ನಾಡಿನ ಖ್ಯಾತ ಹಿರಿಯ ಸಾಹಿತಿ, ಸಾಕ್ಷಿಪ್ರಜ್ಞೆ ದೇವನೂರ ಮಹಾದೇವರ ನೂತನ ಪುಸ್ತಕ ಆರ್ಎಸ್ಎಸ್ ಆಳ ಮತ್ತು ಅಗಲ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಪ್ರಕಟಗೊಂಡ ಎರಡು ವಾರಗಳಲ್ಲಿಯೇ 86,000 ಪ್ರತಿಗಳು ಮಾರಾಟವಾಗಿವೆ. ಕನ್ನಡ ಪುಸ್ತಕ ಪ್ರಕಟಣೆಯ ಇತಿಹಾಸದಲ್ಲಿ ಇದೊಂದು ದಾಖಲೆಯೆ ಸರಿ. ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಆರ್ಎಸ್ಎಸ್ ಸಮಾಜದಲ್ಲಿ ಉಂಟು ಮಾಡುತ್ತಿರುವ ದುಷ್ಪರಿಣಾಮಗಳು ಮತ್ತು ಅದು ಸಾರುವ ವರ್ಣಾಶ್ರಮ ಸಿದ್ದಾಂತವನ್ನು ದೇವನೂರು ತಮ್ಮ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ರಾಜ್ಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಕುರಿತು ಪ್ರಕಟಗೊಂಡಿರುವ ಇತರ ಕೃತಿಗಳ ಕುರಿತು ತಿಳಿಯೋಣ.
ಆರ್ಎಸ್ಎಸ್ ಅಂತರಂಗ
ಆರ್ಎಸ್ಎಸ್ನ ಕಾರ್ಯಕರ್ತರು ಮತ್ತು ಕರ್ನಾಟಕ ಬಿಜೆಪಿಯ ಪ್ರಥಮ ರಾಜ್ಯಾಧ್ಯಕ್ಷರಾಗಿದ್ದ ಹಿರಿಯ ಹೋರಾಟಗಾರ ಎ.ಕೆ ಸುಬ್ಬಯ್ಯನವರು ಬರೆದಿರುವ ಆರ್ಎಸ್ಎಸ್ ಅಂತರಂಗ ಕೃತಿಯನ್ನು ಲಂಕೇಶ್ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 80 ರೂ ಇದ್ದು, ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಆರ್ ಎಸ್ ಎಸ್ ಬಚ್ಚಿಟ್ಟ ಸತ್ಯಗಳು
ಹಿರಿಯ ಸಂಶೋಧಕ ಡಾ.ಶಂಶುಲ್ ಇಸ್ಲಾಂರವರು ಆರ್ಎಸ್ಎಸ್ ಮುಚ್ಚಿಡುತ್ತಿರುವ ಸತ್ಯಗಳನ್ನು ಅನಾವರಣಗೊಳಿಸಿದ್ದಾರೆ. ಈ ಪುಸ್ತಕವನ್ನು ಮಾ ವರದರಾಜುರವರು ಕನ್ನಡಕರಿಸಿದ್ದು, ಸಮೈಕ್ಯ ಪ್ರಕಾಶನ ಪ್ರಕಟಿಸಿದೆ. ಬೆಲೆ 130 ರೂಗಳಾಗಿವೆ.
ನರಕದ ಗರ್ಭಗುಡಿಯೊಳಗೆ
ಆರ್ಎಸ್ಎಸ್ನಲ್ಲಿದ್ದು ಬೇಸೆತ್ತು ಹೊರಗೆ ಬಂದಿದ್ದ ಸುಧೀಶ್ ಮಿನ್ನಿಯವರು ಬರೆದಿರುವ ನರಕದ ಗರ್ಭ ಗುಡಿಯೊಳಗೆ ಪುಸ್ತಕವನ್ನು ಪಿ.ಕೆ.ಇ ಕೃಷ್ಣನ್ರವರ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕ್ರಿಯಾ ಪ್ರಕಾಶನ ಮುದ್ರಿಸಿದೆ. ಬೆಲೆ 120 ರೂಗಳು.
ಆರ್ಎಸ್ಎಸ್ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ
ಹಲವಾರು ಕಡೆ ಆರ್ಎಸ್ಎಸ್ ಮತ್ತು ಬಿಜೆಪಿ ಬೇರೆ ಬೇರೆ ಎಂದು ಅದರ ಮುಖಂಡರು ಹೇಳುತ್ತಾರೆ. ಆದರೆ ಒಟ್ಟಿಗೆ ಕೆಲಸ ಮಾಡುತ್ತಾರೆ. ಈ ಕುರಿತು ಎ.ಜೆ ನೂರಾನಿಯವರು ಸವಿಸ್ತಾರವಾಗಿ ಬರೆದಿರುವ ಪುಸ್ತಕ ಆರ್ಎಸ್ಎಸ್ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ. ಸುರೇಶ್ ಭಟ್ ಭಾಕ್ರಬೈಲುರವರು ಕನ್ನಡಕ್ಕೆ ಅನುವಾದ ಮಾಡಿದ್ದು, ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 150 ರೂಗಳು.
ಹಿಂದುತ್ವ ಮತ್ತು ದಲಿತರು
ಖ್ಯಾತ ಅಂಬೇಡ್ಕರ್ವಾದಿ ಚಿಂತಕ ಡಾ. ಆನಂದ್ ತೇಲ್ತುಂಬ್ಡೆಯವರು ರಚಿಸಿರುವ ಹಿಂದುತ್ವ ಮತ್ತು ದಲಿತರು ಪುಸ್ತಕವನ್ನು ಪ್ರೊ.ಬಿ.ಗಂಗಾಧರ ಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ದಲಿತರನ್ನು ಆರ್ಎಸ್ಎಸ್ ಹೇಗೆ ಪರಿಭಾವಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 160 ರೂಗಳು.
ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ
ಆನಂದ್ ತೆಲ್ತುಂಬ್ಡೆಯವರ ಮತ್ತೊಂದು ಮಹತ್ವದ ಪುಸ್ತಕವಿದೆ. ಕೋಮುವಾದದ ಮೂಲಕ ಅಧಿಕಾರ ಹಿಡಿಯುವ ಆರ್ಎಸ್ಎಸ್ ಬಿಜೆಪಿಗೆ ದಲಿತ ಹೋರಾಟ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಪ್ರೊ.ಬಿ.ಗಂಗಾಧರ ಮೂರ್ತಿ ಮತ್ತು ಶಿವಸುಂದರ್ರವರು ಅನುವಾದಿಸಿದ್ದಾರೆ. ಪುಸ್ತಕದ ಬೆಲೆ 140 ರೂಗಳು.
ಹಿಂದೂಗಳ ಬೇರೊಂದು ಚರಿತ್ರೆ
ಖ್ಯಾತ ಲೇಖಕ ವೆಂಡಿ ಡೊನಿಗರ್ರವರ ಈ ಮಹತ್ವದ ಪುಸ್ತಕವನ್ನು ಡಾ. ಬಂಜಗೆರೆ ಜಯಪ್ರಕಾಶ್ರವರು ಕನ್ನಡೀಕರಿಸಿದ್ದಾರೆ. ಸಿರಿವರ ಪ್ರಕಾಶನ ಪ್ರಕಟಿಸಿದ್ದು, ಪುಸ್ತಕದ ಬೆಲೆ 500 ರೂಗಳು.
ನಾನು ಹಿಂದೂ ಆಗಿ ಸಾಯಲಾರೆ
ಡಾ.ಬಿ.ಆರ್ ಅಂಬೇಡ್ಕರ್ರವರು ಏಕೆ ನಾನು ಹಿಂದೂ ಆಗಿ ಸಾಯಲಾರೆ ಎಂದು ವಿವರಿಸಿದರು ಎಂಬುದನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ. ಇದನ್ನು ಸದಾಶಿವ ಮರ್ಜಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪುಸ್ತಕದ ಬೆಲೆ 60/- ರೂಗಳು.
ಸಾವರ್ಕರ್ ಗೋಡ್ಸೆ ನಂಟು ಮತ್ತು ಆತನ ಹಿಂದುತ್ವ ಸಿದ್ಧಾಂತ
ಗಾಂಧಿ ಹಂತಕ ನಾಥೂರಾಮ್ ಗೂಡ್ಸೆಗೂ, ಸಾವರ್ಕರ್ಗೂ ಸಂಬಂಧವೇನು ಇಲ್ಲ ಎಂದು ಹೇಳುತ್ತಾರೆ. ಆದರೆ ಸಾವರ್ಕರ್ ಕೂಡ ಗಾಂಧಿ ಕೊಲೆ ಆರೋಪಿಗಳಲ್ಲಿ ಒಬ್ಬರು ಎಂದು ಆರೋಪಿಸಲಾಗಿದೆ. ಈ ಕುರಿತು ವಿವರಿಸುವ ಪುಸ್ತಕವನ್ನು ಎ.ಜಿ ನೂರಾನಿಯವರು ಬರೆದಿದ್ದಾರೆ. ಸುರೇಶ್ ಭಟ್ ಭಾಕ್ರಬೈಲುರವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೇಸರಿ ಭಯೋತ್ಪಾದನೆ
ಆರ್ಎಸ್ಎಸ್ ಸಂಘಟನೆ ಹೇಳುವುದೇನು, ಮಾಡುವುದೇನು ಎಂಬುದನ್ನು ವಿವರಿಸುವ ಸುರೇಶ ಭಟ್ ಭಾಕ್ರಬೈಲು ಅಂಕಣಗಳ ಸಂಗ್ರಹವೇ ಕೇಸರಿ ಭಯೋತ್ಪಾದನೆ. ಭಾರತದಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಲಂಕೇಶ್ ಪ್ರಕಾಶನ ಇದನ್ನು ಮುದ್ರಿಸಿದ್ದು, 135 ರೂ ಬೆಲೆ ಹೊಂದಿದೆ.
