Homeಮುಖಪುಟಇರಾನ್‌ಗೆ ಹೊಸ ಅಧ್ಯಕ್ಷ; ಬದಲಾಗುವವೇ ಅಂತಾರಾಷ್ಟ್ರೀಯ ಸಂಬಂಧಗಳು?

ಇರಾನ್‌ಗೆ ಹೊಸ ಅಧ್ಯಕ್ಷ; ಬದಲಾಗುವವೇ ಅಂತಾರಾಷ್ಟ್ರೀಯ ಸಂಬಂಧಗಳು?

- Advertisement -
- Advertisement -

ಜೂನ್ 18ನೆ ತಾರೀಕು ನಡೆದ ಇರಾನಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಇರಾನಿನ ಜನತೆ ಇಬ್ರಾಹಿಂ ರೈಸಿ ಎಂಬ ನ್ಯಾಯವಾದಿ ಧರ್ಮಗುರುವನ್ನು ಆಯ್ಕೆ ಮಾಡಿದೆ. 1979ರ ಕ್ರಾಂತಿಯ ನಂತರದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಇದೇ ಮೊದಲ ಬಾರಿ ಇಷ್ಟು (48.8 ರಷ್ಟು) ಪ್ರಮಾಣದ ಕಡಿಮೆ ಮತದಾನವಾಗಿರುವುದು. ಕ್ರಾಂತಿಯ ಸ್ವಲ್ಪ ಸಮಯದ ನಂತರ ರೈಸಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅಟಾರ್ನಿ ಜನರಲ್, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಅನೇಕ ನ್ಯಾಯಾಂಗ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರೈಸಿಯ ಅವಧಿ ಆಗಸ್ಟ್ 3ರಿಂದ ಪ್ರಾರಂಭವಾಗಲಿದೆ. ಇರಾನಿನ ಸರ್ವೋಚ್ಚ ನಾಯಕ ಖಮೇನಿ ಹತ್ತಿರದ ಬಳಗದಲ್ಲಿ ಗುರುತಿಸಿಕೊಂಡಿರುವ ರೈಸಿ, ಅಂತರರಾಷ್ಟ್ರೀಯ ನಿರ್ಬಂಧಗಳ ಅಡಿಯಲ್ಲಿದ್ದಾರೆ. ನವೆಂಬರ್ 2019ರಲ್ಲಿ, ವಾಷಿಂಗ್ಟನ್, ರೈಸಿ ಸೇರಿದಂತೆ ಖಮೇನಿಯ ಕೆಲವು ಸಲಹೆಗಾರರ ವಿರುದ್ಧ ಹೊಸ ನಿರ್ಬಂಧಗಳನ್ನು ವಿಧಿಸಿತ್ತು. ಇದಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಿತ ವ್ಯಕ್ತಿಗಳ ಯುರೋಪಿಯನ್ ಯೂನಿಯನ್ ಪಟ್ಟಿಯಲ್ಲಿಯೂ ಸಹ ಇವರ ಹೆಸರಿದೆ. ಆದ್ದರಿಂದ, ರೈಸಿಯ ಆಡಳಿತದಲ್ಲಿ ಮುಂದಿನ ರಾಜತಾಂತ್ರಿಕ ಮಾತುಕತೆಗಳು ಇನ್ನಷ್ಟು ಕಠಿಣ ಪರಿಸ್ಥಿತಿ ಮತ್ತು ಬಿಕ್ಕಟ್ಟುಗಳನ್ನು ಸೃಸ್ಟಿಸಬಹುದು.

