Homeಕರ್ನಾಟಕ'ಕೇಂದ್ರ ಮತ್ತು ರಾಜ್ಯಗಳ ನಡುವೆ ಸ್ಪರ್ಧೆ ಬೇಡ..'; ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌

‘ಕೇಂದ್ರ ಮತ್ತು ರಾಜ್ಯಗಳ ನಡುವೆ ಸ್ಪರ್ಧೆ ಬೇಡ..’; ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌

- Advertisement -
- Advertisement -

ಕೇಂದ್ರದ ವಿರುದ್ಧ ನಿರ್ದೇಶನಗಳನ್ನು ಕೋರಿ ರಾಜ್ಯ ಸರ್ಕಾರಗಳು ತನ್ನನ್ನು ಸಂಪರ್ಕಿಸಿರುವ ಇತ್ತೀಚಿನ ನಿದರ್ಶನಗಳ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ. ತಿಕ್ಕಾಟದ ಬದಲಿಗೆ ಪರಸ್ಪರ ಸಹಕರಿಸಲು ಎರಡೂ ಕಡೆಯವರಿಗೆ ಸುಪ್ರೀಂ ಕರೆ ನೀಡಿತು. ಕೇಂದ್ರದಿಂದ ಬರ ಪರಿಹಾರ ಧನ ಬಿಡುಗಡೆಗೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ಕೇಂದ್ರ ಮತ್ತು ರಾಜ್ಯಗಳ ನಡುವೆ ಸ್ಪರ್ಧೆ ಬೇಡ” ಎಂದು ಸಲಹೆ ನೀಡಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರವು ಕರ್ನಾಟಕ ಸರ್ಕಾರಕ್ಕೆ ಆರ್ಥಿಕ ನೆರವು ನೀಡಿಲ್ಲ; ಹಣ ನೀಡದ ಕಾರಣ ದಕ್ಷಿಣದ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿರುವುದರಿಂದ ನ್ಯಾಯಾಲಯದ ಮೊರೆ ಹೋಗುವುದನ್ನು ನಿರ್ಬಂಧಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಬರ ಸಂಬಂಧಿತ ಅನಾಹುತದ ಕುರಿತು ಅಂತರ-ಸಚಿವಾಲಯದ ತಂಡದ ವರದಿಯ ಮೇಲೆ ಕೇಂದ್ರವು ಸುಮಾರು ಆರು ತಿಂಗಳವರೆಗೆ (ಅದನ್ನು ಅಕ್ಟೋಬರ್‌ನಲ್ಲಿ ಸಲ್ಲಿಸಲಾಗಿದೆ) ಮತ್ತು “ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು) ನಿಧಿ ತಡೆಹಿಡಿಯುವ ಕಾರಣದಿಂದ ಪರಿಸ್ಥಿತಿ ಉಲ್ಬಣಗೊಂಡಿದೆ” ಎಂದು ರಾಜ್ಯವು ವಾದಿಸಿತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವರದಿ ಸಲ್ಲಿಸಿದ ಒಂದು ತಿಂಗಳೊಳಗೆ ಕೇಂದ್ರವು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು, ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟ್ರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಎರಡು ವಾರಗಳ ಕಾಲಾವಕಾಶ ನೀಡಿದೆ.

ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರದ ವಿರುದ್ಧ ದಕ್ಷಿಣದ ರಾಜ್ಯಗಳ ಕೋರ್ಟ್‌ ಮೊರೆ ಹೋಗಿವೆ. ವಿಶೇಷವಾಗಿ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ನಿಧಿ ವಿತರಣೆ ಮತ್ತು ತೆರಿಗೆಗಳ ವಿಕೇಂದ್ರೀಕರಣದ ಬಗ್ಗೆ ಕೇಂದ್ರವನ್ನ ಪ್ರಶ್ನಿಸಿವೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮಧ್ಯಂತರ ಪರಿಹಾರ ಪ್ಯಾಕೇಜ್‌ನ ಭಾಗವಾಗಿ ₹2,000 ಕೋಟಿ ಬಿಡುಗಡೆ ಮಾಡಲು ತಮಿಳುನಾಡು ಕೇಂದ್ರಕ್ಕೆ ಆದೇಶವನ್ನು ಕೋರಿ ಕೆಲವು ದಿನಗಳ ನಂತರ ಕರ್ನಾಟಕದಿಂದ ಬರ ಪರಿಹಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆಯಾಗಿದೆ.

ವಿಪತ್ತು ಪರಿಹಾರಕ್ಕಾಗಿ ಅಥವಾ ತೆರಿಗೆ ಹಂಚಿಕೆಯಿಂದ ಬಾಕಿ ವಿಚಾರವಾಗಿ ದಕ್ಷಿಣದ ರಾಜ್ಯಗಳಿಗೆ ಹಣ ಬಿಡುಗಡೆಯ ಹೋರಾಟವು ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪವಾಯಿತು. ಅಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ನಡುವೆ ಮಾತಿನ ಚಕಮಕಿ ನಡೆಯಿತು. ‘ಬಿಜೆಪಿಯೇತರ ರಾಜ್ಯ ಸರ್ಕಾರಗಳು (ಆರ್ಥಿಕ) ಬಾಕಿಗಳಿಂದ ವಂಚಿತವಾಗಿವೆ’ ಎಂದು ಹೇಳಿದ್ದರು.

ಇದಕ್ಕೆ ಕೆರಳಿದ ಸಚಿವೆ ನಿರ್ಮಲಾ, “ತೆರಿಗೆಗಳ ವಿಕೇಂದ್ರೀಕರಣ ( ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣ ಹಂಚಿಕೆ)… ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ನಡೆಯುತ್ತದೆ” ಎಂದು ಹೇಳು ಮೂಲಕ ಜಾರಿಕೊಂಡಿದ್ದರು. ಕೇಂದ್ರದ ನಡೆ ವಿರೋಧಿಸಿ ಫೆಬ್ರವರಿಯಲ್ಲಿ ದಕ್ಷಿಣದ ಮೂರು ರಾಜ್ಯಗಳು ದೆಹಲಿಯಲ್ಲಿ ಬೀದಿಗಿಳಿದಿದ್ದವು.

ಇದನ್ನೂ ಓದಿ; ಕೇಜ್ರಿವಾಲ್ ಬಂಧನಕ್ಕೆ ನಿಮ್ಮ ವೋಟಿನ ಮೂಲಕ ಪ್ರತಿಕ್ರಿಯಿಸಿ: ದೆಹಲಿ ಮತದಾರರಲ್ಲಿ ಎಎಪಿ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...