ಬಹುಸಂಖ್ಯಾತವಾದ- ಚಿಂತಕರು ಕಂಡಂತೆ, ಹಿಂದುತ್ವ ರಾಜಕಾರಣ
ಸಂಘ ಪರಿವಾರದ ಹಿಡನ್ ಅಜೆಂಡಾಗಳ ಕುರಿತು ನಿರಂತರ ಬರೆಯುತ್ತಿರುವ ಬಿ.ಶ್ರೀಪಾದ ಭಟ್ ಅವರ ಎರಡು ಕೃತಿಗಳು ಹಿಂದುತ್ವ ರಾಜಕಾರಣದ ಆಳ ಅಗಲಗಳನ್ನು ಬಿಚ್ಚಿಡುತ್ತವೆ. ‘ಹಿಂದುತ್ವ ರಾಜಕಾರಣದ- ಅಂದು ಮತ್ತು ಮುಂದು’, ‘ಬಹುಸಂಖ್ಯಾತವಾದ- ಚಿಂತಕರು ಕಂಡಂತೆ’ ಕೃತಿಗಳು ಸಂಘಪರಿವಾರದ ಕುರಿತು ವಿಶಿಷ್ಟ ಒಳನೋಟಗಳನ್ನು ನೀಡುತ್ತವೆ.
ಆರ್ ಎಸ್ ಎಸ್ ಆಳ ಮತ್ತು ಅಗಲ
ದೇವನೂರು ಮಹಾದೇವರವರ ಇತ್ತೀಚಿನ ಪುಸ್ತಕ. ಆರ್ಎಸ್ಎಸ್ನ ಪ್ರಾಣ ಎಲ್ಲಿದೆ ಎಂಬುದರಿಂದ ಅರಂಭವಾಗಿ ಕರ್ನಾಟಕದ ವರ್ತಮಾನದ ಸವಾಲುಗಳವರೆಗೂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಸೇರಿದಂತೆ ಸುಮಾರು 20 ಪ್ರಕಾಶನ ಸಂಸ್ಥೆಗಳು ಮುದ್ರಿಸಿವೆ. ಬೆಲೆ 40 ರೂ. ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ’ಆರ್ಎಸ್ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..
RSS ಬಗ್ಗೆ ಮಾತಾಡೋ ಅಯೋಗ್ಯರು ,ಅದೇ ಭಯೋತ್ಪಾದನೆಗೆ ಕಾರಣವಾಗಿ ಪ್ರಪಂಚದಲ್ಲಿ ಹಿಂಸೆಯನ್ನು,ಕೊಲೆ ಮಾಡೋದನ್ನೇ ಮೂಲ ಕಸಬು ಮಾಡಿಕೊಂಡಿರುವ ನರ ರಾಕ್ಷಸ ಕಲಬೆರಕೆ SDPI ,PFI ಮೂಲಭೂತವಾದಿಗಳ ಬಗ್ಗೆ ಮಾತಾಡ್ರೋ ಅಯೋಗ್ಯರ ,RSS ಬಗ್ಗೆ ಅರಿವೇ ಇಲ್ಲದ ರೋಲ್ ಕಾಲ್ ಲದ್ದಿ ಜೀವಿಗಳ ಬಂಡವಾಳ ದೇಶದ ಪ್ರತಿ ವ್ಯಕ್ತಿಗೆ ತಿಳಿದಿದೆ
Ashafak
RSS = SDPI = PFI ಈ ಮೂವರು ಮಾಡುವುದು ದೇಶವನ್ನು ಒಡೆಯುವ ಕೆಲಸ , ಇವರಿಂದ ಈ ದೇಶ ಶುಚಿಯಾಗಬೇಕಿದೆ , ಮೂವರೂ ಭಯವನ್ನ ಉತ್ಪಾದಿಸುವವರು …..!
ಅತ್ಯತ್ತಮವಾದ ಕೆಲಸ. ಈ ಪುಸ್ತಕಗಳು “ರಾಕ್ಷಸ ಸಂತತಿಯ ಸಂಘ” ಹಾಗೂ ಬ್ಲೂ ಜೋಕರ್ಸ್ ಪಾರ್ಟಿಯ ನಿಜ ಬಣ್ಣ ಬಯಲು ಮಾಡುವ ಕನ್ನಡಿಗಳಾಗಿವೆ. ಅದ್ಯಾವುದೋ ರಾಕ್ಷಸಕುಲದ ನಾಯಿಯೊಂದು ಮೇಲೆ ಈ ಪುಸ್ತಕಗಳ ಲೇಖಕರನ್ನ ಕಲಬೆರಕೆಗಳೆಂದು ಹೇಳಿ ತನ್ನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಪಡಿಸಿದ್ದನೆ, ಇಂತಹ ಹರಾಮಿ ಕಲಬೆರಕೆಗಳನ್ನ ಮಟ್ಟ ಹಾಕಬೇಕಿದೆ.