ಇಂದು (ಜ.30) ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆಯಾಗಿದ್ದು, ದೇಶಾದ್ಯಂತ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ’ವ್ಯಕ್ತಿಯನ್ನು ಸಾಯಿಸಬಹುದು, ಸಿದ್ದಾಂತವನ್ನಲ್ಲ’ ಎಂದಿದ್ದಾರೆ.
“ಮಹಾತ್ಮ ಗಾಂಧೀಜಿ ಕೇವಲ ವ್ಯಕ್ತಿ ಅಲ್ಲ, ಅವರೊಂದು ಸಿದ್ದಾಂತ. ಗಾಂಧಿ ತತ್ವ-ಸಿದ್ಧಾಂತದ ಹಾದಿಯಲ್ಲಿ ಮುನ್ನಡೆದು ಅವರನ್ನು ಅಜರಾಮರರನ್ನಾಗಿ ಮಾಡೋಣ” ಎಂದಿದ್ದಾರೆ.
“ಗೋಡ್ಸೆ ಮತ್ತು ಅವನ ಕೃತಜ್ಞತೆಯಿಲ್ಲದ ಸ್ವಾರ್ಥಿ ಗ್ಯಾಂಗ್ ಮಹಾತ್ಮಗಾಂಧಿಯವರನ್ನು ಕೊಂದಿರಬಹುದು, ಆದರೆ ಗಾಂಧೀಜಿ ಆಗಲೇ ಅನೇಕ ಫ್ಯಾಸಿಸ್ಟ್ ಗೋಡ್ಸೆಗಳ ವಿರುದ್ಧ ಹೋರಾಡಲು ಭಾರತವನ್ನು ಬಲಪಡಿಸಿದ್ದರು. ಮಹಾತ್ಮರ ಭಾರತವನ್ನು ರಕ್ಷಿಸಲು ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಮಹಾತ್ಮರ ಪುಣ್ಯತಿಥಿಯಂದು ಅವರಿಗೆ ನಮನಗಳು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ
ಮಹಾತ್ಮ ಗಾಂಧೀಜಿ ಕೇವಲ ವ್ಯಕ್ತಿ ಅಲ್ಲ, ಅವರೊಂದು ಸಿದ್ದಾಂತ
ವ್ಯಕ್ತಿಯನ್ನು ಸಾಯಿಸ ಬಹುದು, ಸಿದ್ದಾಂತವನ್ನಲ್ಲ.
ಗಾಂಧಿ ತತ್ವ-ಸಿದ್ಧಾಂತದ ಹಾದಿಯಲ್ಲಿ ಮುನ್ನಡೆದು
ಅವರನ್ನು ಅಜರಾಮರರನ್ನಾಗಿ
ಮಾಡೋಣ.#MartyrsDay pic.twitter.com/YjK5aXo3kA— Siddaramaiah (@siddaramaiah) January 30, 2022
ಮಹಾತ್ಮ ಗಾಂಧೀಯವರಿಗೆ ನಮನ ಸಲ್ಲಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಹುತಾತ್ಮರ ದಿನದಂದು, ಕೋಮುವಾದದ ವಿರುದ್ಧ ಹೋರಾಡಲು, ಭ್ರಾತೃತ್ವವನ್ನು ಉತ್ತೇಜಿಸಲು ಪ್ರತಿಜ್ಞೆ ಮಾಡೋಣ” ಎಂದಿದ್ದಾರೆ.
“ಧರ್ಮದ ಹೆಸರಿನಲ್ಲಿ ಇಂದಿಗೂ ಜನರನ್ನು ಹತ್ಯೆ ಮಾಡುವ ಶಕ್ತಿಗಳೇ ಮಹಾತ್ಮಗಾಂಧಿ ಅವರನ್ನು ಹತ್ಯೆಗೈದಿವೆ. ಅವರು ಇಂದು ಕೂಡ ನಮ್ಮ ದೇಶಕ್ಕೆ ದೊಡ್ಡ ಬೆದರಿಕೆಯಾಗಿದ್ದಾರೆ. ಗಾಂಧೀಜಿಯವರ ನೆನಪು ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿದೆ. ಈ ಹುತಾತ್ಮರ ದಿನದಂದು, ಕೋಮುವಾದದ ವಿರುದ್ಧ ಹೋರಾಡಲು, ಭ್ರಾತೃತ್ವವನ್ನು ಉತ್ತೇಜಿಸಲು ಪ್ರತಿಜ್ಞೆ ಮಾಡೋಣ” ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
#MahatmaGandhi was murdered by the very forces that still slaughter people in the name of religion. They are the biggest threat to our country today. Gandhiji's memory is more relevant now than ever before. This #Martyrs'Day, let's pledge to fight communalism, promote fraternity. pic.twitter.com/go6dJ37kg8
— Pinarayi Vijayan (@vijayanpinarayi) January 30, 2022
ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು