ಆಡಳಿತರೂಢ ಎನ್ಡಿಎ ಮತ್ತು ವಿರೋಧ ಪಕ್ಷಗಳ INDIA ಒಕ್ಕೂಟ ಈ ಎರಡರಲ್ಲಿಯೂ ನಾವಿಲ್ಲ, ಯಾವುದಕ್ಕೂ ಸೇರುವ ಇಚ್ಛೆಯೂ ನಮಗೆ ಇಲ್ಲ ಎಂದು ಭಾರತೀಯ ರಾಷ್ಟ್ರೀಯ ಪಕ್ಷದ (ಬಿಎಎಸ್) ವರಿಷ್ಠ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಸ್ಪಷ್ಟಣೆ ನೀಡಿದ್ದಾರೆ.
ಈ ವಿಚಾರವಾಗಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಅವರು, ”ಎನ್ಡಿಎ ಮತ್ತು INDIA ಯಾವುದೇ ಒಕ್ಕೂಟಕ್ಕೂ, ನಾವು ಸೇರಿಲ್ಲ ಯಾವುದಕ್ಕೂ ಸೇರುವ ಇಚ್ಛೆಯೂ ನಮಗೆ ಇಲ್ಲ. ಹಾಗಂತ ನಾವು ಏಕಾಂಗಿ ಅಲ್ಲ ನಮಗೂ ಗೆಳೆಯರ ಬಳಗ ಇದೆ. ಇಂಡಿಯಾ ಎಂಬ ಹೊಸ ಒಕ್ಕೂಟದಲ್ಲಿ ಏನಿದೆ ವಿಶೇಷ? 50 ವರ್ಷ ಅಧಿಕಾರದಲ್ಲಿದ್ದ ಅವರು ಯಾವುದೇ ಬದಲಾವಣೆ ತರಲಿಲ್ಲ” ಎಂದು ಹೇಳಿದ್ದಾರೆ.
#WATCH Telangana CM & BRS President KC Rao on being asked if his party is with I.N.D.I.A alliance or NDA
"We are neither with anyone nor do we want to be with anyone. We aren't alone & we also have friends as well. What is new India? They were in power for 50 years, there was… pic.twitter.com/uvnmaJWaGE
— ANI (@ANI) August 2, 2023
ಇತ್ತೀಚೆಗೆ, ಬೆಂಗಳೂರಿನಲ್ಲಿ ಸಭೆ ಸೇರಿದ ಪ್ರತಿಪಕ್ಷಗಳ ನಾಯಕರು 2024ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ವಿರುದ್ಧ ಒಗಟ್ಟಿನ ಹೋರಾಟ ಸಂಘಟಿಸಲು INDIA ಎಂಬ ಒಕ್ಕೂಟ ಘೋಷಣೆ ಮಾಡಿದವು. ಈ ಪ್ರತಿಪಕ್ಷ ನಾಯಕರ ಸಭೆಯಿಂದಲೂ ಬಿಆಎಸ್ ಪಕ್ಷ ದೂರ ಉಳಿದಿತ್ತು.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅಣತಿಯಂತೆ ಬಿಆರ್ ಎಸ್ ಕೆಲಸ ಮಾಡುತ್ತದೆ ಬಿಆರ್ಎಸ್ ಬಿಜೆಪಿಯ ಬಿ ಟೀಮ್ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.
ದೆಹಲಿಯಲ್ಲಿ ಇತ್ತೀಚೆಗೆ ಎನ್ಡಿಎ ಒಕ್ಕಟದ ಪಕ್ಷಗಳಿಗೆ ಆಹ್ವಾನ ನೀಡಿ ಸಭೆ ಕರೆಯಲಾಗಿತ್ತು. ಆದರೆ ಬಿಆರ್ಎಸ್ಗೆ ಯಾವುದೇ ಆಹ್ವಾನ ನೀಡಲಾಗಿರಲಿಲ್ಲ ಮತ್ತು ಎನ್ಡಿಎ ಸೇರುವ ಬಗ್ಗೆ ಕೆ ಚಂದ್ರಶೇಖರ ರಾವ್ ಒಲವು ತೋರಿರಲಿಲ್ಲ.
ದೆಹಲಿ ಸೇವಾ ಮಸೂದೆ ವಿರುದ್ಧ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಿರುವ ಬಿಆರ್ಎಸ್
ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್)ಯು ಸೋಮವಾರ ತನ್ನ ಎಲ್ಲಾ ರಾಜ್ಯಸಭಾ ಸಂಸದರಿಗೆ ಸದನದಲ್ಲಿ ಹಾಜರಾಗುವಂತೆ ಮತ್ತು ದೆಹಲಿ ಸೇವೆಗಳ ಸುಗ್ರೀವಾಜ್ಞೆ ಮಸೂದೆಯ ವಿರುದ್ಧ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಿದೆ.
”ಬಿಆರ್ಎಸ್ (ರಾಜ್ಯಸಭೆ)ನ ಎಲ್ಲಾ ಸಂಸದರು ದೆಹಲಿ ಸೇವೆಗಳ ಸುಗ್ರೀವಾಜ್ಞೆ ಮಸೂದೆಯನ್ನು ಸದನದ ಮುಂದೆ ಯಾವುದೇ ಸಮಯದಲ್ಲಿ ತರಬಹುದು ಹಾಗಾಗಿ ಪಕ್ಷದ ಎಲ್ಲ ಸದಸ್ಯರು ಅದರ ವಿರುದ್ಧ ಮತ ಚಲಾಯಿಸಲು ವಿನಂತಿಸಲಾಗಿದೆ” ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.
ಮೇಲ್ಮನೆಯಲ್ಲಿ ಬಿಆರ್ಎಸ್ ಏಳು ಸಂಸದರನ್ನು ಹೊಂದಿದೆ. ”ಜುಲೈ 31ರಿಂದ ಆಗಸ್ಟ್ 4ರವರೆಗೆ ಮತ್ತು ಮಸೂದೆಯ ಮೇಲಿನ ಮತದಾನ ಮುಗಿಯುವವರೆಗೆ ಅವರೆಲ್ಲರೂ ಸದನದಲ್ಲಿ ಹಾಜರಿರಬೇಕು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೆಹಲಿಯ NCT ಸರ್ಕಾರ (ತಿದ್ದುಪಡಿ) ಸುಗ್ರೀವಾಜ್ಞೆಯು ದೆಹಲಿ ಸರ್ಕಾರದಿಂದ ಸೇವೆಗಳ ಮೇಲಿನ ನಿಯಂತ್ರಣವನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: INDIAದ ನಿಯೋಗವು ಮಣಿಪುರ ಜನರ ಕಣ್ಣೀರು ಒರೆಸಿ ಬಂದಿದೆ: ರಾಘವ್ ಚಡ್ಡಾ