ಇರಾನ್‌ನ ವಿದೇಶಾಂಗ ನೀತಿಯು ಯಾವಾಗಲು ಸರ್ವೋಚ್ಚ ನಾಯಕ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನಿಂದ (ಐಆರ್‌ಜಿಸಿ) ಹೆಚ್ಚು ಪ್ರಭಾವಿತವಾಗಿರುತ್ತದೆ. ರೈಸಿ ಅಧಿಕಾರ ಸ್ವೀಕರಿಸಿದ ನಂತರವೂ ಇವರ ಪ್ರಭಾವ ಸರ್ಕಾರದ ಮೇಲೆ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಏಕಪಕ್ಷೀಯವಾಗಿ ತನ್ನ ಹಿಂದಿನ ಸರ್ಕಾರದ ಸಮಾಲೋಚನೆ ಮತ್ತು ಮಾತುಕತೆಗಳ ಮೂಲಕ ಅಸ್ತಿತ್ವಕ್ಕೆ ಬಂದಿದ್ದ ಜೆಸಿಪಿಒಎ ಒಪ್ಪಂದದಿಂದ ಹಿಂದೆ ಸರಿದಿದ್ದರು ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿ ಇರಾನಿನ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಿದ್ದರು. ಈಗ ಟ್ರಂಪ್ ನಂತರ ಅಧಿಕಾರಕ್ಕೆ ಏರಿರುವ ಜೋ ಬಿಡೆನ್ ಇನ್ನೂ ನಿರ್ಬಂಧಗಳನ್ನು ಸಡಿಲಿಸಿಲ್ಲ. ಸದ್ಯಕ್ಕೆ ಹಾಲಿ ಅಧ್ಯಕ್ಷ ರೌಹಾನಿಯ ವಿದೇಶಾಂಗ ತಂಡ ಜೆಸಿಪಿಒಎ ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

1979ನೆ ಇಸವಿಯಿಂದ ಈವರೆಗೂ ಸತತವಾಗಿ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನ್, ಅಮೆರಿಕಾದ ವಿನಾಶಕಾರಿ ಮತ್ತು ಮಧ್ಯ ಪ್ರಾಚ್ಯ ಏಷ್ಯಾ ರಾಜಕೀಯಕ್ಕೆ ಸೆಡ್ಡು ಹೊಡೆದು ನಿಂತಿರುವುದೇ ಅಲ್ಲದೆ, ಪರಿಣಾಮಕಾರಿ ಪ್ರತಿರೋಧವನ್ನೂ ಒಡ್ಡುತ್ತಿದೆ. ಪಾಶ್ಚಾತ್ಯ ರಾಷ್ಟ್ರಗಳು ಮುಖ್ಯವಾಗಿ ಅಮೆರಿಕಾ ಯಾವ ರೀತಿಯ ಕ್ರೂರ ಜೀವವಿರೋಧಿ ನಿರ್ಬಂಧಗಳನ್ನು ಇರಾನಿನ ಮೇಲೆ
ಹೇರಿದೆಯೆಂದರೆ ಸಾಮಾನ್ಯ ಇರಾನಿಯನ್ನರಿಗೆ ಜೀವ ಉಳಿಸುವ ಔಷಧಗಳು ಲಭ್ಯವಾಗುತ್ತಿಲ್ಲ. ತನ್ನ ಕಚ್ಚಾ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರುವಂತಿಲ್ಲ. ಹೊಸ ಆವಿಷ್ಕಾರಕ್ಕೆ ಬೇಕಾಗಿರುವ ತಾಂತ್ರಿಕ ಮತ್ತು ಕಚ್ಚಾ ಸಾಮಗ್ರಿ ರಫ್ತಿನ ನಿರ್ಬಂಧ ಮತ್ತು ಅಗತ್ಯ ವಸ್ತುಗಳ ವಹಿವಾಟುಗಳ ಮೇಲಿನ ನಿರ್ಬಂಧಗಳನ್ನು ಮುಖ್ಯವಾಗಿ ಪಶ್ಚಿಮ ದೇಶಗಳಿಂದ ಇರಾನ್ ಎದುರಿಸುತ್ತಿದೆ. 1979ರ ಇರಾನಿಯನ್ ರೆವಲ್ಯೂಷನ್ ನಂತರ ಅಸ್ತಿತ್ವಕ್ಕೆ ಬಂದ ಇರಾನ್, ವಿವಿಧ ಏಕಪಕ್ಷೀಯ ಅಂತಾರಾಷ್ಟ್ರೀಯ ನಿರ್ಬಂಧಗಳ ಹೂರತಾಗಿಯೂ, ಬಹಳಷ್ಟು ಕ್ಷೇತ್ರಗಳಲ್ಲಿ, ಸೀಮಿತ ಸಂಪನ್ಮೂಲಗಳೊಂದಿಗೆ ಪ್ರಗತಿಯನ್ನು ಸಾಧಿಸಿದೆ ಮತ್ತು ಅಷ್ಟೇ ಕಡುಕಷ್ಟಗಳನ್ನು ಎದುರಿಸುತ್ತಿದೆ.

