ರೂಗಳು.

ನಾನು ಹಿಂದೂ ಆಗಿ ಸಾಯಲಾರೆ

ಡಾ.ಬಿ.ಆರ್ ಅಂಬೇಡ್ಕರ್‌ರವರು ಏಕೆ ನಾನು ಹಿಂದೂ ಆಗಿ ಸಾಯಲಾರೆ ಎಂದು ವಿವರಿಸಿದರು ಎಂಬುದನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ. ಇದನ್ನು ಸದಾಶಿವ ಮರ್ಜಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪುಸ್ತಕದ ಬೆಲೆ 60/- ರೂಗಳು.

ಸಾವರ್ಕರ್ ಗೋಡ್ಸೆ ನಂಟು ಮತ್ತು ಆತನ ಹಿಂದುತ್ವ ಸಿದ್ಧಾಂತ

ಗಾಂಧಿ ಹಂತಕ ನಾಥೂರಾಮ್ ಗೂಡ್ಸೆಗೂ, ಸಾವರ್ಕರ್‌ಗೂ ಸಂಬಂಧವೇನು ಇಲ್ಲ ಎಂದು ಹೇಳುತ್ತಾರೆ. ಆದರೆ ಸಾವರ್ಕರ್ ಕೂಡ ಗಾಂಧಿ ಕೊಲೆ ಆರೋಪಿಗಳಲ್ಲಿ ಒಬ್ಬರು ಎಂದು ಆರೋಪಿಸಲಾಗಿದೆ. ಈ ಕುರಿತು ವಿವರಿಸುವ ಪುಸ್ತಕವನ್ನು ಎ.ಜಿ ನೂರಾನಿಯವರು ಬರೆದಿದ್ದಾರೆ. ಸುರೇಶ್ ಭಟ್ ಭಾಕ್ರಬೈಲುರವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೇಸರಿ ಭಯೋತ್ಪಾದನೆ

ಆರ್‌ಎಸ್‌ಎಸ್‌ ಸಂಘಟನೆ ಹೇಳುವುದೇನು, ಮಾಡುವುದೇನು ಎಂಬುದನ್ನು ವಿವರಿಸುವ ಸುರೇಶ ಭಟ್ ಭಾಕ್ರಬೈಲು ಅಂಕಣಗಳ ಸಂಗ್ರಹವೇ ಕೇಸರಿ ಭಯೋತ್ಪಾದನೆ. ಭಾರತದಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಲಂಕೇಶ್ ಪ್ರಕಾಶನ ಇದನ್ನು ಮುದ್ರಿಸಿದ್ದು, 135 ರೂ ಬೆಲೆ ಹೊಂದಿದೆ.

ಬಹುಸಂಖ್ಯಾತವಾದ- ಚಿಂತಕರು ಕಂಡಂತೆ, ಹಿಂದುತ್ವ ರಾಜಕಾರಣ

ಸಂಘ ಪರಿವಾರದ ಹಿಡನ್‌ ಅಜೆಂಡಾಗಳ ಕುರಿತು ನಿರಂತರ ಬರೆಯುತ್ತಿರುವ ಬಿ.ಶ್ರೀಪಾದ ಭಟ್ ಅವರ ಎರಡು ಕೃತಿಗಳು ಹಿಂದುತ್ವ ರಾಜಕಾರಣದ ಆಳ ಅಗಲಗಳನ್ನು ಬಿಚ್ಚಿಡುತ್ತವೆ. ‘ಹಿಂದುತ್ವ ರಾಜಕಾರಣದ- ಅಂದು ಮತ್ತು ಮುಂದು’, ‘ಬಹುಸಂಖ್ಯಾತವಾದ- ಚಿಂತಕರು ಕಂಡಂತೆ’ ಕೃತಿಗಳು ಸಂಘಪರಿವಾರದ ಕುರಿತು ವಿಶಿಷ್ಟ ಒಳನೋಟಗಳನ್ನು ನೀಡುತ್ತವೆ.

ಆರ್ ಎಸ್ ಎಸ್ ಆಳ ಮತ್ತು ಅಗಲ 

ದೇವನೂರು ಮಹಾದೇವರವರ ಇತ್ತೀಚಿನ ಪುಸ್ತಕ. ಆರ್‌ಎಸ್‌ಎಸ್‌ನ ಪ್ರಾಣ ಎಲ್ಲಿದೆ ಎಂಬುದರಿಂದ ಅರಂಭವಾಗಿ ಕರ್ನಾಟಕದ ವರ್ತಮಾನದ ಸವಾಲುಗಳವರೆಗೂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಸೇರಿದಂತೆ ಸುಮಾರು 20 ಪ್ರಕಾಶನ ಸಂಸ್ಥೆಗಳು ಮುದ್ರಿಸಿವೆ. ಬೆಲೆ 40 ರೂ. ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. RSS ಬಗ್ಗೆ ಮಾತಾಡೋ ಅಯೋಗ್ಯರು ,ಅದೇ ಭಯೋತ್ಪಾದನೆಗೆ ಕಾರಣವಾಗಿ ಪ್ರಪಂಚದಲ್ಲಿ ಹಿಂಸೆಯನ್ನು,ಕೊಲೆ ಮಾಡೋದನ್ನೇ ಮೂಲ ಕಸಬು ಮಾಡಿಕೊಂಡಿರುವ ನರ ರಾಕ್ಷಸ ಕಲಬೆರಕೆ SDPI ,PFI ಮೂಲಭೂತವಾದಿಗಳ ಬಗ್ಗೆ ಮಾತಾಡ್ರೋ ಅಯೋಗ್ಯರ ,RSS ಬಗ್ಗೆ ಅರಿವೇ ಇಲ್ಲದ ರೋಲ್ ಕಾಲ್ ಲದ್ದಿ ಜೀವಿಗಳ ಬಂಡವಾಳ ದೇಶದ ಪ್ರತಿ ವ್ಯಕ್ತಿಗೆ ತಿಳಿದಿದೆ

  2. RSS = SDPI = PFI ಈ ಮೂವರು ಮಾಡುವುದು ದೇಶವನ್ನು ಒಡೆಯುವ ಕೆಲಸ , ಇವರಿಂದ ಈ ದೇಶ ಶುಚಿಯಾಗಬೇಕಿದೆ , ಮೂವರೂ ಭಯವನ್ನ ಉತ್ಪಾದಿಸುವವರು …..!

  3. ಅತ್ಯತ್ತಮವಾದ ಕೆಲಸ. ಈ ಪುಸ್ತಕಗಳು “ರಾಕ್ಷಸ ಸಂತತಿಯ ಸಂಘ” ಹಾಗೂ ಬ್ಲೂ ಜೋಕರ್ಸ್ ಪಾರ್ಟಿಯ ನಿಜ ಬಣ್ಣ ಬಯಲು ಮಾಡುವ ಕನ್ನಡಿಗಳಾಗಿವೆ. ಅದ್ಯಾವುದೋ ರಾಕ್ಷಸಕುಲದ ನಾಯಿಯೊಂದು ಮೇಲೆ ಈ ಪುಸ್ತಕಗಳ ಲೇಖಕರನ್ನ ಕಲಬೆರಕೆಗಳೆಂದು ಹೇಳಿ ತನ್ನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಪಡಿಸಿದ್ದನೆ, ಇಂತಹ ಹರಾಮಿ ಕಲಬೆರಕೆಗಳನ್ನ ಮಟ್ಟ ಹಾಕಬೇಕಿದೆ.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...