ಪಿಎಂಸಿ ಬ್ಯಾಂಕ್ ಹಗರಣದ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಅವರ ಪುತ್ರ ನೀಲ್ ಸೋಮಯ್ಯ ಅವರನ್ನು ಬಂಧಿಸಿರುವುದನ್ನು ಉಲ್ಲೇಖಿಸಿ, ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು, ತಂದೆ ಮತ್ತು ಮಗನ ಜೋಡಿಯನ್ನು ಶೀಘ್ರದಲ್ಲೇ ಜೈಲಿಗಟ್ಟಲಾಗುವುದು ಎಂದು ಹೇಳಿದ್ದಾರೆ.
ಶಿವಸೇನೆ ನಾಯಕ ಹೇಳಿದರು, “ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ…ನಾನು ಪುನಃ ಹೇಳುತ್ತಿದ್ದೇನೆ, ಅಪ್ಪ ಮಗ ಜೈಲಿಗೆ ಹೋಗುತ್ತಾರೆ, ಅಷ್ಟೆ. ಖಚಿತವಾಗಿ ಹೇಳುವುದಾದರೆ, ಅಪ್ಪ ಮತ್ತು ಮಗನನ್ನು ಮಾತ್ರವಲ್ಲದೆ, ಮೂವರು ಕೇಂದ್ರೀಯ ಏಜೆನ್ಸಿ ಅಧಿಕಾರಿಗಳು ಮತ್ತು ಅವರ ವಸೂಲಿ ಏಜೆಂಟ್ಗಳು ಸಹ ಜೈಲಿನ ಕಂಬಿಗಳ ಹಿಂದೆ ಹೋಗುತ್ತಾರೆ. ಮಹಾರಾಷ್ಟ್ರ ಹೆದರುವುದಿಲ್ಲ (ಮಹಾರಾಷ್ಟ್ರ ಜುಕೆಗಾ ನಹೀ!)” ಎಂದು ಹೇಳಿದ್ದಾರೆ.
ವಾರದ ಹಿಂದೆಯಷ್ಟೆ ಸಂಜಯ್ ರಾವತ್ ಅವರು, ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಅವರು ನೀರವ್ ಡೆವಲಪರ್ಸ್ನಲ್ಲಿ 260 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಅವರ ಮಗ ನೀಲ್ ಸೋಮಯ್ಯ ಮತ್ತು ಅವರ ಪತ್ನಿ ಮೇಧಾ ಅವರು ಪಾಲ್ಘರ್ ಜಿಲ್ಲೆಯ ನಿಕಾನ್ ಗ್ರೀನ್ ವಿಲ್ಲೆ ಪ್ರಾಜೆಕ್ಟ್ನ ನಿರ್ದೇಶಕರೇ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: 12 ಕೋಟಿ ಮೌಲ್ಯದ ಕಾರು ಖರೀದಿ: ಮೋದಿ ತಮ್ಮನ್ನು ತಾವು ಫಕೀರ ಎಂದು ಕರೆದುಕೊಳ್ಳಬಾರದು – ಸಂಜಯ್ ರಾವುತ್