ಅಧ್ಯಕ್ಷೀಯ ಚುನಾವಣೆ ಗೆಲುವಿನ ನಂತರ ರೈಸಿ ತಮ್ಮ ಮೊದಲ ಭಾಷಣದಲ್ಲಿ ಹೇಳಿರುವಂತೆ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭೇಟಿ ಮಾಡಲು ನಿರಾಕರಿಸಿದ್ದಾರೆ. ಆದರೆ, ಎರಡೂ ದೇಶಗಳ ನಡುವೆ ಒಪ್ಪಂದ ಅಸ್ತಿತ್ವಕ್ಕೆ ಬರಲು ಅವರು ಒಲವು ತೋರಿಸಿದ್ದಾರೆ. ಒಪ್ಪಂದದ ಮರುಮಾತುಕತೆಗಳಿಗೆ ಹೂಡಿರುವ ಷರತ್ತುಗಳನ್ನು ಮತ್ತು ಹೊಸ ಬೇಡಿಕೆಗಳನ್ನು (ತಮ್ಮ ದೇಶದ ಹೊಸ ಸಣ್ಣ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಂಶೋಧನೆ ಮತ್ತು ಉತ್ಪಾದನೆಗಳನ್ನು ನಿಲ್ಲಿಸುವುದು) ತಿರಸ್ಕರಿಸಿದ್ದಾರೆ. ನೆರೆಹೊರೆಯ ಸುನ್ನಿ ಕೊಲ್ಲಿ ರಾಜ್ಯಗಳೊಂದಿಗೆ ಸಂಬಂಧವನ್ನು ಸುಧಾರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ತನ್ನ ಸುತ್ತಮುತ್ತಲಿನ ಸುನ್ನಿ ರಾಷ್ಟ್ರಗಳು ಇತ್ತೀಚಿಗೆ ಇಸ್ರೇಲ್‌ನೊಂದಿಗೆ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಸಮಯದಲ್ಲಿ, ಇರಾನ್ ಜೊತೆಗೆ ಆ ರಾಷ್ಟ್ರಗಳ ಸಂಬಂಧಗಳ ಸುಧಾರಣೆ ಹೇಗಾಗುತ್ತದೆ ಎಂಬುದನ್ನು ಕಾದು ನೋಡಬೇಕು. ತನ್ನ ಸುತ್ತಲಿನ ರಾಷ್ಟ್ರಗಳಲ್ಲಿ ಅಮೆರಿಕ ತನ್ನ ಪಡೆಗಳನ್ನು ಯೋಜಿಸಿದ್ದರೂ ಅದಕ್ಕೆ ಹೆದರದೆ ಯೆಮೆನ್‌ನಲ್ಲಿ ಹೌತಿಗಳೊಂದಿಗೆ, ಲೆಬನಾನ್‌ನಲ್ಲಿ ಹೆಜ್ಭೋಲ್ಲದೊಂದಿಗೆ ಯುದ್ಧ ಬಿಕ್ಕಟ್ಟನ್ನು ಎದುರಿಸಿದ ಇರಾನ್ ಸಿರಿಯಾದಲ್ಲಿ ತನ್ನದೇ ಆದ ಪಡೆಗಳನ್ನು ಸೃಷ್ಟಿಸಿದೆ.

ನಿರ್ಬಂಧಗಳ ಹೊರತಾಗಿಯೂ ತನ್ನ ’ಮಧ್ಯಮ ಹಾಗೂ ಸಣ್ಣ ದೂರದ ನಿಖರವಾದ ಕ್ಷಿಪಣಿ’ ತಯಾರಿಕೆಯಲ್ಲಿ ಪಳಗಿರುವ ಇರಾನ್ ಅದನ್ನು ಉಪಯೋಗಿಸುವುದರಲ್ಲಿ ಹೌತಿಗಳ ’ಅರಂಕೋ’ ಮೇಲಿನ ನಿಖರ ದಾಳಿಯೇ ಸಾಕ್ಷಿ. ಇರಾನಿನ ಈ ಶಸ್ತ್ರಾಸ್ತ್ರ ಸಂಶೋಧನೆ ಮತ್ತೆ ವಿಸ್ತಾರವಾಗುತ್ತಿರುವಂತೆ, ಅದರ ಬಲ ಸೌದಿ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸುತ್ತಿದೆ. ಆದ್ದರಿಂದಲೇ 2020 ಜನವರಿ ಮೊದಲ ವಾರದಲ್ಲಿ ಸ್ಥಳೀಯವಾಗಿ ಸಿಂಹಸ್ವಪ್ನವಾಗಿದ್ದ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮುಖ್ಯಸ್ಥ ಸೊಲೈಮಾನಿಯನ್ನು ಹತ್ಯೆ ಮಾಡಲಾಯಿತು ಎನ್ನಲಾಗುತ್ತಿದೆ. ನಂತರ ಇರಾನಿನ ಅಣು ಸಂಶೋಧನೆಯಲ್ಲಿ ಹೆಸರಾದ ಮೊಹಸೀನ್ ಫಖ್ರಿಝದೇಹ್‌ನನ್ನು ಹತ್ಯೆ ಮಾಡಲಾಯಿತು. ಹೀಗೆ ಇರಾನಿನ ಪ್ರಮುಖ ವಿಜ್ಞಾನಿಗಳನ್ನು ಇಸ್ರೇಲ್ ಮತ್ತು ಅಮೆರಿಕಾದ ಬೇಹುಗಾರಿಕಾ ಪಡೆಗಳು ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಹತ್ಯೆ ಮಾಡುತ್ತಲೇ ಇರುತ್ತವೆ. ಇರಾನ್ ಸುತ್ತಲಿನ ದೇಶಗಳಲ್ಲಿ ಅಮೆರಿಕದ ಪಡೆಗಳು ನಿಯೋಜಿತಗೊಂಡಿವೆ. ಪೂರ್ವಕ್ಕೆ ಅಘಾನಿಸ್ತಾನದಲ್ಲಿ ಎನ್.ಎ.ಟಿ.ಓ ಪಡೆಗಳನ್ನು ಅಮೆರಿಕ ಹೊಂದಿದೆ ಮತ್ತು ಪಶ್ಚಿಮಕ್ಕೆ ಇರಾಕ್‌ನಲ್ಲಿ ತನ್ನ ಸ್ಥಳೀಯ ಆಗೂ ಪಾಶ್ಚಾತ್ಯ ಮಿತ್ರಪಡೆಗಳನ್ನು ಅಮೆರಿಕ ನಿಯೋಜಿಸಿದೆ.

ಭಾರತ ಅಮೆರಿಕದ ಜೊತೆಗೆ ಹೆಚ್ಚು ಸಖ್ಯ ಬೆಳೆಸಿಕೊಳ್ಳುವ ಕಾರಣಕ್ಕಾಗಿ ಇರಾನ್‌ಅನ್ನು ದೂರ ಮಾಡಿಕೊಂಡು ಸೌದಿ ಬಣದೊಂದಿಗೆ ಗುರುತಿಸಿಕೊಳ್ಳುತ್ತಿದೆ. ಒಂದು ಕಡೆ ಭಾರತದ ತನ್ನ ದ್ವಂದ್ವ ವರ್ತನೆಯಿಂದ ಸ್ಥಳೀಯ ಸ್ನೇಹಿತ ರಾಷ್ಟ್ರಗಳನ್ನು ದೂರ ಮಾಡಿಕೊಳ್ಳುತ್ತಿದ್ದರೆ, ನೆರೆಯ ಚೀನಾ ಇರಾನ್ ಮತ್ತು ರಶಿಯಾದೊಂದಿಗೆ ಜೊತೆಗೂಡಿ ಅಮೆರಿಕ ಮತ್ತು ಪಾಶ್ಚಾತ್ಯ ಕೂಟಕ್ಕೆ ಎದುರಾಗಿ ನಿಂತಿದೆ. ಚೀನಾ ಕಳೆದ ವರ್ಷ ಇರಾನಿನೊಂದಿಗೆ 400 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ತನ್ನ ಮಹತ್ವಾಕಾಂಕ್ಷೆಯ ಎರಡನೆ ಸಿಲ್ಕ್ ರಸ್ತೆಗೆ ಇರಾನ್ ಬಹುದೊಡ್ಡ ಶಕ್ತಿ ಮತ್ತು ಪಾಲುದಾರನನ್ನಾಗಿಸಲು ಚೀನಾ ಹೊರಟಿದೆ. ಆದರೆ ಭಾರತ ಒಂದರನಂತರ ಒಂದು ಪಾಶ್ಚಾತ್ಯ ಪೂರಕ ಒಪ್ಪಂದಗಳಿಗೆ ಸಹಿ ಹಾಕಿ ಭಾರತವನ್ನು ಮತ್ತು ಅಮೆರಿಕದ ಮಿಲಿಟರಿ ಸಾಮ್ರಾಜ್ಯಶಾಹಿಗೆ ಒಪ್ಪಿಸಲು ತುದಿಗಾಲಿನಲ್ಲಿ ನಿಂತಿದೆಯೇನೋ ಎಂಬಂತಾಗಿದೆ.

ತನ್ನ ಐತಿಹಾಸಿಕ ಬಾಂಧವ್ಯವನ್ನು ಮರೆತು ಅಮೆರಿಕದ ಒತ್ತಡದಿಂದ 12% ಆಮದು ಮಾಡಿಕೊಳ್ಳುವ ತನ್ನ ಅವಶ್ಯದ ಕಚ್ಚಾ ತೈಲದ ಆಮದನ್ನು ಇರಾನ್‌ನಿಂದ ನಿಲ್ಲಿಸಿದೆ. ಹಾಗೆಯೆ ಭಾರತದ ಮಹತ್ವಾಕಾಂಕ್ಷೆಯ ಚಾಬಹಾರ್ ಬಂದರು ಯೋಜನೆ ಮತ್ತು ಕಚ್ಚಾ ತೈಲದ ’ಫರ್ಜಾದ್ ಬಿ’ ಬಾವಿಯಿಂದಲೂ ಭಾರತ ಹೊರಹಾಕಲ್ಪಡಬಹುದು. ರೈಸಿ ಮತ್ತು ಇರಾನಿನ ಪ್ರಮುಖ ನಾಯಕರು ಭಾರತದಲ್ಲಿ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ಸಾಂಸ್ಕೃತಿಕ ಹಲ್ಲೆಗಳನ್ನು ಕಟುವಾಗಿ ನಿಂದಿಸಿದ್ದಾರೆ. ಇರಾನಿನ ಹೊಸ ಅಧ್ಯಕ್ಷ ಇಬ್ರಾಹಿಂ ರೈಸಿ ಭಾರತ ಪರವಾಗಿರುತ್ತಾರೋ ಅಥವಾ ನಮ್ಮ ವಿರುದ್ಧವಾಗಿರುತ್ತಾರೋ ಎಂಬ ಪ್ರಶ್ನೆಗಳ ಬದಲು ಕ್ಷೀಣಿಸುತ್ತಿರುವ ಭಾರತದ ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಭಾರತ ಎಚ್ಚೆತ್ತುಕೊಂಡರೆ, ನೆರೆಹೊರೆಯ ದೇಶಗಳೊಂದಿಗೆ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಸುಲಭವಾಗಿರುತ್ತದೆ ಮತ್ತು ಪರಿಣಾಮಕಾರಿಯಾಗಿರುತ್ತದೆ.


ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...